Advertisement
MIRROR FOCUS

ಹವಾಮಾನ ವೈಪರೀತ್ಯ | ಹಜ್​ ಯಾತ್ರೆ ವೇಳೆ ಬಿಸಿಲಿನ ತಾಪದಿಂದ 98 ಭಾರತೀಯರ ಸಾವು | ಯಾತ್ರಿಕರ ಸುರಕ್ಷತೆಗಾಗಿ 365 ವೈದ್ಯರ ನಿಯೋಜನೆ

Share

ಹವಾಮಾನ ವೈಪರಿತ್ಯ(Climate Change) ಇಡೀ ವಿಶ್ವವನ್ನೇ(World) ಹೈರಾಣಾಗಿಸಿದೆ. ವಿಶ್ವದಾದ್ಯಂತ ಪ್ರಕೃತಿಯ ವಿಕೋಪಕ್ಕೆ(Natural calamities) ಅನೇಕರು ಬಲಿಯಾಗುತ್ತಿದ್ದಾರೆ. ಈ ಬಾರಿ ಮುಸ್ಲಿಮರ ಪವಿತ್ರ ಹಜ್​ ಯಾತ್ರೆಗೆ(Muslim pilgrimage of Haj) ತೆರಳಿದ ಭಾರತೀಯರಲ್ಲಿ 98 ಮಂದಿ ಬಿಸಿಲಿನ ತಾಪಕ್ಕೆ(Heat) ಸಾವನ್ನಪ್ಪಿದ್ದಾರೆ. ಕಳೆದ ವರ್ಷ ಸಾವನ್ನಪ್ಪಿದವರ ಸಂಖ್ಯೆ 187 ಆಗಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ(Ministry of External Affairs) ವಕ್ತಾರ ರಣದೀರ್​​ ಜೈಸ್ವಾಲ್​ ತಿಳಿಸಿದ್ದಾರೆ

Advertisement
Advertisement

ಈ ವರ್ಷ 1,75,000 ಯಾತ್ರಾರ್ಥಿಗಳು ಮೆಕ್ಕಾಗೆ ಭೇಟಿ ನೀಡಿದ್ದು, ಈ ಹಜ್​ ಯಾತ್ರೆ ಮೇ 9ರಿಂದ ಜುಲೈ 22ರವರೆಗೆ ಸಾಗಲಿದೆ. ಇಲ್ಲಿಯವರೆಗೆ 98 ಭಾರತೀಯರ ಸಾವಿನ ವರದಿಯಾಗಿದೆ. ಬಹುತೇಕ ನೈಸರ್ಗಿಕ ಕಾರಣ, ದೀರ್ಘ ಅನಾರೋಗ್ಯ ಮತ್ತು ವೃದ್ಧಾಪ್ಯದಿಂದಾಗಿ ಈ ಸಾವುಗಳು ಸಂಭವಿಸಿವೆ ಎಂದು ಇಲಾಖೆ ತಿಳಿಸಿದೆ. ಆರಾಫತ್​ ದಿನ ಆರು ಮಂದಿ ಸಾವನ್ನಪ್ಪಿದ್ದು, ನಾಲ್ವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

Advertisement

ಭಾರತೀಯರ ಚಿಕಿತ್ಸೆಗೆ 365 ವೈದ್ಯರು: ಸೌದಿ ಅರೇಬಿಯಾದಲ್ಲಿ ಹೆಚ್ಚಿದ ತಾಪಮಾನದಿಂದ ಜನರು ಬಳಲುತ್ತಿರುವ ಹಿನ್ನೆಲೆಯಲ್ಲಿ ಹಜ್​ ಯಾತ್ರಿಕರ ವೈದ್ಯಕೀಯ ಆರೈಕೆಗಾಗಿ ಭಾರತದ 365 ವೈದ್ಯರು ಮತ್ತು ಅರೆವೈದ್ಯರನ್ನು ನಿಯೋಜಿಸಲಾಗಿದೆ. ವಿಪರೀತ ಹವಾಮಾನ ವೈಪರೀತ್ಯದ ನಡುವೆಯೇ 2 ಲಕ್ಷ ಒಪಿಡಿಗಳನ್ನು ತೆರೆಯಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಭಾರತದಿಂದ ಈ ವರ್ಷ 1.75 ಲಕ್ಷಕ್ಕೂ ಹೆಚ್ಚಿನ ಯಾತ್ರಿಕರು ಹಜ್ ಯಾತ್ರೆ ಕೈಗೊಂಡಿದ್ದು, ಅದರಲ್ಲಿ ಸುಮಾರು 40,000 ಮಂದಿ 60 ವರ್ಷಕ್ಕಿಂತ ಮೇಲ್ಪಟ್ಟವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕೇಂದ್ರ ಆರೋಗ್ಯ ಕಾರ್ಯದರ್ಶಿ ಅಪೂರ್ವ ಚಂದ್ರ ಅವರು, ಹಜ್​ ಯಾತ್ರಿಕರಿಗೆ ವೈದ್ಯಕೀಯ ಆರೈಕೆ ವ್ಯವಸ್ಥೆ ಎಂಬ ಶೀರ್ಷಿಕೆಯಲ್ಲಿ ಡಾಕ್ಯುಮೆಂಟ್​ ಬಿಡುಗಡೆ ಮಾಡಿದ್ದಾರೆ. ಈ ದಾಖಲೆ ಮೂಲಕ ಯಾತ್ರಿಕರು ಹೇಗೆ ವೈದ್ಯಕೀಯ ಸೇವೆ ಪಡೆಯಬಹುದು ಎಂದು ಅದರಲ್ಲಿ ಮಾಹಿತಿ ನೀಡಲಾಗಿದೆ.

Advertisement

ಯಾತ್ರಿಕರ ಸಹಾಯಕ್ಕಾಗಿ ಎನ್​ಐಸಿ ಪೋರ್ಟಲ್​ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದು ನೈಜ ಸಮಯದಲ್ಲಿ ಯಾತ್ರಿಕರಿಗೆ ವೈದ್ಯಕೀಯ ಸೇವೆ ಕುರಿತ ಡೇಟಾ ಮತ್ತು ವಿಶ್ಲೇಷಣೆ ನೀಡಲಿದೆ. ಯಾತ್ರಿಕರ ಆರೋಗ್ಯ ವಿಚಾರ ಕುರಿತು ನಿರಂತರ ಮೇಲ್ವಿಚಾರಣೆ ನಡೆಸುತ್ತಿದ್ದೇವೆ. ಈ ಎನ್​ಐಸಿ ಸೇವೆಯ ಸುಧಾರಣೆಗೆ ಸಹಾಯ ಮಾಡಲಿದೆ. ಅಲ್ಲದೇ ಇತರ ದೇಶಗಳು ಇದನ್ನು ಅನುಸರಿಸಲು ಇದು ಸಹಾಯ ಮಾಡಲಿದೆ ಎಂದಿದ್ದಾರೆ.

ಯಾತ್ರಾರ್ಥಿಗಳ ಸುಲಭ ಅನುಕೂಲಕ್ಕಾಗಿ ಮೆಕ್ಕಾ ಮತ್ತು ಮದೀನಾದಲ್ಲಿ ವೈದ್ಯಕೀಯ ತಂಡಗಳ ನಿಯೋಜನೆ ಮಾಡಲಾಗಿದೆ. ಆರೋಗ್ಯ ಮಿಷನ್‌ನ ದಾಖಲಾತಿಗಳು ಮತ್ತು ಕಾರ್ಯಾಚರಣೆಗಳ ಡೇಟಾಗೆ ನೈಜ-ಸಮಯದ ಪ್ರವೇಶಕ್ಕಾಗಿ ಪೋರ್ಟಲ್ ಅನ್ನು ರಚಿಸುವಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಎನ್​ಐಸಿ ಸಹಯೋಗ ನಡೆಸಿದೆ ಎಂದರು.

Advertisement

Source : IANS

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮುಂದುವರಿದ ಮಳೆ | ದ ಕ ಜಿಲ್ಲೆಗೆ ರೆಡ್‌ ಎಲರ್ಟ್ | ಶಾಲೆ-ಕಾಲೇಜಿಗೆ ಜೂ.28 ರಂದು ರಜೆ ಘೋಷಣೆ |

ದ ಕ ಜಿಲ್ಲೆಯಲ್ಲಿ  ಜೂ.28ರಂದು ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ…

9 hours ago

ಸರ್ಕಾರದ ಹತ್ತಾರು ಕೆಲಸಗಳ ಜೊತೆಗೆ ಮಕ್ಕಳ ಲಾಲನೆ ಪಾಲನೆ | ಕೇಳುವವರಿಲ್ಲ ಈ ಅಂಗನವಾಡಿ ಮಾತೆಯರ ಬದುಕು ಬವಣೆ |

“ಬಾ ಬಾ ಗೊಂಬೆ , ಬಣ್ಣದ ಗೊಂಬೆ ಬೆಣ್ಣೆ ಬಿಸ್ಕೆಟ್ ತಿನ್ನೋಣ, ಕುದುರೆ…

15 hours ago

ಬಾಹ್ಯಾಕಾಶದಲ್ಲೇ ಸಿಲುಕಿಕೊಂಡ ಗಗನಯಾತ್ರಿಗಳು | ನಮ್ಮ ದೇಶದ ಸುನೀತಾ ವಿಲಿಯಮ್ಸ್​​​​ ಬಾಹ್ಯಾಕಾಶದಲ್ಲಿ | ಏನು ಈ ತಾಂತ್ರಿಕ ಸಮಸ್ಯೆ, ಸಂಕಷ್ಟ?

ಬಾಹ್ಯಾಕಾಶಕ್ಕೆ(Space) ಗಗನಯಾತ್ರಿಗಳು(Astonauts) ಹೋಗೋದು ಅಂದ್ರೆ ಹೆಮ್ಮೆಯ ವಿಷಯ. ಆದರೆ ಕಲ್ಪನಾ ಚಾವ್ಲ(Kalpana Chawla)ಆ…

15 hours ago

ರಾಜ್ಯದಲ್ಲಿ ಡೆಂಗ್ಯು ಪ್ರಕರಣ ಶೇ. 60 ರಷ್ಟು ಹೆಚ್ಚಳ | ಸೊಳ್ಳೆಗಳ ನಿಯಂತ್ರಣಕ್ಕೆ ಗಪ್ಪಿ ಮೀನು ಪ್ರಯೋಗ | ಇದು ಲಾರ್ವಾ ತಿಂದು ಬದುಕುವ ಜಲಚರ

ರಾಜ್ಯಾದ್ಯಂತ ಮಳೆಗಾಲ(Rain) ಆರಂಭವಾಗುತ್ತಿದ್ದಂತೆ ಡೆಂಗ್ಯು ಪ್ರಕರಣಗಳು(Dengue case) ಹೆಚ್ಚಾಗುತ್ತಲೇ ಇದೆ. 2023 ಕ್ಕೆ…

16 hours ago

ಕಾಲಿಟ್ಟಲ್ಲೆಲ್ಲಾ ಕಸ ಕಸ ಕಸ…… ಇದಕ್ಕೆ ನಾವೇನು ಮಾಡಬಹುದು? | ನಮ್ಮ ಜವಾಬ್ದಾರಿ ಏನು..? |

ಪರಿಸರ ಸಂರಕ್ಷಣೆ ಹಾಗೂ ತ್ಯಾಜ್ಯ ವಿಲೇವಾರಿಯ ಜಾಗೃತಿಯ ಉದ್ದೇಶದಿಂದ ಬಿ ಸಂ, ಕೃಷ್ಣ…

17 hours ago

ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ಉತ್ತಮ ಮಳೆ | ಕುಕ್ಕೆಯ ಕುಮಾರಧಾರ ಸ್ನಾನಘಟ್ಟ ಮುಳುಗಡೆ | ಹೊನ್ನಾವರದ ಭಾಸ್ಕೇರಿ ಬಳಿ ಗುಡ್ಡ ಕುಸಿತ | ಮುಂದುವರಿದ ಮಳೆ |

ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ.ಪಶ್ಚಿಮ ಘಟ್ಟದ ಆಸುಪಾಸಿನಲ್ಲಿ ಭಾರೀ ಮಳೆಗೆ ಅಲ್ಲಲ್ಲಿ…

17 hours ago