ಒಂದೆಡೆ ರಾಜ್ಯದ ರೈತರು, ಸಾರ್ವಜನಿಕರು, ಸಾಮಾಜಿಕ ಹೋರಾಟಗಾರರು, ಜೀವನದಿ ಕಾವೇರಿ ನೀರನ್ನು ಉಳಿಸಿಕೊಳ್ಳಲು ಪ್ರತಿಭಟನೆ, ಬಂದ್ ಮಾಡ್ತಿದ್ರೆ ಅತ್ತ ರಾಜ್ಯ ಸರ್ಕಾರ ಇದಯಾವುದಕ್ಕೂ ಜಗ್ಗದೆ ತಮಿಳುನಾಡಿಗೆ ನೀರು ಬಿಡುತ್ತಲೇ ಇದೆ. ಕಾವೇರಿ ನೀರು ನಿಯಂತ್ರಣ ಸಮಿತಿಯುಅದೇಶವನ್ನು ಚಾಚೂ ತಪ್ಪದೆ ಪಾಲಿಸುತ್ತಿದೆ.
ಕಾವೇರಿ ನೀರು ಹಂಚಿಕೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ಮತ್ತೇ ಅನ್ಯಾಯವಾಗಿದೆ. ಇಂದು ಸಭೆಯೊಂದನ್ನು ನಡೆಸಿದ ಕಾವೇರಿ ನೀರು ನಿಯಂತ್ರಣ ಸಮಿತಿಯು ಮುಂದಿನ 18 ದಿನಗಳ ಕಾಲ ತಮಿಳಿನಾಡುಗೆ ನೀರು ಬಿಡುವಂತೆ ಆದೇಶ ಜಾರಿ ಮಾಡಿದೆ. ದೆಹಲಿಯಲ್ಲಿದು ಸಿಡಬ್ಲ್ಯೂಆರ್ ಸಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತಾಡುವಾಗ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಬಹಳ ಅತಂಕದಲ್ಲಿದ್ದರು. ಇಂದಿನ ಸಭೆಯಲ್ಲಿ ರಾಜ್ಯದ ಪರ ಹಾಜರಿದ್ದ ಅಧಿಕಾರಿಗಳ ನಿಯೋಗದಲ್ಲಿದ್ದ ಮಹೇಶ್, ಕಾವೇರಿ ನೀರು ನಿಯಂತ್ರಣಾ ಸಮಿತಿಯ ಆದೇಶವನ್ನು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಪ್ರಶ್ನಿಸಲಿದ್ದೇವೆ ಎಂದು ಹೇಳಿದರು. ದಿನಾಂಕಗಳನ್ನು ಪ್ರಾಧಿಕಾರವೇ ಶೆಡ್ಯೂಲ್ ಮಾಡೋದ್ರಿಂದ ಅದರ ಮುಂದೆಯೇ ಸಮಸ್ಯೆ ಇಡುತ್ತೇವೆ, ನೀರು ಬಿಡುವುದು ಸಾಧ್ಯವೇ ಇಲ್ಲ ಅಂತ ಹೇಳಿದರೂ ನೀರು ಬಿಡುವಂತೆ ಆದೇಶಿಸಲಾಗಿದೆ ಎಂದು ಮಹೇಶ್ ಹೇಳಿದರು.
ಉತ್ತಮ ಆರೋಗ್ಯಕ್ಕೆ ಸರಿಯಾದ ಆಹಾರ ಮತ್ತು ನಿದ್ರೆ ಎರಡೂ ಅವಿಭಾಜ್ಯ ಎಂದು ಶ್ರೀ…
ಮಳೆ ಮಾಹಿತಿ ಮೂಲಕ ಕೃಷಿಕರಿಗೆ ನೆರವಾಗುತ್ತಿರುವ ಸಾಯಿಶೇಖರ್ ಕರಿಕಳ ಅವರಿಗೆ ರೈತ ರತ್ನ…
ಮಂಗಳೂರಿನಲ್ಲಿ ರಾಷ್ಟ್ರೀಯ ಅಂಡರ್-11 ಚೆಸ್ ಚಾಂಪಿಯನ್ಶಿಪ್ಗೆ ಭವ್ಯ ಚಾಲನೆ ದೊರೆತಿದ್ದು, ದೇಶದ 28…
ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆಯ ತೀವ್ರತೆ ಇಳಿಮುಖವಾಗಲಿದ್ದು, ಆಗಸ್ಟ್ 3ರಿಂದ ತೋಟದ…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳನ್ನು 24…
ಹುಬ್ಬಳ್ಳಿಯಲ್ಲಿ ಆರಂಭವಾದ ಮೂರು ದಿನಗಳ ಹಲಸು ಮೇಳಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.…