Advertisement
MIRROR FOCUS

ಮಳೆ ಕೊರತೆ ಎಷ್ಟಿದೆ… ? | ದಾಖಲೆಗಳ ಪ್ರಕಾರ ಅತೀ ಕನಿಷ್ಟ ಮಳೆ ಈ ವರ್ಷ… |

Share

ಈ ಬಾರಿ ಮಳೆಯ ಕೊರತೆ ಬಗ್ಗೆ ಚರ್ಚೆಯಾಗುತ್ತಿದೆ. ಕೃಷಿ ಏನಾದೀತು..?, ಗ್ರಾಮೀಣ ಜನರ ಬದುಕು ಏನಾದೀತು, ನಗರ ಕಡೆ ನೀರು ಇದ್ದೀತೇ…?, ಇನ್ನಾದರೂ ಮಳೆಯಾದೀತೇ ಎಂಬ ಚರ್ಚೆ, ಪ್ರಶ್ನೆ ಎಲ್ಲೆಡೆ ಇದೆ. ದಾಖಲೆಗಳ ಪ್ರಕಾರ ಅತೀ ಕನಿಷ್ಟ ಮಳೆಯ ಲೆಕ್ಕ ಕಾಣುತ್ತಿದೆ. ಮಳೆ ಲೆಕ್ಕಗಳನ್ನು ದಾಖಲಿಸುವ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಪಿಜಿಎಸ್‌ಎನ್‌ ಪ್ರಸಾದ್‌ ಅವರು ತಮ್ಮ ಡೈರಿಯಲ್ಲಿ ದಾಖಲೆ ಮಾಡಿಕೊಂಡಿರುವ ಮಾಹಿತಿಯನ್ನು ಮಳೆ ಮಾಹಿತಿ ಲೆಕ್ಕದ ವಾಟ್ಸಪ್‌ ಗುಂಪಿನಲ್ಲಿ ನೀಡಿದ್ದಾರೆ. ಈ ಪ್ರಕಾರ ಆಗಸ್ಟ್‌ ತಿಂಗಳಲ್ಲಿ ದಾಖಲಾದ ಅತೀ ಕಡಿಮೆ ಮಳೆ ಈ ವರ್ಷ…!.

ಪಿಜಿಎಸ್‌ಎನ್‌ ಪ್ರಸಾದ್, ಬಾಳಿಲ

ಆಗಸ್ಟ್ ತಿಂಗಳಲ್ಲಿ ದಾಖಲಾದ ಮಳೆ 331 ಮಿ.ಮೀ.  ಆಗಸ್ಟ್ ತಿಂಗಳಲ್ಲಿ ಈ ಹಿಂದಿನ ಕನಿಷ್ಠ ಮಳೆ 1977 ರಲ್ಲಿ 551 ಮಿ.ಮೀ.ದಾಖಲಾಗಿತ್ತು. ನನ್ನಲ್ಲಿರುವ ಮಾಹಿತಿ ಪ್ರಕಾರ ಮಳೆಗಾಲದ ಜೂನ್, ಜುಲೈ, ಆಗಸ್ಟ್ ಈ ಮೂರೂ ತಿಂಗಳಲ್ಲಿ ತಿಂಗಳೊಂದರಲ್ಲಿ ದಾಖಲಾದ ಕನಿಷ್ಟ ಮಳೆಯಿದು. 1977 ರಲ್ಲಿ ಸೆಪ್ಟೆಂಬರ, ಅಕ್ಟೋಬರನಲ್ಲಿ ಸಾಮಾನ್ಯ ಮಳೆ, ನವೆಂಬರ ದಲ್ಲಿ ಗರಿಷ್ಠ 606 ಮಿ.ಮೀ.ಸುರಿದಿತ್ತು.

ಆಗಸ್ಟ್ ತಿಂಗಳ ಅಂತ್ಯಕ್ಕೆ ಬರುವ ವಾರ್ಷಿಕ ಸರಾಸರಿ ಮಳೆ (1976 – 2023) 3523 ಮಿ.ಮೀ. ಈ ವರ್ಷ 2737 ಮಿ.ಮೀ.ಅಂದರೆ ಶೇ.22.3 ರಷ್ಟು ಕೊರತೆಯಿದೆ. ಆಗಸ್ಟ್ ತಿಂಗಳ ಸರಾಸರಿ 965 ಮಿ.ಮೀ. ಹೋಲಿಸಿದರೆ ಈ ಬಾರಿ ಶೇ.65.7 ಕೊರತೆಯಿದೆ. ಆಗಸ್ಟ್ ತಿಂಗಳ ಅಂತ್ಯದವರೆಗೆ ಮಳೆ ಬರುವ ವಾಡಿಕೆ ದಿನಗಳು 109. ಈ ಬಾರಿ ಕೇವಲ 88 ದಿನ ಮಾತ್ರ ಮಳೆಯಾಗಿದೆ. ವಾರ್ಷಿಕವಾಗಿ ಮಳೆ ದಾಖಲಾಗುವ ಸರಾಸರಿ ದಿನಗಳು 165.. ಗರಿಷ್ಟ 202 (2021) ಕನಿಷ್ಟ 144 (1986 & 2017) ನನ್ನ ತಂದೆಯವರ ಡೈರಿಯಲ್ಲಿ ದಾಖಲಾದಂತೆ 1965 ರಲ್ಲಿ ಕೇವಲ 123 ದಿನಗಳಷ್ಷೇ ಮಳೆ ದಾಖಲಾಗಿತ್ತು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಆಹಾರ-ನಿದ್ರೆ ಪರಸ್ಪರ ಪೂರಕ; ಉತ್ತಮ ನಿದ್ರೆಗೆ ಹಸಿವು ಅಗತ್ಯ: ರಾಘವೇಶ್ವರ ಶ್ರೀ

ಉತ್ತಮ ಆರೋಗ್ಯಕ್ಕೆ ಸರಿಯಾದ ಆಹಾರ ಮತ್ತು ನಿದ್ರೆ ಎರಡೂ ಅವಿಭಾಜ್ಯ ಎಂದು ಶ್ರೀ…

2 hours ago

ಕೃಷಿಕರ ಮಿತ್ರ ಸಾಯಿಶೇಖರ್‌ ಕರಿಕಳ ಅವರಿಗೆ ರೈತ ರತ್ನ ಪ್ರಶಸ್ತಿ

ಮಳೆ ಮಾಹಿತಿ ಮೂಲಕ ಕೃಷಿಕರಿಗೆ ನೆರವಾಗುತ್ತಿರುವ ಸಾಯಿಶೇಖರ್‌ ಕರಿಕಳ ಅವರಿಗೆ ರೈತ ರತ್ನ…

2 hours ago

ಮಂಗಳೂರಿನಲ್ಲಿ ರಾಷ್ಟ್ರೀಯ ಚೆಸ್ ಚಾಂಪಿಯನ್ ಶಿಪ್‌ಗೆ ಚಾಲನೆ – 28 ರಾಜ್ಯ–ಕೇಂದ್ರಾಡಳಿತ ಪ್ರದೇಶಗಳಿಂದ 644 ಬಾಲಕಿ-ಬಾಲಕಿಯರು

ಮಂಗಳೂರಿನಲ್ಲಿ ರಾಷ್ಟ್ರೀಯ ಅಂಡರ್‌-11 ಚೆಸ್ ಚಾಂಪಿಯನ್ಶಿಪ್‌ಗೆ ಭವ್ಯ ಚಾಲನೆ ದೊರೆತಿದ್ದು, ದೇಶದ 28…

3 hours ago

ಹವಾಮಾನ ವರದಿ | 02-08-2026 | ಕರಾವಳಿಯಲ್ಲಿ ಮಳೆ ಇಳಿಮುಖ ..? ರಾಜ್ಯದಲ್ಲಿ ಮುಂಗಾರು ಸ್ಥಿತಿ ಏನು..?

ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆಯ ತೀವ್ರತೆ ಇಳಿಮುಖವಾಗಲಿದ್ದು, ಆಗಸ್ಟ್‌ 3ರಿಂದ ತೋಟದ…

4 hours ago

ಭಾರೀ ಮಳೆಯ ಎಚ್ಚರಿಕೆ : 24 ಗಂಟೆ ಸನ್ನದ್ಧವಾಗಿರಲು ಡಿಸಿ ಸೂಚನೆ, ಭೂಕುಸಿತ ಪ್ರದೇಶಗಳ ಮೇಲೆ ಕಟ್ಟೆಚ್ಚರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳನ್ನು 24…

16 hours ago

ಹುಬ್ಬಳ್ಳಿಯಲ್ಲಿ ಹಲಸು ಮೇಳಕ್ಕೆ ಚಾಲನೆ – 50ಕ್ಕೂ ಹೆಚ್ಚು ಮಳಿಗೆಗಳು, ಹಲಸಿನ ಬಿರಿಯಾನಿಯಿಂದ ಕಬಾಬ್‌ವರೆಗೆ ಸವಿಯುವ ಅವಕಾಶ

ಹುಬ್ಬಳ್ಳಿಯಲ್ಲಿ ಆರಂಭವಾದ ಮೂರು ದಿನಗಳ ಹಲಸು ಮೇಳಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.…

16 hours ago