Advertisement
MIRROR FOCUS

ಜಗತ್ತಿನ ಅರಿಶಿನ ಮಾರುಕಟ್ಟೆಯಲ್ಲಿ ಭಾರತ ಮುಂಚೂಣಿ..!, ಆದರೆ ಸವಾಲುಗಳು….?

Share

ಭಾರತವು ಜಾಗತಿಕವಾಗಿ ಅರಿಶಿನದ ಅತಿದೊಡ್ಡ ಉತ್ಪಾದಕ, ಗ್ರಾಹಕ ಹಾಗೂ ರಫ್ತುದಾರ ರಾಷ್ಟ್ರವಾಗಿದೆ. ಜಾಗತಿಕ ಮಾರುಕಟ್ಟೆಯ ಶೇಕಡಾ 62 ಕ್ಕಿಂತ ಹೆಚ್ಚು ಪಾಲು ಭಾರತಕ್ಕಿದೆ. ಆದರೆ, ರಫ್ತು ಬೆಳೆಯುತ್ತಿದ್ದರೂ, ಆಮದು ಏರಿಕೆಯಾಗುತ್ತಿರುವುದು ಪೂರೈಕೆ ಸರಪಳಿಯಲ್ಲಿನ ಅಂತರದಲ್ಲಿಸೋಲಾಗುತ್ತಿದೆ.  ಕನಿಷ್ಟ ಬೆಂಬಲ ಬೆಲೆ,  ಹವಾಮಾನ ಅಸ್ಥಿರತೆ ಮತ್ತು ಸುಗ್ಗಿಯ ನಂತರದ ಸಂಸ್ಕರಣೆ–ಮೌಲ್ಯವರ್ಧನೆ ವ್ಯವಸ್ಥೆಗಳ ದುರ್ಬಲತೆಗಳು ಮುಖ್ಯ ಸವಾಲುಗಳಾಗಿವೆ.

ಆಂಧ್ರಪ್ರದೇಶ, ತೆಲಂಗಾಣ ಮತ್ತು ಬಿಹಾರ  ರಾಜ್ಯಗಳು ಪ್ರಮುಖ ಅರಶಿನ ಉತ್ಪಾದನಾ ವಲಯಗಳಾಗಿವೆ. ಪ್ರಸಿದ್ಧ ಅರಿಶಿನ ಸಮೂಹಗಳಲ್ಲಿ ಈರೋಡ್(ತಮಿಳುನಾಡು), ನಿಜಾಮಾಬಾದ್ (ತೆಲಂಗಾಣ) ಮತ್ತು ಸಾಂಗ್ಲಿ (ಮಹಾರಾಷ್ಟ್ರ) ಪ್ರಮುಖವಾಗಿವೆ. ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಜಾಗತಿಕ ಮಾನದಂಡಗಳನ್ನು ಇವು ಪೂರೈಸುತ್ತಿವೆ. ಅರಿಶಿನವು Curcuma longa ಸಸ್ಯದಿಂದ ದೊರಕುವ ಹಳದಿ ಮಸಾಲೆ. ಉರಿಯೂತ ನಿವಾರಕ ಗುಣಲಕ್ಷಣಗಳ ಕಾರಣ ಅಡುಗೆ ಹಾಗೂ ಆಯುರ್ವೇದದಲ್ಲಿ ಪ್ರಮುಖ ಸ್ಥಾನ ಹೊಂದಿದೆ.

ಗಮನಾರ್ಹ GI ಟ್ಯಾಗ್‌ಗಳಲ್ಲಿ, Erode Turmeric, Lakadong Turmeric, Kandhamal Haladi, Waigaon Turmeric, Sangli Turmeric, Vasmath Haldi ಹಾಗೂ ಬಿಹಾರದ ಸಮಸ್ತಿಪುರ ಜಿಲ್ಲೆಯ ‘ರಾಜೇಂದ್ರ ಸೋನಿಯಾ’ ವಿಧವು 7–8% ಕರ್ಕ್ಯುಮಿನ್ ಅಂಶ ಹೊಂದಿದ್ದು GI ಟ್ಯಾಗ್ ಪ್ರಕ್ರಿಯೆಯಲ್ಲಿದೆ.

ಭಾರತದಿಂದ ಅರಿಶಿನವನ್ನು ಆಮದು ಮಾಡುವ ಪ್ರಮುಖ ರಾಷ್ಟ್ರಗಳಲ್ಲಿ ಬಾಂಗ್ಲಾದೇಶ, ಯುಎಇ, ಮಲೇಷ್ಯಾ, ಯುಎಸ್, ಮೊರಾಕೊ ಮತ್ತು ಇರಾನ್ ಸೇರಿವೆ. ಆದರೂ, ಹವಾಮಾನ ಅಸ್ಥಿರತೆ ಮತ್ತು ಉತ್ಪಾದನಾ ಕೊರತೆಯಿಂದಾಗಿ ಭಾರತವು ಕೆಲವೊಮ್ಮೆ ಇತರ ರಾಷ್ಟ್ರಗಳಿಂದ ಆಮದು ಮಾಡುವ ಪರಿಸ್ಥಿತಿ ಎದುರಿಸುತ್ತಿದೆ. ಇದು ಮೌಲ್ಯ ಸರಪಳಿಯಲ್ಲಿ ಸಮಗ್ರ ಯೋಜನೆ ಅಗತ್ಯವಿದೆ ಎಂಬುದನ್ನು ಸೂಚಿಸುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ರಫ್ತು ಸಾಮರ್ಥ್ಯವನ್ನು ಅರಿತು, ಕೇಂದ್ರ ಸರ್ಕಾರವು National Turmeric Board ಅನ್ನು 2025ರ ಜನವರಿ ಸ್ಥಾಪಿಸಿದೆ. ಇದರ ಪ್ರಧಾನ ಕಚೇರಿ ನಿಜಾಮಾಬಾದ್‌ನಲ್ಲಿ ಇದೆ.  ಹೈದರಾಬಾದ್‌ನಲ್ಲಿ ನಡೆದ ಅರಿಶಿನ ಮೌಲ್ಯ ಸರಪಳಿ ಶೃಂಗಸಭೆಯಲ್ಲಿ 2047ರ ವಿಕ್ಷಿತ್ ಭಾರತ ದೃಷ್ಟಿಕೋನದೊಂದಿಗೆ ನಾವೀನ್ಯತೆ, ಮೌಲ್ಯವರ್ಧನೆ ಹಾಗೂ ಉತ್ಪನ್ನ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.

ಮುಂದಿನ ಅಗತ್ಯ ಕ್ರಮಗಳು: MSP ಪರಿಗಣನೆ ಮತ್ತು ಬೆಲೆ ಸ್ಥಿರತೆ, ಸುಗ್ಗಿಯ ನಂತರದ ಸಂಸ್ಕರಣೆ ಮೂಲಸೌಕರ್ಯ, ಮೌಲ್ಯವರ್ಧಿತ ಉತ್ಪನ್ನಗಳ ಅಭಿವೃದ್ಧಿ, ರಫ್ತು ಮಾರುಕಟ್ಟೆ ವೈವಿಧ್ಯೀಕರಣ, ಹವಾಮಾನ–ಸ್ಮಾರ್ಟ್ ಕೃಷಿ ಅಗತ್ಯವಾಗಿದೆ.  ಭಾರತವು ಜಾಗತಿಕ ಅರಿಶಿನ ಮಾರುಕಟ್ಟೆಯಲ್ಲಿ ನಾಯಕತ್ವವನ್ನು ಉಳಿಸಿಕೊಳ್ಳಲು ಪೂರೈಕೆ ಸರಪಳಿಯ ದುರ್ಬಲತೆಗಳನ್ನು ಸರಿಪಡಿಸುವುದು ಅವಶ್ಯಕ. ನೀತಿ, ನಾವೀನ್ಯತೆ ಮತ್ತು ರೈತರ ಭಾಗವಹಿಸುವಿಕೆ ಒಟ್ಟುಗೂಡಿದಾಗ ಮಾತ್ರ ‘ಹಳದಿ ಬಂಗಾರ’ದ ಸಂಪೂರ್ಣ ಸಾಮರ್ಥ್ಯ ಸಾಕಾರವಾಗುತ್ತದೆ ಎಂದು “ಆಗ್ರೋ ಸ್ಪೆಕ್ಟ್ರಂ” ಕೃಷಿ ಪತ್ರಿಕೆ ವರದಿ ಮಾಡಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಮಾನವ–ಆನೆ…

1 hour ago

ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ

ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು INSPIRE Award ಗೆ ಆಯ್ಕೆಯಾಗಿದ್ದಾರೆ. ವೈಜ್ಞಾನಿಕ…

10 hours ago

ನೆಮ್ಮದಿಗಾಗಿ ಬದುಕಿ; ಹಣ-ಅಧಿಕಾರಕ್ಕಾಗಿ ಅಲ್ಲ

ನೆಮ್ಮದಿಗಾಗಿ ಬದುಕಬೇಕು, ಹಣ-ಅಧಿಕಾರಕ್ಕಾಗಿ ಅಲ್ಲ ಎಂದು ರಾಮಚಂದ್ರಾಪುರ ಶ್ರೀಗಳು ಕರೆ ನೀಡಿದರು. ಸಂನ್ಯಾಸ…

11 hours ago

ಅಡಿಕೆ ಆಮದು ಎಂಬ ‘ಮಾಯಾಜಾಲ’: ನಡೆಯುತ್ತಿದೆಯೇ ಬೆಳೆಗಾರರ ಮೇಲೆ ಸೈಕಲಾಜಿಕಲ್ ಅಟ್ಯಾಕ್…!?

ಅಡಿಕೆ ದರ ಇಳಿಕೆಗೆ ಆಮದುಗಿಂತ ಅಡಿಕೆ ಕೊಯ್ಲು ಕಾಲದ ಸರಬರಾಜು ಒತ್ತಡ ಮತ್ತು…

12 hours ago

ಮಂಗಳೂರು ಅಡಿಕೆ ಮಾರುಕಟ್ಟೆ | ಐದು ವರ್ಷದ ಧಾರಣೆ ಹೇಳುವ ಏರುಪೇರುಗಳ ಕಥೆ..!

ಐದು ವರ್ಷದ ದತ್ತಾಂಶವು ಮಂಗಳೂರು ಅಡಿಕೆ ಮಾರುಕಟ್ಟೆ ಚಕ್ರಾಕಾರ ಸ್ವಭಾವ ಹೊಂದಿರುವುದನ್ನು ತೋರಿಸಿದೆ.…

1 day ago

ಮಾರ್ಚ್‌ನಲ್ಲಿ‌ ಮಳೆ ಶಾಕ್….! ರೈತರಿಗೆ ನಷ್ಟದ ಭೀತಿ

ದೇಶದ ವಿವಿದೆಡೆ ಮಾರ್ಚ್‌ ತಿಂಗಳಲ್ಲಿ ಉತ್ತಮ ಮಳೆಯಾಗಿದೆ. ವಿಶೇಷವಾಗಿ ರಾಜ್ಕೋಟ್‌ನಲ್ಲಿ ಅಸಾಮಾನ್ಯ ಹವಾಮಾನದಿಂದ…

1 day ago