Advertisement
Opinion

ಅಭಿಮಾನ ಮತ್ತು ಉಡುಪಿ-ಮಂಗಳೂರಿಗರು! : ಅಭಿಮಾನ ಹುಚ್ಚಾಗಬಾರದು.. ಅದು ಮೆಚ್ಚುಗೆಯಾಗಿರಬೇಕು..

Share

ಸಿನೆಮಾ(Cinema) ನಟರ(Actor) ಬಗ್ಗೆ ಅಭಿಮಾನ(Fan) ಇಟ್ಕೊಳ್ಳೋದು ಒಳ್ಳೇದೇ..ಹಾಗಂತ ಅದು ಹುಚ್ಚಾಟ ಆಗಬಾರದು. ಸಿನೆಮಾ ನಟರೂ ಕೂಡಾ ನಮ್ಮಂಗೆ ಮನುಷ್ಯರೇ(Human Beings) ಅಲ್ವೇ? ಅವರ ಸಿನೆಮಾ ಬಂದಾಗ ಸಿನೆಮಾ ಮಂದಿರಕ್ಕೆ(Theatre) ಹೋಗಿ ನೋಡಿ ಚಪ್ಪಾಳೆ(Claps), ಶಿಳ್ಳೆ ಹೊಡೀರಿ ಸಾಕು..ಅದು ಬಿಟ್ಟು ಅದು ಇದು ಅಂತ ಹುಚ್ಚಾಟ ಮಾಡೋದು ತರವಲ್ಲ. ಈ ವಿಷಯದಲ್ಲಿ ಉಡುಪಿ(Udupi) ಮತ್ತು ಮಂಗಳೂರಿಗರು(Manglore) ಬೆಸ್ಟ್..ಯಾವನೇ ಸ್ಟಾರ್(Star) ಬರಲಿ ಇಲ್ಲಿ..ಆ ತರಹ ಹುಚ್ಚಾಟ ಯಾವತ್ತೂ ಮಾಡಲ್ಲ. ಯಾರಾದರೂ ಸ್ಟಾರ್ ಇಲ್ಲಿಗೆ ಬಂದ್ರೂ ಇಲ್ಲಿನವರು ಅಷ್ಟೊಂದು ತಲೆ ಕೆಡಿಸಿಕೊಳ್ಳಲ್ಲ. ಯಶ್(Yash) ಬಂದಿದ್ದಾರೆ..ದರ್ಶನ್(Darshan) ಬಂದಿದ್ದಾರೆ..ಸುದೀಪ್(Sudeep) ಬಂದಿದ್ದಾರೆ..ಅಂದ್ರೂ..ಇಲ್ಲಿನವರು, ಓ ಹೌದಾ..ಸರಿ ಬಿಡು..ನಂಗೆ ನಂದೇ ಕೆಲಸ ಜಾಸ್ತಿ ಇದೆ..ಅವರನ್ನು ನೋಡೋಕೆ ಯಾವನು ಹೋಗ್ತಾನೆ ಅನ್ನೋ ಮನಸ್ಥಿತಿ ಇಲ್ಲಿಯವರದ್ದು.

ಅದಕ್ಕೆ ಯಾರೂ ಇಲ್ಲಿ ತಮ್ಮ ಸಿನೆಮಾ ಪ್ರೊಮೋಟ್ ಮಾಡೋಕೆ ಬರಲ್ಲ..ಅವರಿಗೂ ಗೊತ್ತು ಇಲ್ಲಿ ಯಾವುದೇ ಸಿನೆಮಾ ಜಾಸ್ತಿ ದಿನ ನಿಲ್ಲಲ್ಲ. ಉಡುಪಿ ಮಂಗಳೂರಿನಲ್ಲಿ ಯಾವುದಾದರೂ ಸಿನೆಮಾ ಜಾಸ್ತಿ ದಿನ ನಿಂತು ಅಂತ ಅಂದ್ರೆ ಆ ಸಿನೆಮಾ ಅಷ್ಟು ಚೆನ್ನಾಗಿದೆ ಅನ್ಕೋಬಹುದು. ಆ ಸಿನೆಮಾ ಸೂಪರ್ ಡೂಪರ್ ಹಿಟ್ ಅಂತ ಹೇಳಬಹುದು. ಇಲ್ಲಿನವರ ಟೇಸ್ಟೇ ಅಂತಾದ್ದು. ಯಾವುದೋ ಕಾಂಜಿ ಪೀಂಜಿ ಸಿನೆಮಾಗಳನ್ನು ನೋಡೋಕೆ ಹೋಗಲ್ಲ. ಇಲ್ಲಿನವರ ಹತ್ರ ಸಮಯ ಇಲ್ಲ ಅಂತ ಅಲ್ಲ..ತುಳು ನಾಟಕ, ಯಕ್ಷಗಾನ ಇದ್ರೆ ಕಿಕ್ಕಿರಿದು ತುಂಬ್ಕೋತಾರೆ.. ನಾಟಕ ನೋಡುವ ಆ ಮೂರು ಗಂಟೆ ಮೂತ್ರ ಬಂದ್ರೂ ಎದ್ದು ಹೋಗಲ್ಲ…ಅಂತಹ ಪ್ರೇಕ್ಷಕರಿವರು. ಕಿರುಚಾಡೋದು..ಬೊಬ್ಬೆ ಹೊಡೆಯೋದು..ನೋ ಚಾನ್ಸ್..ಸಭ್ಯ ಪ್ರೇಕ್ಷಕರು… ಹಾಸ್ಯಕ್ಕೆ ಇಲ್ಲಿ ಪ್ರಾಧಾನ್ಯತೆ. ಕಾಂಜಿ ಪೀಂಜಿ ಸೊಂಟದ ಕೆಳಗಿನ ಹಾಸ್ಯ ಇಲ್ಲಿ ನಡೆಯಲ್ಲ. ರಂಗಭೂಮಿಯನ್ನು ಎತ್ತಿ ಎದೆಯಲ್ಲಿಟ್ಟುಕೊಂಡ ಪ್ರಬುದ್ಧ ಪ್ರೇಕ್ಷಕರಿವರು. ಹಾಗಾಗಿಯೇ ಉಡುಪಿ ಮಂಗಳೂರಿನಲ್ಲಿ ಇರುವಷ್ಟು ನಾಟಕ ತಂಡಗಳು ಪ್ರಾಯಶ: ಎಲ್ಲೂ ಇರಲಿಕ್ಕಿಲ್ಲ.

ಕೆಲ ನಾಟಕಗಳು ಅಸಂಬದ್ಧ ಎಣಿಸಿದರೂ ತುಳುನಾಡಿನ ಅನೇಕ ನಾಟಕ ತಂಡಗಳು ಸದಭಿರುಚಿಯ ನಾಟಕ ನೀಡುತ್ತಿದೆ. ಜನರು ಅವನ್ನು ಪೋಷಿಸುತ್ತಿದ್ದಾರೆ. ನಾಟಕಗಳಲ್ಲಿ ಇಷ್ಟೊಂದು ಕ್ರೇಜ್ ಹುಟ್ಟು ಹಾಕಲು ಮುಖ್ಯ ಕಾರಣ ತುಳು ನಾಟಕದ ಭೀಷ್ಮ ದೇವದಾಸ್ ಕಾಪಿಕಾಡ್. ಅವರ ನಾಟಕ ಇದ್ರೆ ಅಂತೂ ಜನ ಎಲ್ಲಾ ಕೆಲಸ ಬದಿಗೊತ್ತಿ ಬರ್ತಾರೆ. ತುಳು ಸಿನೆಮಾ ಕೂಡಾ ನೋಡ್ತಾರೆ ಆದರೆ ಅದೂ ಅಷ್ಟಕಷ್ಟೇ..ತುಂಬಾ ಚೆನ್ನಾಗಿದ್ದರೆ ಹೌಸ್ ಫ಼ುಲ್ ಓಡುತ್ತೆ ಇಲ್ಲಾ ಅಂದ್ರೆ ಸಿನೆಮಾದವರೇ ಸುಮ್ನೆ ಓಡಿಸುತ್ತಾರೆ ಹೆಸರಿಗಾಗಿ… ಹಾಗಂತ ತುಳು ಸಿನೆಮಾದ ಕಲಾವಿದರ ಮೇಲೂ ಹುಚ್ಚು ಅಭಿಮಾನ ಇಲ್ಲ. ಎಷ್ಟು ಬೇಕೋ ಅಷ್ಟೇ.. ಉತ್ತರ ಕರ್ನಾಟಕದ ಜನ ಇಲ್ಲಿ ಇರೋದರ ಪರಿಣಾಮ ಕನ್ನಡ ಸಿನೆಮಾಗಳು ಕೆಲ ದಿನ ಹೌಸ್ ಫ಼ುಲ್ ಓಡುತ್ತೆ ಇಲ್ಲ ಅಂದ್ರೆ ಅದೂ ಇಲ್ಲ.

ಇಲ್ಲಿನವರು ನಾವಾಯ್ತು..ನಮ್ಮ ಕೆಲಸ ಆಯ್ತು ಅಂತಾನೇ ಇರೋರು..ಆದರೂ ಕೋಲ, ಕಂಬುಲ, ಬ್ರಹ್ಮ ಕಲಶ, ನಾಗ ಮಂಡಲ ಎಲ್ಲದಕ್ಕೂ ಹೋಗ್ತಾರೆ.. ತುಳುನಾಡಿನ ಸಂಸ್ಕೃತಿಯ ಎಲ್ಲೂ ಬಿಟ್ಟು ಕೊಡಲ್ಲ.. ಹಾಗಂತ ಬೇರೆಯದನ್ನು ಮೂದಲಿಸೋದೂ ಇಲ್ಲ. ತುಳು ಭಾಷೆಯನ್ನು ಎದೆಗಪ್ಪಿಕೊಂಡು ಮಿಕ್ಕೆಲ್ಲಾ ಭಾಷೆಗಳನ್ನು ಮಡಿಲಲ್ಲಿಟ್ಟು ಬದುಕೋ ಜನರೇ ಈ ತುಳುನಾಡಿಗರು. ಬೇರೆ ಕಡೆಯವರ ಹುಚ್ಚು ಅಭಿಮಾನ ನೋಡಿ ಯಾಕೋ ಹೇಳೋಣ ಅನಿಸ್ತು..ಅಷ್ಟೇ..

ಬರಹ :
ಜಿತೇಶ್‌ ಕುಮಾರ್
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 28-07-2026 | ಮುಂದಿನ 10 ದಿನ ಸಾಮಾನ್ಯ ಮಳೆ – ಆಗಸ್ಟ್ ಆರಂಭದಲ್ಲಿ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು ಸಾಧ್ಯತೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಸಾಮಾನ್ಯ ಮಳೆ ಮುಂದುವರಿಯುವ ನಿರೀಕ್ಷೆಯಿದ್ದು,…

16 hours ago

200 ಹಸುಗಳಿಂದ ₹2 ಕೋಟಿ ವಾರ್ಷಿಕ ಆದಾಯ…! ಗಮನ ಸೆಳೆದ ಉತ್ತರ ಪ್ರದೇಶದ ಮಾದರಿ

ಉತ್ತರ ಪ್ರದೇಶದಲ್ಲಿ 200 ಹಸುಗಳನ್ನು ಆಧರಿಸಿದ ಸಮಗ್ರ ಗೋ ಆರ್ಥಿಕತೆ ಮಾದರಿಯಲ್ಲಿ ಗೋಮಯದಿಂದ…

16 hours ago

ರಬ್ಬರ್ ತೋಟ ಹಸಿರಾಗಿರಬಹುದು… ಆದರೆ ಕಾಡಿಗೆ ಪರ್ಯಾಯವಲ್ಲ…! ಮಲೇಷ್ಯಾ ಅಧ್ಯಯನ ವರದಿ

ರಬ್ಬರ್ ತೋಟಗಳು ಹಸಿರಾಗಿದ್ದರೂ ಅವು ನೈಸರ್ಗಿಕ ಮಳೆಕಾಡಿನ ಜೀವವೈವಿಧ್ಯವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು…

20 hours ago

ಅಡುಗೆ ಎಣ್ಣೆ ಆಮದು 7% ಏರಿಕೆ – ಭಾರತ ಇನ್ನೂ ಆಮದು ಅವಲಂಬಿತ

ಭಾರತದ ಅಡುಗೆ ಎಣ್ಣೆ ಆಮದು ಎಂಟು ತಿಂಗಳಲ್ಲಿ ಶೇ.7ರಷ್ಟು ಏರಿಕೆಯಾಗಿದೆ. ಜೂನ್‌ನಲ್ಲಿ ಆಮದು…

20 hours ago

ಕೇರಳದಲ್ಲಿ ಪ್ರತಿವರ್ಷ ₹1,200 ಕೋಟಿ ಮೌಲ್ಯದ ಹಲಸು ವ್ಯರ್ಥ..! ಮೌಲ್ಯವರ್ಧನೆಗೆ ಸರ್ಕಾರ ಮುಂದಾಗಲಿ ಎಂಬ ಒತ್ತಾಯ

ಕೇರಳದಲ್ಲಿ ಉತ್ಪಾದನೆಯಾಗುವ ಬಹುತೇಕ ಹಲಸು ಬಳಕೆಯಾಗದೆ ವ್ಯರ್ಥವಾಗುತ್ತಿದ್ದು, ವರ್ಷಕ್ಕೆ ಸುಮಾರು ₹1,200 ಕೋಟಿ…

21 hours ago

ಅವೈಜ್ಞಾನಿಕ ಮಳೆ ವರದಿ ಶೈಕ್ಷಣಿಕ ವಲಯಕ್ಕೆ ತೊಂದರೆ – ಹವಾಮಾನ ಮುನ್ಸೂಚನೆ ಕುರಿತು ಎಸ್.ಎಲ್. ಭೋಜೆಗೌಡ ಕಳವಳ

ಅವೈಜ್ಞಾನಿಕ ಮಳೆ ಮುನ್ಸೂಚನೆಗಳ ಆಧಾರದ ಮೇಲೆ ಪದೇ ಪದೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವುದು…

2 days ago