ಅಗ್ರಿಕಲ್ಚರ್ ಬಿಎಸ್ಸಿ ಮಾಡಲು ಮನಸ್ಸಿದ್ದರು ಸಿಇಟಿ ಬರೆದು ರೇಂಕ್ ತೆಗೆದು ಸೀಟು ತೆಗೆದುಕೊಳ್ಳುವುದೆಂದರೆ ಎಲ್ಲರಿಗೂ ಆಗದ ಕೆಲಸ. ಆದ್ರೆ ಎಷ್ಟೋ ವಿದ್ಯಾರ್ಥಿಗಳಿಗೆ ಕೃಷಿ(Agriculture) ಸಂಬಂಧಿತ ಕೋರ್ಸ್ ಮಾಡಬೇಕು ಅನ್ನುವ ಆಸೆ ಇರುತ್ತದೆ. ಯಾರಿಗೆಲ್ಲಾ ಈ ಕನಸು ಇದೆಯೋ ಅವರೆಲ್ಲಾ ಈಗ ನನಸು ಮಾಡಿಕೊಳ್ಳಬಹುದು. 2024 ಹಾಗೂ 25ನೇ ವರ್ಷದ ಕೋರ್ಸ್ಗೆ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು(Agricultural university Bengaluru) ಅಧಿಸೂಚನೆ ಹೊರಡಿಸಿದೆ. ಹೊರಡಿಸಿದ ಅಧಿಸೂಚನೆ ಪ್ರಕಾರ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನೀವೂ ಕೂಡ ಅಗ್ರಿಕಲ್ಚರ್ ಸಂಬಂಧಿತ ಕೋರ್ಸ್(Agriculture Diploma) ಮಾಡಲು ಆಸಕ್ತಿ ಹೊಂದಿದ್ದರೆ ಈ ಕೋರ್ಸ್ಗೆ ಸೇರಿಕೊಳ್ಳಬಹುದು. ಅದಕ್ಕೂ ಮುನ್ನ ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ.
ಕನ್ನಡ ಮಾಧ್ಯಮದಲ್ಲಿ ನೀವು ಈ ಕೋರ್ಸ್ ಮಾಡಬಹುದಾಗಿದೆ. ಈ ಕೋರ್ಸ್ನಲ್ಲಿ ನಾಲ್ಕು ಸೆಮಿಸ್ಟರ್ಗಳು ಇರುತ್ತದೆ. ಅದನ್ನಾಧರಿಸಿ ನೀವು ಈ ಕೋರ್ಸ್ಗೆ ಸೇರಿಕೊಳ್ಳಬಹುದು. ಈ ಕೋರ್ಸ್ಗೆ ಸೇರಿಕೊಳ್ಳಲು ನೀವು ಹತ್ತನೇ ತರಗತಿಯಲ್ಲಿ ಕನ್ನಡ ಮಾಧ್ಯಮದಲ್ಲಿ 45 ಪ್ರತಿಷತ ಅಂಕ ಗಳಿಸಿರಬೇಕಾಗುತ್ತದೆ. ಮೆರಿಟ್ ಆಧಾರದ ಮೇಲೆ ರೋಸ್ಟರ್ ಪದ್ಧತಿ ಅಳವಡಿಸಿ, ಪ್ರವೇಶಕ್ಕೆ ಆಯ್ಕೆ ಮಾಡಲಾಗುವುದು. ಆಯ್ಕೆ ಆದ ವಿದ್ಯಾರ್ಥಿಗಳಿಗೆ ಪತ್ರ ಹಾಗೂ ವೆಬ್ಸೈಟ್ ಮೂಲಕ ನೀವು ಆಯ್ಕೆ ಆಗಿದ್ದೀರಾ ಎನ್ನುವುದನ್ನು ತಿಳಿಸಲಾಗುವುದು. ಸಾಮಾನ್ಯ ವರ್ಗದವರಿಗೆ 500 ರೂ ಶುಲ್ಕವಿರುತ್ತದೆ. ಶುಲ್ಕ ಕಟ್ಟಲು ದಿನಾಂಕ 11 .8. 2024 ಕೊನೆ ದಿನವಾಗಿರುತ್ತದೆ. ಈ ದಿನಾಂಕಕ್ಕೂ ಮುನ್ನ ನೀವು ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಬೇಕಾಗುತ್ತದೆ.
ಅರಣ್ಯದಲ್ಲಿ ಬೆಳೆಯುವ "ಸಿಕ್ಕಿಂ ಬಾಳೆ" ಜಾತಿಯಲ್ಲಿ ಹವಾಮಾನ ಬದಲಾವಣೆಯನ್ನು ತಾಳುವ ಜಿನೀಯ ಗುಣಗಳು…
ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಏರಿಳಿತ ಕಂಡುಬಂದಿದೆ. ಮಲೆನಾಡು ಮಾರುಕಟ್ಟೆಗಳಲ್ಲಿ ಸ್ವಲ್ಪ ಏರಿಕೆ…
ಅಸ್ಸಾಂನಲ್ಲಿ ಐಸಿಎಆರ್–ಐಎಆರ್ಐ ಸಂಸ್ಥೆ “ನೈಸರ್ಗಿಕ ಕೃಷಿ” ವಿಷಯದಡಿ ಕಿಸಾನ್ ಮೇಳ 2026 ಆಯೋಜಿಸಿತು.…
ಜಾಗತಿಕ ತಾಪಮಾನ ಏರಿಕೆಯಿಂದ ಭಾರತದಲ್ಲಿ ಮಾರುತ ಮಳೆಯ ತೀವ್ರತೆ ಹೆಚ್ಚುತ್ತಿರುವುದು ಹೊಸ ಅಧ್ಯಯನದಲ್ಲಿ…
ಮ್ಯಾನ್ಮಾರ್ನಿಂದ ಅಕ್ರಮ ಅಡಿಕೆ ಕಳ್ಳಸಾಗಣೆ ವಿರುದ್ಧ ಮಿಜೋರಾಂ ಸರ್ಕಾರ ಜಾರಿ ಕ್ರಮವನ್ನು ಬಿಗುಗೊಳಿಸಿದೆ.…
ಕೊಲ್ಕತ್ತಾದಲ್ಲಿ ನಡೆದ ಸಭೆಯಲ್ಲಿ ಸೆಣಬು ವಲಯ ಸುಧಾರಣೆ, ಸುಸ್ಥಿರ ಕೃಷಿ ಹಾಗೂ ಮೀನುಗಾರಿಕೆ…