ನಾವು ಸ್ವಾತಂತ್ರ್ಯ ದಿನಾಚರಣೆಯನ್ನು(Independence day) ದೇಶದ ಸ್ವ್ಯಾತಂತ್ರ್ಯಕ್ಕಾಗಿ ಮಡಿದ ಹೋರಾಟಗಾರರಿಗೆ ನಮನ ಸಲ್ಲಿಸಲು ಮಾಡುತ್ತಿದ್ದೇವೆಯಾ..? ಇಲ್ಲಾ ನಮ್ಮ ಪ್ರಕೃತಿಯನ್ನು ಹಾಳು ಮಾಡಲು ಮಾಡುತ್ತಿದ್ದೇವಾ ಅನ್ನುವ ಅನುಮಾನ ಮೂಡುತ್ತದೆ. ಮುಂಬರುವ ದಿನಗಳಲ್ಲಿ ನಾಡಹಬ್ಬ, ಗಣ್ಯಾತಿಗಣ್ಯರು ಮಾಡುವ ಕಾರ್ಯಕ್ರಮ, ಸಾಮೂಹಿಕವಾಗಿ ಮಾಡುವ ಯಾವುದೇ ಕಾರ್ಯಕ್ರಮಗಳಲ್ಲಿ ಅದಕ್ಕಾಗಿ ಬಳಸುವ, ದಾನ, ಮಂಟಪಗಳು, ಚಿತ್ರಗಳು, ಸರ್ಕಾರೀ ಕಟ್ಟಡಗಳು, ಸಾರ್ವಜನಿಕ ಸ್ಥಳಗಳಲ್ಲಿ, ಕಣ್ಣಿಗ ಕಾಣುವಂತೆ ಚಿತ್ರಸಹಿತ, ಪ್ಲಾಸ್ಟಿಕ್, ರಬ್ಬರ್ ಇತರೆ ತ್ಯಾಜ್ಯದಿಂದಾಗುವ ತೊಂದರೆಗಳ ವಿವರಣೆ ಇರುವ ಫಲಕ ಕಡ್ಡಾಯ ಮಾಡಬೇಕು.
ಈ ಮಾಹಿತಿಯನ್ನು ಓದಿದ ಕೆಲವೇ ಕೆಲವರಾದರು ಸಹೖದಯಿಗಳು, ಕಾರ್ಯುಪ್ರವೃತ್ತರಾದರೆ ಸಾಕು. ಒಬ್ಬರಿಂದ ಒಬ್ಬರನ್ನು ಜಾಗೃತಗೊಳಿಸಲು ಸಾಧ್ಯವಾದರೆ ಆ ಜಾಗೃತದಿಂದಾಗುವ ಮುಂದಿನ ಕಾರ್ಯ ಸದಾ ಸಾಕಾರದೆಡೆ ಇರುತ್ತದೆ. ಇದು ಸರಿ ಎನಿಸಿದರೆ, ಇದಕ್ಕೆ ಪೂರಕವಾದ ಚಿತ್ರಗಳು, ಸೂಕ್ತ ಸಾಕ್ಷಚಿತ್ರಗಳನ್ನು ಕಲೆಹಾಕಿ, ಸಂಭಂದ ಪಟ್ಟ ಅಧಿಕಾರಿಗಳಿಗೆ ಸವಿವರ, ಸಚಿತ್ರಸಹಿತ, ದೂರು ನೀಡಿ. ಹಾನಿ ಕಾರಕ ವಸ್ತುಗಳನ್ನಳ ತಯಾರಿಕೆ ಖಡ್ಡಾಯವಾಗಿ ನಿಲ್ಲಿಸಲು, ಬಳಕೆಗೆ ನಿರ್ದೇಶನಗಳನ್ನು ಹೇರಲು ಪತ್ರಮುಕೇನ ಆಗ್ರಹಿಸೋಣ. ಆಂದೋಲನಗಳನ್ನು ಮಾಡೋಣ, ತಯಾರಿಕಾ ಘಟಕಗಳೆದುರು ಸತ್ಯಾಗ್ರಹ ಮಾಡೋಣ. ಮಾರಾಟಗಾರರಿಗೆ ಮಾರದಂತೆ ತಾಕೀತು ಮಾಡೋಣ.
ಇದಕ್ಕಾಗಿ ಸಹಕರಿಸಲು, ಸಲಹೆ, ಸಲಕರಣೆಗೆ, ಸಹಭಾಗಿತ್ವಕ್ಕೆ ಕೈಜೋಡಿಸಿ, ಆದಿ ಇಂದ ಅಂತ್ಯದವರೆಗೆ ಕೈ ಕೊಡದೆ, ಕೈ ಬಿಡದೆ ಸರಪಳಿಯಂತೆ, ತಡೆ ಗೋಡೆಗಳಂತೆ ನಿಂತು ನಿಭಾಯಿಸುವುದಕ್ಕೆ ಬದ್ದರಾಗಿ ಬನ್ನಿ. ನಮ್ಮಿಂದಾದ ಅಳಿಲು ಸೇವೆ ಒಬ್ಬರಿಗೆ ಒಂದು ಕ್ಷಣ ಹಾಯಾಗಿದೆ ಎಂದೆನಿಸಿದರೂ ನಮ್ಮ ಕಾರ್ಯ, ಜೀವನ ಸಾರ್ಥಕವಾದಂತೆ.
ಬನ್ನಿ ಕೖ ಜೋಡಿಸಿ, ನಡೆಸಿ, ವಿಪುಲವಾದ ಫಲ ನೀಡಲು ಪಣತೊಟ್ಟು ನಿಲ್ಲಿ…
ಭಾರತವು ಜಗತ್ತಿನ ಅತಿದೊಡ್ಡ ಅಡಿಕೆ ಉತ್ಪಾದಕ ರಾಷ್ಟ್ರವಾಗಿದ್ದು, ಜಾಗತಿಕ ಉತ್ಪಾದನೆಯ ಸುಮಾರು 63…
2026 ರಲ್ಲಿ ಹೈಡ್ರೋಪೋನಿಕ್ ಅವಕಾಡೊ ಕೃಷಿ ಮತ್ತು ಜೇನು ಪರಾಗಸ್ಪರ್ಶದ ಸಂಯೋಜನೆ ಹೊಸ…
ಚಾಮರಾಜನಗರ ಜಿಲ್ಲೆಯಲ್ಲಿ ರೇಷ್ಮೆ ಗೂಡಿಗೆ ಕೆಜಿಗೆ 750ರಿಂದ 800 ರೂಪಾಯಿವರೆಗೆ ಬೆಲೆ ಸಿಗುತ್ತಿದೆ.…
ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕ ಮತದಾನ…
ಕೇಂದ್ರ ಸರ್ಕಾರವು ರಾಜ್ಯದ ರಬ್ಬರ್ ಕೃಷಿಯನ್ನು ಈಶಾನ್ಯಕ್ಕೆ ಸ್ಥಳಾಂತರಿಸುವ ಮೂಲಕ ರಬ್ಬರ್ ಕ್ಷೇತ್ರವನ್ನು…
ಅಡಿಕೆ ಮಾರುಕಟ್ಟೆ ಎಂದರೆ ಕೇವಲ ಕೃಷಿ ಉತ್ಪನ್ನಗಳ ವಿನಿಮಯ ಕೇಂದ್ರವಲ್ಲ; ಅದೊಂದು ಸಂಕೀರ್ಣವಾದ…