ಜಾಲ್ಸೂರು-ಕಾಸರಗೋಡು ಅಂತರಾಜ್ಯ ರಸ್ತೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷ | ಕೂದಳೆಲೆ ಅಂತರದಲ್ಲಿ ಪಾರಾದ ಬೈಕ್ ಸವಾರ |

November 11, 2023
12:43 PM
ಜಾಲ್ಸೂರು- ಕಾಸರಗೋಡು ಅಂತರಾಜ್ಯ ರಸ್ತೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿದ್ದು, ತಿರುವಿನಲ್ಲಿ ಎದುರಿನಿಂದ ಬಂದ ಬೈಕ್‌ ಸವಾರನಿಗೆ ಆನೆ ಎದುರಾಗಿದೆ.

ಜಾಲ್ಸೂರು- ಕಾಸರಗೋಡು(Jalsoor- Kasargodu) ಅಂತರಾಜ್ಯ ರಸ್ತೆಯಲ್ಲಿ(National highway) ಒಂಟಿ ಸಲಗ(Elephant) ಪ್ರತ್ಯಕ್ಷವಾಗಿದ್ದು, ತಿರುವಿನಲ್ಲಿ ಎದುರಿನಿಂದ ಬಂದ ಬೈಕ್‌ ಸವಾರ(Bike rider)ನಿಗೆ ಆನೆ ಎದುರಾಗಿದೆ. ಬೈಕ್‌ ಸವಾರ ಕೂದಳೆಲೆ ಅಂತರದಿಂದ ಪಾರಾಗಿದ್ದು, ತಮ್ಮ ಜೀವ ಉಳಿಸಿಕೊಂಡಿದ್ದಾರೆ. ಈ ಘಟನೆ ಸುಳ್ಯದ(Sullia) ಸಮೀಪ ಪಂಜಿಕಲ್ಲಿನಲ್ಲಿ ಇಂದು ಬೆಳಗ್ಗೆ ನಡೆದಿದೆ.

ದೇಲಂಪಾಡಿ ಗ್ರಾಮದ ಬೆಳ್ಳಿಪಾಡಿ ಗ್ರಾಮ ಸುತ್ತ ಮುತ್ತ ಕಾಡಿನಿಂದ(Forest) ಆವರಿಸಿದ್ದು, ಈ ಪರಿಸರದಲ್ಲಿ ರಾತ್ರಿ, ಹಗಲೆನ್ನದೆ ಆನೆಗಳು ಓಡಾಡುತ್ತಿರುತ್ತವೆ. ಇಲ್ಲಿನ ಜನ ಪ್ರತಿ ದಿನ ಆತಂಕದಲ್ಲೇ ಬದುಕುವಂತಾಗಿದೆ. ಹಲವು ದಿನಗಳಿಂದ ನಿರಂತರವಾಗಿ ಕಾಡಾನೆಗಳು ಕೃಷಿಕರ(Farmer) ತೋಟಗಳಿಗೆ ದಾಳಿ ಇಡುತ್ತಿದ್ದು, ಕೃಷಿಯನ್ನು ಹಾನಿ ಮಾಡುತ್ತಿದ್ದಾವೆ. ಈಗ ಕಾಡಾನೆಯೊಂದು ಪಂಜಿಕಲ್ಲಿನ ಬಳಿ ಮುಖ್ಯ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಪ್ರತ್ಯಕ್ಷವಾಗಿದೆ.

ಇದು ಕಾಡು ದಾರಿ ಆಗಿರುವುದರಿಂದ ಬೆಳಗ್ಗೆ ಅನೇಕರು ಬೈಕ್‌ ನಲ್ಲಿ ಹೋಗುತ್ತಿರುತ್ತಾರೆ. ಇದು ಕಾಸರಗೋಡು ಹಾಗೂ ಸುಳ್ಯ ಮುಖ್ಯ ರಸ್ತೆ ಆಗಿರುವ ಕಾರಣ ಇಲ್ಲಿ ಅನೇಕರು ದಿನನಿತ್ಯ ಓಡಾಡುತ್ತಿರುತ್ತಾರೆ. ಶಾಲಾ- ಕಾಲೇಜಿಗೆ ದಿನನಿತ್ಯ ಅನೇಕ ಮಕ್ಕಳು ಹೋಗುತ್ತಿರುತ್ತಾರೆ. ಈ ಬಗ್ಗೆ ಅನೇಕ ಬಾರಿ ಅರಣ್ಯ ಇಲಾಖೆ(Forest department) ಗಮನಕ್ಕೆ ತಂದಿದ್ದರು, ಅವರು ಏನು ಮಾಡದ ಪರಿಸ್ಥಿತಿಯಲ್ಲಿದ್ದಾರೆ. ಈ ಕಡೆಯಿಂದ ಓಡಿಸಿ ಇನ್ನೊಂದು ಕಾಡಿಗೆ ಬಿಟ್ಟರೆ, ಅಲ್ಲಿ ಜನರಿಗೆ ಕಾಟ ಕೊಟ್ಟು, ತಿಂದು ತೇಗಿ ಮತ್ತೆ ಇತ್ತಕಡೆ ಪಯಣ ಬೆಳೆಸುತ್ತದೆ. ಒಟ್ಟಿನಲ್ಲಿ ಈ ಮಾನವ- ಆನೆ ಸಂಘರ್ಷ ನಿಲ್ಲದ ಸಮಸ್ಯೆ ಅನ್ನೋದಂತು ಸತ್ಯ.

In the morning, a single elephant was seen on the Jalsoor-Kasargodu national highway, and the elephant encountered the bike rider coming from the opposite side at the turn. The biker narrowly escaped and saved his life. This incident took place in Panjikallu near Sullia this morning.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಸರಿಗಮಪ ಲಿಟಲ್ ಚಾಂಪ್ಸ್ 2026ರ ವಿಜೇತ ಅಶ್ಮಿತ್‌ಗೆ ಮಂಗಳೂರಿನಲ್ಲಿ ಅಭಿನಂದನೆ – ಪುಟ್ಟ ಕಲಾವಿದನ ಸಾಧನೆಯ ಹಿಂದಿನ ಪಯಣಕ್ಕೆ ಮೆಚ್ಚುಗೆ
September 14, 2026
2:55 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 14-09-2026 | ಸೆ.18ರ ಬಳಿಕ ಮಳೆ ಚಿತ್ರಣ ಬದಲಾಗಬಹುದೇ?
September 14, 2026
12:51 PM
by: ಸಾಯಿಶೇಖರ್ ಕರಿಕಳ
ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಮೂಲಕ ಅರಳಿದ ಗಣೇಶ
September 14, 2026
11:33 AM
by: ದ ರೂರಲ್ ಮಿರರ್.ಕಾಂ
ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಲೋಕದಲ್ಲಿ ಪುಟ್ಟ ಮನಸ್ಸಿನ ಖುಷಿ
September 14, 2026
11:07 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror