ಹಬ್ಬಗಳೆಲ್ಲಾ ಒಂದಾಗಿ, ಒಟ್ಟಾಗಿ ಆಚರಿಸುವ, ಸಂಭ್ರಮಿಸುವ ಕಾಲ. ಪ್ರತೀ ದಿನವೂ ಒಂದಾಗದೇ ಇದ್ದರೂ ಹಬ್ಬದ ಸಮಯದಲ್ಲಿ ಕುಟುಂಬದ ಮಂದಿ, ಊರಿನ ಮಂದಿ ಒಂದಾಗಿ ಸುಖ-ದು:ಖಗಳನ್ನು ಹಂಚಿಕೊಳ್ಳುವ, ಸಾಂತ್ವನ, ನೆಮ್ಮದಿಯನ್ನು ತಂದುಕೊಳ್ಳುವ ದಿನವಾಗಿಯೂ ಇರುತ್ತದೆ. ಹೀಗಾಗಿ ಯಾವುದೇ ಹಬ್ಬ, ಆಚರಣೆ, ನಂಬಿಕೆಗಳು ಮನುಷ್ಯದ ಬದುಕಿಗೆ ಪಾಸಿಟಿವ್ ಸಂದೇಶಗಳನ್ನು ನೀಡುವ, ಬದುಕನ್ನು ಗಟ್ಟಿ ಮಾಡುವ, ಬದುಕಿಗೆ ಧೈರ್ಯ ತುಂಬುವ ದಿನವೂ ಹೌದು.
ಆದರೆ, ಕಳೆದ ಎರಡು ವರ್ಷಗಳಿಂದ ಶ್ರೀಕೃಷ್ಣಜನ್ಮಾಷ್ಟಮಿ, ಶ್ರೀ ಗಣೇಶೋತ್ಸವ ಆಚರಣೆ ಸಾರ್ವಜನಿಕವಾಗಿ ಇಲ್ಲವಾಗಿದೆ. ಕಾರಣ ಕೊರೋನಾ ವೈರಸ್. ಒಂದು ಸಣ್ಣ ವೈರಸ್, ಕಣ್ಣಿಗೆ ಕಾಣದ ಜೀವಿ ಅನೇಕ ಸಂದಿಗ್ಧತೆಯನ್ನು ತಂದಿಟ್ಟಿತು. ಈ ಬಾರಿಯೂ ಗಣೇಶೋತ್ಸವ ಸರಳವಾಗಿ ಆಚರಣೆಯಾಗುತ್ತಿದೆ. ಒಂದು ಕಾಲದಲ್ಲಿ ಗಣೇಶೋತ್ಸವೆಂದರೆ ಸಮಾಜದ ಸಂಘಟನೆ ಎಂದೇ ಆಚರಿಸಲಾಗಿತ್ತಿತ್ತು. ಆದರೆ ಈಗ ಕಾಲದ ಪರಿಸ್ಥಿತಿ ಬದಲಾಯಿಸಿ ಬಿಟ್ಟಿತು. ಆದರೆ ಹಬ್ಬಗಳ ಆಚರಣೆ ನಡೆಯಬೇಕು, ಸರಳವಾಗಿ ಆಚರಿಸಿ ನಾವು ಸಂಭ್ರಮವನ್ನು ಹಂಚಿಕೊಳ್ಳೋಣ, ಸುಖ, ದು:ಖಗಳನ್ನು ಹಂಚಿಕೊಳ್ಳೋಣ, ಸಾಧ್ಯವಾದರೆ ನಮ್ಮೂರಿಗೆ, ನಮ್ಮೂರಿನ ನಮ್ಮವರಿಗಾಗಿ ಒಳ್ಳೆಯದು ಮಾಡೋಣ.ಹಾಗಿದ್ದರೆ ಈ ಬಾರಿ ಗಣೇಶೋತ್ಸವ ಸರಳವಾಗಿ ಆಚರಣೆ ಇರುತ್ತದೆ, ನಾವು ಆಚರಣೆ ಮಾಡಿದ ಗಣೇಶ ಹಬ್ಬವನ್ನು ಎಲ್ಲರ ಜೊತೆ ಹಂಚಿಕೊಳ್ಳೋಣ, ಇದು ವೈಭವಕ್ಕಾಗಿ ಅಲ್ಲ, ನಮ್ಮ ಸಂತೋಷಕ್ಕಾಗಿ, ಎಲ್ಲರೊಂದಿಗೆ ನಾವಿದ್ದೇವೆ ಎನ್ನುವುದಕ್ಕೆ. ಹೀಗಾಗಿ ಈ ನಾವೆಲ್ಲಾ ಸೇರಿ ಹೀಗೆ ಸಂಭ್ರಮಿಸೋಣ……
ಜೂನ್ನಲ್ಲಿ ದಾಖಲಾಗಿದ್ದ ಮಳೆ ಕೊರತೆ ಜುಲೈ ಆರಂಭದ ಭಾರೀ ಮಳೆಯಿಂದ ವೇಗವಾಗಿ ಕಡಿಮೆಯಾಗುತ್ತಿದೆ.…
ಜುಲೈ 9ರಿಂದ 11ರವರೆಗೆ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ…
E20 ಪೆಟ್ರೋಲ್ ಬಳಕೆಯಿಂದ ಸುಮಾರು 3–5% ಮೈಲೇಜ್ ಕುಸಿಯುವ ಸಾಧ್ಯತೆ ಇದೆ. ಆದರೆ…
ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ತೀವ್ರತೆ ಕ್ರಮೇಣ ಕಡಿಮೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಜುಲೈ…
ನೀರಿನ ಕೊರತೆಯಿಂದ ಅಡಿಕೆ ತೋಟದ ಒಂದು ಭಾಗವನ್ನು ಹಲಸು ತೋಟವನ್ನಾಗಿ ಪರಿವರ್ತಿಸಿದ ಪುತ್ತೂರಿನ…