‘ಬುತ್ತಿಯೂಟ’ ಈಗ ಬಿಸಿ…!

October 5, 2020
11:59 AM
ಇದು ಮನೆ ಜಗಲಿಯ ಸ್ಟಾರ್ಟಪ್ ಯೋಜನೆ. ಮನಸ್ಸು ಲಾಕ್‍ಡೌನಿಗೆ ಜಾರದಂತೆ ಎಚ್ಚರ ವಹಿಸಿ ಹೊಸ ಯೋಜನೆಯೊಂದನ್ನು ಅನುಷ್ಠಾನಿಸಿದ ಆದರ್ಶ ಈ ಕ್ಷೇತ್ರದಲ್ಲಿ ಕ್ಷಮತೆಯ ಹೆಜ್ಜೆಯೂರುತ್ತಿದ್ದಾರೆ. ಗ್ರಾಹಕರು ಕೈ ಹಿಡಿಯುತ್ತಿದ್ದಾರೆ.
ಲಾಕ್‍ಡೌನ್ ತೆರವಾಗಿದೆ. ಹೋಟೆಲಿನಿಂದ ಪಾರ್ಸೆಲ್ ಒಯ್ಯುವ ಬದಲು ಅಲ್ಲೇ ತಿಂದುಣ್ಣಲು ಸರಕಾರ ಅವಕಾಶ ನೀಡಿದೆ. ಪೂರ್ಣ ಪ್ರಮಾಣದಲ್ಲಿ ಹೋಟೆಲ್ ತೆರೆದಿದೆ. ಆದರೆ ಕೊರೋನಾ ಭಯದಿಂದ ಗ್ರಾಹಕರು ಬರುತ್ತಿಲ್ಲ. ದೂರದವರು ಬಿಡಿ, ಪಟ್ಟಣದ ಗ್ರಾಹಕರೂ ನಾಪತ್ತೆ. ಹೋಟೆಲ್ ಯಜಮಾನನಿಗೆ ತಲೆಬಿಸಿ. ಲಾಕ್‍ಡೌನಿನಿಂದಾಗಿ ಮನೆಯಲ್ಲಿದ್ದ, ಆಗಲೇ ಅಡುಗೆ ವೃತ್ತಿಯ ಸಂಪರ್ಕವಿದ್ದ ಪುತ್ತೂರು ಪರ್ಲಡ್ಕದ ವಿ.ಆದರ್ಶ ಚುರುಕಾದರು.

Advertisement
Advertisement
Advertisement

ಕೊರೋನಾ ವೈರಸ್ ಹಬ್ಬಬಹುದೆಂಬ ಆತಂಕದಿಂದ ಹೋಟೆಲಿನಿಂದ ಅನೇಕರು ದೂರವಿದ್ದರು. ಇಂತಹವರಿಗೆ ಮನೆಯಲ್ಲಿ ಆಹಾರ ತಯಾರಿಸಿ ಪೂರೈಸಿದರೆ ಹೇಗೆ? ಯೋಚನೆ ಗರಿಗೆದರಿತು. ಇವರ ‘ಬುತ್ತಿಯೂಟ’ದ ಕಲ್ಪನೆಗೆ ಪುತ್ತೂರಿನ ಅನೇಕರು ಸ್ಪಂದಿಸಿದರು. ಸುಮಾರು ಎರಡು ತಿಂಗಳಾಯಿತು, ಈಗ ಆದರ್ಶ ಸುಮಾರು ಐವತ್ತರಷ್ಟು ಮಂದಿಗೆ ಮಧ್ಯಾಹ್ನ, ರಾತ್ರಿಯ ‘ಬುತ್ತಿಯೂಟ’ ಸಿದ್ಧಪಡಿಸಿ ಒದಗಿಸುತ್ತಾರೆ.

Advertisement

ಇದಕ್ಕಾಗಿ ತಮ್ಮ ಮನೆಯ ಒಂದು ಪಾಶ್ರ್ವವನ್ನು ‘ದೇವಕಾರ್ಯ’ ಆಹಾರೋತ್ಪನ್ನ ಘಟಕವನ್ನಾಗಿ ಪರಿವರ್ತಿಸಿದ್ದಾರೆ. ‘ಮನೆ ರುಚಿ – ಮನ ಖುಷಿ’ ಎನ್ನುವುದು ಉದ್ಯಮದ ಟ್ಯಾಗ್‍ಲೈನ್. ಊಟದ ಮೆನು ‘ಕಿಸೆಸ್ನೇಹಿ’! ಐವತ್ತು ರೂಪಾಯಿ. ಅನ್ನ, ಸಾಂಬಾರ್, ಪಲ್ಯ, ಮೆಣಸು, ಮಜ್ಜಿಗೆ, ಉಪ್ಪಿನಕಾಯಿ.. ಬುತ್ತಿ ಪಾತ್ರೆ ಅಥವಾ ಬಳಸಿ ಬಿಸಾಡಬಹುದಾದ ಪೊಟ್ಟಣಗಳಲ್ಲಿ ಸರಬರಾಜು.

“ಕೆಲವು ಮನೆಗಳಲ್ಲಿ ಒಬ್ಬರೋ ಇಬ್ಬರೋ ವಯಸ್ಕರು ಮಾತ್ರ ಇದ್ದು, ದೈನಂದಿನ ಅಡುಗೆ ಮಾಡಿಕೊಳ್ಳುವುದಕ್ಕೆ ಕಷ್ಟ ಎನಿಸುವವರಿಗೆ ಇದೊಂದು ಸುಲಭದ ಹಾದಿಯಾಗಿದೆ. ದೂರದಲ್ಲಿದ್ದ ಅವರ ಮಕ್ಕಳು, ಬಂಧುಗಳು ನಮ್ಮನ್ನು ಸಂಪರ್ಕಿಸುತ್ತಿದ್ದಾರೆ.” ಎನ್ನುತ್ತಾರೆ ಆದರ್ಶ.

ಬೆಳಿಗ್ಗೆ ಹತ್ತೂವರೆ ತನಕ ಆರ್ಡರ್ ಸ್ವೀಕಾರ. ಬೆಳಿಗ್ಗೆ ಎಂಟು ಗಂಟೆಯ ಒಳಗೆ ಸೂಚಿಸಿದವರಿಗೆ ಕುಚ್ಚಲಕ್ಕಿಯ ಅನ್ನ. ನಂತರ ಆದೇಶ ನೀಡಿದವರಿಗೆ ಬೆಳ್ತಿಗೆ. ವಾಹನದಲ್ಲಿ ಮನೆ, ಕಚೇರಿಗಳಿಗೆ ವಿತರಣೆ. ಮಧ್ಯಾಹ್ಣ ಒಂದು ಗಂಟೆಯೊಳಗೆ ಎಲ್ಲಾ ಆರ್ಡರುಗಳು ಮುಗಿದುಹೋಗುತ್ತದೆ. ಸದ್ಯ ಪುತ್ತೂರು ನಗರ ವ್ಯಾಪ್ತಿ. ಆದೇಶ ನೋಡಿಕೊಂಡು ವಿಸ್ತರಿಸುವ ಯೋಚನೆಯಿದೆ.
ಈ ಕಲ್ಪನೆಯ ಬೀಜಾಂಕುರವಾದುದು ಹೇಗೆ? ಆದರ್ಶ ಹೇಳುತ್ತಾರೆ, “ಲಾಕ್‍ಡೌನ್ ಸಮಯದಲ್ಲಿ ಒಬ್ಬರು ಹಿರಿಯರು ಮನೆಗೆ ಬಂದು ತನಗೆ ಊಟದ ವ್ಯವಸ್ಥೆ ಮಾಡಿಕೊಡಬೇಕೆಂದು ವಿನಂತಿಸಿದರು. ಇವರ ಬೇಡಿಕೆಯು ನನ್ನ ಈ ಸ್ಟಾರ್ಟಪ್ ಯೋಜನೆಗೆ ನಾಂದಿಯಾಯಿತು. ಶೈಕ್ಷಣಿಕ ಸಂಸ್ಥೆಗಳು ಆರಂಭವಾದ ಮೇಲೆ ಏನಿಲ್ಲವೆಂದರೂ ನೂರರಿಂದ ನೂರೈವತ್ತರಷ್ಟು ಗ್ರಾಹಕರು ಸಿಗಬಹುದೆಂಬ ವಿಶ್ವಾಸವಿದೆ.”

Advertisement

 

Advertisement

ಭಾವ ರಾಕೇಶ್, ತಂಗಿ ಅನನ್ಯ, ಪತ್ನಿ ಸುಮಿತ್ರಾ, ತಾಯಿ ಸರ್ವೇಶ್ವರೀ, ತಂದೆ ಸುಬ್ರಹ್ಮಣ್ಯ – ಇವರೆಲ್ಲಾ ಆದರ್ಶರ ‘ದೇವಕಾರ್ಯ’ದ ಆಧಾರ ಸ್ತಂಭಗಳು. ಬುತ್ತಿಯೂಟ ಅಲ್ಲದೆ ಚಿಕ್ಕ ಪುಟ್ಟ ಕಚೇರಿ ಸಮಾರಂಭ, ಮನೆಯ ಸಮಾರಂಭಗಳಿಗೂ ಭೋಜನದ ವ್ಯವಸ್ಥೆಯನ್ನು ಪೂರೈಸುತ್ತಾರೆ.

ಈಚೆಗೆ ಸಿಹಿತಿಂಡಿಗಳನ್ನು ಒದಗಿಸುವಂತೆ ಗ್ರಾಹಕರಿಂದ ವಿನಂತಿ ಬಂದಿದೆ. ವಾರಕ್ಕೊಮ್ಮೆ ಒಂದೊಂದು ಸಿಹಿತಿಂಡಿಯನ್ನು ತಯಾರಿಸುವ ಅಡಿಗಟ್ಟು ಮಾಡಿಕೊಂಡಿದ್ದಾರೆ. ವಿವಿಧ ಬಗೆಯ ಹೋಳಿಗೆಗಳು, ಹಲ್ವ, ಲಾಡು, ಜಿಲೇಬಿ.. ಹೀಗೆ ವೈವಿಧ್ಯ ಸಿಹಿತಿಂಡಿಗಳು.

Advertisement

 

ಬೆಳಿಗ್ಗೆ ಕಚೇರಿಗೆ ತೆರಳುವವರಿಗೆ ಬುತ್ತಿ ತಯಾರಿಸುವುದು ಒಂದು ಸವಾಲು. ಬೆಳಿಗ್ಗೆ ಮಾಡಿದ ಅನ್ನ, ಸಾಂಬಾರ್ ಮಧ್ಯಾಹ್ನಕ್ಕೆ ಬಿಸಿ ಕಳೆದುಕೊಂಡಿರುತ್ತದೆ. ಜತೆಗೆ ಕೊರೋನಾ ಭಯ. ಈ ಎಲ್ಲಾ ಒತ್ತಡಗಳ ಹಿನ್ನೆಲೆಯಲ್ಲಿ ‘ದೇವಕಾರ್ಯ’ದ ವ್ಯವಸ್ಥೆ ಅನೇಕರಿಗೆ ತೃಪ್ತಿ ನೀಡಿದೆ.

Advertisement

ಲಾಕ್‍ಡೌನಿನಿಂದಾಗಿ ಆದರ್ಶ ಅಧೀಕರರಾಗಲಿಲ್ಲ. ತನ್ನ ಕಾಲ ಮೇಲೆ ನಿಲ್ಲುವ ಛಲ. “ಈ ವ್ಯವಸ್ಥೆಯಲ್ಲಿ ನಾನು ಯಶಸಸ್ಸಾಗುತ್ತೇನೆ, ನೊಡ್ತಾ ಇರಿ,” ಎಂದು ವಿಶ್ವಾಸದಿಂದ ನುಡಿಯುತ್ತಾರೆ.
ಆದರ್ಶ : 84319 32033

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ

ಇದನ್ನೂ ಓದಿ

ಚುನಾವಣೆ ಹಾಗೂ “ನೀತಿ” ಸಂಹಿತೆ ಮತ್ತು ಜಗಳ…! |
April 18, 2024
3:00 PM
by: ಮಹೇಶ್ ಪುಚ್ಚಪ್ಪಾಡಿ
ದೇವರು ಧರ್ಮ ಭಕ್ತಿ ಒಂದು ಒಣ ಆಡಂಬರವಲ್ಲ, ಅದು ನಮ್ಮ ಆತ್ಮಸಾಕ್ಷಿಯ ನಡವಳಿಕೆ | ರಾಮನವಮಿ ಪ್ರಯುಕ್ತ ಬರೆಯುತ್ತಾರೆ ವಿವೇಕಾನಂದ. ಎಚ್. ಕೆ.
April 17, 2024
4:37 PM
by: ವಿವೇಕಾನಂದ ಎಚ್‌ ಕೆ
ಅಡಿಕೆ ತೋಟಕ್ಕೆ ಉದಿ ಏಕೆ ಹಾಕಬೇಕು…?
April 15, 2024
7:55 PM
by: ಪ್ರಬಂಧ ಅಂಬುತೀರ್ಥ
ಬಾಬಾಸಾಹೇಬರನ್ನು ನೆನೆಯುತ್ತಾ…… ಸಂವಿಧಾನ, ಬಾಬಾ ಸಾಹೇಬ್ ನೀಡಿದ ನೆರಳು
April 13, 2024
4:36 PM
by: ವಿವೇಕಾನಂದ ಎಚ್‌ ಕೆ

You cannot copy content of this page - Copyright -The Rural Mirror