Advertisement
ಸುದ್ದಿಗಳು

ವಿಕಸಿತ ಭಾರತ ನಿರ್ಮಾಣಕ್ಕೆ ಯೋಜನೆಗಳು ಸಿದ್ಧ| ಕೃಷಿ ಕ್ಷೇತ್ರದಲ್ಲಿ ಗಣನೀಯ ಅಭಿವೃದ್ಧಿ ನಿರೀಕ್ಷೆ

Share

ಮುಂದಿನ 25 ವರ್ಷಗಳಲ್ಲಿ  ವಿಕಸಿತ ಭಾರತ ನಿರ್ಮಾಣಕ್ಕೆ  ಅಗತ್ಯವಾದ  ಯೋಜನೆಗಳನ್ನು ಹಣಕಾಸು ಆಯೋಗವು ರೂಪಿಸುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.………ಮುಂದೆ ಓದಿ……..

ಚೆನ್ನೈನಲ್ಲಿ  ನಾಗರಿಕ ವೇದಿಕೆ  ಏರ್ಪಡಿಸಿದ್ದ ಸಂವಾದದಲ್ಲಿ ಕಾರ್ಯಕ್ರಮದಲ್ಲಿ  ಅವರು ಪಾಲ್ಗೊಂಡಿದ್ದರು. ಅಮೆರಿಕಾದ  ತೆರಿಗೆ ನೀತಿ,  ಉಕ್ರೇನ್ ಯುದ್ಧ, ಚೈನಾದ  ವ್ಯಾಪಾರ ವ್ಯವಹಾರಗಳು ಸೇರಿದಂತೆ  ಹಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು  ಯುವಪೀಳಿಗೆಯನ್ನು  ಸನ್ನದ್ಧಗೊಳಿಸಬೇಕಾಗಿದೆ. ಅದಕ್ಕಾಗಿ  ತರಬೇತಿ ಕಾರ್ಯಕ್ರಮಗಳನ್ನು ರೂಪಿಸಲು ಸಹ ಉದ್ದೇಶಿಸಲಾಗಿದೆ ಎಂದು ತಿಳಿಸಿದರು. ದೇಶದ ಎಲ್ಲ ಜಿಲ್ಲೆಗಳಲ್ಲೂ  ಕ್ಯಾನ್ಸರ್ ನಿಗಾ ಘಟಕಗಳನ್ನು ಸ್ಥಾಪಿಸಲಾಗುತ್ತದೆ.  ಕೃಷಿ ಕ್ಷೇತ್ರದಲ್ಲೂ  ಗಣನೀಯ ಅಭಿವೃದ್ಧಿಯನ್ನು ನಿರೀಕ್ಷಿಸಲಾಗಿದ್ದು, ದೇಶದ ಸುಮಾರು 112  ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ  ಕೃಷಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ.  ದೇಶದ ಹಿಂದುಳಿದಿರುವ 109 ಜಿಲ್ಲೆಗಳಲ್ಲಿ  ಕೃಷಿ  ಉತ್ಪಾದನೆಯನ್ನು  ಹೆಚ್ಚಿಸಬೇಕೆಂದು  ಪ್ರಧಾನಿ ನರೇಂದ್ರ ಮೋದಿ ಅವರು ಉದ್ದೇಶಿಸಿದ್ದಾರೆ. ಇದಲ್ಲದೆ,  ಕೃತಕಬುದ್ಧಿಮತ್ತೆ ಹಾಗೂ ಹೊಸ ಸಂಶೋಧನೆಗಳಿಗೂ ಹೆಚ್ಚಿನ ಒತ್ತು ನೀಡಲಾಗುತ್ತದೆ. ಕಳೆದ 10 ವರ್ಷಗಳಲ್ಲಿ  ಕೇಂದ್ರ ಸರ್ಕಾರದ ಹಲವು ಯೋಜನೆಗಳಿಂದ ತಮಿಳುನಾಡಿಗೂ ಸಾಕಷ್ಟು ಅನುಕೂಲವಾಗಿದೆ. ಜನ್ ಧನ್ ಯೋಜನೆಯಿಂದ  12 ಲಕ್ಷ ಜನರಿಗೆ  ಅನುಕೂಲವಾದರೆ ಸುಮಾರು 89 ಲಕ್ಷ ಕುಟುಂಬಗಳಿಗೆ ಹೊಸ ನೀರಿನ ಸಂಪರ್ಕಗಳು ದೊರೆತಿವೆ. 41 ಲಕ್ಷ ಜನರಿಗೆ  ಅಡುಗೆ ಅನಿಲ  ಸಿಲಿಂಡರ್  ಸಂಪರ್ಕಗಳ ಸಹಾಯಧನ ಯೋಜನೆ ದೊರೆತಿದೆ ಎಂದು ಅವರು ಹೇಳಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 05-06-2026 | ರಾಜ್ಯದಲ್ಲಿ ಮುಂಗಾರು ಚುರುಕು: ಜೂನ್ 8ರಿಂದ ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ, ಜೂನ್ 12 ರಿಂದ ದಕ್ಷಿಣ ಒಳನಾಡಲ್ಲೂ ಮಳೆ ಹೆಚ್ಚಳ

ರಾಜ್ಯದಲ್ಲಿ ಮುಂಗಾರು ಚಟುವಟಿಕೆಗಳು ಚುರುಕುಗೊಳ್ಳುತ್ತಿದ್ದು, ಜೂನ್ 8ರಿಂದ 13ರವರೆಗೆ ಕರಾವಳಿ ಭಾಗಗಳಲ್ಲಿ ಉತ್ತಮ…

3 hours ago

ಕೃಷಿ ಹೊಂಡಗಳಿಗೆ ಕಡ್ಡಾಯ ತಂತಿ ಬೇಲಿ ಅಳವಡಿಸಿ – ರೈತರಿಗೆ ಕೃಷಿ ಇಲಾಖೆ ಮನವಿ

ಕೃಷಿ ಭಾಗ್ಯ ಯೋಜನೆಯಡಿ ನಿರ್ಮಿಸಿರುವ ಕೃಷಿ ಹೊಂಡಗಳಿಗೆ ಕಡ್ಡಾಯವಾಗಿ ತಂತಿ ಬೇಲಿ ಮತ್ತು…

8 hours ago

ಕೇರಳಕ್ಕೆ ಮುಂಗಾರು ಅಧಿಕೃತ ಪ್ರವೇಶ | ಕರ್ನಾಟಕದಲ್ಲಿ ಭಾರೀ ಮಳೆಯ ಎಚ್ಚರಿಕೆ, ಮುಂದಿನ ವಾರವೂ ಮಳೆ ಚುರುಕು

ಕೇರಳಕ್ಕೆ ನೈಋತ್ಯ ಮುಂಗಾರು ಅಧಿಕೃತವಾಗಿ ಪ್ರವೇಶಿಸಿದ್ದು, ಕರಾವಳಿ ಕರ್ನಾಟಕ ಸೇರಿದಂತೆ ರಾಜ್ಯದ ಹಲವೆಡೆ…

8 hours ago

ಸಲ್ಫ್ಯೂರಿಕ್ ಆಸಿಡ್ ಕೊರತೆ – ಕಾಪರ್‌ಸಲ್ಪೇಟ್‌ ಮೇಲೂ ಹೊಡೆತ – ಕೃಷಿಕರು ಗಮನಿಸಬೇಕಾದ ವಿಷಯ…

ಜಾಗತಿಕ ಮಟ್ಟದಲ್ಲಿ ಸಲ್ಫ್ಯೂರಿಕ್ ಆಸಿಡ್ ಕೊರತೆಯಿಂದ ತಾಮ್ರ ಸೇರಿದಂತೆ ಲಿಥಿಯಂ, ನಿಕೆಲ್ ಮೊದಲಾದ…

16 hours ago

ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ಜಾಲದ ಮೇಲೆ ಇಡಿ ಭಾರೀ ದಾಳಿ – ₹337 ಕೋಟಿ ನಕಲಿ ಇ-ವೇ ಬಿಲ್ ಜಾಲದ ತನಿಖೆ

ಮ್ಯಾನ್ಮಾರ್‌ನಿಂದ ಅಕ್ರಮವಾಗಿ ಅಡಿಕೆ ಸಾಗಣೆ ಮಾಡುತ್ತಿದ್ದ ಜಾಲದ ವಿರುದ್ಧ ಮಿಜೋರಾಂನ ಚಾಂಫೈ ಜಿಲ್ಲೆಯಲ್ಲಿ…

17 hours ago

ಹವಾಮಾನ ವರದಿ | 03-06-2026 | ಕರಾವಳಿಯಲ್ಲಿ ಮುಂಗಾರು ಚುರುಕು – ಜೂನ್ 8 ರಿಂದ ರಾಜ್ಯಾದ್ಯಂತ ಮಳೆಯ ಅಬ್ಬರ ಸಾಧ್ಯತೆ

ಕರ್ನಾಟಕದಲ್ಲಿ ಮುಂಗಾರು ಚಟುವಟಿಕೆ ಚುರುಕುಗೊಳ್ಳುತ್ತಿದ್ದು, ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆಯ ಆರಂಭವಾಗಿದೆ. ಜೂನ್…

2 days ago