Advertisement
ಸುದ್ದಿಗಳು

#Tomato | ಮಾರುಕಟ್ಟೆಗೆ ಬಂದಿದೆ ಬಣ್ಣ ಬಣ್ಣದ ತರಹೇವಾರಿ ಟೊಮೆಟೊ ಹಣ್ಣು…! | ಕೆಂಪು ಟೊಮೆಟೋಗಿಂತ ಸಿಕ್ಕಾಪಟ್ಟೆ ಡಿಮ್ಯಾಂಡ್‌ ಇದಕ್ಕೆ…! |

Share

ಟೊಮೆಟೋ ಬೆಲೆ ಗಗನಕ್ಕೇರಿ ಕುಳಿತಿದೆ. ದಿನದ ಸಾಂಬಾರಿಗೂ ಒಂದು ಟೊಮೆಟೋ #Tomato ಹಾಕಲು ಹಿಂದೆ ಮುಂದೆ ನೋಡುವಂತಾಗಿದೆ. ಅಂತದ್ದರಲ್ಲಿ ಮಾರುಕಟ್ಟೆಗೆ ಕಪ್ಪು ಟೊಮೆಟೋ, ಚಾಕಲೇಟ್ ಟೊಮೆಟೋ, ಹೀಗೆ ತರತರದ ಟೊಮೆಟೋ ಬಂದ್ರೆ ಅದನ್ನು ಕೊಳ್ಳುವವರಾರೋ..?. ಆದರೆ ಕೆಂಪು ಟೊಮೆಟೊ ಕೃಷಿ ಕೆಲವೊಮ್ಮೆ ಲಾಭ ನೀಡಿದ್ರೆ, ಇನ್ನೂ ಕೆಲವೊಮ್ಮೆ ಭೀಕರ ನಷ್ಟ ತರುತ್ತದೆ. ರೇಟ್‌ ಕಡಿಮೆಯಾದ್ರೆ ರೈತರು ಟೊಮೆಟೊಗಳನ್ನು ರಸ್ತೆಗೆ ಎಸೆದು ಬಿಡ್ತಾರೆ. ದಿನಬಳಕೆಯ ಕೆಂಪು ಟೊಮೆಟೋ ಪರಿಸ್ಥಿತಿ ಹೀಗಿರುವಾಗ ಈ ಕಪ್ಪು ಟೊಮೆಟೊ, ಚಾಕಲೇಟ್ ಟೊಮೆಟೋ ಕೊಳ್ಳುವವರಾರು ಅನ್ನೋದೆ ಪ್ರಶ್ನೆ. ಆದರೆ ಇದಕ್ಕೆ ಭಾರಿ ಬೇಡಿಕೆ ಇದೆಯಂತೆ, ಬೆಳೆದರೆ ಯಾವಾಗಲೂ ಲಾಭವನ್ನೇ ತಂದುಕೊಡುತ್ತೆ ಅಂತೆ…!

 ಈ ಚಾಕೊಲೇಟ್ ಟೊಮ್ಯಾಟೊಗಳು ಕಾಯಿ ಇದ್ದಾಗ ಹಸಿರು ಬಣ್ಣದಲ್ಲಿ ಕಾಣುತ್ತವೆ. ಆದರೆ ಮಾಗಿದಾಗ ಚಾಕೊಲೇಟ್ ಬಣ್ಣಕ್ಕೆ ತಿರುಗುತ್ತವೆ. ಪಶ್ಷಿಮ ಬಂಗಾಳದ ಮುಸ್ತಫಾನಗರದ ದಂಪತಿ ಪ್ರಥಮ ಬಾರಿಗೆ ಈ ಚಾಕಲೇಟ್ ಟೊಮ್ಯಾಟೊ ಕೃಷಿ ಮಾಡಿ ಮಾರಾಟಕ್ಕೆ ಇಟ್ಟಿದ್ದಾರೆ.  ಚಾಕೋಲೇಟ್ ಟೊಮ್ಯಾಟೊ ಬೀಜವನ್ನು ಒಮ್ಮೆ ಬಿತ್ತಿದರೆ 4-5 ತಿಂಗಳಿಗೆ ಉತ್ತಮ ಬೆಳೆಯನ್ನು ಪಡೆಯಬಹುದು. ಫೆಬ್ರವರಿ-ಮಾರ್ಚ್ ಅವಧಿಯಲ್ಲಿ ಈ ಟೊಮ್ಯಾಟೊ ಬೀಜಗಳನ್ನು ಬಿತ್ತಿದರೆ, ಜೂನ್-ಜುಲೈನಲ್ಲಿ ಟೊಮ್ಯಾಟೊಗಳು ಕಟಾವಿಗೆ ಬರುತ್ತವೆ.

ಈ ಟೊಮ್ಯಾಟೊದಿಂದ ಚಟ್ನಿಯನ್ನು ತಯಾರಿಸಲಾಗುತ್ತದೆ. ಇವು ಇತರ ಟೊಮ್ಯಾಟೊಗಳಂತೆ ಹುಳಿಯಾಗಿರುವುದಿಲ್ಲ, ಆದರೆ ಸಿಹಿಯಾಗಿರುತ್ತವೆ. ಹಾಗಾಗಿ ತಿನ್ನಲು ತುಂಬಾ ರುಚಿಕರವಾಗಿವಾಹಿರುತ್ತದೆ.ಈ ಟೊಮ್ಯಾಟೊಗಳನ್ನು ಮಾರುಕಟ್ಟೆಯಲ್ಲಿ ಕೆಜಿಗೆ 80 ರೂಪಾಯಿವರೆಗೆ ಮಾರಾಟ ಮಾಡಲಾಗುತ್ತದೆ. ಈ ಟೊಮ್ಯಾಟೊಗಳು ಮೂಲತಃ ಸೋಲಾನಮ್ ಲೈಕೋಪರ್ಸಿಕಮ್ ಜಾತಿಯಿಂದ ಬಂದವು. ಇವು ಕಾಯಿಯಾಗಿದ್ದಾಗ ಹಸಿರು ಮತ್ತು ಮಾಗಿದಾಗ ಚಾಕೊಲೇಟ್ ಬಣ್ಣವನ್ನು ಹೊಂದಿರುತ್ತವೆ. ಈ ಟೊಮೆಟೊ ಪ್ರಭೇದವು ಪಶ್ಚಿಮ ದಕ್ಷಿಣ ಅಮೆರಿಕಾ ಮತ್ತು ಮಧ್ಯ ಅಮೆರಿಕಕ್ಕೆ ಸ್ಥಳೀಯವಾಗಿದೆ. ಇದರ ಬಣ್ಣ ಚಾಕೊಲೇಟ್‌ನಂತೆ ಮತ್ತು ಅದರ ರುಚಿ ಚಾಕೊಲೇಟ್‌ನಂತೆಯೇ ಇರುತ್ತದೆ.

(ಕೃಪೆ: ಅಂತರ್ಜಾಲ)

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕೀಟನಾಶಕಗಳ ಅತಿಯಾದ ಬಳಕೆ ನಿಯಂತ್ರಣಕ್ಕೆ ನೈಸರ್ಗಿಕ ಕೃಷಿಯೇ ಮದ್ದು

ಕೀಟನಾಶಕ ಮತ್ತು ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಕೃಷಿ ಹಾಗೂ ಆರೋಗ್ಯಕ್ಕೆ ಹಾನಿಯಾಗುತ್ತಿದೆ…

4 hours ago

ಭಾರೀ ಮಳೆ ಎಚ್ಚರಿಕೆ : 13 ರಾಜ್ಯಗಳಿಗೆ IMD ಅಲರ್ಟ್‌ | ಉಳಿದೆಡೆ ಉಷ್ಣ ಅಲೆ ಮುಂದುವರಿಕೆ

ದೇಶದ 13 ರಾಜ್ಯಗಳಿಗೆ ಐಎಂಡಿ ಭಾರೀ ಮಳೆಯ ಎಚ್ಚರಿಕೆ ನೀಡಿದ್ದು, ಕರಾವಳಿ ಕರ್ನಾಟಕ…

5 hours ago

ಕೆಳದಿ ಶಿವಪ್ಪ ನಾಯಕ ಕೃಷಿ ವಿವಿ ಆಡಳಿತ ಮಂಡಳಿಗೆ ಇಬ್ಬರ ನಾಮನಿರ್ದೇಶನ

ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ…

15 hours ago

ತಕ್ಷಣ ಪೂರ್ಣಾವಧಿ ಕೃಷಿ ಸಚಿವರನ್ನು ನೇಮಿಸಿ – ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆಗ್ರಹ

ಕರ್ನಾಟಕದಲ್ಲಿ ಮಳೆ ಕೊರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೂರ್ಣಾವಧಿ ಕೃಷಿ ಸಚಿವರನ್ನು ತಕ್ಷಣ ನೇಮಿಸಬೇಕು…

22 hours ago

ಕ್ಯಾಂಪ್ಕೊ ಚಾಕಲೇಟ್ ಕಾರ್ಖಾನೆಯಲ್ಲಿ ಯೋಗ ಹಾಗೂ ಸ್ವಚ್ಛತಾ ಅಭಿಯಾನ

ವಿಶ್ವ ಯೋಗ ದಿನದ ಅಂಗವಾಗಿ ಕ್ಯಾಂಪ್ಕೊ ಚಾಕಲೇಟ್ ಕಾರ್ಖಾನೆ ಉದ್ಯೋಗಿಗಳ ರಿಕ್ರಿಯೇಷನ್ ಸೆಂಟರ್…

22 hours ago