ಉತ್ತರ ಪ್ರದೇಶದ ಮೈನ್ಪುರಿ ಜಿಲ್ಲೆಯ ಕೃಷಿಭೂಮಿಯಲ್ಲಿ ಆಕಸ್ಮಿಕ ಉತ್ಖನನದ ಸಂದರ್ಭ ಸುಮಾರು 4,000 ವರ್ಷಗಳ ಹಿಂದಿನ ದೊಡ್ಡ ಸಂಖ್ಯೆಯ ತಾಮ್ರದ ಕತ್ತಿಗಳು ಪತ್ತೆಯಾಗಿದೆ.
ಮೈನ್ ಪುರಿ ಜಿಲ್ಲೆಯ ರೈತ ತನ್ನ ಹೊಲವನ್ನು ಸಮತಟ್ಟು ಮಾಡುತ್ತಿದ್ದನು. ಈ ಸಂದರ್ಭ ತಾಮ್ರದ ಕತ್ತಿಗಳು ಪತ್ತೆಯಾಗಿತ್ತು. ಆರಂಭದಲ್ಲಿ, ರೈತರು ಈ ಕಲಾಕೃತಿಗಳನ್ನು ಚಿನ್ನ ಮತ್ತು ಬೆಳ್ಳಿಯೆಂದು ಭಾವಿಸಿ ಮನೆಗೆ ಕೊಂಡು ಹೋಗಿದ್ದರು. ಆದರೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದ ಬಳಿಕ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಗೆ ಮಾಹಿತಿ ನೀಡಲಾಯಿತು.
ತಜ್ಞರ ಪ್ರಕಾರ, ಆಯುಧಗಳನ್ನು ತಾಮ್ರದ ಯುಗಕ್ಕೆ ಅಂದರೆ ಸರಿಸುಮಾರು 4,000 ವರ್ಷಗಳ ಹಿಂದೆ ಗುರುತಿಸಬಹುದು. “ಈ ತಾಮ್ರದ ಶೇಖರಣೆಗಳು ಚಾಲ್ಕೋಲಿಥಿಕ್ ಅವಧಿಗೆ ಸೇರಿವೆ ಮತ್ತು ಓಕ್ರೆ-ಬಣ್ಣದ ಕುಂಬಾರಿಕೆ (OCP) ಉಪಸ್ಥಿತಿಯು ಈ ಸಮಯದೊಂದಿಗೆ ನೇರವಾಗಿ ಸಂಬಂಧಿಸಿದೆ” ಎಂದು ಪುರಾತತ್ವ ನಿರ್ದೇಶಕ ಭುವನ್ ವಿಕ್ರಮ್ ಮಾಧ್ಯಮಗಳಿಗೆ ಹೇಳಿದರು.
ಪುರಾತತ್ವ ಇಲಾಖೆಯ ಶಾಸ್ತ್ರಜ್ಞ ರಾಜ್ ಕುಮಾರ್, “ಆಯುಧಗಳ ದಾಸ್ತಾನು ಗಮನಿಸಿದಾಗ ಜನರು ಹೋರಾಟದಲ್ಲಿ ತೊಡಗಿಸಿಕೊಂಡಿರುವುದನ್ನು ಸೂಚಿಸುತ್ತದೆ ಮತ್ತು ಅಂತಹ ಹೋರಾಟಗಳು ಅಂದು ಭೂಮಿ ಅಥವಾ ಹಕ್ಕುಗಳಿಗಾಗಿ ದೊಡ್ಡ ಗುಂಪುಗಳ ನಡುವೆ ಇದ್ದಿರಬಹುದು ಎಂದರು.
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ…
ಈಗಿನಂತೆ ಜೂನ್ 29ರಿಂದ ಬಿಸಿಲು ಹಾಗೂ ಮೋಡದ ವಾತಾವರಣದ ಸಾಧ್ಯತೆಗಳಿದ್ದು ತೋಟಗಳಗೆ ಔಷಧಿ…
ದೇಸೀ ಗೋತಳಿ ಸಂರಕ್ಷಣೆಗೆ ಗ್ರಾಮೀಣ ಪ್ರದೇಶ, ಹಳ್ಳಿಯಷ್ಟೇ ಅಲ್ಲ, ನಗರದಲ್ಲೂ ಸಾಧ್ಯವಿದೆ. ದನ…
ದುಡಿಯುವ ವರ್ಗದಲ್ಲಿ ಮಹಿಳೆಯರ ಸಹಭಾಗಿತ್ವ ಹೆಚ್ಚಿಸುವುದು ಕೇಂದ್ರ ಸರ್ಕಾರದ ಆದ್ಯತೆಯಾಗಿದ್ದು, ಮಹಿಳಾ ನೇತೃತ್ವದ…
ಹಾವೇರಿ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆ ಉತ್ತಮ ರೀತಿಯಲ್ಲಿ ಸುರಿಯುತ್ತಿದ್ದು,…