ಸಾಹಿತ್ಯ

ದೀಪಾವಳಿ | ಬೆಳಕು ಚೆಲ್ಲುವ ಹಬ್ಬ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ದೀಪಗಳ ಹಬ್ಬವಿದು ದೀಪಾವಳಿ ಮುಗ್ಧ ಮನಕಿದು ಸಂಭ್ರಮದ ತಾರಾವಳಿ ಸುತ್ತಲು ಬೆಳಗಿವೆ ಸಾಲಾಗಿ ಹಣತೆಗಳು ಹಬ್ಬದ ಸಡಗರ ಕಾಣಿಸುತಿದೆ ಮೇದಿನಿಯೊಳು ||
ಕವಿದ ಕತ್ತಲೆಯ ಜಾಡ್ಯವ ಕಳೆದು ಪಸರಿಸುತಿದೆ ಹರುಷದ ಹೊನಲ ನಗೆ ತನು ಮನ ತಣಿಸುವ ಒಡಲೊಳು ವಿಜೃಂಭಿಸುವ ಕಾಂತಿಯನ್ನೇ ತಂದಿದೆ ದೀಪಾವಳಿ ಇಳೆಗೆ| |
ದೀಪದಿಂದ ದೀಪವ ಬೆಳಗಿದಂತೆ ಬೆಳೆಯಲಿ ಜ್ಞಾನವೆಂಬ ಸಾಗರ ಅಜ್ಞಾನವು ನಶಿಸಿ ಅರಿಷಟ್ ವೈರಿಗಳೆಲ್ಲ ತೊಲಗಿ ದಿನ ದಿನವು ಏರಲಿ ಕೀರ್ತಿಯೆಂಬ ಶಿಖರ||
ಕೆಟ್ಟ ಗುಣಗಳ ಸುಟ್ಟು ಅರಿವೆಂಬ ದೀವಟಿಗೆಯ ಬೆಳಗಲು ಸಕಾಲವಿದು ಆಡಂಬರವಿಲ್ಲದೆ ಆಚರಣೆಯ ಮೂಲಕವೇ ಜಗಕ್ಕೆ ಸಾರವ ತಿಳಿಸುವ ಹಬ್ಬ ದೀಪಾವಳಿಯಿದು||
ಬರಹ:
ಅನ್ನಪೂರ್ಣ ಎನ್ ಕುತ್ತಾಜೆ
ಅನ್ನಪೂರ್ಣ ಎನ್.ಕೆ ಇವರು ಪ್ರಸ್ತುತ ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದಲ್ಲಿ ವಿಜ್ಞಾನ ವಿಭಾಗದಲ್ಲಿ ಪದವಿಯನ್ನು ಪೂರ್ಣಗೊಳಿಸಿರುತ್ತಾರೆ. ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿರುವ ಇವರ ಕವನಗಳು ಪಾಂಚಜನ್ಯ ರೇಡಿಯೋ ಕೇಂದ್ರದಲ್ಲೂ ಪ್ರಸಾರವಾಗಿದೆ. ‘ಮೊದಲ ಹೆಜ್ಜೆ.. ಹೊಂಗನಸಿನೆಡೆಗೆ ‘ಇವರ ಮೊದಲ ಪ್ರಕಟಿತ ಕವನ ಸಂಕಲನ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ದೇಶದಾದ್ಯಂತ ಸಾಮಾನ್ಯ ಮಳೆ | ಮಲೆನಾಡು-ಕರಾವಳಿಯಲ್ಲಿ ವ್ಯಾಪಕ ಮಳೆ ಸಾಧ್ಯತೆ

ಭಾರತದಾದ್ಯಂತ ಮುಂಗಾರು ಸಕ್ರಿಯವಾಗಿದೆ. ಈ ಬಾರಿ ಉತ್ತಮ ಮುಂಗಾರು ಮಳೆಯಾಗುತ್ತಿದೆ. ಸದ್ಯ ಸಾಮಾನ್ಯ…

9 hours ago

ಬೆಳೆಗೆ ಔಷಧಿ ಸಿಂಪಡಣೆಯ ವೇಳೆ ಬಳಸುವ ಸಿಲಿಕಾನ್ ಸ್ಪ್ರೆಡರ್ ಗುಣಧರ್ಮ ಏನು..?

ಬೆಳೆಗಳಿಗೆ ಔಷಧಿ ಸಿಂಪಡಣೆ ವೇಳೆ ಹೆಚ್ಚಿನ ದಕ್ಷತೆ ಹಾಗೂ ಪರಿಣಾಮಕಾರಿಯಾಗುವ ಉದ್ದೇಶದಿಂದ ವಿವಿಧ…

9 hours ago

ಆರೋಗ್ಯದಲ್ಲಿ ಈ ರಾಶಿಯವರಿಗೆ ದೀರ್ಘಕಾಲದ ಕಾಯಿಲೆಯಿಂದ ಚೇತರಿಕೆ

ಆರೋಗ್ಯವು ಜೀವನದ ಪ್ರಮುಖ ಅಂಗವಾಗಿದೆ, ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಾನವು…

9 hours ago

ಭೂಮಿಗೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ

ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ಆಕ್ಸಿಯಮ್-4 ಮಿಷನ್‌ನ ನಾಲ್ವರು ಗಗನಯಾತ್ರಿಗಳನ್ನು ಒಳಗೊಂಡ…

19 hours ago

ಮಂತ್ರಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಸತಿ ಗೃಹಗಳ ವ್ಯವಸ್ಥೆಗೆ ಕ್ರಮ

ರಾಜ್ಯದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಮಂತ್ರಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಸತಿ…

19 hours ago

ಹೃದಯಾಘಾತದಿಂದ ಸಾವುಗಳ ಸಂಖ್ಯೆ ಹೆಚ್ಚಾಗಿಲ್ಲ | ಯಾವುದೇ ಆತಂಕ ಬೇಡ – ಸಚಿವ ಶರಣಪ್ರಕಾಶ್ ಪಾಟೀಲ್

ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತ ಪ್ರಕರಣಗಳ ಕುರಿತು ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು…

19 hours ago