Advertisement
ವಿಶೇಷ ವರದಿಗಳು

ನಿಮ್ಮಲ್ಲಿ ಎಳೆ ಅಡಿಕೆ ಬೀಳ್ತಾ ಇದೆಯಾ…? ಕೇಳಲು ಶುರು ಮಾಡಿದ್ದಾರೆ ಅಡಿಕೆ ಬೆಳೆಗಾರರು..!

Share

ಈ ಬಾರಿ ಮೇ ತಿಂಗಳಿನಿಂದಲೇ ಮಳೆ ಆರಂಭವಾಗಿದೆ. ಜೂನ್.‌10 ಕಳೆಯುವ ಹೊತ್ತಿಗೆ ವಾತಾವರಣ ಉಷ್ಣತೆ ತೀರಾ ಇಳಿಕೆಯಾಗಿದೆ. ಈಗ ಅಡಿಕೆ ಬೆಳೆಗಾರರು ಅಲ್ಲಲ್ಲಿ ಮಾತನಾಡುವುದು ಶುರು ಮಾಡಿದ್ದಾರೆ,”ನಿಮ್ಮಲ್ಲಿ ಎಳೆ ಅಡಿಕೆ ಬೀಳ್ತಾ ಇದೆಯಾ..? , ನಮ್ಮಲ್ಲಿ ಕೆಲವು ಕಡೆ ಕಾಣ್ತದೆ..” ಎಂದು ಹೇಳಲು ಶುರು ಮಾಡಿದ್ದಾರೆ. ಕಾರಣ ಏನು ಎಂಬುದರ ಬಗ್ಗೆ ಚಿಂತಿಸುತ್ತಿದ್ದಾರೆ.

ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಕಳೆದ ವರ್ಷ ಅಡಿಕೆ ಫಸಲು ತೀರಾ ಇಳಿಕೆಯಾಗಿತ್ತು. ಅಡಿಕೆ ಹಿಂಗಾರ ಒಣಗುವುದು ಹಾಗೂ ಎಳೆ ಅಡಿಕೆ ಬಿದ್ದ ಕಾರಣದಿಂದ ಶೇ.40 ರಷ್ಟು ಅಡಿಕೆ ಫಸಲು ಇಳಿಕೆಯಾಗಿತ್ತು. ಅದರ ಪರಿಣಾಮವಾಗಿ ಈ ಬಾರಿ ಹೊಸ ಅಡಿಕೆ ಧಾರಣೆ ಈಗಲೇ 480-490 ರೂಪಾಯಿ ಗೆ ಏರಿಕೆಯಾಗಿದೆ, ಮತ್ತಷ್ಟು ಏರಿಕೆಯಾಗುತ್ತದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಆದರೆ ಈ ಬಾರಿಯೂ ಅದೇ ಪರಿಸ್ಥಿತಿ ಪುನರಾವರ್ತನೆಯಾಗುತ್ತದೆಯೇ ಎನ್ನುವ ಅನುಮಾನ ಅಡಿಕೆ ಬೆಳೆಗಾರರನ್ನು ಕಾಡಿದೆ.ಅಷ್ಟೇ ಅಲ್ಲ, ಹೀಗೇ ಆದರೆ ಅಡಿಕೆ ಬೆಳೆಯನ್ನು ನಂಬುದು ಹೇಗೆ. ಕೃಷಿ ಕೆಲಸ ಮಾಡುವುದು ಹೇಗೆ, ಹೊಸ ಕೃಷಿ ಏನು ಮಾಡಬಹುದು ಎನ್ನುವ ಬಗ್ಗೆಯೂ ಚಿಂತನೆಗಳು ನಡೆಯುತ್ತಿದೆ.

ಈ ಬಾರಿ ಮೇ ತಿಂಗಳ ಮಧ್ಯದವರೆಗೂ ಉತ್ತಮ ಫಸಲಿನ ನಿರೀಕ್ಷೆ ಎಲ್ಲಾ ಅಡಿಕೆ ಬೆಳೆಗಾರರಲ್ಲಿತ್ತು. ಆದರೆ ಮೇ ಅಂತ್ಯದ ಹೊತ್ತಿಗೆ ಕೆಲವು ಕಡೆ ಎಳೆ ಅಡಿಕೆ ಬೀಳುವುದು ಕಂಡಿತು. ಆದರೆ  ಜೂನ್‌ 10 ರ ಹೊತ್ತಿಗೆ ಮತ್ತಷ್ಟು ಎಳೆ ಅಡಿಕೆ ಬಿದ್ದಿರುವುದು ಕಂಡಿದೆ. ಹೀಗಾಗಿ ಅಡಿಕೆ ಬೆಳೆಗಾರರು ಯೋಚಿಸುವಂತೆ ಮಾಡಿದೆ.  ಕೆಲವು ಅಡಿಕೆ ಬೆಳೆಗಾರರು ಮಾರ್ಚ್‌ ತಿಂಗಳಿನಿಂದಲೇ ವಿವಿಧ ಔಷಧಿಗಳನ್ನು ಸಿಂಪಡಣೆ ಮಾಡಿದ್ದಾರೆ, ಆದರೂ ಜೂನ್‌ ವೇಳೆಗೆ ಎಳೆ ಅಡಿಕೆ ಬೀಳಲು ಶುರುವಾಗಿದೆ. ಕೆಲವು ಬೆಳೆಗಾರರು ಯಾವುದೇ ಔಷಧಿ ಸಿಂಪಡಣೆ ಮಾಡಿಲ್ಲ ಅಲ್ಲೂ ಎಳೆ ಅಡಿಕೆ ಬೀಳುವುದು ಕಾಣುತ್ತದೆ. ಹೀಗಾಗಿ ಈಗ ಸಮಸ್ಯೆ ಇರುವುದು ಎಲ್ಲಿ ಮತ್ತು ಏನು? ಎನ್ನುವುದರ ಬಗ್ಗೆ ರೈತರ ನಡುವೆಯೇ ಮಾತುಕತೆ ನಡೆಯುತ್ತಿದೆ.

ವಿಟ್ಲದ ಮಂಕುಡೆಯ ಕೃಷಿಕರೊಬ್ಬರ ಪ್ರಕಾರ, ವಿಪರೀತ ಬಿಸಿಲು ಹಾಗೂ ನೀರಾವರಿ ವ್ಯವಸ್ಥೆಯಲ್ಲಿನ ಲೋಪವೂ ಎಳೆ ಅಡಿಕೆ ಬೀಳುವುದಕ್ಕೆ ಕಾರಣ ಇರಬಹುದಾ ಎಂದು ಪ್ರಶ್ನಿಸುತ್ತಾರೆ. ಇದೇ ವೇಳೆ ಯಾವುದೇ ನಿರ್ವಹಣೆ ಮಾಡದ ಅಡಿಕೆ ತೋಟದಲ್ಲಿ ಅಡಿಕೆ ಬೀಳುವ ಪ್ರಮಾಣ ಕಡಿಮೆ ಎನ್ನುವುದನ್ನೂ ಅವರು ಗಮನಿಸಿ ಹೇಳುತ್ತಾರೆ. ಸಾಮಾನ್ಯವಾಗಿ ಬಿಸಿಲು-ಮಳೆ ಆರಂಭವಾಗುವ ವೇಳೆ ಅಂದರೆ ಮೇ ತಿಂಗಳಲ್ಲಿ ಪೆಂತಿ ಕೀಟದ ಬಾಧೆಯಿಂದ ಎಳೆ ಅಡಿಕೆ ಬೀಳುವುದು ಇದೆ.  ಔಷಧಿ ಸಿಂಪಡಣೆ ಮಾಡಿದರೂ ಎಳೆ ಅಡಿಕೆ ಬೀಳುವುದು ನಿಂತಿಲ್ಲ ಯಾಕೆ? ಎನ್ನುವುದು ಬೆಳೆಗಾರರ ಪ್ರಶ್ನೆ. ಹೀಗಾಗಿ ಎಳೆ ಅಡಿಕೆ ಬೀಳುವುದಕ್ಕೆ ತಾಪಮಾನದ ಏರುಪೇರು ಹಾಗೂ ಹವಾಮಾನ ಕಾರಣವೇ ಎನ್ನುವುದು ಕೂಡಾ ಈಗ ಗಮನಿಸಬೇಕಾದ ಅಂಶವಾಗಿದೆ.

ಒಟ್ಟಿನಲ್ಲಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ಅಡಿಕೆ ಬೆಳೆಗಾರರಿಗೆ ಈಗ ಜೂನ್‌ ತಿಂಗಳು ಸವಾಲಿನ ದಿನಗಳಾಗಿದೆ. ಅಡಿಕೆ ಬೀಳುವುದು ತಡೆಯುವುದು ಹೇಗೆ..? ಅಡಿಕೆ ಉಳಿಸಿಕೊಳ್ಳುವುದು ಹೇಗೆ ಎನ್ನುವುದು ಚಿಂತೆ. ಇದೇ ವೇಳೆ ಅಡಿಕೆ ಧಾರಣೆಯೂ ಏರಿಕೆಯಲ್ಲಿದೆ, ಮುಂದಿನ ವರ್ಷವೂ ಅಡಿಕೆ ಫಸಲು ಕಡಿಮೆ ಎನ್ನುವ ಸುದ್ದಿ ಮತ್ತಷ್ಟು ಚಿಂತೆಗೆ ಕಾರಣವಾಗಿದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ಆಹಾರ-ನಿದ್ರೆ ಪರಸ್ಪರ ಪೂರಕ; ಉತ್ತಮ ನಿದ್ರೆಗೆ ಹಸಿವು ಅಗತ್ಯ: ರಾಘವೇಶ್ವರ ಶ್ರೀ

ಉತ್ತಮ ಆರೋಗ್ಯಕ್ಕೆ ಸರಿಯಾದ ಆಹಾರ ಮತ್ತು ನಿದ್ರೆ ಎರಡೂ ಅವಿಭಾಜ್ಯ ಎಂದು ಶ್ರೀ…

2 hours ago

ಕೃಷಿಕರ ಮಿತ್ರ ಸಾಯಿಶೇಖರ್‌ ಕರಿಕಳ ಅವರಿಗೆ ರೈತ ರತ್ನ ಪ್ರಶಸ್ತಿ

ಮಳೆ ಮಾಹಿತಿ ಮೂಲಕ ಕೃಷಿಕರಿಗೆ ನೆರವಾಗುತ್ತಿರುವ ಸಾಯಿಶೇಖರ್‌ ಕರಿಕಳ ಅವರಿಗೆ ರೈತ ರತ್ನ…

2 hours ago

ಮಂಗಳೂರಿನಲ್ಲಿ ರಾಷ್ಟ್ರೀಯ ಚೆಸ್ ಚಾಂಪಿಯನ್ ಶಿಪ್‌ಗೆ ಚಾಲನೆ – 28 ರಾಜ್ಯ–ಕೇಂದ್ರಾಡಳಿತ ಪ್ರದೇಶಗಳಿಂದ 644 ಬಾಲಕಿ-ಬಾಲಕಿಯರು

ಮಂಗಳೂರಿನಲ್ಲಿ ರಾಷ್ಟ್ರೀಯ ಅಂಡರ್‌-11 ಚೆಸ್ ಚಾಂಪಿಯನ್ಶಿಪ್‌ಗೆ ಭವ್ಯ ಚಾಲನೆ ದೊರೆತಿದ್ದು, ದೇಶದ 28…

3 hours ago

ಹವಾಮಾನ ವರದಿ | 02-08-2026 | ಕರಾವಳಿಯಲ್ಲಿ ಮಳೆ ಇಳಿಮುಖ ..? ರಾಜ್ಯದಲ್ಲಿ ಮುಂಗಾರು ಸ್ಥಿತಿ ಏನು..?

ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆಯ ತೀವ್ರತೆ ಇಳಿಮುಖವಾಗಲಿದ್ದು, ಆಗಸ್ಟ್‌ 3ರಿಂದ ತೋಟದ…

5 hours ago

ಭಾರೀ ಮಳೆಯ ಎಚ್ಚರಿಕೆ : 24 ಗಂಟೆ ಸನ್ನದ್ಧವಾಗಿರಲು ಡಿಸಿ ಸೂಚನೆ, ಭೂಕುಸಿತ ಪ್ರದೇಶಗಳ ಮೇಲೆ ಕಟ್ಟೆಚ್ಚರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳನ್ನು 24…

16 hours ago

ಹುಬ್ಬಳ್ಳಿಯಲ್ಲಿ ಹಲಸು ಮೇಳಕ್ಕೆ ಚಾಲನೆ – 50ಕ್ಕೂ ಹೆಚ್ಚು ಮಳಿಗೆಗಳು, ಹಲಸಿನ ಬಿರಿಯಾನಿಯಿಂದ ಕಬಾಬ್‌ವರೆಗೆ ಸವಿಯುವ ಅವಕಾಶ

ಹುಬ್ಬಳ್ಳಿಯಲ್ಲಿ ಆರಂಭವಾದ ಮೂರು ದಿನಗಳ ಹಲಸು ಮೇಳಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.…

17 hours ago