ಒಂದು ಊರಿನಿಂದ ಒಂದು ಊರಿಗೆ ವಲಸೆ ಹೋಗುತ್ತ ಕಟ್ಟಡ ನಿರ್ಮಾಣವನ್ನು ಮಾಡುವ ಕಾರ್ಮಿಕರಿಗೆ ತನ್ನ ಮಕ್ಕಳನ್ನು ಉನ್ನತ ಶಿಕ್ಷಣ ನೀಡಿ ಓದಿಸಬೇಕು ಎನ್ನುವ ಕನಸು ಈಡೇರುತ್ತಿಲ್ಲ. ಈ ಸಮಸ್ಯೆಯನ್ನರಿತ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯು ರಾಜ್ಯದ ನೋಂದಾಯಿತ ಕಾರ್ಮಿಕರ ಮಕ್ಕಳ ಉನ್ನತ ಶಿಕ್ಷಣದ ಕನಸನ್ನು ನೇರವೇರಿಸಲು ಕಲಿಕಾ ಭಾಗ್ಯ ಯೋಜನೆಯಡಿ ಆರ್ಥಿಕ ನೆರವು ಸಹ ನೀಡಲು ಮೂಂದಾಗಿದೆ. ಮಾತ್ರವಲ್ಲ 2025̲_26ನೇ ಸಾಲಿನ ಅರ್ಜಿ ಸಲ್ಲಿಕೆಯ ಪ್ರಕ್ರಯೆ ಪ್ರಾರಂಭವಾಗಿದೆ.
ಈ ಯೋಜನೆಯಡಿಯಲ್ಲಿ ನೋಂದಾಯಿತ ಕಾರ್ಮಿಕರ ಇಬ್ಬರು ಮಕ್ಕಳವರೆಗೆ ಮಾತ್ರ ವಿದ್ಯಾರ್ಥಿವೇತನ ಲಭ್ಯವಿದೆ. ಪ್ರೌಢಶಾಲೆಯಿಂದ ಸ್ನಾತಕೋತ್ತರ ಮತ್ತು ವೃತ್ತಿಪರ ಕೋರ್ಸ್ ಗಳವರೆಗೆ ಗರಿಷ್ಠ 5̧0000 ರೂ. ವರೆಗೆ ಸಹಾಯಧನವನ್ನು ಪಡೆಯಲು ಅವಕಾಶವಿದೆ. ಯೋಜನೆಯ ಶೈಕ್ಷಣಿಕ ಸಹಾಯಧನದ ವಿವರ:
- 12 ಹಾಗೂ 3ನೇ ತರಗತಿ ಉತ್ತೀರ್ಣರಾದ ಮಕ್ಕಳಿಗೆ ವಾರ್ಷಿಕವಾಗಿ ರೂ.̧2000
- 45 ಹಾಗೂ 6 ನೇ ತರಗತಿ ಉತ್ತೀರ್ಣರಾದ ಮಕ್ಕಳಿಗೆ ವಾರ್ಷಿಕವಾಗಿ ರೂ.̧3000
- 7 ಹಾಗೂ 8 ನೇ ತರಗತಿ ಉತ್ತೀರ್ಣರಾದ ಮಕ್ಕಳಿಗೆ ವಾರ್ಷಿಕವಾಗಿ ರೂ ̧4000.
- ದ್ವಿತೀಯ ಪಿ.ಯು.ಸಿ ಉತ್ತೀರ್ಣರಾದವರಿಗೆ ವಾರ್ಷಿಕವಾಗಿ 6,೦೦೦
- ಐಟಿಐ ಮತ್ತು ಡಿಪ್ಲೋಮಾ ಕೋರ್ಸ್ ಗೆಳಿಗೆ ಪ್ರತಿ ವರ್ಷಕ್ಕೆ ರೂ8,೦೦೦
- ಪದವಿ ಕೋರ್ಸ್ಗಳಿಗೆ 10,೦೦೦
- ಸ್ನಾತಕೋತ್ತರ ಪದವಿ ಕೋರ್ಸ್ ಗೆ ರೂ20,೦೦೦
- ಇಂಜಿನಿಯರಿಂಗ್ ಕೋರ್ಸ್ ಗೆ 25,೦೦೦
- ವೈದ್ಯಕೀಯಕೋರ್ಸ್ ಗೆ ರೂ30,೦೦೦
- ಪಿಎಚ್ ಡಿ ಕೋರ್ಸ್ ಗೆ 20,೦೦೦
- ಅರ್ಜಿ ಸಲ್ಲಿಸುವ ವಿಧಾನ: ಅರ್ಜಿಯನ್ನು ಆನ್ ಲೈನ್ ಮೂಲಕ karepass̤cgg̤.gov̤.in ಗೆ ಲಾಗಿನ್ ಮಾಡಿ ಸಲ್ಲಿಸಬಹುದು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement


