Advertisement
The Rural Mirror ವಾರದ ವಿಶೇಷ

ಭಾರತವು ಅಪಾಯಕಾರಿ ಕಳೆನಾಶಕ ಏಕೆ ನಿಷೇಧಿಸಬೇಕು ? | ಡೌನ್‌ ಟು ಅರ್ಥ್‌ ವಿಶೇಷ ವರದಿಯಲ್ಲಿ ಹೇಳಿದೆ |

Share

ಗ್ಲೈಫೋಸೇಟ್ ಸಸ್ಯನಾಶಕ ಮತ್ತು ಅದರ ಉತ್ಪನ್ನಗಳ ಬಳಕೆಗೆ ಇತ್ತೀಚೆಗೆ ಕೇಂದ್ರ ಸರ್ಕಾರವು ಈಚೆಗೆ ನಿರ್ಬಂಧ ಹೇರಿದೆ. ಮನುಷ್ಯನ ಆರೋಗ್ಯದ ಮೇಲೆ ಗಂಭೀರ ಸಮಸ್ಯೆಗಳುಂಟಾಗಬಹುದು, ಮನುಷ್ಯರು ಹಾಗೂ ಪ್ರಾಣಿಗಳಿಗೆ ಅಪಾಯವುಂಟಾಗಬಹುದು ಎಂಬ ಭೀತಿಯಿಂದ ಸರ್ಕಾರ ಈ ನಿರ್ಬಂಧ ಹೇರಿದೆ. ಆದರೆ ಇದನ್ನು ಜಾಗತಿಕ ಅಧ್ಯಯನಗಳು ಮತ್ತು ನಿಯಂತ್ರಕ ಸಂಸ್ಥೆಗಳ ಅನುಮೋದನೆಗಳನ್ನು ಉಲ್ಲೇಖಿಸಿ ಉದ್ಯಮ ಸಂಘ, ಆಗ್ರೋ-ಕೆಮಿಕಲ್ ಫೆಡರೇಶನ್ ಆಫ್ ಇಂಡಿಯಾ(AGFI) ವಿರೋಧಿಸಿದೆ.

Advertisement
Advertisement
ಗ್ಲೈಫೋಸೇಟ್ ಮತ್ತು ಅದರ ಸಂಯೋಜನೆಗಳನ್ನು ವ್ಯಾಪಕವಾಗಿ ನೋಂದಾಯಿಸಲಾಗಿದ್ದು, ಪ್ರಸ್ತುತ ಐರೋಪ್ಯ ಒಕ್ಕೂಟ ಮತ್ತು ಅಮೆರಿಕ ಸೇರಿದಂತೆ 160ಕ್ಕೂ ಹೆಚ್ಚು ದೇಶಗಳಲ್ಲಿ ಬಳಸಲಾಗುತ್ತಿದೆ. ಜಗತ್ತಿನಾದ್ಯಂತ ರೈತರು ಕಳೆದ 40 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಸುರಕ್ಷಿತ ಮತ್ತು ಪರಿಣಾಮಕಾರಿ ಕಳೆ ನಿಯಂತ್ರಕವಾಗಿ ರೈತರು ಬಳಸುತ್ತಿದ್ದಾರೆ.
ಗ್ಲೈಫೋಸೇಟ್ ಬಳಕೆಯನ್ನು ನಿರ್ಬಂಧಿಸಲಾಗಿದ್ದು, ಕೀಟ ನಿಯಂತ್ರಣ ನಿರ್ವಾಹಕರನ್ನು (PCOs) ಹೊರತುಪಡಿಸಿ ಬೇರೆ ಯಾರೂ ಗ್ಲೈಫೋಸೇಟ್ ಬಳಸಬಾರದು ಎಂದು ಕೃಷಿ ಸಚಿವಾಲಯವು  ಅಕ್ಟೋಬರ್ 25 ರಂದು ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.
Advertisement

ಆದರೆ ಡೌನ್‌ ಟು ಅರ್ಥ್‌ ತನ್ನ ವಿಶೇಷ ವರದಿಯಲ್ಲಿ  ಉಲ್ಲೇಖಿಸಿದೆ,  ಭಾರತವು ಅಪಾಯಕಾರಿ ಕಳೆನಾಶಕ ಗ್ಲೈಫೋಸೇಟ್ ಬಳಕೆಯನ್ನು ನಿರ್ಬಂಧಿಸದೆ  ನಿಷೇಧಿಸಬೇಕು ಏಕೆ ಎಂದು ವಿವರಿಸಿದೆ. ಡೌನ್‌ ಟು ಅರ್ಥ್‌ ಪರಿಸರ ಪರವಾಗಿ, ಕೃಷಿ ಪರವಾಗಿ ಧ್ವನಿ ಎತ್ತುತ್ತಿರುವ ಪತ್ರಿಕೆಯಾಗಿದೆ. ಈ ಹಿಂದೆ ಎಂಡೋಸಲ್ಫಾನ್‌ ಬಗ್ಗೆ ಸಮಗ್ರವಾದ ವರದಿ ಪ್ರಕಟ ಮಾಡಿತ್ತು.

ಕೀಟನಾಶಕ ಕಾಯಿದೆ, 1968 ರ ಅಡಿಯಲ್ಲಿ ಸ್ಥಾಪಿಸಲಾದ ತಜ್ಞರ ಸಮಿತಿಯ ವರದಿ ಮತ್ತು ನೋಂದಣಿ ಸಮಿತಿಯೊಂದಿಗೆ ಸಮಾಲೋಚಿಸಿದ ನಂತರ ಗ್ಲೈಫೋಸೇಟ್ ಬಳಕೆಯನ್ನು ನಿರ್ಬಂಧಿಸಿದೆ. ಭಾರತದಲ್ಲಿ ಸುಮಾರು 35 ಬ್ರಾಂಡ್‌ಗಳ ಗ್ಲೈಫೋಸೇಟ್ ಲಭ್ಯವಿದೆ ಎಂದು ಕೀಟನಾಶಕ ಆಕ್ಷನ್ ನೆಟ್‌ವರ್ಕ್ ವರದಿ ಹೇಳಿದೆ.

Advertisement

ಭಾರತದಲ್ಲಿ, ಕಳೆಗಳ ನಿಯಂತ್ರಣಕ್ಕಾಗಿ ಗ್ಲೈಫೋಸೇಟ್ ಬಳಕೆಯನ್ನು ಚಹಾ ಬೆಳೆ ಮತ್ತು ಬೆಳೆಯೇತರ ಪ್ರದೇಶಗಳಿಗೆ ಮಾತ್ರ ಅನುಮೋದಿಸಲಾಗಿದೆ. ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳ ಭಾರತದ ಪ್ರಮುಖ ಚಹಾ ತೋಟದ ರಾಜ್ಯಗಳಾಗಿವೆ. ಆದರೆ  ಚಹಾ ಬೆಳೆಗಳನ್ನು ಹೊಂದಿರದ ರಾಜ್ಯಗಳಲ್ಲಿ ಬಳಕೆ ಹೆಚ್ಚಾಗಿದೆ ಎಂದು ಸರ್ಕಾರದ ಅಂಕಿಅಂಶಗಳು ತೋರಿಸಿವೆ. ಉದಾಹರಣೆಗೆ, 2020-21ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಗ್ಲೈಫೋಸೇಟ್  ಬಳಕೆಯು ಉತ್ತರ ಪ್ರದೇಶದಲ್ಲಿ ಬಳಕೆಯಾಗಿದೆ. ನಂತರ ಗುಜರಾತ್ , ಜಮ್ಮು ಮತ್ತು ಕಾಶ್ಮೀರ , ತಮಿಳುನಾಡು. ಅಸ್ಸಾಂ , ಮಧ್ಯಪ್ರದೇಶ ಹಾಗೂ ಇತರ ರಾಜ್ಯಗಳಲ್ಲಿ ಬಳಕೆ ಇದೆ.

ಆಂಧ್ರಪ್ರದೇಶ, ಹಿಮಾಚಲ ಪ್ರದೇಶ, ಜಾರ್ಖಂಡ್, ಕರ್ನಾಟಕ, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳದ ರೈತರು 2017 ರಲ್ಲಿ ಪ್ಯಾನ್ ಇಂಡಿಯಾದ ಕ್ಷೇತ್ರ ಅಧ್ಯಯನದ ಸಮಯದಲ್ಲಿ 20 ಕ್ಕೂ ಹೆಚ್ಚು ಕ್ಷೇತ್ರ ಬೆಳೆಗಳಲ್ಲಿ ಅದರಲ್ಲೂ ಮುಖ್ಯವಾಗಿ 16 ಆಹಾರ ಬೆಳೆಗಳಲ್ಲಿ ಗ್ಲೈಫೋಸೇಟ್ ಅನ್ನು ಅಕ್ರಮವಾಗಿ ಬಳಸುತ್ತಿರುವುದು ಕಂಡುಬಂದಿದೆ ಎಂದು ವರದಿಯಾಗಿದೆ.

Advertisement

ಕೇರಳ ಸರ್ಕಾರವು ಜೂನ್ 20, 2019 ರಂದು ಕೇಂದ್ರ ಸರ್ಕಾರಕ್ಕೆ ಬರೆದ ಪತ್ರದಲ್ಲಿ ಗ್ಲೈಫೋಸೇಟ್ (ಕಳೆನಾಶಕ) ಅನ್ನು ರೈತರು ಭತ್ತದ ಗದ್ದೆಗಳಲ್ಲಿ ವ್ಯಾಪಕವಾಗಿ ಮತ್ತು ವಿವೇಚನೆಯಿಲ್ಲದೆ ಬಳಸುತ್ತಿರುವ ಬಗ್ಗೆ ವರದಿ ಮಾಡಿದೆ. ಹಣ್ಣುಗಳು ಮತ್ತು ತರಕಾರಿಗಳಲ್ಲಿ ಹೆಚ್ಚಿನ ಕೀಟನಾಶಕಗಳು ತೋರಿಸುತ್ತವೆ ಎಂದೂ ಕೇರಳದ ಕೃಷಿ ವಿಶ್ವವಿದ್ಯಾಲಯದ ಅಧ್ಯಯನ ವರದಿಯನ್ನು ಉಲ್ಲೇಖಿಸಿದೆ.

ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ ಎನ್ನುವ ಸಂಸ್ಥೆ 2015 ರಲ್ಲಿ ಗ್ಲೈಫೋಸೇಟ್ ಕಾರ್ಸಿನೋಜೆನಿಕ್‌ ಎಂದು ಹೇಳಿದೆ. ಯುರೋಪಿಯನ್ ಕೆಮಿಕಲ್ ಏಜೆನ್ಸಿಯು ಗ್ಲೈಫೋಸೇಟ್ ಕಣ್ಣುಗಳಿಗೆ  ಹಾನಿಯನ್ನುಂಟು ಮಾಡುತ್ತದೆ ಎಂದು ಕಂಡುಹಿಡಿದಿದೆ. ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ನಡೆಸಿದ ಅಧ್ಯಯನವು ಪಿಟ್ಯುಟರಿ ಗ್ರಂಥಿಯ ಕಾರ್ಯನಿರ್ವಹಣೆಯಲ್ಲಿ ಗ್ಲೈಫೋಸೇಟ್‌ಗೆ ಅಡ್ಡಿಪಡಿಸುತ್ತದೆ ಎಂದು ವರದಿಯಲ್ಲಿ ಹೇಳಿದೆ.

Advertisement

ಈಗಾಗಲೇ ಸುಮಾರು 35 ಕ್ಕೂ ಹೆಚ್ಚು ದೇಶಗಳಲ್ಲಿ ಗ್ಲೈಫೋಸೇಟ್ ಅನ್ನು ನಿಷೇಧಿಸಲಾಗಿದೆ. ಇವುಗಳಲ್ಲಿ ಶ್ರೀಲಂಕಾ, ನೆದರ್ಲ್ಯಾಂಡ್ಸ್, ಫ್ರಾನ್ಸ್, ಕೊಲಂಬಿಯಾ, ಕೆನಡಾ, ಇಸ್ರೇಲ್ ಮತ್ತು ಅರ್ಜೆಂಟೀನಾ ಮತ್ತು ಆರು ಭಾರತೀಯ ರಾಜ್ಯಗಳು ಸೇರಿವೆ.

ಆದರೆ ಭಾರತವು ಈಗ ಕೀಟ ನಿಯಂತ್ರಣ ನಿರ್ವಾಹಕರನ್ನು ಹೊರತುಪಡಿಸಿ ಯಾವುದೇ ವ್ಯಕ್ತಿ ಗ್ಲೈಫೋಸೇಟ್ ಬಳಸಬಾರದು ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಿದೆ.  ಆದರೆ, ಆ ಕೀಟ ನಿಯಂತ್ರಣ ನಿರ್ವಾಹಕರು ಯಾರು ಮತ್ತು ಈ ನಿಯಮವನ್ನು ಕಾರ್ಯಗತಗೊಳಿಸುವ ವಿಧಾನ ಏನು ಎಂಬುದು ಸ್ಪಷ್ಟವಾಗಿಲ್ಲ.

Advertisement

 

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ದಿಢೀರಾಗಿ ಬೆಳೆಯುವುದು , ಫಸಲು ನೀಡುವುದು ಅವಸರವೇ ಅಪಘಾತಕ್ಕೆ ಕಾರಣ | ಬೇಗ ಫಸಲು ಬಂದ ಸಸ್ಯ ಬೇಗನೇ ಸಾಯುತ್ತದೆ |

ದಶಕಗಳ ಹಿಂದೆ ವಿಮಾ ಸಂಸ್ಥೆಯೊಂದು ಸಾಗವಾನಿ ಬೆಳೆಯಲು ರೈತರ ಷೇರು ಪಡೆದುಕೊಂಡು ಹತ್ತೊ…

5 hours ago

ಮಾವು ಮಾಂತ್ರಿಕ ಹಾಗೂ ಸುಬ್ರಾಯ ಭಟ್ಟರ 200ಕ್ಕೂ ಹೆಚ್ಚು ನಾಡು ಮಾವು ಹಾಗೂ ಹಲಸು ತಳಿ ಸಂರಕ್ಷಣೆ

ನಾಡು ಮಾವು ಸಂರಕ್ಷಣೆ ಕೆಲಸದ ಮೊದಲ ದಿನವದು. ನವೆಂಬರ್ 2022. ಕಸಿ ಕಡ್ಡಿಗಳನ್ನು…

5 hours ago

ಭಾರತದಲ್ಲಿ ಏರಿದ ತಾಪಮಾನ | ಅತ್ತ ತಾಂಜೇನಿಯಾದಲ್ಲಿ ಭಾರೀ ಮಳೆ, ಪ್ರವಾಹ | 155 ಮಂದಿ ಸಾವು |

ಭಾರತದಲ್ಲಿ(India) ಉರಿ ಬಿಸಿಲಿನ ತಾಪ(Heat) ಏರುತ್ತಿದ್ದರೆ ತಾಂಜೇನಿಯಾದಲ್ಲಿ (Tanzania) ಕಳೆದ ವಾರದಿಂದ ಭಾರೀ…

9 hours ago

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಮುಂದಿನ ವಾರ ಕಾಡಲಿದೆ ರಣ ಬಿಸಿಲು | ದೂರ ಸಾಗಿದ ಮಳೆ | ಬಿಸಿ ಗಾಳಿಯ ಮುನ್ಸೂಚನೆ |

ಮಳೆ ಬರುವ ಕುರುಹೇ ಇಲ್ಲ. ಎಲ್ಲೆಲ್ಲೂ ಬಿಸಿಗಾಳಿಯ ಅಬ್ಬರ, ನೆತ್ತಿ ಸುಡುವ ಸೂರ್ಯ. ರಾಜ್ಯಾದ್ಯಂತ…

10 hours ago

ಹವಾಮಾನ ವೈಪರೀತ್ಯ | ಕೃಷಿ ಕಾರ್ಮಿಕರಿಗೆ ಈಗ ಬಿಸಿಗಾಳಿ ಸಂಕಷ್ಟ | ಕೃಷಿಗೂ ಸಮಸ್ಯೆ-ಕೃಷಿ ಬೆಳವಣಿಗೆ ಕುಂಠಿತ |

ತಾಪಮಾನ ಏರಿಕೆಯಿಂದ ಹಲವು ಕಡೆ ಸಮಸ್ಯೆಯಾಗುತ್ತಿದೆ. ಕೃಷಿ ನಷ್ಟದ ಜೊತೆಗೆ ಗ್ರಾಮೀಣ ಭಾಗದಲ್ಲಿ…

10 hours ago

ಮಳೆಗಾಗಿ ಪುತ್ತೂರು ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನದಲ್ಲಿ‌ಪರ್ಜನ್ಯ ಜಪ |

ಮಳೆಗಾಗಿ ಪುತ್ತೂರಿನ ಶ್ರೀ‌ಮಹಾಲಿಂಗೇಶ್ವರ ದೇವಳದಲ್ಲಿ‌ ಪರ್ಜನ್ಯ ಜ‌ಪ ನೆರವೇರಿತು.

12 hours ago