ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಯಾದಗಿರಿ ಜಿಲ್ಲೆಯಲ್ಲಿ ಮಂಗಳವಾರದವರೆಗೆ ಬಿಸಿಗಾಳಿ ತೀವ್ರಗೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ತಿಳಿಸಿದ್ದಾರೆ.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಮುಖ್ಯ ಮುನ್ನೆಚ್ಚರಿಕೆ ಸೂಚನೆಗಳು:
- ಮಧ್ಯಾಹ್ನ 12ರಿಂದ 4 ಗಂಟೆಯವರೆಗೆ ಅನಗತ್ಯವಾಗಿ ಹೊರಗೆ ಹೋಗಬೇಡಿ
- ಬಾಯಾರಿಕೆ ಇಲ್ಲದಿದ್ದರೂ ಹೆಚ್ಚು ನೀರು ಕುಡಿಯಿರಿ
- ಹಗುರ ಹಾಗೂ ಹತ್ತಿ ಬಟ್ಟೆ ಧರಿಸಿ
- ಟೋಪಿ, ಛತ್ರಿ, ಚಪ್ಪಲಿ, ರಕ್ಷಣಾತ್ಮಕ ಕನ್ನಡಕ ಬಳಸಿರಿ
- ಬಿಸಿಲಿನ ಅವಧಿಯಲ್ಲಿ ಭಾರವಾದ ಕೆಲಸಗಳನ್ನು ತಪ್ಪಿಸಿ
ಆರೋಗ್ಯದ ಕಡೆ ಗಮನ:
- ಮಜ್ಜಿಗೆ, ನಿಂಬೆ ನೀರು ಸೇರಿದಂತೆ ದ್ರವಾಹಾರ ಹೆಚ್ಚಾಗಿ ಸೇವಿಸಿ
- ದೇಹದಲ್ಲಿ ಅಸ್ವಸ್ಥತೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ
- ಪ್ರಯಾಣಿಸುವವರು ನೀರು ಕಡ್ಡಾಯವಾಗಿ ತೆಗೆದುಕೊಂಡು ಹೋಗಿ
ರೈತರು ಮತ್ತು ಕಾರ್ಮಿಕರಿಗೆ ಸೂಚನೆ:
- ಹೊಲದ ಕೆಲಸವನ್ನು ಬೆಳಿಗ್ಗೆ ಅಥವಾ ಸಂಜೆ ಮಾತ್ರ ಮಾಡಿ
- ಬಿಸಿಲಿನ ಸಮಯದಲ್ಲಿ ಕೆಲಸವನ್ನು ತಪ್ಪಿಸಿ
ಜಾನುವಾರುಗಳ ಕಾಳಜಿ:
- ಜಾನುವಾರುಗಳನ್ನು ನೆರಳಿನಲ್ಲಿ ಇಡಿ
- ಸಾಕಷ್ಟು ನೀರು ಒದಗಿಸಿ
- ಮೇವು ಸುಡುವುದನ್ನು ತಪ್ಪಿಸಿ, ಸಂಗ್ರಹಿಸಿ
A heatwave alert has been issued in Yadgiri district with a Yellow Alert in place until Tuesday. Authorities have advised residents to avoid peak afternoon heat, stay hydrated, and take precautions. Farmers are urged to work only during cooler hours, and livestock should be protected with shade and water.

