Advertisement
Opinion

#Constipation | ಮಲಬದ್ಧತೆ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ಬೇಡ | ಆಯುರ್ವೇದದಲ್ಲಿದೆ ಸುಲಭ ಪರಿಹಾರ

Share

ಸಾಮಾನ್ಯವಾಗಿ ನಾವು ಸೇವಿಸುವ ಆಹಾರದಲ್ಲಿ ನಾರಿನ  ಅಂಶದ ಕೊರತೆ ಮತ್ತು ಸರಿಯಾಗಿ ನೀರು ಕುಡಿಯದೆ ಇದ್ದರೆ ಮಲಬದ್ಧತೆ ಉಂಟಾಗುತ್ತದೆ. ಆರೋಗ್ಯಕರ ಜೀವನ ಶೈಲಿ, ದೈಹಿಕ ವ್ಯಾಯಾಮ  ಮತ್ತು ವಾಕಿಂಗ್  ಮಾಡದೇ ಇರುವುದು, ಮತ್ತು ಅತಿಯಾಗಿ ಜಂಕ್ ಫುಡ್ ಸೇವನೆ ಮಾಡುವುದರಿಂದ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಇದು ಜೀರ್ಣಕ್ರಿಯೆ ಸಂಬಂಧಪಟ್ಟ ಸಮಸ್ಯೆ.

Advertisement
Advertisement

ನಾವು ಸೇವಿಸಿದ ಆಹಾರ ಸಣ್ಣ ಮತ್ತು ದೊಡ್ಡ ಕರುಳಿನಲ್ಲಿ ಜೀರ್ಣವಾಗಿ ಹೊರಬರಬೇಕು. ಕೆಲವರಲ್ಲಿ ಈ ಪ್ರಕ್ರಿಯೆ ಸರಿಯಾಗಿ ಆಗದೆ ದೊಡ್ಡ ಕರುಳಿನ ಚಲನೆಯಲ್ಲಿ ತೊಡಕು ಉಂಟಾಗಿ ಮಲ ಹೊರಗೆ ಬರುವುದಿಲ್ಲ. ಇದನ್ನು ಮಲಬದ್ಧತೆ ಎನ್ನಲಾಗುತ್ತದೆ. ಇದು ಒಂದೆರಡು ದಿನಗಳಿಂದ ಹಿಡಿದು ತಿಂಗಳು ವರ್ಷಗಳವರೆಗೂ ಕಾಡುವ ಸಮಸ್ಯೆಯಾಗಿದೆ.ನಾವು ತಿನ್ನುವ ಆಹಾರದ ಮೂಲಕವೇ ಈ ಸಮಸ್ಯೆಯನ್ನು ನಿಧಾನವಾಗಿ ಸರಿಪಡಿಸಬಹುದು.

Advertisement

ಲಕ್ಷಣಗಳು: ಬೆಳಿಗ್ಗೆ ಎದ್ದ ತಕ್ಷಣವೇ ಸರಿಯಾಗಿ ಮಲ ವಿಸರ್ಜನೆ ಯಾಗದೇ ಇರುವುದು, ಮಲವುಗಟ್ಟಿಯಾಗಿರುವುದು, ಮಲವಿಸರ್ಜನೆ ಮಾಡುವಾಗ ನೋವು, ರಕ್ತ ಬೀಳುವುದು, ವಾಕರಿಕೆ, ನಿಶಕ್ತಿ ಮಲಪೂರ್ತಿಯಾಗಿ ಖಾಲಿಯಾಗಿಲ್ಲ ಎಂದೇನಿಸುವುದು, ಹೊಟ್ಟೆ ನೋವು ತಲೆ ನೋವು ಇತ್ಯಾದಿ.

ವೃದ್ಧರಲ್ಲಿ ಸಾಮಾನ್ಯವಾಗಿ ಚಯಾಪಚಯ ಕ್ರಿಯೆ ಸರಿಯಾಗಿ ನಡೆಯದೇ ಇರುವುದು ಮತ್ತು ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗದೆ ಇರುವುದರಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮಹಿಳೆಯರಲ್ಲಿ ಗರ್ಭಾವಸ್ಥೆಯಲ್ಲಿ ಮತ್ತು ಪ್ರಸವದ ನಂತರದ ದಿನಗಳಲ್ಲಿ ದೊಡ್ಡ ಕರುಳಿನ ಚಲನವಲನಗಳು ಸರಿಯಾಗಿ ನಡೆಯದೆ ಮಲಬದ್ಧತೆ ಉಂಟಾಗುತ್ತದೆ. ಪೌಷ್ಟಿಕಾಂಶದ ಕೊರತೆಯಿಂದಲೂ ಮಲಬದ್ಧತೆ ಉಂಟಾಗುತ್ತದೆ. ಕೆಲವೊಂದು ಔಷಧೀಯ ಸೇವನೆಯಿಂದಲೂ, ಕಡಿಮೆ ನಿದ್ರೆ, ಮಾನಸಿಕ ಒತ್ತಡ ಇವುಗಳು ಸಹ ಮಲಬದ್ಧತೆ ಸಮಸ್ಯೆಗೆ ಕಾರಣವಾಗಿದೆ.

Advertisement

ಪರಿಹಾರ:
* ಹೆಚ್ಚು ನೀರು ಸೇವನೆ.. ದೇಹದಲ್ಲಿ ಕಲ್ಮಶಗಳನ್ನು ಹೊರಹಾಕಲು ನೀರು ಅತ್ಯಗತ್ಯ ಹಾಗೆ ಮಲವನ್ನು ವಿಸರ್ಜಿಸಲು ಸಾಕಷ್ಟು ಪ್ರಮಾಣದಲ್ಲಿ ನೀರು ಸೇವನೆ ಅಗತ್ಯ
* ಉತ್ತಮ ಆಹಾರ ಪದ್ಧತಿ…. ಹೆಚ್ಚು ನಾರಿನಂಶವಿರುವ ಆಹಾರ ಸೇವನೆ
* ಹಸಿರು ತರಕಾರಿ ಹಾಗೂ ಸೊಪ್ಪು ತರಕಾರಿಗಳು, ಬಾಳೆಹಣ್ಣು ಪಪ್ಪಾಯ ನಿಂಬೆ ಹಣ್ಣು, ಸೀಬೆಹಣ್ಣು ಕಿತ್ತಳೆ ಅವಕಾಡೊ ಮೊಳಕೆ ಕಾಳುಗಳು ತುಪ್ಪ ಮಜ್ಜಿಗೆ ಹಾಲು ಇವಳನ್ನು ದಿನನಿತ್ಯ ಬಳಸುವುದರಿಂದ ಮಲಬದ್ಧತೆಯನ್ನು ನಿವಾರಿಸಬಹುದು,
* ಅತಿ ಹೆಚ್ಚು ಉಪ್ಪು ಖಾರ ಸಿಹಿ ಹುಳಿ ಕರಿದ ಪದಾರ್ಥ ಜಂಕ್ ಫುಡ್ ಮಾಂಸ ಸೇವನೆ ಆಲ್ಕೋಹಾಲ್ ಇತ್ಯಾದಿಗಳನ್ನು ತ್ಯಜಿಸುವುದರಿಂದ ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸಬಹುದು.
* ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರಿನ ಸೇವನೆ ಹಾಗೂ ರಾತ್ರಿ ಮಲಗುವಾಗ ಬಿಸಿ ನೀರಿನಲ್ಲಿ ಒಂದು ಚಮಚ ತ್ರಿಫಲ ಚೂರ್ಣ ವನ್ನು ಸೇರಿಸಿ ದಿನನಿತ್ಯ ಕುಡಿಯುವುದರಿಂದಲೂ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಬಹುದು.
* ಪೌಷ್ಟಿಕಾಂಶದ ಆಹಾರದ ಜೊತೆ ಉತ್ತಮ ವ್ಯಾಯಾಮ ಯೋಗಾಸನ ಮಾಡುವುದರಿಂದ ಮಲಬದ್ಧತೆಯನ್ನು ನಿವಾರಿಸಬಹುದು.

ವಜ್ರಾಸನ ಪವನಮುಕ್ತಾಸನ, ಧನುರಾಸನ, ಸೂರ್ಯನಮಸ್ಕಾರ ಈ ಯೋಗಾಸನಗಳನ್ನು ದಿನನಿತ್ಯ ಮಾಡುವುದರಿಂದ ಮಲಬದ್ಧತೆಯನ್ನು ತಡೆಗಟ್ಟಬಹುದು ಹಾಗೂ 30 ನಿಮಿಷ ವಾಕಿಂಗ್ ಮಾಡುವುದು. ಉತ್ತಮ ಯೋಗಾಸನ ಹಾಗೂ ವ್ಯಾಯಾಮ ಮಾಡುವುದರಿಂದ ಕರಳಿನ ಸುತ್ತ ಇರುವ ಮಾಂಸ ಖಂಡಗಳು ಬಲಗೊಳ್ಳುವುದು. ಇದರಿಂದ ಕರುಳಿನ ಆಹಾರದಲ್ಲಿ ಪಚನ ಮತ್ತು ಚಲನ ಸರಿಯಾಗಲು ನೆರವಾಗುತ್ತದೆ. ಸಾಮಾನ್ಯವಾಗಿ ಎಲ್ಲಾ ವಯಸ್ಸಿನಲ್ಲೂ ಕಾಡುವ ಮಲಬದ್ಧತೆ ಸಮಸ್ಯೆಯನ್ನು ಆದಷ್ಟು ನಾವು ಆಹಾರದಲ್ಲಿ ಸರಿಪಡಿಸಿಕೊಳ್ಳುವುದು ಉತ್ತಮ.    ಮೂಲವ್ಯಾಧಿ ಇನ್ನಿತರ ಗಂಭೀರ ಸಮಸ್ಯೆಗಳಿಂದ ಮಲಬದ್ಧತೆಯಿಂದ ತೊಂದರೆ ಅನುಭವಿಸುತಿದ್ದರೆ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ತೆಗೆದು ಕೊಳ್ಳುವುದು ಉತ್ತಮ.

Advertisement
ಬರಹ :
Dr Jyothi K, Ayurveda, Mangaluru
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

Open Talk | ಆರಂಭದ ಮಳೆ ಹಾಗೂ ಗ್ರಾಮೀಣ ಭಾಗದಲ್ಲಿ ಕೈಕೊಡುವ ವಿದ್ಯುತ್..!‌ | ಪರಿಹಾರ ಏನು..?

ಮಳೆಗಾಲದ ಆರಂಭದಲ್ಲಿ ಮೂಲಭೂತ ಸೇವೆ ಎಂದು ಇಂದು ಗ್ರಾಮೀಣ ಭಾಗದಲ್ಲೂ ಬಯಸುವ ವಿದ್ಯುತ್‌…

38 mins ago

ಮಳೆ ಇಲ್ಲ, ನೀರಿಲ್ಲ, ಬರಗಾಲ ಎಂದು ಬೊಬ್ಬೆ ಹೊಡೆಯದಿರಿ | ಮಳೆ ನೀರನ್ನು ಹಿಡಿದಿಡುವ ಕಾರ್ಯ ಅಗತ್ಯ |

ಬರಗಾಲ(Drought) ಬಂದಾಗ ಬಾಯಿ ಬಡಿಕೊಳ್ಳುವವರೇ ಹೆಚ್ಚು. ನೀರಿಲ್ಲ, ಸೆಕೆ, ಮಳೆ ಇಲ್ಲ, ಬೆಳೆಗಳಿಗೆ…

18 hours ago

ಮಾನವರಾದ ನಮಗೆ ಪರಿಸರ ಎಷ್ಟು ಮುಖ್ಯ..? | ಪರಿಸರಿದಿಂದ ನಮಗಾಗುವ ಪ್ರಯೋಜನವೇನು..? |

ಪರಿಸರದಿಂದ ಏನೆಲ್ಲಾ ಪ್ರಯೋಜನ ಇದೆ ಎಂಬುದರ ಬಗ್ಗೆ ಪರಿಸರ ಪರಿವಾರದ ಮಾಹಿತಿ ಇಲ್ಲಿದೆ...

18 hours ago

ಸಮುದ್ರದ ಉಪ್ಪು, ಅಯೋಡಿಕರಿಸಿದ ಟೇಬಲ್ ಉಪ್ಪು, ಸೈಂಧವ ಉಪ್ಪು, ಕಪ್ಪು ಉಪ್ಪು : ಯಾವ ಉಪ್ಪು ಆರೋಗ್ಯಕ್ಕೆ ಒಳ್ಳೆಯದು?

ಭಾರತೀಯ(Indian) ಆಹಾರ ಪದ್ಧತಿಯಲ್ಲಿ(Food Style).... ಸಮುದ್ರದ ಉಪ್ಪು(Sea salt), ಅಯೋಡಿಕರಿಸಿದ ಟೇಬಲ್ ಉಪ್ಪು(Iodized…

19 hours ago

ಕೆಲ ಜಿಲ್ಲೆಯ ರೈತರಿಗೆ ಬರ ಪರಿಹಾರ ಹಣ ಬಿಡುಗಡೆ : ಬಳ್ಳಾರಿಯ 36,944 ರೈತರ ಖಾತೆಗೆ 41.40 ಕೋಟಿ ರೂ. ಜಮೆ

ಪ್ರಕೃತಿ ವಿಕೋಪಕ್ಕೆ(Natural disaster) ರೈತ(Farmer) ಬೆಳೆದ ಬೆಳೆಗಳು(Crop) ನಾಶವಾಗುವುದು ಸಾಮಾನ್ಯ. ಮಳೆ(Rain) ಜಾಸ್ತಿಯಾಗಿ…

19 hours ago