MIRROR FOCUS

Positive News | ಮೊಗ್ರದಲ್ಲಿ ನಿರ್ಮಾಣವಾಯಿತು “ಗ್ರಾಮ ಸೇತು ” | ಜನರಿಂದ ಜನರಿಗಾಗಿ ಜನರೇ ನಿರ್ಮಿಸಿದ ಕಾಲುಸಂಕ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಎಂಬ ಪುಟ್ಟ ಹಳ್ಳಿ. ಸುಮಾರು  1300-1500 ಜನಸಂಖ್ಯೆ ಇರುವ ಪ್ರದೇಶ. ಈ ಊರಿನ ವ್ಯಾಪ್ತಿಗೆ ಕಮಿಲ, ಏರಣಗುಡ್ಡೆ, ಮಲ್ಕಜೆ, ಬಳ್ಳಕ್ಕ ಸೇರಿದಂತೆ ಒಂದೆರಡು ಪುಟ್ಟ ಪುಟ್ಟ ಊರು ಬರುತ್ತದೆ. ಊರಿನ ಕೇಂದ್ರ ಮೊಗ್ರ ಎಂಬ ಪ್ರದೇಶ. ಊರಿನ ಮತದಾನ ಕೇಂದ್ರವೂ ಮೊಗ್ರ ಶಾಲೆ. ಆದರೆ ಕಳೆದ ಅನೇಕ ವರ್ಷಗಳಿಂದ ಇಲ್ಲಿಗೆ ಸಂಪರ್ಕದ ವ್ಯವಸ್ಥೆ ಇರಲಿಲ್ಲ. ಇದೀಗ ಜನರಿಂದ ಜನರಿಗಾಗಿ ಜನರೇ “ಗ್ರಾಮ ಸೇತು” ಎಂಬ ಹೆಸರಿನಲ್ಲಿ  ಕಾಲು ಸಂಕ ರಚನೆ ಮಾಡಿದ್ದಾರೆ.
ನಿರ್ಮಾಣಗೊಂಡ ಕಾಲು ಸಂಕ
ಗುತ್ತಿಗಾರು ಗ್ರಾಮದ ಮೊಗ್ರ ಪ್ರದೇಶದಲ್ಲಿ ಮೊಗ್ರ ಸರಕಾರಿ ಶಾಲೆ- ಆರೋಗ್ಯ ಉಪಕೇಂದ್ರ-ಅಂಗನವಾಡಿ- ಮೊಗ್ರ‌‌  ಕನ್ನಡ ದೇವತೆ ಯಾನೆ ಪುರುಷ  ದೈವಸ್ಥಾನ, ಭಜನಾ ಮಂದಿರ ಇದೆ. ಆದರೆ ಈ ಕೇಂದ್ರವನ್ನು  ಸಂಪರ್ಕ ಮಾಡಲು, ಬಹುಪಾಲು ಜನರಿಗೆ ಕಷ್ಟವಾಗುತ್ತದೆ. ಕಾರಣ ಇಲ್ಲಿ ಹರಿಯುವ ಹೊಳೆ. ಇದುವರೆಗೂ ಇಲ್ಲಿಗೆ ಸೇತುವೆ ಆಗಿಲ್ಲ. ಈ ಕಾರಣದಿಂದ ಶಾಲೆಗೆ ಬರುವ ಮಕ್ಕಳಿಗೆ ಹೊಳೆ ದಾಟಲು ಕಷ್ಟವಾಗುತ್ತದೆ. ಮಹಿಳೆಯರಿಗೂ ಹೊಳೆ ದಾಟಲು ಆಗುವುದಿಲ್ಲ. ಇನ್ನು ಮಳೆಗಾಲ ಆರೋಗ್ಯ ಸಂಬಂಧಿ ವಿಷಯಗಳಿಗೂ ಕಷ್ಟವಾಗುತ್ತದೆ. ಹೀಗಾಗಿ ಸೇತುವೆ ರಚನೆಯಾಗಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಇಲ್ಲಿನ ಜನರಿಂದ ಇದೆ. 2006  ರಿಂದಲೂ ವಿವಿಧ ಮಾಧ್ಯಮಗಳ ಮೂಲಕ, ಹಾಗೂ ನೇರವಾಗಿಯೂ ಜನಪ್ರತಿನಿಧಿಗಳಿಗೆ ಇಲ್ಲಿನ  ಜನರು ಮನವಿ ಮಾಡುತ್ತಲೇ ಬಂದಿದ್ದರು. ಆದರೆ ಇದುವರೆಗೂ ಸೇತುವೆ ರಚನೆ ಆಗಿಲ್ಲ  ಜನಪ್ರತಿನಿಧಿಗಳು ಚುನಾವಣೆಯ ಹೊತ್ತಿನಲ್ಲಿ ಭರವಸೆಯನ್ನು ಮಾತ್ರವೇ ನೀಡುತ್ತಾರೆ. ಆದರೆ ಸೇತುವೆ ಕನಸಾಗಿಯೇ ಉಳಿದಿದೆ. ಇದಕ್ಕಾಗಿ ವಿವಿಧ ಮಾಧ್ಯಮಗಳ ಮೂಲಕ ಸರಕಾರವನ್ನೂ ಗಮನ ಸೆಳೆಯಲಾಗಿದೆ. ಹಾಗಿದ್ದರೂ ಸೇತುವೆ ಆಗಲಿಲ್ಲ.
2006 ರಿಂದಲೂ ಶಾಲಾ ವಿದ್ಯಾರ್ಥಿಗಳು ಹೀಗೆ ದಾಟುತ್ತಿದ್ದರು.
ಇದುವರೆಗೂ ಈ ಹೊಳೆ ದಾಟಲು ಗ್ರಾಮ ಪಂಚಾಯತ್‌ ಅಡಿಕೆ ಮರದ ಪಾಲವನ್ನು ಹಾಕುತ್ತಿತ್ತು. ಇದರ ಮೇಲೆ ಶಾಲಾ ಮಕ್ಕಳು ದಾಟಬೇಕಿತ್ತು, ಮಹಿಳೆಯರೂ ದಾಟಬೇಕು. ಊರವರ ಸುರಕ್ಷತೆ ಹಾಗೂ ಮಳೆಗಾಲ ದ್ವಿಚಕ್ರ ಸವಾರರಿಗೆ ಅನುಕೂಲವಾಗುವಂತೆ  ಈ ಬಾರಿ ಸೇತುವೆ, ಅಡಿಕೆ ಮರದ ಪಾಲದ ಬದಲಾಗಿ ಕಬ್ಬಿಣದ  ಕಾಲು ಸಂಕವನ್ನು ಊರವರೇ  ನಿರ್ಮಿಸಿ  ದ್ವಿಚಕ್ರ ವಾಹನ ಸಹಿತ ಊರವರು ಭದ್ರತೆಯಿಂದ ನಡೆದಾಡುವಂತೆ ಮಾಡಲು ಯೋಜನೆ ರೂಪಿಸಿ ,   ತೂಗುಸೇತುವೆಗಳ ಸರದಾರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸುಳ್ಯದ ಗಿರೀಶ್ ಭಾರಧ್ವಾಜ್ ಅವರ ಪುತ್ರ ಪತಂಜಲಿ ಭಾರಧ್ವಾಜ್ ಅವರ ನೇತೃತ್ವದಲ್ಲಿ  ದ್ವಿಚಕ್ರ ವಾಹನ ಓಡಾಡಲು ಸಾಧ್ಯವಾಗುವಂತೆ ಕಬ್ಬಿಣದ ಕಾಲು ಸಂಕ  ರಚನೆ ಮಾಡಲು ಮಾತುಕತೆ ನಡೆಸಿ ಅಂದಾಜುಪಟ್ಟಿ ‌ತಯಾರಿಸಿ  ಕಬ್ಬಿಣದ ಕಾಲು ನಿರ್ಮಿಸಿದ್ದಾರೆ. ಇದಕ್ಕಾಗಿ ಊರ ಜನರು ಶ್ರಮದಾನದ ಮೂಲಕ ನೆರವು ಹಾಗೂ ಧನ ಸಹಾಯ ಮಾಡಿದರೆ, ಪರವೂರಿನ ಅನೇಕದ ದಾನಿಗಳು ನೆರವು ನೀಡಿದ್ದಾರೆ. ಕಂಪನಿಗಳೂ ಸಹಾಯ ಮಾಡಿದ್ದಾರೆ. ಸುಮಾರು 1 ಲಕ್ಷರೂಪಾಯಿ ವೆಚ್ಚದಲ್ಲಿ ಈ ಸೇತುವೆ ನಿರ್ಮಾಣವಾಗಿದೆ. ಸರಕಾರದ ಹಾಗೂ ಸ್ಥಳಿಯ ಯಾವುದೇ ಇಲಾಖೆಗಳಿಂದ ನೆರವು ಪಡೆಯದೇ ಕಾಲು ಸಂಕ ರಚನೆ ಮಾಡಲಾಗಿದೆ.
ಪತಂಜಲಿ ಭಾರಧ್ವಾಜ್‌ ಅವರ ತಂಡ
ಜೂ.5 ರಂದು ಅಂದಾಜುಪಟ್ಟಿ ತಯಾರಿಸಿ ಜೂ.24 ರಂದು ಕಾಮಗಾರಿ ಮುಕ್ತಾಯಗೊಂಡಿಡ್ದು ಅತೀ ವೇಗದಲ್ಲಿ ಈ ಕಾಮಗಾರಿ ಮುಗಿದಿರುವುದು ಪತಂಜಲಿ ಭಾರಧ್ವಾಜ್‌ ಅವರ ಕಾರ್ಯ ತತ್ಪರತೆ ಹಾಗೂ  ಗ್ರಾಮಸ್ಥರ ಕಾಳಜಿ ಮತ್ತು ಸೇತುವೆಯ ಬೇಡಿಕೆಗೆ ಸಾಕ್ಷಿಯಾಗಿದೆ. ಈ ಸೇತುವೆ ಸುಮಾರು 20 ಮೀಟರ್‌ ಉದ್ದವಿದ್ದು ಸುಮಾರು 1.2 ಮೀಟರ್‌ ಅಗಲಿವಿದೆ. ನಡೆದಾಡುವುದು  ಮಾತ್ರವಲ್ಲ ದ್ವಿಚಕ್ರ  ವಾಹನ ಕೂಡಾ ಓಡಾಡಬಹುದಾಗಿದೆ. ಎಲ್ಲಾ ಕೆಲಸಗಳು ಮುಗಿದಿದ್ದು , ಸಣ್ಣ ಪುಟ್ಟ ಕೆಲಸಗಳ ಬಳಿಕ ವಾರದಲ್ಲಿ  ಜನರ ಓಡಾಟ ಹಾಗೂ ದ್ವಿಚಕ್ರ ವಾಹನಗಳ ಓಡಾಟಕ್ಕೆ ಮುಕ್ತವಾಗಲಿದೆ.
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ರೈತರು ಬೆಳೆ ವಿಮೆ ಮಾಡಿಸುವುದರಿಂದ ಅತಿವೃಷ್ಟಿ, ಅನಾವೃಷ್ಟಿ ನಷ್ಟ ಪರಿಹಾರ ಸಿಗಲಿದೆ

ರೈತರು ಬೆಳೆ ವಿಮೆ ಮಾಡಿಸುವುದರಿಂದ ಅತಿವೃಷ್ಟಿ, ಅನಾವೃಷ್ಟಿ ಹಾಗೂ ಇನ್ನೂ ಮುಂತಾದ ಪ್ರಕೃತಿ…

6 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಮಯೂರ.ಕೆ

ಮಯೂರ.ಕೆ, 7ನೇ ತರಗತಿ, ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾಕೇಂದ್ರ ಚೊಕ್ಕಾಡಿ | -…

8 hours ago

ನಾಳೆ ಭಾರತ್ ಬಂದ್ | ಭಾರತ್‌ ಬಂದ್‌ ಏಕೆ..?

ಜುಲೈ 9 ರಂದು ಭಾರತ್ ಬಂದ್‌ಗೆ ಕಾರ್ಮಿಕ ಸಂಘಟನೆಗಳು ಕರೆ ನೀಡಿವೆ. ದೇಶವ್ಯಾಪಿ…

8 hours ago

ಗರ್ಭ ಸಂಸ್ಕಾರ ಎಂದರೇನು..? ಉತ್ತಮ ಸಮಾಜ ನಿರ್ಮಾಣ ಸಾಧ್ಯವೇ….?

ಮಗು ಗರ್ಭದಲ್ಲಿದ್ದಾಗಲೇ ಕೆಲವು ಘಟನೆಗಳಿಗೆ ಪ್ರತಿಕ್ರಿಯಿಸುವ ಬಗ್ಗೆ ಕೆಲವು ವೈಜ್ಞಾನಿಕ ಅಧ್ಯಯನಗಳು ಹೇಳಿವೆ.…

9 hours ago

ಆಧುನಿಕ ಸ್ಪರ್ಶವಿರುವ ಆಕರ್ಷಕ ಅಡುಗೆಮನೆ | ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಂಬಿಕಾ ಶಿಕ್ಷಣ ಸಂಸ್ಥೆಗಳಿಂದ ಹೈಟೆಕ್ ವ್ಯವಸ್ಥೆ

ಶಿಕ್ಷಣ ಸಂಸ್ಥೆಗಳಲ್ಲಿ ಹಾಸ್ಟೆಲ್ ವ್ಯವಸ್ಥೆ ಸರ್ವೇ ಸಾಮಾನ್ಯ. ಹೀಗೆ ಹಾಸ್ಟೆಲ್ ಇದೆ ಅಂದ…

9 hours ago

ಕೃಷಿ ಪ್ರಶಸ್ತಿಗೆ ರೈತರಿಂದ ಅರ್ಜಿ ಆಹ್ವಾನ

ಕೃಷಿ ವಲಯದಲ್ಲಿ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ…

9 hours ago