Advertisement
MIRROR FOCUS

ತಾಂತ್ರಿಕವಾಗಿ ಮುನ್ನಡೆಯುತ್ತಿರುವ ಕೃಷಿ | ಯುವಕರಿಗೆ ಇಫ್ಕೋ ಕಂಪನಿಯ ಸಹಾಯ ಹಸ್ತ | ಉದ್ಯೋಗವಾಗಿಯೂ ವರದಾನವಾಗಿ ಪರಿಣಮಿಸುತ್ತಿರುವ ಡ್ರೋನ್

Share

ದೇಶದಲ್ಲಿ ಉದ್ಯೋಗ ಆಸಕ್ತ ಯುವಕರ ಸಂಖ್ಯೆ ಏರುತ್ತಲೇ ಇದೆ. ಕಾರಣ ವರ್ಷಕ್ಕೆ ಲಕ್ಷಗಟ್ಟಲೆಯಲ್ಲಿ ಯುವಕರು ಶಿಕ್ಷಣ ಸಂಸ್ಥೆಗಳಿಂದ ಶಿಕ್ಷಣ  ಮುಗಿಸಿ ಪ್ರತೀ ವರ್ಷ ಹೊರಬರುತ್ತಿದ್ದಾರೆ. ಯಾವುದೇ ಸರ್ಕಾರಗಳು ಎಷ್ಟೇ ಪ್ರಯತ್ನ ಮಾಡಿದರೂ ಉದ್ಯೋಗ ನೀಡುವುದು ಕಷ್ಟ ಸಾಧ್ಯ. ಇಂದು ಉದ್ಯೋಗ ಎಂದರೇನು ? ಎನ್ನುವುದರ ಡೆಫಿನೇಶನ್‌ ಏನೆಂದೇ ಅರ್ಥವಾಗದ ಸ್ಥಿತಿ ಇದು. ಕೃಷಿಯೂ ಒಂದು ಉದ್ಯೋಗ ಎನ್ನುವುದೇ ತಿಳಿದಿಲ್ಲ, ಕೃಷಿಯಲ್ಲೂ ಉದ್ಯೋಗ ಮಾಡಬಹುದು.  ಆದರೆ ಐಡಿಯಾ ಮಾಡಿಕೊಳ್ಳಬೇಕು ಅಷ್ಟೇ. ಈಗ ಡ್ರೋನ್‌ ತಂತ್ರಜ್ಞಾನ ಕೃಷಿಯಲ್ಲಿ ಕ್ರಾಂತಿ ಮಾಡುತ್ತಿದೆ, ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುತ್ತಿದೆ.

ಶಿಕ್ಷಣ ಮುಗಿಸಿದ ಅನೇಕರಿಗೆ ಕೃಷಿಯೂ ಒಂದು ಉದ್ಯೋಗ ಎನ್ನುವುದು ತಿಳಿದಿಲ್ಲ, ಕೃಷಿಕರ ಮಕ್ಕಳೂ ಇಂದು ಕೃಷಿ ಎಂದರೆ ಉದ್ಯೋಗ ಎನ್ನುವುದನ್ನು ಮರೆತಿದ್ದಾರೆ. ಹೀಗಾಗಿ  ಕೃಷಿಗೆ ವಿದ್ಯಾಂತರು ಬರುವುದು ಕಡಿಮೆಯೇ ಎನ್ನುವ ಹಾಗಾಗಿದೆ. ಆದರೆ ಇದೀಗ ರೈತರನ್ನು ಅತ್ಯಾಧುನಿಕ ಕೃಷಿಯತ್ತ ಸೆಳೆಯುವ ಕೆಲಸ ನಡೆಯುತ್ತಿದೆ. ವಿದ್ಯಾವಂತ ಯುವಕರನ್ನು ಕೃಷಿಯತ್ತ ಸೆಳೆಯಲು ಕೆಲಸ ಮಾಡಲಾಗುತ್ತಿದೆ. ಇದೀಗ ಡ್ರೋನ್(Drone), ಹೊಸ ಉದ್ಯೋಗ ಅವಕಾಶಗಳನ್ನೂ ಸೃಷ್ಟಿಸಿದೆ.  ಯುವಕರು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಇಫ್ಕೋ ಕಂಪನಿ ಯುವಕರ ಪಾಲಿಗೆ ಬೆಳಕಾಗಿದೆ.  ಕೃಷಿ ಚಟುವಟಿಕೆಗಳಿಗೆ ಕೂಲಿಕಾರರು ಸಿಗುತ್ತಿಲ್ಲ. ಹಾಗಾಗಿ, ರೈತರು ಆಧುನಿಕತೆ ಕಡೆ ಮುಖ ಮಾಡುತ್ತಿದ್ದಾರೆ. ಭೂಮಿಯಲ್ಲಿ ರೆಂಟೆ, ಕುಂಟೆ ಹೊಡೆಯಲು, ಕಳೆ ತೆಗೆಯಲು ಯಂತ್ರಗಳನ್ನೇ ಹೆಚ್ಚೆಚ್ಚು ಬಳಸುತ್ತಿದ್ದಾರೆ. ಅದರ ಜೊತೆಗೆ ಡ್ರೋನ್‌ ಬಳಕೆಯೂ ಹೆಚ್ಚಾಗುತ್ತಿದೆ.

ನಿರುದ್ಯೋಗಿ ಯುವಕರಿಗೆ ಉದ್ಯೋಗ ಮತ್ತು ರೈತರ ಬೆಳೆಗಳಿಗೆ ಡ್ರೋನ್ ಮೂಲಕ ಔಷಧಿ ಸಿಂಪಡಿಸುವ ನಿಟ್ಟಿನಲ್ಲಿ ಇಫ್ಕೋ ಸಂಸ್ಥೆ ಕಿಸಾನ್ ಉಡಾನ್ ಯೋಜನೆಯಡಿ ದೇಶಾದ್ಯಂತ 2,500, ರಾಜ್ಯದಲ್ಲಿ 200, ಬೆಳಗಾವಿ ಜಿಲ್ಲೆಯಲ್ಲಿ 20 ಯುವಕರಿಗೆ ಉತ್ತಮ ತರಬೇತಿ ನೀಡಿದೆ. ಅಲ್ಲದೇ ಒಬ್ಬ ಯುವಕನಿಗೆ 1 ಡ್ರೋನ್, 1 ವಿದ್ಯುತ್ ಚಾಲಿತ ತ್ರಿಚಕ್ರ ವಾಹನ, 4 ಬ್ಯಾಟರಿ, 1 ಜನರೇಟರ್​ ಸೇರಿ ಮತ್ತಿತರ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಲಾಗಿದೆ. ಹೀಗೆ ಇಫ್ಕೋ ಸಂಸ್ಥೆಯ ನೆರವಿನೊಂದಿಗೆ ಕೆಲಸ ಆರಂಭಿಸಿರುವ ಯುವಕರು ಸೋಯಾಬಿನ್ ಸೇರಿ ಮತ್ತಿತರ ಬೆಳೆಗಳಿಗೆ ಡ್ರೋನ್ ಮೂಲಕ ಔಷಧಿ ಸಿಂಪಡಿಸಿ, ಪ್ರತಿದಿನ ಏನಿಲ್ಲ ಎಂದರೂ 5 ಸಾವಿರ ಆದಾಯ ಗಳಿಸುತ್ತಿದ್ದಾರೆ. ಕೆಲಸ ಇಲ್ಲದೇ ಕಂಗಾಲಾಗಿದ್ದ ಇವರೆಲ್ಲಾ ಈಗ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.‌

ಈಚೆಗೆ ಇಪ್ಕೋ ಕಂಪನಿಯ ಮೂಲಕ ಬೆಳಗಾವಿಯಲ್ಲಿ ಕೃಷಿ ಭೂಮಿಯಲ್ಲಿ ಒಮ್ಮೆಲೇ 36 ಡ್ರೋನ್‌ ಮೂಲಕ ಕೃಷಿಗೆ ಪೋಷಕಾಂಶಗಳನ್ನು ಸಿಂಪಡಣೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು.(ವಿಡಿಯೋ ಇದೆ… )

‘ಈಟಿವಿ ಭಾರತ್’ ಜೊತೆಗೆ ಮಾತನಾಡಿದ ತಾಲೂಕಿನ ಯುವಕ ಅಭಯ್ ಕುಲಕರ್ಣಿ, “ಎರಡು ವರ್ಷ ಬೆಂಗಳೂರಲ್ಲಿ ಕೆಲಸ ಮಾಡಿದ ಬಳಿಕ ಊರಿಗೆ ಬಂದು ಮನೆಯಲ್ಲಿ ಖಾಲಿ ಇದ್ದೆ. ಇಫ್ಕೋ ಕಂಪನಿ ನನಗೆ ಅವಕಾಶ ನೀಡಿತು. ಚನ್ನೈನಲ್ಲಿ 20 ದಿನ ಡ್ರೋನ್ ಫೈಲಟ್ ಟ್ರೇನಿಂಗ್ ನೀಡಿದರು. ಇದಾದ ಒಂದು ತಿಂಗಳ ನಂತರ ಡ್ರೋನ್ ಕೊಟ್ಟರು. ಈ ವೇಳೆ ಡ್ರೋನ್ ನಿರ್ವಹಣೆ ತರಬೇತಿ ನೀಡಿದರು. ನಮಗೆ ಪೆಟ್ರೋಲ್, ಡೀಸೆಲ್ ಹಾಕಲು ಅನಾನುಕೂಲ ಆಗುತ್ತದೆ ಎಂದು ವಿದ್ಯುತ್ ಚಾಲಿತ ತ್ರಿಚಕ್ರ ವಾಹನ ಒದಗಿಸಿದ್ದಾರೆ. ಪ್ರತಿ ದಿನ 10 ಎಕರೆ ಔಷಧಿ ಸಿಂಪಡಿಸುತ್ತಿದ್ದೇವೆ. ದಿನಕ್ಕೆ ಕನಿಷ್ಠ 4-5 ಸಾವಿರ ಆದಾಯ ಬರುತ್ತಿದೆ” ಎಂದು ಹೇಳಿದರು‌.

ಮತ್ತೋರ್ವ ಯುವಕ ಹನುಮಂತ ದಳವಾಯಿ ಮಾತನಾಡಿ, “ಇಫ್ಕೋ ಕಂಪನಿ ಆವಿಷ್ಕಾರ ಮಾಡಿರುವ ನ್ಯಾನೋ ಯೂರಿಯಾ ಔಷಧಿ ಸಿಂಪಡಣೆಯಿಂದ ಭೂಮಿ ಫಲವತ್ತತೆ ಉಳಿಯುತ್ತಿದೆ. ಇದರಿಂದ ರೈತರಿಗೆ ಅನುಕೂಲ ಆಗುವುದರ ಜೊತೆಗೆ ನಾವು ಕೂಡ ಬದುಕು ಕಟ್ಟಿಕೊಳ್ಳುತ್ತಿದ್ದೇವೆ” ಎಂದು ಹೇಳಿದರು.

ಇಫ್ಕೋ ಕ್ಷೇತ್ರಾಧಿಕಾರಿ‌ ನವೀನ‌ ಪಾಟೀಲ ಮಾತನಾಡಿ, “ಹೊಲಗಳಲ್ಲಿ ಔಷಧಿ ಸಿಂಪಡಣೆ ಮಾಡಲು ರೈತರಿಗೆ ಸಾಕಷ್ಟು ಸಮಸ್ಯೆ ಆಗುತ್ತಿತ್ತು. ಅಲ್ಲದೇ ಹಾವು, ಚೇಳು ಕಡಿಸಿಕೊಂಡು ಅನೇಕ ರೈತರು ಸಾವನ್ನಪ್ಪಿದ ಉದಾಹರಣೆಗಳೂ ಇವೆ. ಹಾಗಾಗಿ, ರೈತರಿಗೆ ಉಪಯೋಗ ಆಗಬೇಕು ಮತ್ತು ಇದ್ದ ಊರಲ್ಲಿ ಯುವಕರಿಗೆ ಕೆಲಸ ನೀಡುವ ಉದ್ದೇಶದಿಂದ ಡ್ರೋನ್ ನೀಡಲಾಗಿದೆ. ತಿಂಗಳಿಗೆ ಸುಮಾರು 60-70 ಸಾವಿರ ರೂ. ಗಳಿಸುತ್ತಿದ್ದಾರೆ. ಈ ಮೊದಲು ರೈತರು 1 ಎಕರೆ ಕೈ ಪಂಪ್​ನಿಂದ ಔಷಧಿ ಸಿಂಪಡಿಸಲು ಐದಾರು ಗಂಟೆ ಬೇಕಾಗುತ್ತಿತ್ತು. ಈಗ ಡ್ರೋನ್​ನಿಂದ ಕೇವಲ 8-10 ನಿಮಿಷದಲ್ಲಿ ಔಷಧಿ ಸಿಂಪಡಿಸಬಹುದು. ಇದರಿಂದ ರೈತರಿಗೆ ಹಣದ ಜೊತೆಗೆ ಸಮಯದ ಉಳಿತಾಯವೂ ಆಗಲಿದೆ” ಎಂದು ವಿವರಿಸಿದರು.

  • ಅಂತರ್ಜಾಲ ಮಾಹಿತಿ
ನಿಮ್ಮ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿ…

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮಳೆ ಹೆಚ್ಚಿಸಲು ಮೋಡ ಬಿತ್ತನೆಗೆ ಚಾಲನೆ – ಮೋಡ ಬಿತ್ತನೆಯಿಂದ ಮಳೆ ಬರುತ್ತದೆಯೇ?

ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ₹28.52 ಕೋಟಿ ವೆಚ್ಚದ 60 ದಿನಗಳ…

2 hours ago

3,000 ವರ್ಷಗಳ ಹಿಂದೆಯೇ ರೈತರು ಹವಾಮಾನ ಬದಲಾವಣೆಗೆ ಹೊಂದಿಕೊಂಡಿದ್ದರು..! ಬಿಹಾರದ ಪುರಾತನ ಬೀಜಗಳು ಹೇಳಿದ ಕೃಷಿ ಪಾಠ

ಬಿಹಾರದ ಯುರೆನ್‌ನಲ್ಲಿ ಪತ್ತೆಯಾದ 5 ಲಕ್ಷಕ್ಕೂ ಹೆಚ್ಚು ಸುಟ್ಟ ಬೀಜಗಳ ಅಧ್ಯಯನವು ಭಾರತದ…

4 hours ago

ಶ್ರೀಕೃಷ್ಣನನ್ನು ದೇವನಾಗಿ ಮಾತ್ರವಲ್ಲ, ಗುರುವಿನ ರೂಪದಲ್ಲೂ ಕಾಣುವ ದೃಷ್ಟಿ

ಶ್ರೀಕೃಷ್ಣನನ್ನು ಕೇವಲ ದೇವರ ಅವತಾರವಾಗಿ ನೋಡುವುದಕ್ಕಿಂತ, ಮನುಷ್ಯರ ನಡುವೆ ನಿಂತು ಉಪದೇಶಿಸಿದ ಮಾನವಶಿಕ್ಷಕನಾಗಿಯೂ…

10 hours ago

ಹವಾಮಾನ ವರದಿ | 04-09-2026 | ಮುಂಗಾರು ದುರ್ಬಲ… ಆದರೂ ಕರ್ನಾಟಕದಲ್ಲಿ ಗುಡುಗು ಮಳೆ ಮುಂದುವರಿಯುವ ಸಾಧ್ಯತೆ!

ಮುಂಗಾರು ದುರ್ಬಲಗೊಂಡಿದ್ದರೂ ಸ್ಥಳೀಯ ಮೋಡಗಳ ಬೆಳವಣಿಗೆಯಿಂದ ಮಲೆನಾಡು ಹಾಗೂ ಒಳನಾಡಿನಲ್ಲಿ ಗುಡುಗು ಸಹಿತ…

10 hours ago

ಕೃಷಿ ಸಂಕಷ್ಟ ಎಂದರೆ ರೈತನ ಸಾಲ ಮಾತ್ರವಲ್ಲ – ಕೃಷಿ ಕಾರ್ಮಿಕರ ರಕ್ಷಣೆಯೂ ಅಗತ್ಯ

2024ರಲ್ಲಿ ಭಾರತದಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರು ಸೇರಿ 10,546 ಮಂದಿ ಆತ್ಮಹತ್ಯೆಯಿಂದ…

18 hours ago

ಹಂತ ಹಂತವಾಗಿ 16 ಸಾವಿರ ಶಿಕ್ಷಕರ ನೇಮಕ – ಅನುದಾನಿತ ಶಾಲೆಗಳಿಗೂ 6 ಸಾವಿರ ಹುದ್ದೆ – ಸಚಿವ ಮಧು ಬಂಗಾರಪ್ಪ

ಕರ್ನಾಟಕದಲ್ಲಿ ಈಗಾಗಲೇ 13,500 ಶಿಕ್ಷಕರ ನೇಮಕಾತಿ ನಡೆದಿದ್ದು, ಶಿಕ್ಷಣ ಇಲಾಖೆಯಲ್ಲಿ ಇನ್ನೂ 16…

18 hours ago