ಭಾರತದ ಕೃಷಿಯಲ್ಲಿ ಮುಂದಿನ ದೊಡ್ಡ ಸವಾಲುಗಳಲ್ಲಿ ಪ್ರತಿ ಹೆಕ್ಟೇರ್ ಉತ್ಪಾದಕತೆ ಹೆಚ್ಚಿಸುವುದು ಹಾಗೂ ಉತ್ತಮ ಗುಣಮಟ್ಟದ ಬೀಜಗಳನ್ನು ರೈತರಿಗೆ ತಲುಪಿಸುವುದು ಅನೇಕ ಸಮಯಗಳಿಂದ ಸಮಸ್ಯೆಯಾಗಿ ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಭಾರತದ ಕೃಷಿ ಉತ್ಪಾದಕತೆ ಹೆಚ್ಚಿಸಲು ಮತ್ತು ಎಣ್ಣೆಬೀಜ ಬೆಳೆಗಳಲ್ಲಿ ಇಳುವರಿ ಅಂತರವನ್ನು ಕಡಿಮೆ ಮಾಡಲು ICAR–Indian Institute of Oilseeds Research (IIOR) ರಾಷ್ಟ್ರೀಯ ಸಮಾಲೋಚನೆ ಹಾಗೂ ಉದ್ಯಮ ಸಭೆಯನ್ನು ಹೈದರಾಬಾದ್ನಲ್ಲಿ ಆಯೋಜಿಸಿದೆ. ಈ ಸಭೆಯ ಕೇಂದ್ರ ವಿಷಯ “ಸ್ಮಾರ್ಟ್ ಬೀಜ ವ್ಯವಸ್ಥೆ”.
‘Smart Seed Systems’ಇಂದು ಬಹುಮುಖ್ಯವಾದ ಹೆಜ್ಜೆಯಾಗಿದೆ. ಕೃಷಿಯಲ್ಲಿನ ಸವಾಲುಗಳಲ್ಲಿ ಪ್ರತೀ ಹೆಕ್ಟೇರ್ ಉತ್ಪಾದಕತೆ ಹೆಚ್ಚಿಸುವುದು, ಉತ್ತಮ ಗುಣಮಟ್ಟದ ಬೀಜಗಳನ್ನು ರೈತರಿಗೆ ತಲುಪಿಸುವುದು, ತಂತ್ರಜ್ಞಾನ ಆಧಾರಿತ ನವೀನ ಪರಿಹಾರಗಳನ್ನು ಬಳಸುವುದು ಇವೆಲ್ಲವನ್ನು ಸಾಧಿಸಲು ಸ್ಮಾರ್ಟ್ ಬೀಜ ವ್ಯವಸ್ಥೆಗಳು ಪ್ರಮುಖ ಎಂದು ICAR ಹೇಳಿದೆ.
ಭಾರತದಲ್ಲಿ ಎಣ್ಣೆಬೀಜ ಇಳುವರಿ ಜಾಗತಿಕ ಮಟ್ಟಕ್ಕಿಂತ ಕಡಿಮೆ ಇರುವ ಹಿನ್ನೆಲೆಯಲ್ಲಿ, ಈ ಸಮಾವೇಶವು ಬೀಜ ಉತ್ಪಾದನೆ ತಂತ್ರಜ್ಞಾನ, ನವೀನ ಕೃಷಿ ಪರಿಹಾರಗಳು, ಉದ್ಯಮ–ಸಂಶೋಧನೆ ಸಹಕಾರದ ಮೇಲೆ ವಿಶೇಷ ಚರ್ಚೆ ನಡೆಸಿತು. ಸಭೆಯು ರೈತರಿಗೆ ಲಾಭಕರ ಕೃಷಿ ತಂತ್ರಜ್ಞಾನವನ್ನು ವೇಗವಾಗಿ ತಲುಪಿಸಲು ಕೈಗಾರಿಕಗೆ ಮತ್ತು ಸಂಸ್ಥೆಗಳ ಪಾಲುದಾರಿಕೆ ಅಗತ್ಯ ಎಂದು ಅಭಿಪ್ರಾಯಪಟ್ಟಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕದಲ್ಲಿ ಸದ್ಯ ಮಳೆ ಕಡಿಮೆಯಾಗಿದ್ದು, ಬಿಸಿಲು ಹೆಚ್ಚಾಗಿರುವ ನಡುವೆಯೇ ಸೆ.14ರಿಂದ ದಕ್ಷಿಣ ಒಳನಾಡಿನಲ್ಲಿ…
ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯ ನಡುವೆ ಭತ್ತ–ಗೋಧಿಯಂತಹ ಹೆಚ್ಚಿನ ನೀರು ಮತ್ತು…
ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…
ಇಂಪೀರಿಯಲ್ ಕಾಲೇಜ್ ಲಂಡನ್ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…
ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…
ವಾಯುಭಾರ ಕುಸಿತಗಳು ಚಂಡಮಾರುತವಾಗಿ ಬಲಗೊಳ್ಳಲು ಸಮುದ್ರದ ಉಷ್ಣತೆ ಮಾತ್ರವಲ್ಲದೆ ತೇವಾಂಶ, ವಿಂಡ್ ಶಿಯರ್…