15,000 ಕಿಮೀ ಪ್ರಯಾಣಿಸಿ ಭಾರತಕ್ಕೆ ಮರಳಿ ಬಂದ ಹದ್ದು

November 21, 2025
7:15 PM

ಮಧ್ಯ ಪ್ರದೇಶದ ರಾಜ್ಯದ ವಿದಿಶಾ ಮತ್ತು ರೈಸೇನ್‌ನಿಂದ ಬಿಡುಗಡೆಯಾದ ರಣಹದ್ದು ಎಂಟು ತಿಂಗಳ ನಂತರ ಭಾರತಕ್ಕೆ ಮರಳಿದ್ದು, ಈ ಪಕ್ಷಿ 15,000 ಕಿಲೋಮೀಟರ್ ಪ್ರಯಾಣಿಸಿದೆ. ಅರಣ್ಯ ಇಲಾಖೆಯು ರಣಹದ್ದಿಗೆ ಉಪಗ್ರಹ ರೇಡಿಯೋ ಕಾಲರ್ ಅಳವಡಿಸಿದ್ದು, ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿತ್ತು.  ಈ ರಣಹದ್ದನ್ನು ಮಾರ್ಚ್ 29ರಂದು ವಿದಿಶಾ-ರೈಸೆನ್‍ನಲ್ಲಿರು ಹಲಾಲಿ ಅಣೆಕಟ್ಟಿನಲ್ಲಿ ಅರಣ್ಯ ಇಲಾಖೆಯು ಉಪಗ್ರಹ ರೇಡಿಯೋ ಕಾಲರ್ ಅಳವಡಿಸಿ ಬಿಡುಗಡೆ ಮಾಡಲಾಗಿದ್ದು, ಇದು ಎಂಟು ತಿಂಗಳ ನಂತರ ಅಂದರೆ ಸುಮಾರು 15,000 ಕಿಲೋಮೀಟರ್ ಪ್ರಯಾಣಿಸಿ ಇದೀಗ ಭಾರತಕ್ಕೆ ಮರಳಿದೆ.

ಹದ್ದು ತನ್ನ ಪ್ರಯಾಣದ ಸಮಯದಲ್ಲಿ ಪಾಕಿಸ್ತಾನ, ಅಫ್ಫಾನಿಸ್ತಾನ, ಉಜ್ಬೇಕಿಸ್ತಾನ್ ಮತ್ತು ಕಝಾಕಿಸ್ತಾನ್‍ಗೆ ಪ್ರಯಾಣಿಸಿದ್ದು, ಪ್ರಸ್ತುತ ಇದು ರಾಜಸ್ಥಾನದ ಧೋಲ್ಬುರ್ ಜಿಲ್ಲೆಯ ಬಳಿ ಇದೆ ಎಂದು ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.

ಹಲಾಲಿ ಅಣೆಕಟ್ಟಿನಿಂದ ಬಿಡುಗಡೆಯಾದ ಒಂದು ತಿಂಗಳೊಳಗೆ ರಣಹದ್ದು ಕಜಕಿಸ್ತಾನ್ ತಲುಪಿದೆ. ಮೇ ತಿಂಗಳಲ್ಲಿ ಕಜಕಿಸ್ತಾನ್‌ಗೆ ಬಂದ ನಂತರ ಅದು ನಾಲ್ಕು ತಿಂಗಳು ಅಲ್ಲೇ ಇತ್ತು. ನಂತರ, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಉಜ್ಬೇಕಿಸ್ತಾನ್ ಮೂಲಕ ಭಾರತಕ್ಕೆ ಮರಳಿದೆ. ರಣಹದ್ದು ಪ್ರಸ್ತುತ ರಾಜಸ್ಥಾನದ ಬಳಿಯ ಧೋಲ್ಪುರದಲ್ಲಿ ಬೀಡುಬಿಟ್ಟಿದೆ ಎಂದು ವಿದಿಶಾ ಡಿಎಫ್‌ಒ ಹೇಮಂತ್ ಯಾದವ್ ಹೇಳಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ರೂರಲ್‌ ಮಿರರ್ ಸುದ್ದಿಜಾಲ

ಇದನ್ನೂ ಓದಿ

ಭಾರೀ ಮಳೆಯ ಎಚ್ಚರಿಕೆ : 24 ಗಂಟೆ ಸನ್ನದ್ಧವಾಗಿರಲು ಡಿಸಿ ಸೂಚನೆ, ಭೂಕುಸಿತ ಪ್ರದೇಶಗಳ ಮೇಲೆ ಕಟ್ಟೆಚ್ಚರ
August 2, 2026
7:24 AM
by: ದ ರೂರಲ್ ಮಿರರ್.ಕಾಂ
ಹುಬ್ಬಳ್ಳಿಯಲ್ಲಿ ಹಲಸು ಮೇಳಕ್ಕೆ ಚಾಲನೆ – 50ಕ್ಕೂ ಹೆಚ್ಚು ಮಳಿಗೆಗಳು, ಹಲಸಿನ ಬಿರಿಯಾನಿಯಿಂದ ಕಬಾಬ್‌ವರೆಗೆ ಸವಿಯುವ ಅವಕಾಶ
August 2, 2026
7:14 AM
by: ದ ರೂರಲ್ ಮಿರರ್.ಕಾಂ
ರಾಜ್ಯಾದ್ಯಂತ ಆರ್ಭಟಿಸುತ್ತಿರುವ ವರುಣ – ಭದ್ರಾ-ನೇತ್ರಾವತಿ ಅಪಾಯದ ಮಟ್ಟ ಮೀರಿ ಪ್ರವಾಹ
August 2, 2026
6:58 AM
by: ದ ರೂರಲ್ ಮಿರರ್.ಕಾಂ
ಶಿರಾಡಿ ಘಾಟ್‌ನಲ್ಲಿ ಭೂಕುಸಿತ – ರೈಲು ಸಂಚಾರಕ್ಕೆ ತಾತ್ಕಾಲಿಕ ಅಡ್ಡಿ
August 2, 2026
6:30 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror