ಮಾಹಿತಿ

ಮಣ್ಣು ಕೊರೆಯುವ ಜೀವಿಗಳು | ನಮ್ಮ ಜಮೀನಿನಲ್ಲಿ ಇವುಗಳಿದ್ದರೆ ಆಗುವ ಪ್ರಯೋಜನಗಳೇನು..?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಮಣ್ಣು(Soil) ಭೂಮಿಯ(Earth)ಪರಿಸರದ(Environment) ಒಂದು ಪ್ರಮುಖ ಅಂಶ.  ಇದು ಜೀವಂತ ಜೀವಿಗಳಿಗೆ ಆವಾಸಸ್ಥಾನವನ್ನು ಒದಗಿಸುತ್ತದೆ. ಇದು ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಮತ್ತು ಎರೆಹುಳುಗಳಂತಹ ಸಣ್ಣ ಪ್ರಾಣಿಗಳನ್ನು ಒಳಗೊಂಡಂತೆ ಸೂಕ್ಷ್ಮಜೀವಿಗಳ ಜೀವನದಿಂದ ತುಂಬಿದೆ. ಈ ಜೀವಿಗಳು ಮಣ್ಣಿನ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಸಸ್ಯಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ ಮತ್ತು ಕಾರ್ಬನ್ ಮತ್ತು ಇತರ ವಸ್ತುಗಳ ಸೈಕ್ಲಿಂಗ್ನಲ್ಲಿ ಸಹಾಯ ಮಾಡುತ್ತವೆ. ಈ ಎಲ್ಲಾ ಜೀವಿಗಳು ಆಶ್ರಯ, ಆಹಾರ ಮತ್ತು ಸಂತಾನೋತ್ಪತ್ತಿಗೆ ಸ್ಥಳವನ್ನು ಒದಗಿಸಲು ಮಣ್ಣಿನ ಮೇಲೆ ಅವಲಂಬಿತವಾಗಿವೆ. ಮಣ್ಣು ಪರಿಸರದ ಅತ್ಯಗತ್ಯ ಭಾಗವಾಗಿದೆ. ಮಣ್ಣು ಕೊರೆಯುವ ಜೀವಿಗಳು ಮಣ್ಣೊಳಗಿನ ಮತ್ತು ಮಣ್ಣು ಮೇಲಿನ ಪ್ರಾಕೃತಿಕ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ವ್ಯವಸ್ಥೆಯಲ್ಲಿ ಎರೆಹುಳುಗಳು ಪ್ರಮುಖ ಪಾತ್ರ ವಹಿಸುತ್ತವೆ.

Advertisement

ನಮ್ಮ ಹೊಲದ ಮಣ್ಣುಗಳಲ್ಲಿ ಎರೆಹುಳುಗಳಿದ್ದರೆ ಆಗುವ ಲಾಭವೇನು ಗೊತ್ತೇ? :

  • ಮಣ್ಣಲ್ಲಿ ಗಾಳಿಯಾಡುವಿಕೆ: ಎರೆಹುಳುಗಳು ಮಣ್ಣಲ್ಲಿ ಓಡಾಡುವಲ್ಲೆಲ್ಲಾ ಸಣ್ಣ ಸುರಂಗ ನಿರ್ಮಾಣವಾಗುತ್ತದೆ. ಈ ಸುರಂಗದೊಳಗೆ ಗಾಳಿಯಾಡುತ್ತದೆ. ಜೊತೆಗೆ ಮಳೆನೀರು ಕೂಡಾ ಮಣ್ಣೊಳಗೆ ಸುರಂಗದ ಮೂಲಕ ಮಣ್ಣೊಳಗೆ ಹರಿಯುತ್ತಾ ಮಣ್ಣಿನಾಳಕ್ಕೆ ಇಳಿಯುತ್ತದೆ. ಇದರಿಂದ ಗಟ್ಟಿ ಪದರವಿರುವ ಮಣ್ಣು ಸಡಿಲವಾಗುತ್ತದೆ. ಇಂತಹ ಸಡಿಲ ಮಣ್ಣೊಳಗೆ ಗಿಡದ ಬೇರುಗಳು ಇಳಿಯಲು ಬೆಳೆಯಲು ಸಹಕಾರಿ.
  • ಮಣ್ಣಲ್ಲಿ ಪೋಷಕಾಂಶಗಳ ಸೃಷ್ಟಿ: ಎರೆಹುಳುಗಳು ಒಣವಸ್ತುಗಳನ್ನು ಮೆಲ್ಲುತ್ತಾ ನಿಧಾನವಾಗಿ ಅವುಗಳನ್ನು ವಿಘಟಿಸುತ್ತದೆ. ಹೀಗೆ ಚೂರುಚೂರಾಗುವ ಸಾವಯವ ಒಣವಸ್ತುಗಳು ಕ್ರಮೇಣ ಮಣ್ಣಲ್ಲಿ ಬೆರೆತು ಕರಗಿ ಗೊಬ್ಬರವಾಗುತ್ತದೆ. ಈ ಗೊಬ್ಬರದಲ್ಲಿ ಹಲವು ಬಗೆಯ ಪೋಷಕಾಂಶಗಳು ಸೃಷ್ಟಿಯಾಗುತ್ತವೆ. ಮಣ್ಣಲ್ಲಿರುವ ಈ ಪೋಷಕಾಂಶಗಳನ್ನು ಗಿಡದ ಬೇರುಗಳು ಹೀರಿ ಗಿಡದ ಮೇಲ್ಭಾಗಕ್ಕೆ ರವಾನಿಸುತ್ತವೆ.
  • ಮಣ್ಣಿನ ರಚನೆ: ಎರೆಹುಳುಗಳು ಮಣ್ಣಿನ ರಚನೆಯನ್ನು ಸುಧಾರಿಸುತ್ತವೆ ಹಾಗೂ ಮಣ್ಣಲ್ಲಿ ನೀರು ಹೀರುವ ಹಾಗೂ ದೀರ್ಘಕಾಲ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಲು ಸಹಕರಿಸುತ್ತವೆ. ಈ ಬೆಳವಣಿಗೆಗಳ ಕಾರಣದಿಂದ ಮಣ್ಣು ಫಲವತ್ತಾಗುತ್ತದೆ. ಅದರ ಉತ್ಪಾದನಾ ಶಕ್ತಿ ಹೆಚ್ಚುತ್ತದೆ.
  • ಮಣ್ಣಲ್ಲಿ ಸಿಂಗಾರದ ಮನೆಯ ನಿರ್ಮಾಣ: ಎರೆಹುಳುಗಳು ತಾವಿರುವ ತಾಣವನ್ನು ಉತ್ತಮವಾಗಿ ಹಾಗೂ ತಂಪಾಗಿರಿಸುವದರ ಮೂಲಕ ಇನ್ನಿತರ ಮಣ್ಣು ಜೀವಿಗಳೂ ಸಹ ತಾನಿರುವ ಮಣ್ಣಲ್ಲೇ ನೆಲೆಯೂರುವಂತೆ ಮಣ್ಣನ್ನು ಸಿಂಗರಿಸುತ್ತವೆ.
  • ಜೀವಿವೈವಿಧ್ಯತೆ: ಎರೆಹುಳುಗಳು ಮಣ್ಣಲ್ಲಿ ಗುಣಮಟ್ಟದ ಆಹಾರಚಕ್ರವನ್ನು ಸೃಷ್ಟಿಸುವ ಮೂಲಕ ಮಣ್ಣಲ್ಲಿ ವೈವಿಧ್ಯಮಯ ಜೀವಿಗಳು ನೆಲೆಯೂರುವಂತೆ ಮಾಡುತ್ತವೆ.
  • ಬೇಸಾಯ: ಎರೆಹುಳುಗಳನ್ನು ಗೊಬ್ಬರದ ಉತ್ಪಾದನೆಗಾಗಿ ಬೆಳೆಸಲಾಗುತ್ತಿದೆ. ಎರೆಹುಳುಗಳು ಸೃಷ್ಟಿಸುವ ಗೊಬ್ಬರದ ಗುಣಮಟ್ಟ ಅತ್ಯುತ್ತಮ ಎಂದು ಹೆಸರು ಪಡೆದಿದೆ.

ಮಣ್ಣಿನ ಅರೋಗ್ಯ ಸ್ಥಿತಿಯನ್ನು ಪರಿಶೀಲಿಸುವಾಗ, ತಜ್ಞರು ಮಣ್ಣಲ್ಲಿ ಎರೆತಜ್ಞರು ಮಣ್ಣಿನ ಸ್ಥಿತಿಗತಿಯನ್ನು ಪರಿಶೀಲಿಸುವಾಗ, ಮಣ್ಣಲ್ಲಿ ಎರೆಹುಳುಗಳಿವೆಯೇ ಎಂದು ಮೊದಲು ಗಮನಿಸುತ್ತಾರೆ. ಮಣ್ಣಲ್ಲಿ ಎರೆಹುಳುಗಳಿದ್ದಲ್ಲಿ, ಆ ಮಣ್ಣಿನ ಗುಣಮಟ್ಟ ಚೆನ್ನಾಗಿದೆ ಎಂದೇ ಅರ್ಥ.

Source: Teacher Michael Gold

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮುಂಗಾರು ಮೇ 27 ರಂದು ಆರಂಭ | ನಿಗದಿತ ಸಮಯಕ್ಕಿಂತ ಮೊದಲೇ ಮಳೆಗಾಲ ಆರಂಭ | ಕೇರಳದಲ್ಲಿ ಇಂದು ಮಳೆ ಸಾಧ್ಯತೆ |

ಭಾರತದ ಮೇಲೆ ನೈಋತ್ಯ ಮಾನ್ಸೂನ್‌ನ ಆರಂಭದ ದಿನಾಂಕಗಳ ಪ್ರಕಾರ ಸಾಮಾನ್ಯವಾಗಿ ಮೇ.21 ಅಥವಾ…

13 hours ago

ಈ ರಾಶಿಯವರಿಗೆ, ಮುಟ್ಟಿದ್ದೆಲ್ಲ ಚಿನ್ನ ಆ ರಾಶಿಗಳು ಯಾವುದು ತಿಳಿಯೋಣ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 953515649

13 hours ago

ಆಪರೇಷನ್ ಸಿಂದೂರ್ ಕೇವಲ ಹೆಸರಲ್ಲ, ಅದು ದೇಶದ ಜನರ ಸಾಮೂಹಿಕ ಭಾವನೆ – ಪ್ರಧಾನಿ ನರೇಂದ್ರ ಮೋದಿ

ಭಾರತವು ಭಯೋತ್ಪಾದನೆಯನ್ನು ಸಹಿಸುವುದಿಲ್ಲ, ಪ್ರತಿಕ್ರಿಯಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

22 hours ago

ಹವಾಮಾನ ವರದಿ | 12-05-2025 | ಇಂದು ರಾಜ್ಯದಾದ್ಯಂತ ಅಲ್ಲಲ್ಲಿ ಮಳೆಯ ಮುನ್ಸೂಚನೆ

ಮುಂಗಾರು ಅವಧಿಗೂ ಮುನ್ನವೇ ಆರಂಭವಾಗುವ ವರದಿಗಳು ಬರುತ್ತಿವೆ. ಈಗಾಗಲೇ ಹಿಂದುಮಹಾಸಾಗರ ಭಾಗದಿಂದ ಅರಬ್ಬಿ…

1 day ago

ಕೃಷಿ ಅಕಾಡೆಮಿ ರಚನೆ – ಮುಳಿಯ ಕೃಷಿ ಗೋಷ್ಟಿಯಲ್ಲಿ ಕೇಶವ ಪ್ರಸಾದ್ ಮುಳಿಯ |

ಕೃಷಿ ಕ್ಷೇತ್ರ ಅಭಿವೃದ್ಧಿಗಾಗಿ ಮುಳಿಯದ ಸಂಸ್ಥೆ ಸಹಯೋಗದಲ್ಲಿ ಕೃಷಿ ಅಕಾಡೆಮಿ ರಚನೆ ಮಾಡುವ…

1 day ago

ರಾಶಿಗಳಿಗೆ ಲಕ್ಷ್ಮಿದೇವಿ ಆಶೀರ್ವಾದದಿಂದ ಅಪಾರ ಸಂಪತ್ತು ಪ್ರಾಪ್ತಿ | ಏನು ಮಾಡ್ಬೇಕು? |

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

2 days ago