MIRROR FOCUS

ಅಂತರಾಷ್ಟ್ರೀಯ ರಬ್ಬರ್‌ ಬೆಲೆ ಹೆಚ್ಚಳ | ಹೆಚ್ಚುತ್ತಿರುವ ರಬ್ಬರ್‌ ಬೇಡಿಕೆ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಅಂತರಾಷ್ಟ್ರೀಯ ರಬ್ಬರ್‌ ಬೆಲೆಯಲ್ಲಿ ಹೆಚ್ಚಳ ಕಂಡುಬಂದಿದೆ. ಸ್ಥಳೀಯ ಧಾರಣೆಗಿಂತಲೂ ಸುಮಾರು 20 ರೂಪಾಯಿ ಹೆಚ್ಚಳ ಇದೆ. ಸದ್ಯ ರಬ್ಬರ್‌ ಬೇಡಿಕೆ ಮುಂದುವರಿದಿದ್ದು, ರಬ್ಬರ್‌ ಬೆಳೆಗಾರರಿಗೆ ಆಶಾದಾಯಕ ವಾತಾವರಣ ಸದ್ಯದ ಮಟ್ಟಿಗೆ ಕಂಡುಬಂದಿದೆ.

Advertisement
Advertisement

ಅಂತರಾಷ್ಟ್ರೀಯ ರಬ್ಬರ್ ಮಾರುಕಟ್ಟೆಯಲ್ಲಿ ನೈಸರ್ಗಿಕ ರಬ್ಬರ್ ಬೆಲೆ ತನ್ನ ದಾಖಲೆಯನ್ನು ಮುಂದುವರೆಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 211 ರೂಪಾಯಿ ಇದ್ದರೆ ಕೊಟ್ಟಾಯಂನಲ್ಲಿ ಆರ್‌ಎಸ್‌ಎಸ್ 4 ಗ್ರೇಡ್‌ ರಬ್ಬರ್‌ಗೆ  ಕೆಜಿಗೆ 184 ರೂಪಾಯಿ ಇತ್ತು. ಅಂತರಾಷ್ಟ್ರೀಯ ರಬ್ಬರ್‌ ಧಾರಣೆಯು  ಜನವರಿ  ಮಧ್ಯದಿಂದ ಭಾರತೀಯ ಬೆಲೆಯನ್ನು ಮೀರಿಸಿದೆ. ಬೆಲೆ ವ್ಯತ್ಯಾಸವಿದ್ದರೂ, ವಿಯೆಟ್ನಾಂನಂತಹ ವಿವಿಧ‌ ರಬ್ಬರ್ ಉತ್ಪಾದಕ  ರಾಷ್ಟ್ರಗಳಿಗೆ ಕೂಡಾ ಆಮದು-ರಫ್ತು ಲಾಭವನ್ನು ಪಡೆಯಲು ಸಾಧ್ಯವಾಗಲಿಲ್ಲ. ಜಾಗತಿಕವಾಗಿ, ಶೀಟ್ ರಬ್ಬರ್ ಬಳಕೆಯು ಸುಮಾರು 10% ರಷ್ಟು ಹೆಚ್ಚಾಗಿದೆ. ಚೀನಾ, ಮಲೇಷ್ಯಾ ಮತ್ತು ಶ್ರೀಲಂಕಾ ರಬ್ಬರ್‌ ಬಳಕೆಯಲ್ಲಿ ಮುಂಚೂಣಿಯಲ್ಲಿದೆ, ವಿವಿಧ ಕಂಪನಿಗಳು ರಬ್ಬರ್‌ ಬೇಡಿಕೆ ವ್ಯಕ್ತಪಡಿಸಿವೆ.

ಸದ್ಯ ಭಾರತದಲ್ಲೂ ಕೈಗಾರಿಕೆಗಳಿಗೆ ಅನುಕೂಲಕರ ದರದಲ್ಲಿ ರಬ್ಬರ್‌ ಬೇಕಾಗಿದೆ. ಅಂತರಾಷ್ಟ್ರೀಯ ರಬ್ಬರ್‌ ಬೆಲೆ ಏರಿಕೆಯಾದಂತೆಯೇ ದೇಶೀಯ ವಲಯದಲ್ಲಿ ರಬ್ಬರ್‌ ಧಾರಣೆ ಆಶಾದಾಯಕವಾಗಿ ಏರಿಕೆ ಸಾಧ್ಯತೆ ಇದೆ. ಹೀಗಾಗಿ ಧಾರಣೆ ಏರಿಕೆ ಇನ್ನಷ್ಟು ಸಾಧ್ಯತೆ ಇದೆ.

ಸದ್ಯ ಬೇಸಗೆಯ ಕಾರಣದಿಂದ ರಬ್ಬರ್‌ ಟ್ಯಾಪಿಂಗ್‌ ಭಾರತದ ಹಲವು ಕಡೆ ಸ್ಥಗಿತಗೊಂಡಿದೆ. ಮಳೆಗಾಲ ಆರಂಭದಿಂದ ರಬ್ಬರ್‌ ಟ್ಯಾಪಿಂಗ್‌ ಮತ್ತೆ ಆರಂಭಗೊಳ್ಳಲಿದೆ. ಅದುವರೆಗೂ ರಬ್ಬರ್‌ ಧಾರಣೆಯಲ್ಲಿ ಏರಿಕೆ ಕಾಣಲಿದೆ. ಆ ಬಳಿಕದ ವಾತಾವರಣವೂ ಈಗಿನ ಲೆಕ್ಕಾಚಾರದಲ್ಲಿ ಆಶಾದಾಯಕ ವಾತಾವರಣ ಇದೆ.

Source : NRR News

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 15.06.2025 | ಜೂನ್.18ರಿಂದ ಮಳೆ ಪ್ರಮಾಣ ಕಡಿಮೆ ನಿರೀಕ್ಷೆ| ವಾಯುಭಾರ ಕುಸಿತ -ಮುಂಗಾರು ದುರ್ಬಲ ಸಾಧ್ಯತೆ

16.06.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…

3 minutes ago

ವಿದೇಶದಿಂದ ಹಳ್ಳಿಗೆ ಬಂದು ಕೃಷಿ ಸಾಧನೆ ಮಾಡಿದ ಯುವಕ

ಕೃಷಿಯನ್ನು ನಂಬಿ ಕೆಲಸ ಮಾಡಿದರೆ ಯಶಸ್ಸು ಕಾಣಬಹುದು ಎಂಬುದನ್ನು ರೈತ  ಯೋಗೇಶ್ ತೋರಿಸಿಕೊಟ್ಟಿದ್ದಾರೆ.…

1 hour ago

ಬದುಕು ಪುರಾಣ | ‘ಅವನೇನು.. ಹರಿಶ್ಚಂದ್ರನೋ!’

ನುಡಿದಂತೆ ನಡೆದಾತ ‘ರಾಜಾ ಹರಿಶ್ಚಂದ್ರ’. ಸತ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ತ್ಯಾಗಿ. ಅನೃತವನ್ನಾಡದೆ…

6 hours ago

ಗುರು ಆದಿತ್ಯ ರಾಜಯೋಗ | ಯಾರಿಗೆಲ್ಲಾ ಕುಬೇರ ಯೋಗ..?

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

6 hours ago

ಸೆ.30 ವರೆಗೆ ಆಗುಂಬೆ ಘಾಟಿಯಲ್ಲಿ ಭಾರೀ ವಾಹನ ಸಂಚಾರ ನಿರ್ಬಂಧ

ಸಾರ್ವಜನಿಕ ಹಿತದೃಷ್ಠಿಯಿಂದ ಆಗುಂಬೆ ಘಾಟಿಯ ಮೂಲಕ ನಾಳೆಯಿಂದ ಸೆಪ್ಟಂಬರ್ 30 ರವರೆಗೆ ಲಘು…

14 hours ago

ಕೃಷಿ ಸಂಸ್ಕರಣಾ ಘಟಕ | 15 ಲಕ್ಷ ರೂಪಾಯಿ ಸಹಾಯಧನ ನೀಡಲು ಸರ್ಕಾರ  ನಿರ್ಧಾರ

ಕೃಷಿ ಸಂಸ್ಕರಣಾ ಘಟಕ ಸ್ಥಾಪಿಸುವ ರೈತರಿಗೆ ಈ ವರ್ಷದಿಂದ ರಾಜ್ಯ ಸರ್ಕಾರ 9…

14 hours ago