The Rural Mirror ಕಾಳಜಿ

ಆ ಪ್ರಾಮಾಣಿಕತೆಗೆ ಬೆಲೆ ಕಟ್ಟಲಾಗದು….!

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಇದೊಂದು ಅಭಿಪ್ರಾಯವನ್ನು ರೂರಲ್‌ ಮಿರರ್‌ ಪ್ರಕಟಿಸಲು ಆಸಕ್ತಿ ವಹಿಸಿದೆ. ಶ್ರದ್ಧೆ ಹಾಗೂ ಆ ಪ್ರಾಮಾಣಿಕತೆ ಇಡೀ ಸಮುದಾಯಕ್ಕೆ ಮಾದರಿಯಾಗಿದೆ ಕೂಡಾ.  ಬಾಳಿಲದ ವೈದ್ಯರ ಪತ್ನಿ ಬರೆದಿರುವ ಈ ಅಭಿಪ್ರಾಯ ಹೀಗಿದೆ……

Advertisement
Advertisement

ನಮ್ಮ ಬಾಳಿಲದ ಪಕ್ಕದ ಐವರ್ನಾಡಿನಲ್ಲಿ ಒಂದು ಪುಟ್ಟ ಕುಟುಂಬ.ಅಪ್ಪ,ಅಮ್ಮ,ಮಗಳು.  ಮಗಳು ಪೋಲಿಯೋ ಪೀಡಿತೆ  .ಕಾರಣಾಂತರಗಳಿಂದ ಆ ಕುಟುಂಬ ಪುತ್ತೂರಿನ ಪುರುಷರಕಟ್ಟೆಗೆ ಹೋಗಿ ನೆಲೆಸುತ್ತದೆ.

ಹಿಂದಿನಿಂದಲೂ ಬಾಳಿಲದ ಡಾಕ್ಟರ್ ಬಳಿಗೆ ಔಷಧಕ್ಕೆ ಬರುತ್ತಿದ್ದವರು ಊರು ಬದಲಾದರೂ ವೈದ್ಯರನ್ನು ಬದಲಿಸಿಲ್ಲ. ಈ ಮಧ್ಯೆ ಅಮ್ಮ ಕಿಡ್ನಿ ಸಮಸ್ಯೆಯಿಂದ ವಾರಕ್ಕೆರಡು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿರುತ್ತಾರೆ.ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಡುತ್ತಾರೆ. 

ಬಾಳಿಲದ ವೈದ್ಯರು ವಿಧಿವಶರಾದಾಗ ಕ್ಲಿನಿಕ್ ಗೆ ಬೇರೆ ವೈದ್ಯರು ಬರುತ್ತಾರಾ ಅಂತ ವಿಚಾರಿಸಿಕೊಳ್ತಾರೆ. ನಿರಾಶರಾಗ್ತಾರೆ. ಆಗ ಅವರು ಹೇಳುತ್ತಾರೆ, ನಾವು ಸ್ವಲ್ಪ ದುಡ್ಡು ಕೊಡಲು ಇದೆ ಡಾಕ್ಟರ್ ಗೆ, ಕೊಡ್ತೇವೆ ಅಂತ ಹೇಳಿದ್ದರು.

ಆ 6 ತಿಂಗಳ ಬಳಿಕ ಮೊನ್ನೆ ಕರೆ ಮಾಡಿ ತಿಳಿಸಿದರು. ನಾಳೆ ಬಂದು ದುಡ್ಡು ಕೊಡ್ತೇವೆ ಅಂತ. ತೊಂದರೆ ಇಲ್ಲಮ್ಮ , ನೀವು ಕೊಡ್ಬೇಕಾಗಿಲ್ಲ ಅಂತ ಹೇಳಿದ್ದಕ್ಕೆ. ಇಲ್ಲ, ಕೊಡುತ್ತೇವೆ ತಕೊಳ್ಬೇಕು ಅಂತ ಉತ್ತರ ನೀಡಿದ್ದರು.

Advertisement

ಮರುದಿನ ಆ ಹುಡುಗಿಯ ತಂದೆ ಬಂದು,  ಪಶ್ಚಾತ್ತಾಪದಿಂದ “ಆಜಿ ತಿಂಗಳಾಂಡ್ ಎಂದು ಹೇಳುತ್ತಾ 300 ರೂಪಾಯಿ ಕೊಟ್ಟಾಗ,  ಒಂದು ಮಾತೂ ಬಾರದ ಸ್ಥಿತಿಯಲ್ಲಿ ಧಾರಾಕಾರ ಕಣ್ಣೀರು ಸುರಿಸಬೇಕಾಯಿತು.

ನಿಜವಾಗಿಯೂ ಡಾಕ್ಟರ್ ಗೆ ಸಲ್ಲ ಬೇಕಾದ ಹಣ ಎಷ್ಟಿದೆಯೋ. ಸಲ್ಲಿಸಬೇಕಾದವರು ಎಷ್ಟು ಜನರಿದ್ದಾರೋ ತಿಳಿಯದು….? ಆದರೆ ತಾವಾಗಿ ಹೇಳಿ ತಂದು ಕೊಟ್ಟ ಆ 300  ರೂಪಾಯಿ ಮೌಲ್ಯಕ್ಕಿಂತಲೂ ಪ್ರಾಮಾಣಿಕತೆಗೆ ಬೆಲೆ ಕಟ್ಟಲಾಗದು. 

ಇಂತಹ ಪ್ರಾಮಾಣಿಕತೆಗೆ  ಮನಸಾರೆ ವಂದಿಸುತ್ತಾ ಪ್ರಾರ್ಥಿಸುತ್ತಿದ್ದೇನೆ, ಈ ಕುಟುಂಬ ನೆಮ್ಮದಿಯ ಸುಖ ಸಂತೋಷದ ಬದುಕು ಕಂಡು ಕೊಳ್ಳುವಂತಾಗಲಿ.

# ಚಿಕಿತ್ಸಾ ಬಾಳಿಲ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕರಾವಳಿ ಹಾಗೂ ರಾಜ್ಯದ ಹಲವೆಡೆ ಧಾರಾಕಾರ ಮಳೆ |

ಕರಾವಳಿ ಹಾಗೂ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ.ಉತ್ತರಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ ಹಾಗೂ…

43 minutes ago

ಈ ರಾಶಿಯವರ ಜಾತಕದಲ್ಲಿ ಗುರು ಬಲ | ಗಜಕೇಸರಿ ಯೋಗದಿಂದ ಸಕಲೈಶ್ವರ್ಯ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

1 hour ago

ಅಹಮದಾಬಾದ್​ನಲ್ಲಿ 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಪತನ

ಟೇಕ್ ಆಫ್ ಆಗುತ್ತಿದ್ದ ಏರ್ ಇಂಡಿಯಾ ವಿಮಾನ ಪತನವಾಗಿರುವ  ಘಟನೆ ಗುಜರಾತಿನ ಅಹಮದಾಬಾದ್​​ನಲ್ಲಿ…

17 hours ago

ಹವಾಮಾನ ವರದಿ | 12-06-2025 | ಮುಂದೂಡಿದ ಭಾರೀ ಮಳೆ..! | ಜೂ.13 ರಿಂದ ಮುಂದುವರಿಯುವ ಮಳೆ |

ಜೂನ್ 13ರಿಂದ ಗಾಳಿಯ ಚಲನೆಯು ನೈರುತ್ಯದಿಂದ ಈಶಾನ್ಯಕ್ಕೆ ಬದಲಾಗುವ ಸಾಧ್ಯತೆಗಳಿರುವುದರಿಂದ ರಾಜ್ಯದ ವಿವಿದೆಡೆ…

18 hours ago

ತೆಂಗಿನ ಗೆರಟೆ ಮೌಲ್ಯವರ್ಧನೆ | ಇದು ಬರೀ “ಚಿಪ್ಪಿ”ಯಲ್ಲ ಇದರೊಳಗಿದೆ ಹಲವು ಬಗೆ..!

ತೆಂಗಿನ ಗೆರಟೆಯು ಮೌಲ್ಯವರ್ಧನೆಯಾದಾಗ ತೆಂಗಿನ ಒಟ್ಟಾರೆ ಆದಾಯವೂ ಹೆಚ್ಚಾಗಲು ಸಾಧ್ಯವಿದೆ. ಸದ್ಯ ಸಣ್ಣ…

21 hours ago

ಮಳೆ ಹಿನ್ನೆಲೆ | ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಶಾಲೆಗಳಿಗೆ ರಜೆ

ಮುಂದಿನ ಎರಡು ದಿನಗಳ ಕಾಲ ಕರಾವಳಿ ಜಿಲ್ಲೆಯಲ್ಲಿ ಮಳೆಯ ತೀವ್ರತೆ ಹೆಚ್ಚಿರಲಿದೆ. ಹೀಗಾಗಿ…

1 day ago