ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆ ಬಳಿಕ ರಾಜಕೀಯ ಚಟುವಟಿಕೆ ಗರಿಗೆದರಿದೆ. ಎಲ್ಲಾ ಪಕ್ಷಗಳಲ್ಲೂ ಗುಂಪುಗಾರಿಕೆ, ಅಸಮಾಧಾನಗಳು ಕಂಡುಬರುತ್ತಿದೆ. ಇದೇ ಕಾರಣದಿಂದ ಕಾಂಗ್ರೆಸ್ ಪಕ್ಷವು ಮೊದಲೇ ಒಂದು ಹಂತದ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿತ್ತು. ಬಿಜೆಪಿಯು ಗುಂಪುಗಾರಿಕೆ ತಡೆಯಲು ತಂತ್ರ ಮಾಡುತ್ತಿದೆ. ಉತ್ತರ ಪ್ರದೇಶ ಮಾದರಿಯಲ್ಲೇ ಕರ್ನಾಟಕದಲ್ಲೂ ಟಿಕೆಟ್ ಹಂಚಿಕೆ ಮಾಡಲು ಸಿದ್ಧತೆ ನಡೆಸಿದೆ. ಗುಂಪುಗಾರಿಕೆ, ಅಸಮಾಧಾನ, ವಿರೋಧಿ ಅಲೆ ಇರುವ ಕಡೆಗಳಲ್ಲಿ ಹೊಸಬರಿಗೆ ಆದ್ಯತೆ ನೀಡಲು ಸಿದ್ಧತೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಗುಂಪುಗಾರಿಕೆ ಹಾಗೂ ಎಲ್ಲೆಲ್ಲಿ ಯಾವ ವಾತಾವರಣ ಇದೆ, ಅದಕ್ಕೆ ಕಾರಣಗಳ ಸಹಿತ ಕಂಡುಹಿಡಿಯಲು ತಟಸ್ಥ ಏಜೆನ್ಸಿಯೊಂದರ ಸಮೀಕ್ಷೆಯ ಮೂಲಕ ಪ್ರಾಥಮಿಕ ಹಂತದ ಮಾಹಿತಿ ಸಂಗ್ರಹ ಕಾರ್ಯವನ್ನು ಬಿಜೆಪಿ ಮಾಡಿತ್ತು. ಈ ಮೂಲಕ ಕ್ಷೇತ್ರದ ಸಮಗ್ರ ಮಾಹಿತಿ ಕಲೆ ಹಾಕಿತ್ತು. ಏಕೆ ವಿರೋಧ ಹಾಗೂ ಇದಕ್ಕೆ ಕಾರಣವನ್ನೂ ಕಂಡು ಹಿಡಿಯುತ್ತಿದೆ. ಒಂದು ವೇಳೆ ಬಣ ರಾಜಕೀಯಗಳು ಇದ್ದರೆ ಅಂತಹ ಕಡೆಗಳಲ್ಲಿ ಯಾವ ಬಣಕ್ಕೂ ಸೇರದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರೆ ಹೇಗೆ ಎಂಬ ಸಮೀಕ್ಷೆಯನ್ನೂ ನಡೆಸಿದೆ.
ಟಿಕೆಟ್ ವಂಚಿತರಾಗುವವರ ಪೈಕಿ ಕೆಲ ಹಿರಿಯರಿಗೆ ಅಧಿಕಾರ ಬಂದ ಬಳಿಕ ಸ್ಥಾನಮಾನ ಗಳನ್ನು ನೀಡುವ ಭರವಸೆ ನೀಡಿ ಚುನಾವಣಾ ಕಾರ್ಯದಲ್ಲಿ ಸಂಪೂರ್ಣ ತೊಡಗಿಸಿಕೊಳ್ಳಲು ಸೂಚನೆ ನೀಡಲಾಗುತ್ತದೆ. ಅಮಿತ್ ಶಾ ಅವರ ರಾಜ್ಯ ಪ್ರವಾಸ ಮತ್ತು ಇನ್ನೊಂದು ಹಂತದ ಸಮೀಕ್ಷೆಯ ನಂತರ ಬಿಜೆಪಿ ನಿಲುವುಗಳು ಗಟ್ಟಿಯಾಗಲಿದೆ ಎನ್ನುವುದು ಪಕ್ಷದ ಮೂಲದಿಂದ ಲಭ್ಯ ಮಾಹಿತಿ.
ಕಾಂಗ್ರೆಸ್ ಪಕ್ಷವು ಕೂಡಾ ಈ ಬಾರಿ ಗೆಲುವು ಸಾಧಿಸಲು ತಂತ್ರಗಳನ್ನು ಮಾಡುತ್ತಿದೆ. ಗುಂಪುಗಾರಿಕೆಗಳಿಗೆ ಬ್ರೇಕ್ ಹಾಕಲು ಸಿದ್ಧತೆ ನಡೆಸಿದೆ. ಗುಂಪುಗಾರಿಕೆಯ ಕಾರಣದಿಂದ ಕ್ಷೇತ್ರವು ಸೋತರೆ ಸ್ಥಳೀಯ ನಾಯಕತ್ವನ್ನೇ ಬದಲು ಮಾಡಲು ಚಿಂತನೆ ನಡೆಸುತ್ತಿದೆ. ಯಾವುದೇ ಕಾರಣಕ್ಕೂ ಪಕ್ಷದ ತೀರ್ಮಾನದ ವಿರುದ್ಧ ಹೋಗದಂತೆ ಎಚ್ಚರಿಕೆಯನ್ನೂ ನೀಡಲಾಗಿದೆ ಎಂದು ಪಕ್ಷದ ಮೂಲದ ಮಾಹಿತಿ.
ಬೇರೊಬ್ಬರ ಬದುಕಿನೊಂದಿಗೆ ನಿರಂತರ ಹೋಲಿಕೆ ನಮ್ಮ ನೆಮ್ಮದಿ ಮತ್ತು ಆತ್ಮವಿಶ್ವಾಸವನ್ನು ಕಸಿದುಕೊಳ್ಳಬಹುದು. ಮತ್ತೊಬ್ಬರ…
ಶಿಕ್ಷಕರ ದಿನಾಚರಣೆ ಶಿಕ್ಷಕರನ್ನು ಸನ್ಮಾನಿಸುವ ದಿನ ಮಾತ್ರವಲ್ಲ, ಶಿಕ್ಷಕತ್ವ ಮತ್ತು ಶಿಕ್ಷಣದ ನಿಜವಾದ…
ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ₹28.52 ಕೋಟಿ ವೆಚ್ಚದ 60 ದಿನಗಳ…
ಬಿಹಾರದ ಯುರೆನ್ನಲ್ಲಿ ಪತ್ತೆಯಾದ 5 ಲಕ್ಷಕ್ಕೂ ಹೆಚ್ಚು ಸುಟ್ಟ ಬೀಜಗಳ ಅಧ್ಯಯನವು ಭಾರತದ…
ಶ್ರೀಕೃಷ್ಣನನ್ನು ಕೇವಲ ದೇವರ ಅವತಾರವಾಗಿ ನೋಡುವುದಕ್ಕಿಂತ, ಮನುಷ್ಯರ ನಡುವೆ ನಿಂತು ಉಪದೇಶಿಸಿದ ಮಾನವಶಿಕ್ಷಕನಾಗಿಯೂ…
ಮುಂಗಾರು ದುರ್ಬಲಗೊಂಡಿದ್ದರೂ ಸ್ಥಳೀಯ ಮೋಡಗಳ ಬೆಳವಣಿಗೆಯಿಂದ ಮಲೆನಾಡು ಹಾಗೂ ಒಳನಾಡಿನಲ್ಲಿ ಗುಡುಗು ಸಹಿತ…