ಕರಾವಳಿಗೆ ವಾಡಿಕೆ ಮಳೆ, ಮಲೆನಾಡು ದಾಟದ ಮುಂಗಾರು ಮೋಡ..!

August 25, 2026
12:13 PM
ಎಲ್ ನಿನೋ ಪರಿಣಾಮದಿಂದ ಮಳೆ ಕಡಿಮೆಯಾಗಬಹುದು ಎಂಬ ನಿರೀಕ್ಷೆಯ ನಡುವೆಯೂ ಕರಾವಳಿಯಲ್ಲಿ ಆಗಸ್ಟ್‌ನಲ್ಲಿ ವಾಡಿಕೆ ಮಳೆ ಬಂದಿದೆ. ಆದರೆ ದುರ್ಬಲ ಗಾಳಿ ಮತ್ತು ಮಧ್ಯಮ ಮಟ್ಟದ ಮೋಡಗಳ ಚಲನೆಯಿಂದ ಮಳೆ ಮಲೆನಾಡು ದಾಟದೆ ಒಳನಾಡಿನಲ್ಲಿ ಕೊರತೆ ಮುಂದುವರಿದಿದೆ; ಎಲ್ ನಿನೋ ಎಂದರೆ ಮಳೆಯೇ ಇಲ್ಲ ಎಂದಲ್ಲ, ಮಳೆಯ ಹಂಚಿಕೆ ಅಸಮರ್ಪಕವಾಗುವ ಸಾಧ್ಯತೆ ಹೆಚ್ಚು ಎಂಬುದು ಈ ವರ್ಷದ ಬೆಳವಣಿಗೆಗಳ ಸಂದೇಶ.

ಎಲ್ ನಿನೋ ಪರಿಣಾಮದಿಂದ ಈ ಬಾರಿ ಮಳೆ ಕಡಿಮೆಯಾಗಬಹುದು ಎಂಬ ಮುನ್ಸೂಚನೆಗಳ ನಡುವೆಯೂ ಕರಾವಳಿ ಜಿಲ್ಲೆಗಳಲ್ಲಿ ವಾಡಿಕೆಯಷ್ಟು ಮಳೆ ಬಂದಿರುವುದು ಹವಾಮಾನ ಲೆಕ್ಕಾಚಾರದಲ್ಲಿ ಕುತೂಹಲ ಮೂಡಿಸಿದೆ. ಆದರೆ ಕರಾವಳಿಗೆ ಬಂದ ಮಳೆ ಮಲೆನಾಡು ದಾಟಿ ಹೆಚ್ಚು ಒಳನಾಡಿಗೆ ಸಾಗಲಿಲ್ಲ. ದುರ್ಬಲ ಗಾಳಿ ಮತ್ತು ಮಧ್ಯಮ ಮಟ್ಟದ ಮೋಡಗಳ ಚಲನೆಯೇ ಇದಕ್ಕೆ ಪ್ರಮುಖ ಕಾರಣ ಎಂದು ಹವಾಮಾನ ವಿಶ್ಲೇಷಕ ರಘುರಾಮ ಕಂಪದಕೋಡಿ ವಿಶ್ಲೇಷಿಸಿದ್ದಾರೆ.

ಎಲ್ ನಿನೋ ಈ ಸಲ ಮಳೆ ಇಲ್ಲ ಅಂತ ವರದಿಗಳು ಇದ್ದರೂ ಎಲ್ಲವೂ ಲೆಕ್ಕಾಚಾರ ತಪ್ಪಿ ವಾಡಿಕೆ ಮಳೆ ಬಂತು ಅಂತ ಕರಾವಳಿ ಜಿಲ್ಲೆಯವರು ಹೇಳುತ್ತಿದ್ದಾರೆ. ಆದರೇ ಕರಾವಳಿಗೆ ಮಾತ್ರ ಮಳೆ ಬಂದಿದೆ ಮಲೆನಾಡಿಗಿಂತ ಮುಂದೆ ಮಳೆ ಹೋಗಲಿಲ್ಲ. ದುರ್ಬಲ ಗಾಳಿ,ಮಧ್ಯಮ ಸ್ಥರದ ಮೋಡದ ಕಾರಣದಿಂದ ಒಳನಾಡಿಗೆ ಮಳೆ ಕಡಿಮೆಯಾಗಿದೆ. ಇದಕ್ಕೆ ಕಾರಣ ಎಲ್ ನಿನೋ.

ಕರಾವಳಿ ಜಿಲ್ಲೆಗಳಲ್ಲಿ ಸುಳ್ಯ ಬೆಳ್ತಂಗಡಿ ತಾಲ್ಲೂಕು ಹೊರತುಪಡಿಸಿ ಉಳಿದ ತಾಲ್ಲೂಕುಗಳಲ್ಲಿ ಇಂದಿಗೂ 26-30% ಮಳೆ ಕೊರತೆ ಇದೆ. ಆಗಸ್ಟ್ ತಿಂಗಳು ವಾಡಿಕೆ ಮಳೆ ಬಂದರೂ ಜೂನ್ ಜುಲೈ ಕೊರತೆ ಆಗಿತ್ತು. ಐಎಂಡಿ ಮೇಯಲ್ಲಿ ಕರಾವಳಿ ಭಾಗದಲ್ಲಿ ಮಳೆಯಾಗಬಹುದು. ಒಳನಾಡು ಜಿಲ್ಲೆಗಳಲ್ಲಿ ಕೊರತೆ ಆಗಬಹುದು ಅಂತ ಹೇಳಿತ್ತು.

ಜೂನ್ ತಿಂಗಳಿನಲ್ಲಿ ಮುಂಗಾರು ಮೋಡವೇ ಬಾರದಿದ್ದರೂ ಜುಲೈ ಆಗಸ್ಟ್ ತಿಂಗಳಿನಲ್ಲಿ ಬಂಗಾಳಕೊಲ್ಲಿಯ ಹವಾಮಾನ ವೈಪರೀತ್ಯಗಳಿಂದ ಮತ್ತು ಪೆಸಿಫಿಕ್ ಸಾಗರದ ಸತತ ಚಂಡಮಾರುತಗಳ ಪ್ರಭಾವದಿಂದಾಗಿ ಈ ವರ್ಷ ಭಾರತದಲ್ಲಿ ಸಾಧಾರಣ ಮಳೆ ಬಂತು. ಉತ್ತರ ಭಾರತದಲ್ಲಿ ಸರ್ಕ್ಯುಲೇಷನ್ ಆದಾಗ ಮೋಡವು ನೈರುತ್ಯ – ಈಶಾನ್ಯ ದಿಕ್ಕಿಗೆ ವಿರುದ್ಧವಾಗಿ ವಾಯುವ್ಯ – ಅಗ್ನೇಯ ದಿಕ್ಕಿಗೆ ಚಲಿಸುವ ಕಾರಣ ಕಾಸರಗೋಡು ಗಡಿಭಾಗಗಳು ಸುಳ್ಯ ಪುತ್ತೂರು ತಾಲ್ಲೂಕಿಗೆ ಅಧಿಕ ಮಳೆ ಬಂದಿದೆ.

ಎಲ್ ನಿನೋ ಹೇಳಿದ್ರೆ ಕೆಲವೆಡೆ ಮಳೆ ಇಲ್ಲದೆ ಬರಗಾಲವೂ ಬರುತ್ತದೆ ಕೆಲವೆಡೆ ಭಾರಿ ಮಳೆಯೂ ಬರುತ್ತದೆ. ಅಂದರೇ ಸ್ವಾಭಾವಿಕ ಮಳೆ ಕಡಿಮೆ ಅಂತ ಅರ್ಥ ಹೊರತು ಮಳೆಯೇ ಇಲ್ಲ ಅಂತ ಅಲ್ಲ. ಎಲ್ ನಿನೋ ಅಂದರೇ ಕಾರಣದಿಂದ ಭಾರತದಲ್ಲಿ ದುರ್ಬಲ ಮತ್ತು ಅಸ್ವಾಭಾವಿಕ ಗಾಳಿಯ ಚಲನೆಯಿಂದ ಮಳೆಯ ಅಸಮರ್ಪಕ ಹಂಚಿಕೆ ಆಗುತ್ತದೆ ಅಂತ ಅರ್ಥ. ಎಲ್ ನಿನೋ ಮುಗಿದಿಲ್ಲ ನವೆಂಬರ್ ತಿಂಗಳು ಗರಿಷ್ಠ ಮಟ್ಟ ತಲುಪಿ ನಂತರ ಕಡಿಮೆ ಆಗುತ್ತಾ ಹೋದರೂ ಮುಂದಿನ ಮೇ ತನಕ ಪ್ರಭಾವ ಇರಬಹುದು.

ಹವಾಮಾನ ವೈಪರೀತ್ಯಗಳಿಂದ ನಮಗೆ ಸ್ವಲ್ಪ ಮಳೆಯೂ ಮುಂದುವರೆಯಬಹುದು. ಹಾಗಾಗಿ ಎಲ್ ನಿನೋ ಇದ್ದರೂ ಬೇಸಿಗೆಯಲ್ಲಿಯೂ ಮಳೆ ಬರಬಹುದು ಅಂತ ಪಾಸಿಟಿವ್ ಥಿಂಕಿಂಗ್ ಮಾಡೋಣ.

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

Despite concerns over El Niño reducing monsoon rainfall, coastal Karnataka has received near-normal rainfall in August, although much of the rain has not progressed beyond the Western Ghats into the Malnad and interior districts. Weak winds, mid-level cloud conditions and changing weather systems have resulted in an uneven distribution of rainfall. El Niño does not mean that rainfall will completely disappear; rather, it can contribute to weaker or irregular atmospheric circulation and an uneven distribution of rainfall, with some regions experiencing deficits while others may receive heavy rain.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ |13-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಹಂತ ಹಂತವಾಗಿ ಚುರುಕಾಗಬಹುದೇ?
September 13, 2026
12:16 PM
by: ಸಾಯಿಶೇಖರ್ ಕರಿಕಳ
ರೈತರ ಆದಾಯ ಹೆಚ್ಚಿಸಲು ಬಹುಬೆಳೆ, ಪಶುಸಂಗೋಪನೆ, ಮೀನುಗಾರಿಕೆಗೆ ಒತ್ತು
September 13, 2026
8:13 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ
September 12, 2026
12:52 PM
by: ಸಾಯಿಶೇಖರ್ ಕರಿಕಳ
ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ
September 12, 2026
7:30 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror