Advertisement
MIRROR FOCUS

ಮಣ್ಣು ಕುಸಿತ ತಡೆಗೆ ಹಸಿರು ಹೊದಿಕೆ |ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಹೊಸ ಐಡಿಯಾ |

Share

ಮಣ್ಣು ಸವಕಳಿ(Soil Erosion) ಬಗ್ಗೆ ಎಲ್ಲರೂ ಶಾಲಾ ಪಠ್ಯ ಪುಸ್ತಕದಲ್ಲಿ ಓದಿರುತ್ತೀರಿ. ಇದನ್ನು ತಡೆಯಲು ಮರಗಳನ್ನು ನೆಡಬೇಕು(Planting trees) ಹಾಗೆ ಹುಲ್ಲುಗಾವಲನ್ನು(Grass land) ಸೃಷ್ಠಿಸಿದರೆ ಮಣ್ಣಿನ ಸವಕಳಿ ನಿಲ್ಲುತ್ತದೆ ಎನ್ನುವ ಬಗ್ಗೆ ಕೇಳಿದ್ದೇವೆ. ಅದೇ ರೀತಿ ನಮ್ಮ ಹಿರಿಯರು ಅದನ್ನು ಅನುಸರಿಸ್ತಿದ್ರು ಕೂಡ. ಆದರೆ ಆಧುನಿಕತೆ(Modernization) ಹೊಕ್ಕಂತೆ ಹುಲ್ಲು ನೆಡುವ ಬದಲು ಕಾಂಕ್ರೀಟೀಕರಕ್ಕೆ ಹೆಚ್ಚು ಒತ್ತು ನೀಡಲಾಯ್ತು. ಆದರೆ ಸಿಕ್ಕ ಫಲಿತಾಂಶ ಶೂನ್ಯ. ಆದರೆ ಈಗ ಮತ್ತೆ ಮರಳಿ ಅದೇ ಹಳೇ ಕ್ರಮಕ್ಕೆ  ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ(NHDA) ಮುಂದಾಗಿದೆ. ರಾಷ್ಟ್ರೀಯ ಹೆದ್ದಾರಿಯ ಬದಿ ಕಾಮಗಾರಿ ನಡೆಯುವ ಜಾಗದಲ್ಲಿ ಮಣ್ಣು ಸಡಿಲಗೊಂಡು ಕುಸಿಯುವ ಭೀತಿ ಇರುವ ಹಿನ್ನೆಲೆಯಲ್ಲಿ ಅದಕ್ಕೆ ಹಸಿರು ಹೊದಿಕೆಹಾಕಲು  ಕಾಮಗಾರಿ ಪಡೆದುಕೊಂಡ ಗುತ್ತಿಗೆ ಸಂಸ್ಥೆಗಳ ಮೂಲಕ ಹಸಿರು ಹುಲ್ಲು(Green grass) ನೆಡುವ ಕೆಲಸ ಮಾಡಿಸುತ್ತಿದೆ.

ಈಗಾಗಲೇ ಬಿ.ಸಿ.ರೋಡ್​ನ ಮುಖ್ಯ ವೃತ್ತದಿಂದ ಪಾಣೆಮಂಗಳೂರು ಸೇತುವೆವರೆಗೆ ಹಾಕಲಾದ ಮಣ್ಣು ಜರಿಯುವುದನ್ನು ತಡೆಯಲು ಹೆದ್ದಾರಿಯ ಇಕ್ಕೆಲಗಳಲ್ಲಿ ಹಸಿರು ಹುಲ್ಲು ನೆಡುವ ಕಾರ್ಯವನ್ನು ನಡೆಸಲಾಗಿದೆ. ಬಿ.ಸಿ.ರೋಡ್​ನಿಂದ ಅಡ್ಡಹೊಳೆವರೆಗೆ ಚತುಷ್ಪಥ ರಸ್ತೆ ಕಾಮಗಾರಿಯ ಹಲವೆಡೆ ಮಣ್ಣು ತುಂಬಿಸಿ ರಸ್ತೆ ಎತ್ತರಗೊಳಿಸಲಾಗಿದ್ದರೆ, ಕೆಲವೆಡೆ ಗುಡ್ಡ ಅಗೆದು, ರಸ್ತೆ ಅಗಲಗೊಳಿಸಲಾಗಿತ್ತು.

 ಮಳೆಗಾಲ ಆರಂಭಗೊಂಡು ಸತತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ನಿರ್ಮಿಸಲಾದ ಕಡೆಗಳಲ್ಲಿ ಮಣ್ಣು ಸಡಿಲಗೊಂಡು, ಜರಿಯುವ ಸಾಧ್ಯತೆ ಇದೆ. ಈ ಸಂದರ್ಭ ರಸ್ತೆ ಸಂಪರ್ಕ ಕಡಿತವಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಹೊಸದಾಗಿ ಮಣ್ಣು ತುಂಬಿಸಿ, ರಸ್ತೆ ನಿರ್ಮಿಸಲಾಗಿದ್ದು, ರೋಲರ್ ಹಾಕಿ ಮಣ್ಣನ್ನು ಹದ ಮಾಡಿ ಕೂರಿಸಲಾಗಿದೆ. ಇಲ್ಲಿನ ಅತಿಯಾದ ಮಳೆಗೆ ಹೊದಿಕೆಯೊಳಗಿನಿಂದ ಮಣ್ಣು ಜರಿಯಲು ಆರಂಭವಾದರೆ, ನಿಲ್ಲುವುದು ಕಷ್ಟ ಎಂಬ ಅಭಿಪ್ರಾಯ ಸ್ಥಳೀಯರದ್ದು. ಕಲ್ಲು ಕಟ್ಟಿದರಷ್ಟೇ ಈ ಭಾಗದಲ್ಲಿ ಬಾಳಿಕೆ ಬರುತ್ತದೆ ಎಂಬ ಮಾತುಗಳಿವೆ.

ಆದರೆ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಹೆದ್ದಾರಿ ಇಕ್ಕೆಲಗಳಲ್ಲೂ ಹುಲ್ಲು ನೆಡುವ ಕಾರ್ಯವನ್ನು ತಮಿಳುನಾಡಿನ ಸಂಸ್ಥೆಯೊಂದಕ್ಕೆ ಗುತ್ತಿಗೆ ವಹಿಸಿ ನೀಡಿದೆ. ತೆಂಗಿನ ಸಿಪ್ಪೆಯಿಂದ ತಯಾರಿಸಿದ ಹೊದಿಕೆ ಹಾಕಿ, ಲಾವಂಚವನ್ನು ನಾಟಿ ಮಾಡಲಾಗುತ್ತಿದೆ. ಹುಲ್ಲು ಬೆಳೆದು ಮಣ್ಣಿನ ರಕ್ಷಣೆ ಮಾಡಲು ಒಂದು ವರ್ಷವಾದರೂ ಬೇಕು. ಆದರೆ ಮಣ್ಣು ಮಳೆನೀರಿಗೆ ಕೊಚ್ಚಿಕೊಂಡು ಹೋಗದಂತೆ ರಕ್ಷಣೆ ನೀಡಲು, ತೆಂಗಿನಕಾಯಿ ಸಿಪ್ಪೆಯಿಂದ ತಯಾರಿಸಿದ ಹೊದಿಕೆ ಹಾಸಲಾಗಿದೆ. ಅದರ ಮೇಲೆ ನೆಡುವ ಹುಲ್ಲು ಒಂದು ವರ್ಷದ ಬಳಿಕ ಶಕ್ತಿಶಾಲಿಯಾಗಿ ಮಣ್ಣು ಕರಗದಂತೆ ರಕ್ಷಣೆ ನೀಡುತ್ತದೆ ಎಂದು ಹೇಳಲಾಗುತ್ತಿದೆ.

  • ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ದಾವಣಗೆರೆಯಲ್ಲಿ ಮಳೆ ಕೊರತೆ – ಮೆಕ್ಕೆಜೋಳ, ರಾಗಿ ಬೆಳೆ ಶೇ.50 ಹಾನಿ ಭೀತಿ

ದಾವಣಗೆರೆ ಜಿಲ್ಲೆಯಲ್ಲಿ 15 ದಿನಗಳಿಂದ ಮಳೆ ಕೊರತೆಯಾಗಿದ್ದು, ಮುಂದಿನ ಕೆಲ ದಿನಗಳಲ್ಲೂ ಮಳೆಯಾಗದಿದ್ದರೆ…

1 hour ago

ಹವಾಮಾನ ವರದಿ | 05-09-2026 | ಕರಾವಳಿಯಲ್ಲಿ ತೇವಾಂಶ ಇಳಿಕೆ, ಬಳಿಕ ಒಣಹವೆ?

ಸೆ.8ರಿಂದ ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮತ್ತೆ ಮಳೆ ಚಟುವಟಿಕೆ ಹೆಚ್ಚಾಗುವ ಸಾಧ್ಯತೆಯಿದೆ.…

7 hours ago

ಬೇರೊಬ್ಬರ ಬದುಕಿನ ಅಳತೆಯಲ್ಲಿ ನಮ್ಮ ಬದುಕನ್ನು ಅಳೆಯುತ್ತಿದ್ದೇವೆಯೇ?

ಬೇರೊಬ್ಬರ ಬದುಕಿನೊಂದಿಗೆ ನಿರಂತರ ಹೋಲಿಕೆ ನಮ್ಮ ನೆಮ್ಮದಿ ಮತ್ತು ಆತ್ಮವಿಶ್ವಾಸವನ್ನು ಕಸಿದುಕೊಳ್ಳಬಹುದು. ಮತ್ತೊಬ್ಬರ…

13 hours ago

ಗೂಗಲ್‌ ಮತ್ತು AIಯ ಕಾಲದಲ್ಲೂ ಗುರು ಏಕೆ ಬೇಕು..?

ಶಿಕ್ಷಕರ ದಿನಾಚರಣೆ ಶಿಕ್ಷಕರನ್ನು ಸನ್ಮಾನಿಸುವ ದಿನ ಮಾತ್ರವಲ್ಲ, ಶಿಕ್ಷಕತ್ವ ಮತ್ತು ಶಿಕ್ಷಣದ ನಿಜವಾದ…

14 hours ago

ಮಳೆ ಹೆಚ್ಚಿಸಲು ಮೋಡ ಬಿತ್ತನೆಗೆ ಚಾಲನೆ – ಮೋಡ ಬಿತ್ತನೆಯಿಂದ ಮಳೆ ಬರುತ್ತದೆಯೇ?

ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ₹28.52 ಕೋಟಿ ವೆಚ್ಚದ 60 ದಿನಗಳ…

22 hours ago

3,000 ವರ್ಷಗಳ ಹಿಂದೆಯೇ ರೈತರು ಹವಾಮಾನ ಬದಲಾವಣೆಗೆ ಹೊಂದಿಕೊಂಡಿದ್ದರು..! ಬಿಹಾರದ ಪುರಾತನ ಬೀಜಗಳು ಹೇಳಿದ ಕೃಷಿ ಪಾಠ

ಬಿಹಾರದ ಯುರೆನ್‌ನಲ್ಲಿ ಪತ್ತೆಯಾದ 5 ಲಕ್ಷಕ್ಕೂ ಹೆಚ್ಚು ಸುಟ್ಟ ಬೀಜಗಳ ಅಧ್ಯಯನವು ಭಾರತದ…

24 hours ago