Advertisement
MIRROR FOCUS

ನೀರು, ಭೂಮಿ ಮತ್ತು ಮಂಜುಗಡ್ಡೆಯ ಮೇಲೆ ಚಲಿಸುತ್ತೆ ಹೋವರ್‌ಕ್ರಾಫ್ಟ್ ಬೋಟ್ | ತಮಿಳುನಾಡಿನಲ್ಲಿ ನಡೆಯಿತು ಯಶಸ್ವಿ ಪ್ರಯೋಗ | ಪ್ರಕೃತಿ ವಿಕೋಪ ಸಮಯದಲ್ಲಿಇದರ ಪಾತ್ರವೇನು..?

Share

ಪ್ರಕೃತಿಯ(Environment) ತಾರತಮ್ಯಕ್ಕೆ ಅನುಗುಣವಾಗಿ ಕೆಲವೊಂದು ಆವಿಷ್ಕಾರಗಳು(Invention) ಅತ್ಯಗತ್ಯ. ಪ್ರಕೃತಿ ವಿಕೋಪ(Environment disaster), ಜಲ ಪ್ರಳಯ, ಹಿಮಪಾತ(Snow fall) ಸಮಯದಲ್ಲಿ ಜನರನ್ನು ಕಾಪಾಡಲು ರಕ್ಷಣಾ ತಂಡಗಳು(Rescue team) ಇನ್ನಿಲ್ಲದ ಪ್ರಯಾಸವನ್ನು ಪಡುತ್ತವೆ. ಅವರಿಗೆ ಅನುಕೂಲವಾಗುವ ಕೆಲವು ಸಾಧನಗಳನ್ನು ಒದಗಿಸದಿದ್ದಲ್ಲಿ ಜನರನ್ನು ರಕ್ಷಿಸುವ ಕೆಲಸ ಬೇಗ ಹಾಗೂ ಸುರಕ್ಷಿತವಾಗಿ ನಡೆಯದು.

Advertisement
Advertisement

ಇದೀಗ ಈ ಮಟ್ಟಿನಲ್ಲಿ ಹೊಸ ಆವಿಷ್ಕಾರವೊಂದನ್ನು ಮಾಡಲಾಗಿದೆ. ನೀರು, ಭೂಮಿ, ಹಿಮದ ಮೇಲೆ ಚಲಿಸುವ ದೇಶದ ಮೊದಲ ಹೋವರ್‌ಕ್ರಾಫ್ಟ್ ಬೋಟ್(Hovercraft boat) ಜನ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ. ಯುರೋಟೆಕ್ ಪಿವೋಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ರೂಪಿಸಿರುವ ಈ ಬೋಟ್ ಅನ್ನು ತಮಿಳುನಾಡಿನ(Tamilnadu) ಕೆರೆಯೊಂದರಲ್ಲಿ(Lake) ಪರೀಕ್ಷೆ(test) ನಡೆಸಲಾಯಿತು. ಇದು ಗಂಟೆಗೆ 20 ರಿಂದ 25 ಕಿಮೀ ವೇಗದಲ್ಲಿ ಸಂಚಾರ ನಡೆಸಿದೆ.

Advertisement

ನೀರು ಮತ್ತು ಭೂಮಿಯ ಮೇಲೆ ಕಾರ್ಯಾಚರಣೆ ನಡೆಸಲು ಉದ್ದೇಶಿಸಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಹೋವರ್‌ಕ್ರಾಫ್ಟ್ `ಬೋಟ್ ಅನ್ನು ನಿರ್ಮಿಸಲಾಗಿದೆ. ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡದ ನೇತೃತ್ವದಲ್ಲಿ ಸೂಲೂರು ಎಂಬಲ್ಲಿನ ಚಿಕ್ಕ ಕೆರೆಯಲ್ಲಿ ಪ್ರಾಯೋಗಿಕ ಓಡಾಟ ನಡೆಸಲಾಯಿತು. ಹೋವರ್‌ಕ್ರಾಫ್ಟ್ ನೀರಿನ ಮೇಲೆ ನುಗ್ಗುತ್ತಿರುವುದನ್ನು ಜನರು ಅಸಕ್ತಿಯಿಂದ ವೀಕ್ಷಿಸಿದರು.

ಪ್ರವಾಹದ ವೇಳೆಯೂ ಬಳಕೆ: ಯೂರೋಟೆಕ್ ಸಲ್ಯೂಷನ್ಸ್‌ನ ವ್ಯವಸ್ಥಾಪಕ ನಿರ್ದೇಶಕಿ ಸುಪ್ರಿತಾ ಚಂದ್ರಶೇಖ‌ರ್ ಮಾತನಾಡಿ, ದೇಶದಲ್ಲಿಯೇ ಪ್ರಥಮ ಬಾರಿಗೆ ನೀರು ಮತ್ತು ಭೂಮಿಯಲ್ಲಿ ಕಾರ್ಯಾಚರಣೆ ನಡೆಸುವ ಹೋವರ್‌ಕ್ರಾಫ್ಟ್ ಬೋಟ್ ತಯಾರಿಸಿರುವುದು ಸಂತಸ ತಂದಿದೆ. ಸದ್ಯ ಪ್ರಾಯೋಗಿಕವಾಗಿ ನಡೆದ ಪರೀಕ್ಷೆ ಯಶಸ್ವಿಯಾಗಿದೆ. ಗಂಟೆಗೆ 20 ರಿಂದ 25 ಕಿಮೀ ವೇಗದಲ್ಲಿ ಬೋಟ್ ಚಲಿಸಿದೆ. ಇದಕ್ಕೆ ನೀರು, ಭೂಮಿ ಮತ್ತು ಹಿಮಭರಿತ ಪ್ರದೇಶಗಳಲ್ಲಿ ಗಂಟೆಗೆ 80 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಗಂಟೆಗೆ 100 ಕಿಮೀ ವೇಗದಲ್ಲಿ ಪ್ರಯಾಣಿಸುವ ಕ್ರಾಫ್ಟ್ ಬೋಟ್ ಅನ್ನು ಮುಂದೆ ವಿನ್ಯಾಸಗೊಳಿಸಲಾಗುತ್ತದೆ ಎಂದು ತಿಳಿಸಿದರು.

Advertisement

ಕೆನಡಾದ ಖಾಸಗಿ ಕಂಪನಿಯ ಸಹಯೋಗದಲ್ಲಿ ಸಿದ್ಧಪಡಿಸಲಾದ ಈ ರೋವರ್ ಕ್ರಾಫ್ಟ್ ಅನ್ನು ಚಂಡಮಾರುತ, ಪ್ರವಾಹ ಸೇರಿದಂತೆ ಪ್ರಕೃತಿ ವಿಕೋಪಕ್ಕೊಳಗಾದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗೆ ಬಳಸಬಹುದಾಗಿದೆ. ಜೊತೆಗೆ ಕರಾವಳಿ ಗಡಿ ರಕ್ಷಣೆ, ನೌಕಾಪಡೆಯ ಕಣ್ಣಾವಲು ಮತ್ತು ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ಅಗತ್ಯಗಳಿಗಾಗಿಯೂ ಬಳಸಬಹುದು. ಪ್ರತಿ ಗಂಟೆಗೆ ಸುಮಾರು 20 ರಿಂದ 25 ಲೀಟರ್ ಇಂಧನ ಇದಕ್ಕೆ ಖರ್ಚಾಗುತ್ತದೆ ಎಂದು ಮಾಹಿತಿ ನೀಡಿದರು.

ಸಾಮಾನ್ಯ ಹಡಗು ಮತ್ತು ಕ್ರಾಫ್ಟ್ ನಡುವಿನ ವ್ಯತ್ಯಾಸವೇನು?: ಸಾಮಾನ್ಯ ಹಡಗಿನ ಕೆಳಭಾಗ ನೀರಿನ ಮೇಲೆ ಮಾತ್ರ ಚಲಿಸುವಂತೆ ರೂಪಿಸಲಾಗಿರುತ್ತದೆ. ಆದರೆ, ಹೋವರ್‌ಕ್ರಾಫ್ಟ್‌ಗಳು ಹಲ್ (ಹಡಗು ಮುಂದೆ ಸಾಗುವ ಯಂತ್ರಗಳನ್ನು ಹೊಂದಿದ್ದು, ಅವುಗಳು ನೀರಿನ ಮೇಲೆ ದೋಣಿ ತೇಲುವಂತೆ ಮಾಡುತ್ತದೆ. ಜೊತೆಗೆ ನೀರನ್ನು ಸೀಳಿಕೊಂಡು ಹಡಗನ್ನು ಸಾಗಿಸುತ್ತದೆ. ಲಂಬವಾದ ಫ್ಯಾನ್‌ಗಳೊಂದಿಗೆ ಬೀಸಿದ ಗಾಳಿಯು ಹೋವರ್‌ಕ್ರಾಫ್ಟ್ ತೇಲುವಂತೆ ಮಾಡುತ್ತದೆ. ಏರ್ ಕುಶನ್ ಅನ್ನು ಸಾಮಾನ್ಯವಾಗಿ ಬಟ್ಟೆಯಿಂದ ತಯಾರಿಸಲಾಗಿರುತ್ತದೆ. ಇದು ಸಲೀಸಾಗಿ ನೀರು, ಭೂಮಿ ಮತ್ತು ಮಂಜುಗಡ್ಡೆಯಲ್ಲಿ ಕ್ರಾಫ್ಟ್ ಮುಂದೆ ಸಾಗಲು ಸಹಾಯ ಮಾಡುತ್ತದೆ ಹೋವ‌ರ್ ಕ್ರಾಫ್ಟ್ ಅನ್ನು ಸಾಮಾನ್ಯ ದೋಣಿಗಳಿಗಿಂತ ಹೆಚ್ಚು ವೇಗದಲ್ಲಿ” ಭೂಮಿ ಮೇಲೆ ಚಲಿಸುವ ಹಾಗೆ ಶಕ್ತಗೊಳಿಸಲಾಗಿರುತ್ತದೆ.

Advertisement
This hovercraft ``boat'' has been built at a cost of Rs 50 lakh to operate on water and land. A trial run was conducted in a small lake called Suluru under the leadership of fire brigade and rescue team. People watched disinterestedly as the hovercraft skimmed over the water.

– ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

Karnataka Weather | 18-05-2024 | ರಾಜ್ಯದ ಹಲವು ಕಡೆ ಮಳೆ | ವಾಯುಭಾರ ಕುಸಿತದ ಲಕ್ಷಣ | ವಾಯುಭಾರ ಕುಸಿತದ ಪ್ರಭಲತೆಯ ಮೇಲೆ ಮುಂಗಾರು ಪರಿಣಾಮ |

ಈಗಿನಂತೆ ಮೇ 22ರ ಅಂದಾಜು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗುವ ಲಕ್ಷಣಗಳಿವೆ.

12 hours ago

ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಭೆ ಮತ್ತು ಕೌಶಲ್ಯಕ್ಕೆ ಬಹುಬೇಡಿಕೆ: ಸಚಿವ ಎಸ್. ಜೈಶಂಕರ್

''ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳು ಇದೀಗ ಭಾರತದೊಂದಿಗೆ(India) ಚಲನಶೀಲತೆ ಒಪ್ಪಂದಗಳನ್ನು(Mobility Agreement) ಮಾಡಿಕೊಳ್ಳಲು…

12 hours ago

ರಾಜ್ಯದ ಹಲವೆಡೆ ಮಳೆ | ತಂಪಾದ ಬರದ ನೆಲ | ಸಿಡಿಲು ಬಡಿದು ಬಾಲಕಿ ಸಾವು

ಬರದಿಂದ(Drought) ತತ್ತರಿಸಿದ್ದ ರಾಜ್ಯದ ಜನತೆಗೆ ವರುಣ(Rain) ತಂಪೆರೆದಿದ್ದಾನೆ. ರೈತರ(Farmer) ಮೊಗದಲ್ಲಿ ಮಂದಹಾಸ ಮೂಡಿದೆ.…

12 hours ago

ಸತ್ಯ……..ಸತ್ಯದ ಹುಡುಕಾಟ ನಿಮ್ಮ ಆದ್ಯತೆಯಾಗಿರಲಿ……..

ಏನೇ ಆಗಲಿ ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ...... ಸತ್ಯದಲ್ಲಿಯೂ ಹಲವಾರು ಆಯಾಮಗಳಿವೆ.

12 hours ago

ಉದ್ಯಮಿ ಮುಕೇಶ್ ​ಅಂಬಾನಿಯ ಪ್ರತಿ ಗಂಟೆಯ ಗಳಿಕೆ ಎಷ್ಟು..? | ಅಂಬಾನಿ ಸಂಭಾವನೆ ಎಷ್ಟು ಗೊತ್ತಾ?

 ಮುಕೇಶ್ ಅಂಬಾನಿ(Mukesh Ambani), ರಿಲಯನ್ಸ್‌ ಇಂಡಸ್ಟ್ರೀಸ್‌(Reliance Industries) ಮುಖ್ಯಸ್ಥ, ನಮ್ಮ ದೇಶ ಮತ್ತು…

12 hours ago

ಕೃಷಿಯಲ್ಲಿ ಯುವ ರೈತನ ಸಾಧನೆ | 200 ರೂ. ಗೆ 1 ಕೆ.ಜಿ ಬೀನ್ಸ್ ಮಾರಾಟ ಮಾಡಿ 20 ಲಕ್ಷ ಬಂಪರ್‌ ಲಾಭ |

ರಾಜ್ಯದಲ್ಲಿ ಬರಗಾಲ(Drought) ತಾಂಡವವಾಡುತ್ತಿದೆ. ಕೆಲವೆಡೆ ಕಳೆದ ದಿನಗಳಿಂದ ಮಳೆಯಾಗುತ್ತಿದೆ(Rain). ಉತ್ತರ ಕರ್ನಾಟಕ ಹಾಗೂ…

13 hours ago