ಹಲಸಿನ ಮೌಲ್ಯವರ್ಧನೆ ವಿವಿಧ ಮಾದರಿಯಲ್ಲಿ ನಡೆಯುತ್ತಿದೆ. ಅದರಲ್ಲಿ ಹಲಸಿನ ಬೀಜಗಳಿಂದ ಮಾಡಿದ ಆರೋಗ್ಯ ಪಾನೀಯ ಜಾಫಿ. ಮಾರುಕಟ್ಟೆಗೆ ಬಂದಿರುವ ಹಲವು ಉತ್ಪನ್ನಗಳ ಪೈಕಿ ಜಾಫಿ ಹೆಚ್ಚು ಜನಪ್ರಿಯವಾಗಿತ್ತು. ಇದರ ತಯಾರಕ ಶಿವಣ್ಣ. ಇಂತಹ ಆಸಕ್ತ, ಅಧ್ಯಯನಶೀಲ ಹಾಗೂ ಹಲಸು ಮೌಲ್ಯವರ್ಧನೆಯ ರುವಾರಿ ಶಿವಣ್ಣ ಇನ್ನಿಲ್ಲ.
ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದ ಪರಿವರ್ತನಾ ಎಂಬ ಸ್ವಯಂಸೇವಾ ಸಂಸ್ಥೆಯ ಶಿವಣ್ಣ ಅವರು ತಯಾರಿಸಿದ “ಆರೋಗ್ಯ ಪಾನೀಯ” ಜಾಫಿ ಹೆಚ್ಚು ಜನಪ್ರಿಯವಾಗಿತ್ತು. ಈ ಜಾಫಿಯನ್ನು ಸವಿಯಲೇಬೇಕು ಎಂಬ ಟ್ಯಾಗ್ ಲೈನ್ ಕಳೆದ ಕೆಲವು ಸಮಯಗಳ ಹಿಂದೆ ಇತ್ತು. ಮಾರುಕಟ್ಟೆಗೆ ಬಂದಿರುವ ನವೀನ ಹಲಸಿನ ಉತ್ಪನ್ನಗಳ ಶ್ರೇಣಿಯಲ್ಲಿ ಜಾಫಿ ಗಮನ ಸೆಳೆದಿತ್ತು. “ಜಾಫಿ” ಶಿವಣ್ಣ ಎಂದೇ ಪರಿಚಿತವಾದ ಶಿವಣ್ಣ ಅವರು ಹಲಸಿನ ಉತ್ಪನ್ನಗಳ ರುವಾರಿ ಎಂದರೂ ತಪ್ಪಾಗಲಾರದು. ವಿವಿಧ ಹಲಸು ಉತ್ಪನ್ನಗಳ ಮೂಲಕ ಗಮನ ಸೆಳೆದವರು. ಹಲಸಿನ ಕಾಯಿ, ಹಣ್ಣುಗಳ ಮೌಲ್ಯ ವರ್ಧನೆ ಕುರಿತು ಚಿಂತಿಸುತ್ತಾ ಪ್ರಯತ್ನ ಮಾಡುತ್ತಿದ್ದ ಸಹೃದಯಿ ಕೃಷಿಕರಾಗಿದ್ದರು.
ಜೋಯಿಡಾದಲ್ಲಿ ನಡೆದ ಹಲಸು ಉತ್ಸವದಲ್ಲಿ 50ಕ್ಕೂ ಹೆಚ್ಚು ಮೌಲ್ಯವರ್ಧಿತ ಹಲಸಿನ ಉತ್ಪನ್ನಗಳು ಪ್ರದರ್ಶನಗೊಂಡು…
ಕ್ಯಾಂಪ್ಕೋ ಸಂಸ್ಥಾಪಕ ವಾರಣಾಶಿ ಸುಬ್ರಾಯ ಭಟ್ ಅವರ ಜನ್ಮಕ್ಕೆ 99 ವರ್ಷಗಳು ಪೂರ್ಣಗೊಂಡಿದ್ದು,…
ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದರೂ ಅದರ ಬಲ ಇನ್ನೂ ದುರ್ಬಲವಾಗಿದೆ. ಕರಾವಳಿಯಲ್ಲಿ ಜೂನ್ 8ರಿಂದ…
ನಾರ್ವೆ ಚೆಸ್ 2026 ಟೂರ್ನಿಯನ್ನು ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಇತಿಹಾಸವನ್ನು…
ಆಸ್ಟ್ರೇಲಿಯಾದಲ್ಲಿ ವರೋವಾ ಮೈಟ್ ಹಾವಳಿಯಿಂದ ಜೇನುನೊಣಗಳ ಸಂಖ್ಯೆ ತೀವ್ರವಾಗಿ ಕುಸಿಯುತ್ತಿದ್ದು, ಆಹಾರ ಬೆಳೆಗಳ…
ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಜೂನ್ 6ರಂದು ಕಾಸರಗೋಡು ಜಿಲ್ಲೆಯ ಎಲ್ಲಾ ಶಿಕ್ಷಣ…