Advertisement
ಸುದ್ದಿಗಳು

ವಿದೇಶದಿಂದ ಬಂದರು ಮೂಲಕ ಆಗಮನವಾದ 8.61 ಕೋಟಿ ರೂ ಮೌಲ್ಯದ ಅಡಿಕೆ ಆಮದಿಗೆ ತಡೆ | ಮಣಿಪುರದಲ್ಲಿ 18.72 ಲಕ್ಷ ರೂಪಾಯಿ ಮೌಲ್ಯ ಅಡಿಕೆ ಕಳ್ಳಸಾಗಾಣಿಕೆಗೆ ತಡೆ |

Share

ಕಳೆದ ಕೆಲವು ಸಮಯಗಳಿಂದ ಅಡಿಕೆಯು ಅಸ್ಸಾಂ ಮೂಲಕ ವಾಹನಗಳಲ್ಲಿ ಕಳ್ಳಸಾಗಾಣಿಕೆಯಾಗಿ ಭಾರತದ ಮಾರುಕಟ್ಟೆಗೆ ಪ್ರವೇಶ ಮಾಡುತ್ತಿತ್ತು, ಇದೀಗ ಬೃಹತ್‌ ಪ್ರಮಾಣದ ಅಡಿಕೆ ಬಂದರು ಮೂಲಕ ಆಗಮಿಸುತ್ತಿರುವುದು  ಬೆಳಕಿಗೆ ಬಂದಿದೆ. ಸುಮಾರು 8.61 ಕೋಟಿ ರೂಪಾಯಿ ಮೌಲ್ಯದ ಒಟ್ಟು 114.372 ಮೆಟ್ರಿಕ್‌ ಟನ್‌ಗಳಷ್ಟು  ಅಡಿಕೆಯನ್ನು ಡಿಆರ್‌ಐ ವಶಪಡಿಸಿಕೊಂಡಿವೆ. ಇದೇ ವೇಳೆ ಮಣಿಪುರದ ಸೇನಾಪತಿ ಜಿಲ್ಲೆಯಿಂದ ನಾಗಾಲ್ಯಾಂಡ್‌ನ ವಾಣಿಜ್ಯ ಕೇಂದ್ರವಾದ ದಿಮಾಪುರ್‌ಗೆ  ಸಾಗಿಸಬೇಕಿದ್ದ ಸುಮಾರು 18.72 ಲಕ್ಷ ರೂಪಾಯಿ ಮೌಲ್ಯದ 2880 ಕೆಜಿ ಅಡಿಕೆಯನ್ನುಯ ವಶಪಡಿಸಿಕೊಳ್ಳಲಾಗಿದೆ. ಹೀಗಾಗಿ ಅಡಿಕೆ ಆಮದು ತಂಡ ಮತ್ತೆ ಸಕ್ರಿಯವಾಗಿರುವುದು  ಬೆಳಕಿಗೆ ಬಂದಿದೆ.

ವಿವಿಧ ಕಡೆಗಳಿಂದ ಕಂಟೈನರ್‌ಗಳಲ್ಲಿ ಬೃಹತ್ ಪ್ರಮಾಣದಲ್ಲಿ  ಅಡಿಕೆಯನ್ನು ಭಾರತಕ್ಕೆ ಅಕ್ರಮವಾಗಿ ಆಮದು ಮಾಡಿಕೊಳ್ಳಲಾಗುತ್ತಿದೆ ಎಂಬ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಡಿಆರ್‌ ಐ ಕಾರ್ಯಾಚರಣೆ ನಡೆಸಿತ್ತು. ಬಾರ್ಲಿ, ಪ್ರಾಣಿ ಆಹಾರ ಎಂದು ತಪ್ಪಾಗಿ ನಮೂದಿಸಿ ಅಡಿಕೆ ಸಾಗಾಣಿಕೆ ಮಾಡಲಾಗುತ್ತಿತ್ತು. ಟ್ಯುಟಿಕೋರಿನ್ ಮತ್ತು ಚೆನ್ನೈ ಬಂದರಿನ ಮೂಲಕ ಒಟ್ಟು ಐದು ಕಂಟೈನರ್‌ಗಳನ್ನು ತಡೆಹಿಡಿದು ತನಿಖೆ ನಡೆಸುತ್ತಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಒಟ್ಟು 114.372 ಮೆಟ್ರಿಕ್‌ ಟನ್‌ಗಳಷ್ಟು ಕಳ್ಳಸಾಗಣೆ ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದೆ. ಎಲ್ಲಾ 5 ಕಂಟೈನರ್‌ಗಳ ಆಮದು ಚೆನ್ನೈ ಮೂಲದ ವ್ಯಕ್ತಿಯಿಂದ ಮಾಡಲ್ಪಟ್ಟಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಈ ಹಿಂದೆ‌ ಡಿಆರ್‌ಐಯು ಇಂಡೋನೇಷ್ಯಾದಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದ 232.349 ಮೆಟ್ರಿಕ್‌ ಟನ್ ಅಡಿಕೆಯನ್ನು ವಶಪಡಿಸಿಕೊಂಡಿದೆ. 2022-23ರಲ್ಲಿ 143 ಕೋಟಿ ಮೌಲ್ಯದ ಸುಮಾರು 3670.19 ಮೆ.ಟನ್ ಅಡಿಕೆಯನ್ನು ಡಿಆರ್‌ಐನ ವಿವಿಧ ಘಟಕಗಳು ವಶಪಡಿಸಿಕೊಂಡಿವೆ.

ಇದೇ ವೇಳೆ ಮಣಿಪುರದ ಸೇನಾಪತಿ ಜಿಲ್ಲೆಯಿಂದ ನಾಗಾಲ್ಯಾಂಡ್‌ನ ವಾಣಿಜ್ಯ ಕೇಂದ್ರವಾದ ದಿಮಾಪುರ್‌ಗೆ ಸಾಗಿಸಬೇಕಿದ್ದ  ಸುಮಾರು 18.72 ಲಕ್ಷ ರೂಪಾಯಿ ಮೌಲ್ಯದ 2880 ಕೆಜಿ ಅಡಿಕೆಯ ಅಕ್ರಮ ಸಾಗಣೆಯನ್ನು ಅಸ್ಸಾಂ ರೈಫಲ್ಸ್ ಪತ್ತೆ ಮಾಡಿದೆ. ಅಸ್ಸಾಂ ಗಡಿ ತಲುಪಿದ ಬಳಿಕ ತಲೆ ಹೊರೆ ಹಾಗೂ ಸಣ್ಣ ವಾಹನಗಳ ಮೂಲಕ ಭಾರತದ ಮಾರುಕಟ್ಟೆಗೆ ಅಡಿಕೆ ಸಾಗಾಟ ಮಾಡಲಾಗುತ್ತಿತ್ತು, ಈ ಪ್ರಕರಣವನ್ನು ಅಸ್ಸಾಂ ರೈಫಲ್ಸ್‌ ಪತ್ತೆ ಮಾಡಿದೆ. ಜನವರಿ 12 ರಂದು ಮಣಿಪುರದಲ್ಲಿ ಸುಮಾರು 66.30 ಲಕ್ಷ ರೂಪಾಯಿ ಮೌಲ್ಯದ 5 ಟ್ರಕ್‌ಗಳ ಅಡಿಕೆ ವಶಪಡಿಸಿಕೊಳ್ಳುವುದರೊಂದಿಗೆ 10 ಜನರನ್ನು ವಶಕ್ಕೆ ತೆಗೆದುಕೊಂಡಿತ್ತು. ಇದೀಗ ಮತ್ತೆ ನಡೆಸಿದ ಕಾರ್ಯಾಚರಣೆಯಲ್ಲಿ 2880 ಕೆಜಿ ಅಡಿಕೆಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಹವಾಮಾನ ವರದಿ | 16-08-2026 | ಕರಾವಳಿ–ಮಲೆನಾಡಿನಲ್ಲಿ ಮಳೆ ಕಡಿಮೆ – ಉತ್ತರ ಒಳನಾಡಿನಲ್ಲಿ 19 ರಿಂದ ಮಳೆ ಹೆಚ್ಚಳ ಸಾಧ್ಯತೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 24ರವರೆಗೂ ಬಿಸಿಲು, ಮೋಡ ಹಾಗೂ ಅಲ್ಲಲ್ಲಿ ಸಾಮಾನ್ಯ…

2 hours ago

ಗ್ರಾಮೀಣ ಸಂಪರ್ಕಕ್ಕೆ 15 ಸಾವಿರ ಹೊಸ ಬಸ್‌ಗಳು: ಸಾರಿಗೆ ಸಚಿವ

ಗ್ರಾಮೀಣ ಹಾಗೂ ಸಾರಿಗೆ ಸಂಪರ್ಕದಿಂದ ವಂಚಿತ ಪ್ರದೇಶಗಳಿಗೆ ಸಾರ್ವಜನಿಕ ಸಾರಿಗೆ ಸೇವೆ ಹೆಚ್ಚಿಸುವ…

6 hours ago

ಹವಾಮಾನ ವರದಿ | 15-08-2026 | ಕರಾವಳಿಯಲ್ಲಿ ಮುಂದಿನ 10 ದಿನವೂ ಮಳೆ ಚದುರಿಕೆ; ಒಳನಾಡಿನಲ್ಲಿ ಆಗಸ್ಟ್ 18–19ರಿಂದ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಮಳೆ ಚಟುವಟಿಕೆ ಸದ್ಯಕ್ಕೆ ಇಳಿಕೆಯಾಗಿದ್ದು, ಕರಾವಳಿಯಲ್ಲಿ ಮುಂದಿನ 10 ದಿನವೂ ಚದುರಿದ…

23 hours ago

ಎತ್ತುಗಳಿಂದ ಡ್ರೋನ್‌ವರೆಗೆ… ಇದು ಭಾರತದ ಕೃಷಿಯ 79 ವರ್ಷಗಳ ಪಯಣ..!

ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…

1 day ago

ತೀವ್ರ ವಿರೋಧದ ಹಿನ್ನೆಲೆ – ರಾಜ್ಯದಲ್ಲಿ ಗುಟ್ಕಾ ನಿಷೇಧ ಹಿಂತೆಗೆದುಕೊಳ್ಳಲು ಸರ್ಕಾರ ನಿರ್ಧಾರ – ಹೊರಬೀಳದ ಅಧಿಕೃತ ಆದೇಶ..!

ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…

1 day ago

ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?

ಗುಟ್ಕಾ–ಪಾನ್‌ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…

2 days ago