Opinion

ಆರೋಗ್ಯಕ್ಕೆ ಒಳ್ಳೆಯದೆಂದು ತರಕಾರಿ ತಿಂದಿರಿ ಜೋಕೆ…! | ಹೊಟ್ಟೆಯೊಳಗೆ ಸೇರುತ್ತಿದೆ ಹೆಚ್ಚು ವಿಷ…! |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಮುಟ್ಟಿದ್ದೆಲ್ಲಾ ಚಿನ್ನವಾಗುವ ವರ ಪಡೆದ ಕತೆಯನ್ನು ಕೇಳಿದ್ದೀರಲ್ಲಾ? ಕತೆಯಲ್ಲಿ ಆ ವರವೇ ಶಾಪವಾಗಿ ಅವನ ನಾಶಕ್ಕೆ ಕಾರಣವಾಗುವುದೂ ತಮಗೆ ಗೊತ್ತಿದೆ…!. ಇಂದು ಮನುಷ್ಯನ ಕತೆಯೂ ಅದೇ ಆಗಿದೆ. ಮುಟ್ಟಿದ್ದು ಚಿನ್ನವಾಗದೆ ವಿಷವಾಗಿ(poison) ಅವನ ಹೊಟ್ಟೆ ಸೇರುತ್ತಿದೆ. ರಕ್ತ ಹೀನತೆಯೇ? ಹೆಚ್ಚು , ಹೆಚ್ಚು ತರಕಾರಿ(vegetables) ತಿನ್ನಿ ಎನ್ನುವ ಕಾಲವೂ ಹೋಯಿತು. ಡೆಕ್ಕನ್ ಹೆರಾಲ್ಡ್‌ ಈ ಬಗ್ಗೆ ವರದಿಯೊಂದನ್ನು ಪ್ರಕಟಿಸಿದೆ…  

Advertisement
Advertisement

ಬೆಂಗಳೂರಿನಲ್ಲಿ  ದೊರಕುವ ಹೆಚ್ಚಿನ ತರಕಾರಿಗಳಲ್ಲಿ ಮಿತಿಯನ್ನು ಮೀರಿ ಭಾರ ಲೋಹಗಳು ಇರುವುದನ್ನು ಗುರುತಿಸಲಾಗಿದೆ. ಇದಕ್ಕೆ ಕಾರಣ? ತರಕಾರಿ ಬೆಳೆಯಲು ಬಳಸುತ್ತಿರುವ ನೀರಿನಲ್ಲಿನ ಸಮಸ್ಯೆ. ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳು ಬೆಂಗಳೂರು ನಗರಕ್ಕೆ ತರಕಾರಿಯನ್ನು ಸರಬರಾಜು ಮಾಡುತ್ತವೆ. ಈ ತರಕಾರಿ ಬೆಳೆಯಲು ನೀರು? ನಗರಸಾರ ತುಂಬಿದ ಬೆಂಗಳೂರು ನಗರದ ಕೊಳಚೆ ನೀರು .

ಬೆಂಗಳೂರಿನ Environment Management and Policy Research Institute  20 ಮಳಿಗೆಗಳಿಂದ 400 ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಐದು ಉನ್ನತ  ಸೂಪರ್‌ಮಾರ್ಕೆಟ್‌ಗಳು, ಐದು ಸ್ಥಳೀಯ ಮಾರುಕಟ್ಟೆಗಳಿಂದ ಸಂಗ್ರಹಿಸಿ ಮಾಡಿದ ಪರೀಕ್ಷೆಯಲ್ಲಿ ಇದು ಕಂಡಿದೆ. ಈ ತರಕಾರಿಗಳನ್ನು ಸೂಪರ್ ಮಾರ್ಕೆಟ್ ಗಳಿಂದ ಹಿಡಿದು ತಳ್ಳುವ ಗಾಡಿಯವರಗೆ , ಸಾವಯವ ಮಳಿಗೆಗಳು, ಹಾಪ್‌ ಕಾಮ್‌ ಮಳಿಗೆಗಳು ಹೀಗೆ ವಿವಿದೆಡೆಯಿಂದ ಸಂಗ್ರಹಿಸಲಾಗಿದೆ. ಫಲಿತಾಂಶದಲ್ಲಿ ಕಂಡುಬಂದ ಮಾಹಿತಿ  ಗಾಬರಿ ಮತ್ತು ಭಯವನ್ನು ಉಂಟುಮಾಡುತ್ತದೆ.  ಇದರಲ್ಲಿ 10 ತರಕಾರಿ ಮಿತಿಗಿಂತ ಹೆಚ್ಚು ವಿಷದ ಅಂಶ ಕಂಡುಬಂದಿದೆ. ಅಂದರೆ ವಿಷವನ್ನೇ ತಿನ್ನುತ್ತಿದ್ದೀವೇನೋ ! ಕ್ಯಾಡ್ಮಿಯಂ ಅತ್ಯಂತ ವಿಷಕಾರಿ ಲೋಹ 0.2 ಎಂಜಿ ಇರಬಹುದಾದ ಕಡೆ ಸುಮಾರು 50 ಎಂಜಿ ಇದ್ದು ಅಂದರೆ 25,000 ಪಟ್ಟು ಹೆಚ್ಚಿದೆ.

ಹಾಗೆಯೇ ನಮಗೆಲ್ಲರಿಗೂ ತಿಳಿದಿರುವಂತೆ ಸೀಸ ಕೂಡ ಅಪಾಯಕಾರಿ ಮತ್ತು ವಿಷಕಾರಿ ಅದು 4000 ಪಟ್ಟು ಹೆಚ್ಚಿದೆ. ಸೊಪ್ಪುಗಳು ಈ ಭಾರದ ಲೋಹಗಳನ್ನು ಹೆಚ್ಚು ಹಿಡಿದಿಡುತ್ತವೆ , ಎಂಬುದು ಪರೀಕ್ಷೆಯಿಂದ ಕಂಡುಬಂದಿದೆ.ಹಾಗಾಗಿ ಆರೋಗ್ಯಕ್ಕಾಗಿ ಸೊಪ್ಪನ್ನು ಬಳಸುವ ಮುಂಚೆ ಒಮ್ಮೆ ಯೋಚಿಸಿ, ಇದು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರದೆ ಇರುತ್ತದೆಯೇ? ನಾವು ನೋಡ ನೋಡುತ್ತಿದ್ದಂತೆ ಕ್ಯಾನ್ಸರ್ ರೋಗದ ಪ್ರಮಾಣ ಎಷ್ಟೊಂದು ಹೆಚ್ಚಾಗಿ ಹೋಯಿತು… ಎಲ್ಲೋ ಅಪರೂಪಕ್ಕೆ ಕೇಳಿ ಬರುತ್ತಿದ್ದ ಕಾಯಿಲೆ ಇಂದು ಸರ್ವೇಸಾಮಾನ್ಯವಾಗಿ ಹೋಗಿದೆ. ಅದು ರೋಗಿಗೆ ಮತ್ತು ಕುಟುಂಬಕ್ಕೆ ತರುತ್ತಿರುವ ಹಿಂಸೆ ಅಷ್ಟಿಷ್ಟಲ್ಲ.

Advertisement

(ಮೂಲಮಾಹಿತಿ –  ಸಂತೋಷ, ಕೌಲಗಿ ಹಾಗೂ ಡೆಕ್ಕನ್‌ ಹೆರಾಲ್ಡ್)

Most of the vegetables available in Bangalore have been found to contain heavy metals beyond the limit. The reason for this? Problem with water used to grow vegetables. Bengaluru, Kolar, Chikkaballapur, Ramanagara districts supply vegetables to Bangalore city. Water to grow this vegetable? Sewage water of Bangalore city full of city sap.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಉತ್ತಮ ಮಳೆಯಿಂದ ಹಸಿರಾದ ವನ್ಯಜೀವಿ ತಾಣ | ಚಾಮರಾಜನಗರ ಜಿಲ್ಲೆಯ ಹಲವೆಡೆ ಹಸಿರು ಸಂಭ್ರಮ

ಉತ್ತಮ ಮಳೆಗೆ ಅರಣ್ಯ ಪ್ರದೇಶವೆಲ್ಲ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ, ಮಳೆ ಹನಿಗಳಿಗೆ ಮೈಯೊಡ್ಡಿದ…

5 hours ago

50 ಕೋಟಿಗೂ ಹೆಚ್ಚು ಜನರು ಕೃಷಿ ಕ್ಷೇತ್ರದಲ್ಲಿದ್ದಾರೆ , ಜಿಡಿಪಿಗೆ ಕೃಷಿಯ ಕೊಡುಗೆ ಶೇಕಡಾ 18

ರಾಜ್ಯದ ಅಡಿಕೆ ಬೆಳೆ ಅತ್ಯಂತ ಉತ್ಕೃಷ್ಟ ಗುಣಮಟ್ಟದ್ದಾಗಿದ್ದು, ಇದರಲ್ಲಿ ಯಾವುದೇ ರಾಸಾಯನಿಕ ಇಲ್ಲ.…

5 hours ago

ಅಡಿಕೆ ಹಾಳೆ ರಫ್ತು ನಿರ್ಬಂಧದ ಸಂಕಷ್ಟದಿಂದ ಪಾರಾಗಲು ಕೈಗೊಳ್ಳಬಹುದಾದ ಪರಿಹಾರೋಪಾಯಗಳು

ನಿಷೇಧವು ಶಾಶ್ವತವಲ್ಲ, ಮತ್ತು ವೈಜ್ಞಾನಿಕ, ತಾಂತ್ರಿಕ, ಮತ್ತು ವಾಣಿಜ್ಯ ರಾಜತಾಂತ್ರಿಕ ಮಾರ್ಗದಿಂದ ಈ…

6 hours ago

ಅಡಿಕೆ ಎನ್ನುವ ಚಿನ್ನದ ಮೊಟ್ಟೆ ಇಡುವ ಕೋಳಿ | ವರವೋ ಶಾಪವೋ?

ಆಹಾರ ಧಾನ್ಯಗಳನ್ನು ಬೆಳೆಸುತ್ತಿದ್ದ ಕೃಷಿಕರು ಅಡಿಕೆ ಕೃಷಿಗೆ ಪರಿವರ್ತನೆ ಆಗಿ ಆಹಾರಕ್ಕಾಗಿ ಪರಾವಲಂಬಿಗಳು…

7 hours ago

ಹೊಸರುಚಿ | ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ರೊಟ್ಟಿ

ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ರೊಟ್ಟಿಗೆ ಬೇಕಾಗುವ ಸಾಮಗ್ರಿಗಳು: ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ…

8 hours ago

ಗುರು ಮತ್ತು ಬುಧ ದಶಾಂಕ ಯೋಗ | ಉದ್ಯೋಗದ ಮೇಲೆ ಜಾಕ್ಪಾಟ್ ದೊರೆಯಲಿದೆ

ಹೆಚ್ಚಿನ ಮಾಹಿತಿಗಾಗಿರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

10 hours ago