Advertisement
ಸುದ್ದಿಗಳು

ಬೆನ್ನು, ಮೊಣಕಾಲುಗಳನ್ನು ಬಲಪಡಿಸಲು ನೆರವಾಗುವ ಆಹಾರ ಕ್ರಮಗಳು

Share

ಇತ್ತೀಚಿಗೆ ಆರೋಗ್ಯದಲ್ಲಿ ಬರುವ ತೊಂದರೆಗಳಲ್ಲಿ ಮೊಣಕಾಲು ನೋವು, ಬೆನ್ನು ನೋವು ಕಾಣಿಸಿಕೊಳ್ಳುತ್ತಿತ್ತು. ಇಂದು ಎಲ್ಲ ವಯಸ್ಸಿನವರಲ್ಲೂ, ಕ್ರೀಡಾಪಟುಗಳಲ್ಲೂ ಮೂಳೆಗಳ ಸಮಸ್ಯೆ  ಕಾಣುತ್ತಿದೆ. ಮಹಿಳೆಯರಲ್ಲಿ ಹೆರಿಗೆ ನಂತರ ಇತಂಹ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಏಕೆಂದರೆ ಒಂದು ನಮಗುವಿನ ಜನ್ಮ ನೀಡಿದ ನಂತರ ಅವರಲ್ಲಿ ಕ್ಯಾಲ್ಸಿಯಂ ಕೊರತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಾರಣವೇನು ಎಂಬುದನ್ನು ನೋಡಿದರೆ ನಾವು ತೆಗೆದುಕೊಳ್ಳುವ ಆಹಾರದಲ್ಲಿ ಪ್ರೋಟೀನ್ ಕೊರತೆ.

ಎಲುಬುಗಳಿಗೆ ಬೇಕಾಗಿರುವ ಕ್ಯಾಲ್ಸಿಯಂ ಸಿಗದೇ ಹೋದರೆ ಒಂದಲ್ಲ ಒಂದು ಕೊರತೆ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಕೆಲವೊಂದು ಆಹಾರಗಳು ಮೊಣಕಾಲಿನ ಹಾಗೂ ಬೆನ್ನು ನೋವಿನ ಆರೋಗ್ಯ ಸುಧಾರಿಸಲು ನೆರವಾಗುತ್ತವೆ ಎನ್ನಲಾಗುತ್ತದೆ. ಅವುಗಳೆಂದರೆ:

ಮೀನು: ಬಂಗುಡೆ, ಭೂತಾಯಿಯಂತಹ ಕೊಬ್ಬಿನ ಮೀನುಗಳಲ್ಲಿ ಒಮೆಗಾ-3, ಕೊಬ್ಬಿನಾಮ್ಲಗಳು, ವಿಟಮಿನ್ ಡಿ ಸಮೃದ್ಧವಾಗಿದೆ. ಇದು ಉರಿಯೂತ ತಗ್ಗಿಸಲು, ಎಲುಬಿನ ಮೂಳೆಗಳನ್ನು ಬಲಪಡಿಸಲು ಸಹಾಕರಿಸುತ್ತದೆ.

ಹಸಿರೆಲೆ ತರಕಾರಿಗಳು: ಪಾಲಕ್, ಬ್ರೊಕೊಲಿಯಂತಹ ಹಸಿರೆಲೆ ತರಕಾರಿಗಳು ಕೂಡಾ ಉತ್ತಮವಾಗಿವೆ. ಇವುಗಳಲ್ಲಿ ಕ್ಯಾಲ್ಸಿಯಂ, ವಿಟಮಿನ್ ಕೆ, ಆಂಟಿಆಕ್ಸಿಡೆಂಟ್ಗಳಿದ್ದು, ಇವುಗಳು ಮೂಳೆಗಳಿಗೆ ಅಗತ್ಯ ಪೋಷಕಾಂಶಗಳಾಗಿವೆ.

ಡ್ರೈ ಪ್ರೂಟ್ಸ್: ನಟ್ಸ್ ಮತ್ತು ಬೀಜಗಳು ( ಅಗಸೆ ಬೀಜ, ಕುಂಬಳಕಾಯಿ,ಚಿಯಾ) ಇತ್ಯಾದಿಗಳಲ್ಲಿ ಒಮೆಗಾ-3 ಸೇರಿದಂತೆ ಆರೋಗ್ಯಕರ ಕೊಬ್ಬು, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಆಂಟಿಆಕ್ಸಿಡೆಂಟ್ಗಳನ್ನು ಪೂರೈಸಿ ಮೂಳೆ, ಕೀಲುಗಳ ಆರೋಗ್ಯ ಬೆಂಬಲಿಸಲು ನೆರವಾಗುತ್ತದೆ.

ಹಣ್ಣುಗಳು: ಹಣ್ಣುಗಳ ಸೇವನೆಯೂ ಉತ್ತಮ ಆರೋಗ್ಯ ಹೇಳಿಮಾಡಿಸಿದ್ದು, ಅದರಲ್ಲೂ ಕೀವಿ ಹಣ್ಣು, ಕಿತ್ತಳೆಗಳ ಸೇವನೆ ಅತೀ ಉತ್ತಮ ಏಕೆಂದರೆ ಇದರಲ್ಲಿ ವಿಟಮಿನ್ ಸಿ, ಆಂಟಿಆಕ್ಸಿಡೆಂಟ್ ಗಳು ಸಮೃದ್ಧವಾಗಿದೆ. ಇದು ಕ್ಯಾಲ್ಸಿಯಂ ನೀಡಲು ಸಹಾಕಾರಿಸುತ್ತದೆ.

ದ್ವಿದಳ ದಾನ್ಯಗಳು: ಬೀನ್ಸ್, ಮಸೂರ, ಸೋಯಾ ಉತ್ಪನ್ನಗಳು ಕ್ಯಾಲ್ಸಿಯಂ ಪ್ರೋಟೀನ್, ಪೈಬರ್, ಮೆಗ್ನೀಸಿಯಮ್, ಸತುಗಳಂತಹ ಖನಿಜಗಳನ್ನು ಒದಗಿಸುತ್ತದೆ. ಇವೆಲ್ಲಾ ಮೂಳೆಗಳ ಆರೋಗ್ಯ ಬಲಪಡಿಸಲು ಸಹಾಯ ಮಾಡುತ್ತದೆ.

ಸೂಪ್‌ಗಳು: ಕಾಲಜನ್-ಭರಿತ ಸೂಪ್ ಗಳು ಮತ್ತು ಸ್ಟಾಕ್ ಗಳಂತಹ ಮೂಳೆಗಳನ್ನು ಕುದಿಸುವ ಮೂಲಕ ತಯಾರಿಸಲಾದ ಮೂಳೆ ಗಳನ್ನು ಕುದಿಸುವ ಮೂಲಕ ತಯಾರಿಸಲಾದ ಮೂಳೆ ಸಾರು, ಅಮೈನೋ ಆಮ್ಲಗಳು, ಕಾಲಜನ್, ಜೆಲಾಟಿನ್ ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಇವೆಲ್ಲಾ ಮೂಳೆಗಳನ್ನು ಬಲಪಡಿಸುತ್ತದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಭಾರತದ ಹಸಿರು ಯೋಜನೆಗಳಿಗೆ ಜಪಾನ್‌ನ ಕಾರ್ಬನ್ ಕ್ರೆಡಿಟ್ ಅವಕಾಶ – ರೈತರೂ ಪಡೆಯಬಹುದೇ ಇದರ ಲಾಭ?

ಭಾರತ–ಜಪಾನ್ JCM ಮೂಲಕ ಭಾರತದಲ್ಲಿ ಕಡಿಮೆ-ಇಂಗಾಲ ಯೋಜನೆಗಳಿಗೆ ಜಪಾನ್ ಹೂಡಿಕೆ ಮತ್ತು ತಂತ್ರಜ್ಞಾನ…

1 hour ago

ಹಿಮಾಲಯದಲ್ಲಿ ಮತ್ತೊಂದು ಅಪಾಯದ ಎಚ್ಚರಿಕೆ..!

ಸಿಕ್ಕಿಂನಲ್ಲಿ 40 ಹೆಚ್ಚಿನ ಅಪಾಯದ ಹಿಮನದಿ ಸರೋವರಗಳನ್ನು ಗುರುತಿಸಲಾಗಿದ್ದು, 16 ಸರೋವರಗಳು ಅತ್ಯಂತ…

2 hours ago

ಎಲ್ ನಿನೊ ಮತ್ತಷ್ಟು ಬಲಗೊಳ್ಳುವ ಮುನ್ಸೂಚನೆ..!

2026ರ ಆಗಸ್ಟ್ ವೇಳೆಗೆ ಎಲ್ ನಿನೊ ಆರಂಭವಾಗಿದ್ದು , ವರ್ಷಾಂತ್ಯದ ವೇಳೆಗೆ ಅತ್ಯಂತ…

4 hours ago

ಈಶಾನ್ಯದಿಂದ ಜಾರ್ಖಂಡ್‌ವರೆಗೆ ರಬ್ಬರ್‌ ಕೃಷಿಯ ವಿಸ್ತರಣೆ | ಹೊಸ ಪ್ರದೇಶಗಳಲ್ಲಿ ರಬ್ಬರ್‌ ಕೃಷಿ ವಿಸ್ತರಣೆ – ಅಪಾಯವೇ..? ಅವಕಾಶವೇ..?

ನಾಗಾಲ್ಯಾಂಡ್‌ನಲ್ಲಿ ರಬ್ಬರ್‌ ಕೃಷಿ ಸುಮಾರು 29,794 ಹೆಕ್ಟೇರ್‌ಗೆ ವಿಸ್ತರಿಸಿರುವ ಬೆನ್ನಲ್ಲೇ ಜಾರ್ಖಂಡ್‌ನಲ್ಲಿ ಸೂಕ್ತ…

15 hours ago

ದಾವಣಗೆರೆಯಲ್ಲಿ ಮಳೆ ಕೊರತೆ – ಮೆಕ್ಕೆಜೋಳ, ರಾಗಿ ಬೆಳೆ ಶೇ.50 ಹಾನಿ ಭೀತಿ

ದಾವಣಗೆರೆ ಜಿಲ್ಲೆಯಲ್ಲಿ 15 ದಿನಗಳಿಂದ ಮಳೆ ಕೊರತೆಯಾಗಿದ್ದು, ಮುಂದಿನ ಕೆಲ ದಿನಗಳಲ್ಲೂ ಮಳೆಯಾಗದಿದ್ದರೆ…

18 hours ago

ಹವಾಮಾನ ವರದಿ | 05-09-2026 | ಕರಾವಳಿಯಲ್ಲಿ ತೇವಾಂಶ ಇಳಿಕೆ, ಬಳಿಕ ಒಣಹವೆ?

ಸೆ.8ರಿಂದ ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮತ್ತೆ ಮಳೆ ಚಟುವಟಿಕೆ ಹೆಚ್ಚಾಗುವ ಸಾಧ್ಯತೆಯಿದೆ.…

1 day ago