Opinion

ಅಭಿಮಾನ ಮತ್ತು ಉಡುಪಿ-ಮಂಗಳೂರಿಗರು! : ಅಭಿಮಾನ ಹುಚ್ಚಾಗಬಾರದು.. ಅದು ಮೆಚ್ಚುಗೆಯಾಗಿರಬೇಕು..

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸಿನೆಮಾ(Cinema) ನಟರ(Actor) ಬಗ್ಗೆ ಅಭಿಮಾನ(Fan) ಇಟ್ಕೊಳ್ಳೋದು ಒಳ್ಳೇದೇ..ಹಾಗಂತ ಅದು ಹುಚ್ಚಾಟ ಆಗಬಾರದು. ಸಿನೆಮಾ ನಟರೂ ಕೂಡಾ ನಮ್ಮಂಗೆ ಮನುಷ್ಯರೇ(Human Beings) ಅಲ್ವೇ? ಅವರ ಸಿನೆಮಾ ಬಂದಾಗ ಸಿನೆಮಾ ಮಂದಿರಕ್ಕೆ(Theatre) ಹೋಗಿ ನೋಡಿ ಚಪ್ಪಾಳೆ(Claps), ಶಿಳ್ಳೆ ಹೊಡೀರಿ ಸಾಕು..ಅದು ಬಿಟ್ಟು ಅದು ಇದು ಅಂತ ಹುಚ್ಚಾಟ ಮಾಡೋದು ತರವಲ್ಲ. ಈ ವಿಷಯದಲ್ಲಿ ಉಡುಪಿ(Udupi) ಮತ್ತು ಮಂಗಳೂರಿಗರು(Manglore) ಬೆಸ್ಟ್..ಯಾವನೇ ಸ್ಟಾರ್(Star) ಬರಲಿ ಇಲ್ಲಿ..ಆ ತರಹ ಹುಚ್ಚಾಟ ಯಾವತ್ತೂ ಮಾಡಲ್ಲ. ಯಾರಾದರೂ ಸ್ಟಾರ್ ಇಲ್ಲಿಗೆ ಬಂದ್ರೂ ಇಲ್ಲಿನವರು ಅಷ್ಟೊಂದು ತಲೆ ಕೆಡಿಸಿಕೊಳ್ಳಲ್ಲ. ಯಶ್(Yash) ಬಂದಿದ್ದಾರೆ..ದರ್ಶನ್(Darshan) ಬಂದಿದ್ದಾರೆ..ಸುದೀಪ್(Sudeep) ಬಂದಿದ್ದಾರೆ..ಅಂದ್ರೂ..ಇಲ್ಲಿನವರು, ಓ ಹೌದಾ..ಸರಿ ಬಿಡು..ನಂಗೆ ನಂದೇ ಕೆಲಸ ಜಾಸ್ತಿ ಇದೆ..ಅವರನ್ನು ನೋಡೋಕೆ ಯಾವನು ಹೋಗ್ತಾನೆ ಅನ್ನೋ ಮನಸ್ಥಿತಿ ಇಲ್ಲಿಯವರದ್ದು.

Advertisement

ಅದಕ್ಕೆ ಯಾರೂ ಇಲ್ಲಿ ತಮ್ಮ ಸಿನೆಮಾ ಪ್ರೊಮೋಟ್ ಮಾಡೋಕೆ ಬರಲ್ಲ..ಅವರಿಗೂ ಗೊತ್ತು ಇಲ್ಲಿ ಯಾವುದೇ ಸಿನೆಮಾ ಜಾಸ್ತಿ ದಿನ ನಿಲ್ಲಲ್ಲ. ಉಡುಪಿ ಮಂಗಳೂರಿನಲ್ಲಿ ಯಾವುದಾದರೂ ಸಿನೆಮಾ ಜಾಸ್ತಿ ದಿನ ನಿಂತು ಅಂತ ಅಂದ್ರೆ ಆ ಸಿನೆಮಾ ಅಷ್ಟು ಚೆನ್ನಾಗಿದೆ ಅನ್ಕೋಬಹುದು. ಆ ಸಿನೆಮಾ ಸೂಪರ್ ಡೂಪರ್ ಹಿಟ್ ಅಂತ ಹೇಳಬಹುದು. ಇಲ್ಲಿನವರ ಟೇಸ್ಟೇ ಅಂತಾದ್ದು. ಯಾವುದೋ ಕಾಂಜಿ ಪೀಂಜಿ ಸಿನೆಮಾಗಳನ್ನು ನೋಡೋಕೆ ಹೋಗಲ್ಲ. ಇಲ್ಲಿನವರ ಹತ್ರ ಸಮಯ ಇಲ್ಲ ಅಂತ ಅಲ್ಲ..ತುಳು ನಾಟಕ, ಯಕ್ಷಗಾನ ಇದ್ರೆ ಕಿಕ್ಕಿರಿದು ತುಂಬ್ಕೋತಾರೆ.. ನಾಟಕ ನೋಡುವ ಆ ಮೂರು ಗಂಟೆ ಮೂತ್ರ ಬಂದ್ರೂ ಎದ್ದು ಹೋಗಲ್ಲ…ಅಂತಹ ಪ್ರೇಕ್ಷಕರಿವರು. ಕಿರುಚಾಡೋದು..ಬೊಬ್ಬೆ ಹೊಡೆಯೋದು..ನೋ ಚಾನ್ಸ್..ಸಭ್ಯ ಪ್ರೇಕ್ಷಕರು… ಹಾಸ್ಯಕ್ಕೆ ಇಲ್ಲಿ ಪ್ರಾಧಾನ್ಯತೆ. ಕಾಂಜಿ ಪೀಂಜಿ ಸೊಂಟದ ಕೆಳಗಿನ ಹಾಸ್ಯ ಇಲ್ಲಿ ನಡೆಯಲ್ಲ. ರಂಗಭೂಮಿಯನ್ನು ಎತ್ತಿ ಎದೆಯಲ್ಲಿಟ್ಟುಕೊಂಡ ಪ್ರಬುದ್ಧ ಪ್ರೇಕ್ಷಕರಿವರು. ಹಾಗಾಗಿಯೇ ಉಡುಪಿ ಮಂಗಳೂರಿನಲ್ಲಿ ಇರುವಷ್ಟು ನಾಟಕ ತಂಡಗಳು ಪ್ರಾಯಶ: ಎಲ್ಲೂ ಇರಲಿಕ್ಕಿಲ್ಲ.

ಕೆಲ ನಾಟಕಗಳು ಅಸಂಬದ್ಧ ಎಣಿಸಿದರೂ ತುಳುನಾಡಿನ ಅನೇಕ ನಾಟಕ ತಂಡಗಳು ಸದಭಿರುಚಿಯ ನಾಟಕ ನೀಡುತ್ತಿದೆ. ಜನರು ಅವನ್ನು ಪೋಷಿಸುತ್ತಿದ್ದಾರೆ. ನಾಟಕಗಳಲ್ಲಿ ಇಷ್ಟೊಂದು ಕ್ರೇಜ್ ಹುಟ್ಟು ಹಾಕಲು ಮುಖ್ಯ ಕಾರಣ ತುಳು ನಾಟಕದ ಭೀಷ್ಮ ದೇವದಾಸ್ ಕಾಪಿಕಾಡ್. ಅವರ ನಾಟಕ ಇದ್ರೆ ಅಂತೂ ಜನ ಎಲ್ಲಾ ಕೆಲಸ ಬದಿಗೊತ್ತಿ ಬರ್ತಾರೆ. ತುಳು ಸಿನೆಮಾ ಕೂಡಾ ನೋಡ್ತಾರೆ ಆದರೆ ಅದೂ ಅಷ್ಟಕಷ್ಟೇ..ತುಂಬಾ ಚೆನ್ನಾಗಿದ್ದರೆ ಹೌಸ್ ಫ಼ುಲ್ ಓಡುತ್ತೆ ಇಲ್ಲಾ ಅಂದ್ರೆ ಸಿನೆಮಾದವರೇ ಸುಮ್ನೆ ಓಡಿಸುತ್ತಾರೆ ಹೆಸರಿಗಾಗಿ… ಹಾಗಂತ ತುಳು ಸಿನೆಮಾದ ಕಲಾವಿದರ ಮೇಲೂ ಹುಚ್ಚು ಅಭಿಮಾನ ಇಲ್ಲ. ಎಷ್ಟು ಬೇಕೋ ಅಷ್ಟೇ.. ಉತ್ತರ ಕರ್ನಾಟಕದ ಜನ ಇಲ್ಲಿ ಇರೋದರ ಪರಿಣಾಮ ಕನ್ನಡ ಸಿನೆಮಾಗಳು ಕೆಲ ದಿನ ಹೌಸ್ ಫ಼ುಲ್ ಓಡುತ್ತೆ ಇಲ್ಲ ಅಂದ್ರೆ ಅದೂ ಇಲ್ಲ.

ಇಲ್ಲಿನವರು ನಾವಾಯ್ತು..ನಮ್ಮ ಕೆಲಸ ಆಯ್ತು ಅಂತಾನೇ ಇರೋರು..ಆದರೂ ಕೋಲ, ಕಂಬುಲ, ಬ್ರಹ್ಮ ಕಲಶ, ನಾಗ ಮಂಡಲ ಎಲ್ಲದಕ್ಕೂ ಹೋಗ್ತಾರೆ.. ತುಳುನಾಡಿನ ಸಂಸ್ಕೃತಿಯ ಎಲ್ಲೂ ಬಿಟ್ಟು ಕೊಡಲ್ಲ.. ಹಾಗಂತ ಬೇರೆಯದನ್ನು ಮೂದಲಿಸೋದೂ ಇಲ್ಲ. ತುಳು ಭಾಷೆಯನ್ನು ಎದೆಗಪ್ಪಿಕೊಂಡು ಮಿಕ್ಕೆಲ್ಲಾ ಭಾಷೆಗಳನ್ನು ಮಡಿಲಲ್ಲಿಟ್ಟು ಬದುಕೋ ಜನರೇ ಈ ತುಳುನಾಡಿಗರು. ಬೇರೆ ಕಡೆಯವರ ಹುಚ್ಚು ಅಭಿಮಾನ ನೋಡಿ ಯಾಕೋ ಹೇಳೋಣ ಅನಿಸ್ತು..ಅಷ್ಟೇ..

ಬರಹ :
ಜಿತೇಶ್‌ ಕುಮಾರ್
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮೀಸಲಾತಿಗಾಗಿ ಜಾತಿಯಾಗುವ ಮತಧರ್ಮ

ಜಾತಿಗಣತಿ ಮಾಡಿ ಏನನ್ನು ಸಾಧಿಸಲು ಸಾಧ್ಯ? ಸದ್ಯ ಬಹಿರಂಗ ಆಗಿರುವ ವರದಿಯು ಇನ್ನಷ್ಟು…

7 hours ago

ಸರಕಾರಿ ಶಾಲೆಯಲ್ಲಿ ಬೆಳೆಸಿದ ತರಕಾರಿ ಜಿಲ್ಲಾಧಿಕಾರಿಗೆ ಕೊಡುಗೆ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಸರಕಾರಿ ಶಾಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು…

8 hours ago

ಅನ್ನದ ಪರಿಮಳ ಮನವರಳಿಸ ಬಹುದಲ್ಲವೇ..!

ಅನ್ನದ ಪರಿಮಳ ಎಷ್ಟು ಸೊಗಸು. ಅಡುಗೆ ಮನೆಯ ಭಾಷೆಯೇ ಅಂತಹದ್ದು.

18 hours ago

ಹೆಚ್ಚಿನ ಮೌಲ್ಯದ ಹಣ್ಣಿನ ಬೆಳೆಗಳ ಕುರಿತು ಚರ್ಚೆ | ಹಲಸು , ಡ್ರಾಗನ್‌ಫ್ರುಟ್‌ ಕೃಷಿಯ ಕಡೆಗೆ ಆದ್ಯತೆ |

ಭಾರತದ ವಿವಿಧ ಕಡೆಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯ ಇರುವ ಡ್ರಾಗನ್‌ ಫ್ರುಟ್(ಕಮಲಂ) ಹಾಗೂ…

18 hours ago

ದೆಹಲಿಯಲ್ಲಿ ಹೀಟ್‌ವೇವ್‌ , ಬಿಹಾರದಲ್ಲಿ ಮಳೆ, ಕರ್ನಾಟಕದಲ್ಲಿ ಬಿಸಿ ಗಾಳಿ ಎಚ್ಚರಿಕೆ |

ಏಪ್ರಿಲ್ ಮಧ್ಯದ ವೇಳೆಗೆ ದೆಹಲಿಯಲ್ಲಿ ತಾಪಮಾನವು 40 ಡಿಗ್ರಿಗಿಂತ ಹೆಚ್ಚಾಗಬಹುದು, ಈ ಬಾರಿ…

21 hours ago

ಹೊಸರುಚಿ| ಗುಜ್ಜೆ ರೋಲ್

ಗುಜ್ಜೆ ರೋಲ್ ಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಮೊದಲಿಗೆ ಗುಜ್ಜೆ ಕಟ್…

21 hours ago