Advertisement
ಸುದ್ದಿಗಳು

ಹಳ್ಳಿಗಳಲ್ಲೂ ಈಗ ಸದ್ದು ಮಾಡುತ್ತಿದೆ ವೇಗದ ಇಂಟರ್ನೆಟ್‌ | ಪ್ರಧಾನಿಗಳ ಸ್ವಾತಂತ್ರ್ಯ ಭಾಷಣ ಈಡೇರುತ್ತಿದೆ | ಹಳ್ಳಿ ಮನೆಯಿಂದಲೂ ಈಗ ವರ್ಕ್‌ ಫ್ರಂ ಹೋಂ |

Share

ಕಳೆದ ವರ್ಷ ಸ್ವಾತಂತ್ರೋತ್ಸವದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು , ಮುಂದಿನ ದಿನಗಳಲ್ಲಿ  ಪ್ರತೀ ಹಳ್ಳಿಗಳಿಗೂ ವೇಗದ ಇಂಟರ್ನೆಟ್‌ ತಲುಪಲಿದೆ ” ಎಂದಿದ್ದರು. ಇದೀಗ ವರ್ಷದಲ್ಲಿ ಹಳ್ಳಿಗಳಲ್ಲೂ ವೇಗದ ಇಂಟರ್ನೆಟ್‌ ಸದ್ದು ಮಾಡುತ್ತಿದೆ, ತೀರಾ ಕಾಡು ಪ್ರದೇಶದಲ್ಲೀ ಇಂಟರ್ನೆಟ್‌ ಲಭ್ಯವಿದೆ. ಇನ್ನೂ ಇಂಟರ್ನೆಟ್‌ ತಲುಪಬೇಕಾದ ಹಳ್ಳಿಗಳು ಇವೆ. ಅಂತಹ ಹಳ್ಳಿಯ ಕಡೆಗೂ ವೇಗದ ಇಂಟರ್ನೆಟ್‌ ಹರಿಯುವ ಪ್ರಯತ್ನವಂತೂ ನಡೆದಿದೆ.

Advertisement
Advertisement

Advertisement

 

ದೇಶದ ಪ್ರಧಾನಿಗಳು ಸ್ವಾತಂತ್ರ್ಯೋತ್ಸವ ದಿನ ಭಾಷಣದಲ್ಲಿ ಹಳ್ಳಿಗಳಿಗೂ ವೇಗದ ಇಂಟರ್ನೆಟ್‌ ಲಭ್ಯವಾಗಲಿದೆ ಎಂದಿದ್ದೇ ತಡ, ಅನೇಕರು ಇದು ಸಾಧ್ಯವೇ ಎಂದು ಪ್ರಶ್ನೆ ಮಾಡಿದ್ದರು. ಆದರೆ ಇದರ ಬೆನ್ನೆತ್ತಿದ ಗ್ರಾಮೀಣ ಭಾಗದ ಜನರಿಗೆ ಈಗ ವೇಗದ ಇಂಟರ್ನೆಟ್‌ ಲಭ್ಯವಾಗುತ್ತಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ  ಬಿ ಎಸ್‌ ಎನ್‌ ಎಲ್‌ ಮೂಲಕ ವೇಗದ ಇಂಟರ್ನೆಟ್‌ ಲಭ್ಯವಾಗುತ್ತಿದೆ. ಒ ಎಫ್‌ ಸಿ  ಕೇಬಲ್‌ ಮೂಲಕ ಬಿ ಎಸ್‌ ಎನ್‌ ಎಲ್‌ ಈ ಸೇವೆ ನೀಡುತ್ತದೆ. ಆದರೆ ಖಾಸಗಿ ಫ್ರಾಂಚೈಸಿ ಮೂಲಕ  ಸಂಪರ್ಕ ನೀಡುತ್ತದೆ. ಇದಕ್ಕಾಗಿಯೇ ಹಲವಾರು ಪ್ರಾಂಚೈಸಿಗಳು ಈಗ ಕೆಲಸ ಮಾಡುತ್ತಿದ್ದಾರೆ. ಗ್ರಾಮೀಣ ಭಾಗಗಳಲ್ಲೂ ಕೆಲಸ ಮಾಡುತ್ತಿದ್ದಾರೆ. ಬಿ ಎಸ್‌ ಎನ್‌ ಎಲ್‌ ಜೊತೆ ಒಪ್ಪಂದ ಮಾಡಿಕೊಂಡು ಪ್ರಾಂಚೈಸಿಗಳು ಗ್ರಾಮಗಳಲ್ಲಿ ಕೇಬಲ್‌ ಎಳೆದು ಮನೆ ಮನೆಗೆ ಸಂಪರ್ಕ ನೀಡುತ್ತಿದ್ದಾರೆ. ಕಳೆದ ವರ್ಷ ಇದೇ ಸಮಯದಲ್ಲಿ  ಗ್ರಾಮೀಣ ಭಾಗಕ್ಕೂ ವೇಗದ ಇಂಟರ್ನೆಟ್‌ ಲಭ್ಯವಾಗಬೇಕು ಹಾಗೂ ಪ್ರಧಾನಿಗಳ ಭಾಷಣದ ಆಧಾರದಲ್ಲಿ ಬಿ ಎಸ್‌ ಎನ್‌ ಎಲ್‌ ಹಿರಿಯ ಅಧಿಕಾರಿಗಳನ್ನು ಸಂಪರ್ಕ ಮಾಡಿದ ಸುಳ್ಯದ ಯುವಕರ ತಂಡಕ್ಕೆ ಯಶಸ್ಸು ಸಿಕ್ಕಿತ್ತು. ಅದಾದ ಬಳಿಕ ಒ ಎಫ್‌ ಸಿ  ಮೂಲಕ ಮನೆ ಮನೆಗೆ ಇಂಟರ್ನೆಟ್‌ ತಲುಪಿಸಲು ಎಲ್ಲೆಡೆಯೂ ಪ್ರಾಂಚೈಸಿಗಳಿಗೆ ಅವಕಾಶ ನೀಡಲಾಯಿತು. ಹೀಗಾಗಿ ಈಗ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯಗಳಲ್ಲಿ  ಹೆಚ್ಚಿನ ಸಂಪರ್ಕಗಳು ನಡೆಯುತ್ತಿದೆ. ಸುಳ್ಯ ತಾಲೂಕಿನಲ್ಲಿ  ಹಲವು ಮಂದಿ ಬಿ ಎಸ್‌ ಎನ್‌ ಎಲ್‌ ಜೊತೆ ಒಪ್ಪಂದ ಮಾಡಿಕೊಂಡು ಪ್ರಾಂಚೈಸಿ ಮೂಲಕ ಕೇಬಲ್‌ ಎಳೆಯುವ ಕಾರ್ಯ ಮಾಡುತ್ತಿದ್ದಾರೆ.

Advertisement

ಕೊಲ್ಲಮೊಗ್ರ, ಹರಿಹರ ಪಲ್ಲತ್ತಡ್ಕ, ಬಾಳುಗೋಡುನಂತಹ ತೀರಾ ಗ್ರಾಮೀಣ ಭಾಗಗಳಲ್ಲೂ ಈಗ ಬಿ ಎಸ್‌ ಎನ್‌ ಎಲ್‌ ಕೇಬಲ್‌ ಕಾಣುತ್ತಿದೆ. ಮನೆ ಮನೆಗೆ ಇಂಟರ್ನೆಟ್‌ ಸಂಪರ್ಕ ಸಾಧ್ಯವಾಗುತ್ತಿದೆ.

Advertisement

ಇದೀಗ ಎಡಮಂಗಲ ಕಡೆಗೂ ಈಗ ಇಂಟರ್ನೆಟ್‌ ಸಂಪರ್ಕದ ವ್ಯವಸ್ಥೆಯಾಗುತ್ತಿದೆ. ಇಲ್ಲಿನ ಬಹುತೇಕ ಮನೆಗಳಿಗೆ ಇಂಟರ್ನೆಟ್‌ ಸೇವೆ ಲಭ್ಯವಾಗಬೇಕು ಎನ್ನುವುದು  ಉದ್ದೇಶವಾಗಿದೆ, ದೇಶದ ಪ್ರಧಾನಿಗಳ ಕನಸು ಇದಾಗಿದ್ದು ಹಳ್ಳಿಗಳಲ್ಲೂ ವೇಗದ ಇಂಟರ್ನೆಟ್‌ ಇಂದು ಅಗತ್ಯವಾಗಿದೆ ಎಂದು ಹೇಳುತ್ತಾರೆ ಎಡಮಂಗಲ ಬಳಿಯ ಎಣ್ಮೂರಿನ ಶ್ರೀನಂದನ ಕೆ.  ನಿಂತಿಕಲ್ಲಿನಿಂದ ಎಡಮಂಗಲದವರೆಗೆ ಪ್ರಾಂಚೈಸಿ ಮೂಲಕ ಕೇಬಲ್‌ ಎಳೆಯುತ್ತಿದ್ದು ಕೆಲವೇ ದಿನಗಳಲ್ಲಿ  ಇಡೀ ಪ್ರದೇಶದಲ್ಲಿ ಇಂಟರೆ ನೆಟ್‌ ಲಭ್ಯವಾಗಲಿದೆ.

Advertisement

ಶ್ರೀನಂದನ್ ಕೆ ಅವರು ಎಣ್ಮೂರು ಗ್ರಾಮದಲ್ಲಿ ಇಂಟರ್ನೆಟ್ ಸಮಸ್ಯೆಯನ್ನು ಅರಿತು ಬಿ ಎಸ್ ಎನ್ ಎಲ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಫ್ರಾಂಚೈಸಿ ಮೂಲಕ ಗ್ರಾಮದ ಮೂಲೆಮೂಲೆಗೆ ಇಂಟರ್ನೆಟ್ ಬರಬೇಕೆನ್ನುವ ಇಚ್ಛೆಯಲ್ಲಿ ಕೇಬಲ್ ಎಳೆಸುವ ಮುಂದಾಳತ್ವ ಇಲ್ಲಿ ವಹಿಸಿಕೊಂಡಿದ್ದಾರೆ. ಈಗಾಗಲೇ ಕೇರ್ಪಡದಿಂದ ನರ್ಲಡ್ಕ, ಗುಂಡಿಮಜಲು ಹಾಗೂ ಗುತ್ತು ಕಡೆ ಕೇಬಲ್ ಎಳೆಯಲಾಗಿದೆ. ಇನ್ನೊಂದೆರಡು ದಿನದಲ್ಲಿ ಕರೀಂಬಿಲ, ಹೇಮಳ, ಪಡ್ಪಿನಂಗಡಿ ಕಡೆಗೂ ಕೇಬಲ್ ತಲುಪಲಿದೆ.

Advertisement

ಗ್ರಾಮೀಣ ಭಾಗದಲ್ಲಿ ವೇಗದ ಇಂಟರ್ನೆಟ್‌ ಲಭ್ಯವಾದರೆ , ವರ್ಕ್‌ ಫ್ರಂ ಮೂಲಕ ಕೆಲಸ ಮಾಡುವ ಅನೇಕರಿಗೆ ಪ್ರಯೋಜನವಾಗುತ್ತದೆ. ಯುವಕರು ಮನೆಯಲ್ಲಿದ್ದುಕೊಂಡೇ ಉದ್ಯೋಗ ಹಾಗೂ ಕೃಷಿ ಕಡೆಗೂ ಗಮನಹರಿಸುವುದಕ್ಕೆ ಸಾಧ್ಯವಾಗುತ್ತದೆ ಎನ್ನುವುದು ಖಾಸಗಿ ಸಂಸ್ಥೆಯ ಉದ್ಯೋಗಿ ಗಗನ್‌ ಅಭಿಪ್ರಾಯ.

Advertisement

 

 

Advertisement

 

 

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಳೆ ಇಲ್ಲ, ನೀರಿಲ್ಲ, ಬರಗಾಲ ಎಂದು ಬೊಬ್ಬೆ ಹೊಡೆಯದಿರಿ : ಮಳೆ ನೀರನ್ನು ಹಿಡಿದಿಡುವ ಕಾರ್ಯ ಅಗತ್ಯ :

ಬರಗಾಲ(Drought) ಬಂದಾಗ ಬಾಯಿ ಬಡಿಕೊಳ್ಳುವವರೇ ಹೆಚ್ಚು. ನೀರಿಲ್ಲ, ಸೆಕೆ, ಮಳೆ ಇಲ್ಲ, ಬೆಳೆಗಳಿಗೆ…

11 hours ago

ಮಾನವರಾದ ನಮಗೆ ಪರಿಸರ ಎಷ್ಟು ಮುಖ್ಯ..? ಪರಿಸರಿದಿಂದ ನಮಗಾಗುವ ಪ್ರಯೋಜನವೇನು..?

ಪರಿಸರ(Environment) ಸ್ವಾಸ್ಥ್ಯದಿಂದರೇ ಮಾತ್ರ ಅದರ ಭಾಗವಾದ ಮಾನವರಾದ(Human) ನಾವು ಸ್ವಾಸ್ಥ್ಯದಿಂದಿರಬಹುದು. ನಮ್ಮ ಆರೋಗ್ಯಕ್ಕೆ(Health)…

12 hours ago

ಸಮುದ್ರದ ಉಪ್ಪು, ಅಯೋಡಿಕರಿಸಿದ ಟೇಬಲ್ ಉಪ್ಪು, ಸೈಂಧವ ಉಪ್ಪು, ಕಪ್ಪು ಉಪ್ಪು : ಯಾವ ಉಪ್ಪು ಆರೋಗ್ಯಕ್ಕೆ ಒಳ್ಳೆಯದು?

ಭಾರತೀಯ(Indian) ಆಹಾರ ಪದ್ಧತಿಯಲ್ಲಿ(Food Style).... ಸಮುದ್ರದ ಉಪ್ಪು(Sea salt), ಅಯೋಡಿಕರಿಸಿದ ಟೇಬಲ್ ಉಪ್ಪು(Iodized…

12 hours ago

ಕೆಲ ಜಿಲ್ಲೆಯ ರೈತರಿಗೆ ಬರ ಪರಿಹಾರ ಹಣ ಬಿಡುಗಡೆ : ಬಳ್ಳಾರಿಯ 36,944 ರೈತರ ಖಾತೆಗೆ 41.40 ಕೋಟಿ ರೂ. ಜಮೆ

ಪ್ರಕೃತಿ ವಿಕೋಪಕ್ಕೆ(Natural disaster) ರೈತ(Farmer) ಬೆಳೆದ ಬೆಳೆಗಳು(Crop) ನಾಶವಾಗುವುದು ಸಾಮಾನ್ಯ. ಮಳೆ(Rain) ಜಾಸ್ತಿಯಾಗಿ…

12 hours ago

ವರುಣ ಕೃಪೆ ತೋರದಿದ್ರೆ ಭಾರಿ ಸಂಕಷ್ಟ : ಡೆಡ್ ಸ್ಟೋರೇಜ್ ತಲುಪಿದ ತುಂಗಭದ್ರಾ ಜಲಾಶಯ!

ಬರಗಾಲದಿಂದ(Drought) ತತ್ತರಿಸಿದ್ದ ರಾಜ್ಯದ ಜನತೆಗೆ ಕೆಲವೆಡೆ ವರುಣರಾಯ(Rain) ಕೃಪೆ ತೋರಿ ತಕ್ಕಮಟ್ಟಿಗೆ ತಂಪೆರೆದಿದ್ದಾನೆ.…

15 hours ago

Karnataka Weather | 19-05-2024 | ಇಂದೂ ಮಳೆ ಇದೆ ಅಲ್ಲಲ್ಲಿ | ಮೇ.22 ನಂತರ ಚಂಡಮಾರುತ ಸಾಧ್ಯತೆ |

ಮೇ 22ರ ನಂತರ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು, ಚಂಡಮಾರುತವಾಗಿ ಪರಿವರ್ತನೆಗೊಳ್ಳವ…

17 hours ago