ಬೆಳೆ ಇಳುವರಿ ಹೆಚ್ಚಿಸಲು ‘ಸ್ಮಾರ್ಟ್ ಬೀಜ ವ್ಯವಸ್ಥೆ’ಯ ಕ್ರಾಂತಿ

February 2, 2026
6:28 AM

ಭಾರತದ ಕೃಷಿಯಲ್ಲಿ ಮುಂದಿನ ದೊಡ್ಡ ಸವಾಲುಗಳಲ್ಲಿ ಪ್ರತಿ ಹೆಕ್ಟೇರ್ ಉತ್ಪಾದಕತೆ ಹೆಚ್ಚಿಸುವುದು ಹಾಗೂ ಉತ್ತಮ ಗುಣಮಟ್ಟದ ಬೀಜಗಳನ್ನು ರೈತರಿಗೆ ತಲುಪಿಸುವುದು ಅನೇಕ ಸಮಯಗಳಿಂದ ಸಮಸ್ಯೆಯಾಗಿ ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಭಾರತದ ಕೃಷಿ ಉತ್ಪಾದಕತೆ ಹೆಚ್ಚಿಸಲು ಮತ್ತು ಎಣ್ಣೆಬೀಜ ಬೆಳೆಗಳಲ್ಲಿ ಇಳುವರಿ ಅಂತರವನ್ನು ಕಡಿಮೆ ಮಾಡಲು ICAR–Indian Institute of Oilseeds Research (IIOR) ರಾಷ್ಟ್ರೀಯ ಸಮಾಲೋಚನೆ ಹಾಗೂ ಉದ್ಯಮ ಸಭೆಯನ್ನು ಹೈದರಾಬಾದ್‌ನಲ್ಲಿ ಆಯೋಜಿಸಿದೆ. ಈ ಸಭೆಯ ಕೇಂದ್ರ ವಿಷಯ “ಸ್ಮಾರ್ಟ್ ಬೀಜ ವ್ಯವಸ್ಥೆ”.

‘Smart Seed Systems’ಇಂದು ಬಹುಮುಖ್ಯವಾದ ಹೆಜ್ಜೆಯಾಗಿದೆ. ಕೃಷಿಯಲ್ಲಿನ ಸವಾಲುಗಳಲ್ಲಿ ಪ್ರತೀ ಹೆಕ್ಟೇರ್ ಉತ್ಪಾದಕತೆ ಹೆಚ್ಚಿಸುವುದು, ಉತ್ತಮ ಗುಣಮಟ್ಟದ ಬೀಜಗಳನ್ನು ರೈತರಿಗೆ ತಲುಪಿಸುವುದು, ತಂತ್ರಜ್ಞಾನ ಆಧಾರಿತ ನವೀನ ಪರಿಹಾರಗಳನ್ನು ಬಳಸುವುದು ಇವೆಲ್ಲವನ್ನು ಸಾಧಿಸಲು ಸ್ಮಾರ್ಟ್ ಬೀಜ ವ್ಯವಸ್ಥೆಗಳು ಪ್ರಮುಖ ಎಂದು ICAR ಹೇಳಿದೆ.

ಭಾರತದಲ್ಲಿ ಎಣ್ಣೆಬೀಜ ಇಳುವರಿ ಜಾಗತಿಕ ಮಟ್ಟಕ್ಕಿಂತ ಕಡಿಮೆ ಇರುವ ಹಿನ್ನೆಲೆಯಲ್ಲಿ, ಈ ಸಮಾವೇಶವು ಬೀಜ ಉತ್ಪಾದನೆ ತಂತ್ರಜ್ಞಾನ, ನವೀನ ಕೃಷಿ ಪರಿಹಾರಗಳು, ಉದ್ಯಮ–ಸಂಶೋಧನೆ ಸಹಕಾರದ ಮೇಲೆ ವಿಶೇಷ ಚರ್ಚೆ ನಡೆಸಿತು. ಸಭೆಯು ರೈತರಿಗೆ ಲಾಭಕರ ಕೃಷಿ ತಂತ್ರಜ್ಞಾನವನ್ನು ವೇಗವಾಗಿ ತಲುಪಿಸಲು ಕೈಗಾರಿಕಗೆ ಮತ್ತು ಸಂಸ್ಥೆಗಳ ಪಾಲುದಾರಿಕೆ ಅಗತ್ಯ ಎಂದು ಅಭಿಪ್ರಾಯಪಟ್ಟಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಸದ ತೆಂಗಿನಕಾಯಿಯೂ ಈಗ ರೈತರ ಸಂಪತ್ತು…! ಭುವನೇಶ್ವರದ ‘ವೇಸ್ಟ್ ಟು ವೆಲ್ತ್’ ಮಾದರಿ
July 14, 2026
7:12 AM
by: ದ ರೂರಲ್ ಮಿರರ್.ಕಾಂ
ರಾಜ್ಯದಲ್ಲಿ ಬರದ ಛಾಯೆ- ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡಿ
July 14, 2026
7:01 AM
by: ದ ರೂರಲ್ ಮಿರರ್.ಕಾಂ
ಹುಲಿ-ಚಿರತೆ ಹಾವಳಿ ನಿಯಂತ್ರಣಕ್ಕೆ ಆಗ್ರಹ – ಚಾಮರಾಜನಗರದಲ್ಲಿ ಅರಣ್ಯ ಇಲಾಖೆ ವಿರುದ್ಧ ರೈತ ಸಂಘಟನೆಗಳ ಪ್ರತಿಭಟನೆ
July 14, 2026
6:53 AM
by: ದ ರೂರಲ್ ಮಿರರ್.ಕಾಂ
ಮುಂಗಾರು ದುರ್ಬಲ: ಯಾದಗಿರಿ ರೈತರಿಗೆ ಕೃಷಿ ಇಲಾಖೆಯ ಮಹತ್ವದ ಸಲಹೆ
July 14, 2026
6:47 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror