Advertisement
MIRROR FOCUS

ಮಳೆ ಕೊರತೆ ಎಷ್ಟಿದೆ… ? | ದಾಖಲೆಗಳ ಪ್ರಕಾರ ಅತೀ ಕನಿಷ್ಟ ಮಳೆ ಈ ವರ್ಷ… |

Share

ಈ ಬಾರಿ ಮಳೆಯ ಕೊರತೆ ಬಗ್ಗೆ ಚರ್ಚೆಯಾಗುತ್ತಿದೆ. ಕೃಷಿ ಏನಾದೀತು..?, ಗ್ರಾಮೀಣ ಜನರ ಬದುಕು ಏನಾದೀತು, ನಗರ ಕಡೆ ನೀರು ಇದ್ದೀತೇ…?, ಇನ್ನಾದರೂ ಮಳೆಯಾದೀತೇ ಎಂಬ ಚರ್ಚೆ, ಪ್ರಶ್ನೆ ಎಲ್ಲೆಡೆ ಇದೆ. ದಾಖಲೆಗಳ ಪ್ರಕಾರ ಅತೀ ಕನಿಷ್ಟ ಮಳೆಯ ಲೆಕ್ಕ ಕಾಣುತ್ತಿದೆ. ಮಳೆ ಲೆಕ್ಕಗಳನ್ನು ದಾಖಲಿಸುವ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಪಿಜಿಎಸ್‌ಎನ್‌ ಪ್ರಸಾದ್‌ ಅವರು ತಮ್ಮ ಡೈರಿಯಲ್ಲಿ ದಾಖಲೆ ಮಾಡಿಕೊಂಡಿರುವ ಮಾಹಿತಿಯನ್ನು ಮಳೆ ಮಾಹಿತಿ ಲೆಕ್ಕದ ವಾಟ್ಸಪ್‌ ಗುಂಪಿನಲ್ಲಿ ನೀಡಿದ್ದಾರೆ. ಈ ಪ್ರಕಾರ ಆಗಸ್ಟ್‌ ತಿಂಗಳಲ್ಲಿ ದಾಖಲಾದ ಅತೀ ಕಡಿಮೆ ಮಳೆ ಈ ವರ್ಷ…!.

ಪಿಜಿಎಸ್‌ಎನ್‌ ಪ್ರಸಾದ್, ಬಾಳಿಲ

ಆಗಸ್ಟ್ ತಿಂಗಳಲ್ಲಿ ದಾಖಲಾದ ಮಳೆ 331 ಮಿ.ಮೀ.  ಆಗಸ್ಟ್ ತಿಂಗಳಲ್ಲಿ ಈ ಹಿಂದಿನ ಕನಿಷ್ಠ ಮಳೆ 1977 ರಲ್ಲಿ 551 ಮಿ.ಮೀ.ದಾಖಲಾಗಿತ್ತು. ನನ್ನಲ್ಲಿರುವ ಮಾಹಿತಿ ಪ್ರಕಾರ ಮಳೆಗಾಲದ ಜೂನ್, ಜುಲೈ, ಆಗಸ್ಟ್ ಈ ಮೂರೂ ತಿಂಗಳಲ್ಲಿ ತಿಂಗಳೊಂದರಲ್ಲಿ ದಾಖಲಾದ ಕನಿಷ್ಟ ಮಳೆಯಿದು. 1977 ರಲ್ಲಿ ಸೆಪ್ಟೆಂಬರ, ಅಕ್ಟೋಬರನಲ್ಲಿ ಸಾಮಾನ್ಯ ಮಳೆ, ನವೆಂಬರ ದಲ್ಲಿ ಗರಿಷ್ಠ 606 ಮಿ.ಮೀ.ಸುರಿದಿತ್ತು.

ಆಗಸ್ಟ್ ತಿಂಗಳ ಅಂತ್ಯಕ್ಕೆ ಬರುವ ವಾರ್ಷಿಕ ಸರಾಸರಿ ಮಳೆ (1976 – 2023) 3523 ಮಿ.ಮೀ. ಈ ವರ್ಷ 2737 ಮಿ.ಮೀ.ಅಂದರೆ ಶೇ.22.3 ರಷ್ಟು ಕೊರತೆಯಿದೆ. ಆಗಸ್ಟ್ ತಿಂಗಳ ಸರಾಸರಿ 965 ಮಿ.ಮೀ. ಹೋಲಿಸಿದರೆ ಈ ಬಾರಿ ಶೇ.65.7 ಕೊರತೆಯಿದೆ. ಆಗಸ್ಟ್ ತಿಂಗಳ ಅಂತ್ಯದವರೆಗೆ ಮಳೆ ಬರುವ ವಾಡಿಕೆ ದಿನಗಳು 109. ಈ ಬಾರಿ ಕೇವಲ 88 ದಿನ ಮಾತ್ರ ಮಳೆಯಾಗಿದೆ. ವಾರ್ಷಿಕವಾಗಿ ಮಳೆ ದಾಖಲಾಗುವ ಸರಾಸರಿ ದಿನಗಳು 165.. ಗರಿಷ್ಟ 202 (2021) ಕನಿಷ್ಟ 144 (1986 & 2017) ನನ್ನ ತಂದೆಯವರ ಡೈರಿಯಲ್ಲಿ ದಾಖಲಾದಂತೆ 1965 ರಲ್ಲಿ ಕೇವಲ 123 ದಿನಗಳಷ್ಷೇ ಮಳೆ ದಾಖಲಾಗಿತ್ತು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 13-05-2026| ಕರ್ನಾಟಕದಲ್ಲಿ ಇನ್ನೂ ಕೆಲ ದಿನ ಗುಡುಗು ಸಹಿತ ಮಳೆ| ಮೇ 20-25ರೊಳಗೆ ಮುಂಗಾರು ಪ್ರವೇಶ ಸಾಧ್ಯತೆ!

ಕರ್ನಾಟಕದಲ್ಲಿ 14.05.2026ರ ಬೆಳಿಗ್ಗೆ 8 ಗಂಟೆವರೆಗಿನ ಹವಾಮಾನ ಮುನ್ಸೂಚನೆಯ ಪ್ರಕಾರ ಕರಾವಳಿ, ಮಲೆನಾಡು…

13 hours ago

ಹವಾಮಾನ ವರದಿ | 12-05-2026 | ಮೇ 20ರ ಸುಮಾರಿಗೆ ಕರಾವಳಿಯಲ್ಲಿ ಮುಂಗಾರು ಮಾದರಿಯ ಮಳೆ ಸಾಧ್ಯತೆ..! |

ರಾಜ್ಯದ ಬಹುತೇಕ ಭಾಗಗಳಲ್ಲಿ ಬಿಸಿಲು ಮುಂದುವರಿದರೂ ಸಂಜೆ, ರಾತ್ರಿ ಗುಡುಗು ಸಹಿತ ಮಳೆಯ…

2 days ago

ರೋಸ್ಟೆಡ್‌ ಅಡಿಕೆ- ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ | “ರೋಸ್ಟೆಡ್‌ ಅಡಿಕೆ” ವರ್ಗೀಕರಣಕ್ಕೆ ಮುದ್ರೆ, ಜಪ್ತಿ ಸರಕುಗಳಿಗೆ ಮಾರ್ಗಸೂಚಿ

‘ರೋಸ್ಟೆಡ್‌ ಅಡಿಕೆ’ ವರ್ಗೀಕರಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಅಲಹಾಬಾದ್‌ ಹೈಕೋರ್ಟ್‌ ಆದೇಶಕ್ಕೆ ತಾತ್ಕಾಲಿಕ…

2 days ago

ಹವಾಮಾನ ವರದಿ| 10-05-2026 | ರಾಜ್ಯದಲ್ಲಿ ಮಳೆ ಕ್ಷೀಣಿಸುವ ಸೂಚನೆ | ಮೇ 15ರಿಂದ ಮುಂಗಾರು ಮಾರುತ ಚಟುವಟಿಕೆ ಚುರುಕು ಸಾಧ್ಯತೆ

ಕರ್ನಾಟಕದಲ್ಲಿ ಮುಂದಿನ 24 ಗಂಟೆಗಳ ಅವಧಿಯಲ್ಲಿ ಕರಾವಳಿ ಹಾಗೂ ಮಲೆನಾಡಿನ ಕೆಲವು ಭಾಗಗಳಲ್ಲಿ…

4 days ago

ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿಯುವುದಿಲ್ಲ

ಮೈಸೂರು ಜಿಲ್ಲೆಯ ಮೇಲ್ಸೇತುವೆ ಕಾಮಗಾರಿಗಳ ವೇಳೆ ಯಾವುದೇ ಮರಗಳನ್ನು ಕಡಿಯುವುದಿಲ್ಲ ಎಂದು ಸಂಸದ…

6 days ago