Advertisement
The Rural Mirror ಕಾಳಜಿ

#ನಮ್ಮ_ಗಣೇಶ | ಕೊರೋನಾ ನಡುವೆ ಬದುಕಿಗಿರಲಿ ನೆಮ್ಮದಿ | ಗಣೇಶ ಹಬ್ಬ ಆಚರಿಸೋಣ- ಸಂಭ್ರಮಿಸೋಣ |

Share

ಹಬ್ಬಗಳೆಲ್ಲಾ ಒಂದಾಗಿ, ಒಟ್ಟಾಗಿ ಆಚರಿಸುವ, ಸಂಭ್ರಮಿಸುವ ಕಾಲ. ಪ್ರತೀ ದಿನವೂ ಒಂದಾಗದೇ ಇದ್ದರೂ ಹಬ್ಬದ ಸಮಯದಲ್ಲಿ ಕುಟುಂಬದ ಮಂದಿ, ಊರಿನ ಮಂದಿ ಒಂದಾಗಿ ಸುಖ-ದು:ಖಗಳನ್ನು ಹಂಚಿಕೊಳ್ಳುವ, ಸಾಂತ್ವನ, ನೆಮ್ಮದಿಯನ್ನು ತಂದುಕೊಳ್ಳುವ ದಿನವಾಗಿಯೂ ಇರುತ್ತದೆ. ಹೀಗಾಗಿ ಯಾವುದೇ ಹಬ್ಬ, ಆಚರಣೆ, ನಂಬಿಕೆಗಳು ಮನುಷ್ಯದ ಬದುಕಿಗೆ ಪಾಸಿಟಿವ್‌ ಸಂದೇಶಗಳನ್ನು ನೀಡುವ, ಬದುಕನ್ನು ಗಟ್ಟಿ ಮಾಡುವ, ಬದುಕಿಗೆ ಧೈರ್ಯ ತುಂಬುವ ದಿನವೂ ಹೌದು.

ಆದರೆ, ಕಳೆದ ಎರಡು ವರ್ಷಗಳಿಂದ ಶ್ರೀಕೃಷ್ಣಜನ್ಮಾಷ್ಟಮಿ, ಶ್ರೀ ಗಣೇಶೋತ್ಸವ ಆಚರಣೆ ಸಾರ್ವಜನಿಕವಾಗಿ ಇಲ್ಲವಾಗಿದೆ. ಕಾರಣ ಕೊರೋನಾ ವೈರಸ್.‌ ಒಂದು ಸಣ್ಣ ವೈರಸ್‌, ಕಣ್ಣಿಗೆ ಕಾಣದ ಜೀವಿ ಅನೇಕ ಸಂದಿಗ್ಧತೆಯನ್ನು ತಂದಿಟ್ಟಿತು. ಈ ಬಾರಿಯೂ ಗಣೇಶೋತ್ಸವ ಸರಳವಾಗಿ ಆಚರಣೆಯಾಗುತ್ತಿದೆ. ಒಂದು ಕಾಲದಲ್ಲಿ ಗಣೇಶೋತ್ಸವೆಂದರೆ ಸಮಾಜದ ಸಂಘಟನೆ ಎಂದೇ ಆಚರಿಸಲಾಗಿತ್ತಿತ್ತು. ಆದರೆ ಈಗ ಕಾಲದ ಪರಿಸ್ಥಿತಿ ಬದಲಾಯಿಸಿ ಬಿಟ್ಟಿತು. ಆದರೆ ಹಬ್ಬಗಳ ಆಚರಣೆ ನಡೆಯಬೇಕು, ಸರಳವಾಗಿ ಆಚರಿಸಿ ನಾವು ಸಂಭ್ರಮವನ್ನು ಹಂಚಿಕೊಳ್ಳೋಣ, ಸುಖ, ದು:ಖಗಳನ್ನು  ಹಂಚಿಕೊಳ್ಳೋಣ, ಸಾಧ್ಯವಾದರೆ ನಮ್ಮೂರಿಗೆ, ನಮ್ಮೂರಿನ ನಮ್ಮವರಿಗಾಗಿ ಒಳ್ಳೆಯದು ಮಾಡೋಣ.

ಹಾಗಿದ್ದರೆ ಈ ಬಾರಿ ಗಣೇಶೋತ್ಸವ ಸರಳವಾಗಿ ಆಚರಣೆ ಇರುತ್ತದೆ, ನಾವು ಆಚರಣೆ ಮಾಡಿದ ಗಣೇಶ ಹಬ್ಬವನ್ನು ಎಲ್ಲರ ಜೊತೆ ಹಂಚಿಕೊಳ್ಳೋಣ, ಇದು ವೈಭವಕ್ಕಾಗಿ ಅಲ್ಲ, ನಮ್ಮ ಸಂತೋಷಕ್ಕಾಗಿ, ಎಲ್ಲರೊಂದಿಗೆ ನಾವಿದ್ದೇವೆ ಎನ್ನುವುದಕ್ಕೆ. ಹೀಗಾಗಿ ಈ  ನಾವೆಲ್ಲಾ ಸೇರಿ  ಹೀಗೆ ಸಂಭ್ರಮಿಸೋಣ……

ಮನೆಯಲ್ಲಿ ಆಚರಿಸಿದ ಗಣೇಶ ಚೌತಿ, ಸಾರ್ವಜನಿಕವಾಗಿ ಭಾಗವಹಿಸುವ ಗಣೇಶ ಚೌತಿಯ ಬಗ್ಗೆ ಒಂದು ಫೋಟೋ ಹಾಗೂ ಪುಟ್ಟ ಬರಹವನ್ನು‌ ನಮಗೆ ಕಳುಹಿಸಿ.‌ ಇದನ್ನು ಮಿರರ್ ಗ್ರೂಪ್ ನಲ್ಲಿ ನಾವು ಪ್ರಕಟ ಮಾಡುತ್ತೇವೆ, ಎಲ್ಲರೂ ಜೊತೆಯಾಗಿ ಸಂಭ್ರಮಿಸೋಣ. ನಮ್ಮ  ವ್ಯಾಟ್ಸಪ್‌ ಸಂಖ್ಯೆ 9449125447 ಅಥವಾ 8861312447 
ಮಿರರ್‌ ಟೀಂ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

₹2,500 ಕೋಟಿಗೂ ಅಧಿಕ ತೆರಿಗೆ ವಂಚನೆ ಪತ್ತೆ..! ಅಡಿಕೆ ಆಮದು ಜಾಲದ ಹಿಂದೆ ಏನಿತ್ತು?

ದಕ್ಷಿಣ-ಪೂರ್ವ ಏಷ್ಯಾದಿಂದ ಆಮದು ಮಾಡಿದ ಅಡಿಕೆಯನ್ನು ಬಾಂಗ್ಲಾದೇಶ ಮೂಲದ ಅಡಿಕೆಯೆಂದು ತಪ್ಪಾಗಿ ಘೋಷಿಸಿ…

7 hours ago

ಹವಾಮಾನ ವರದಿ | 16-08-2026 | ಕರಾವಳಿ–ಮಲೆನಾಡಿನಲ್ಲಿ ಮಳೆ ಕಡಿಮೆ – ಉತ್ತರ ಒಳನಾಡಿನಲ್ಲಿ 19 ರಿಂದ ಮಳೆ ಹೆಚ್ಚಳ ಸಾಧ್ಯತೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 24ರವರೆಗೂ ಬಿಸಿಲು, ಮೋಡ ಹಾಗೂ ಅಲ್ಲಲ್ಲಿ ಸಾಮಾನ್ಯ…

1 day ago

ಗ್ರಾಮೀಣ ಸಂಪರ್ಕಕ್ಕೆ 15 ಸಾವಿರ ಹೊಸ ಬಸ್‌ಗಳು: ಸಾರಿಗೆ ಸಚಿವ

ಗ್ರಾಮೀಣ ಹಾಗೂ ಸಾರಿಗೆ ಸಂಪರ್ಕದಿಂದ ವಂಚಿತ ಪ್ರದೇಶಗಳಿಗೆ ಸಾರ್ವಜನಿಕ ಸಾರಿಗೆ ಸೇವೆ ಹೆಚ್ಚಿಸುವ…

1 day ago

ಹವಾಮಾನ ವರದಿ | 15-08-2026 | ಕರಾವಳಿಯಲ್ಲಿ ಮುಂದಿನ 10 ದಿನವೂ ಮಳೆ ಚದುರಿಕೆ; ಒಳನಾಡಿನಲ್ಲಿ ಆಗಸ್ಟ್ 18–19ರಿಂದ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಮಳೆ ಚಟುವಟಿಕೆ ಸದ್ಯಕ್ಕೆ ಇಳಿಕೆಯಾಗಿದ್ದು, ಕರಾವಳಿಯಲ್ಲಿ ಮುಂದಿನ 10 ದಿನವೂ ಚದುರಿದ…

2 days ago

ಎತ್ತುಗಳಿಂದ ಡ್ರೋನ್‌ವರೆಗೆ… ಇದು ಭಾರತದ ಕೃಷಿಯ 79 ವರ್ಷಗಳ ಪಯಣ..!

ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…

2 days ago

ತೀವ್ರ ವಿರೋಧದ ಹಿನ್ನೆಲೆ – ರಾಜ್ಯದಲ್ಲಿ ಗುಟ್ಕಾ ನಿಷೇಧ ಹಿಂತೆಗೆದುಕೊಳ್ಳಲು ಸರ್ಕಾರ ನಿರ್ಧಾರ – ಹೊರಬೀಳದ ಅಧಿಕೃತ ಆದೇಶ..!

ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…

2 days ago