ಔಷಧಿಯ ಗುಣಗಳುಳ್ಳ ಇಪ್ಪೆ ಮರ ಮಲೆನಾಡಿನ ಕಾಡು ಬೆಳೆಗಳಲ್ಲಿ ಒಂದು.ಮರದ ಬುಡದಲ್ಲಿ ಕುಳಿತರು ಸಾಕು ಮನಸ್ಸು ಶಾಂತವಾಗುತ್ತದೆ. ಇದರ ಎಲೆ ಹೂವು ಕಾಯಿ ತೊಗಟೆ ಇವು ಉತ್ತಮ ಔಷಧಿಯು ಹೌದು. ರುಚಿಯು ಹೌದು.
ಸಾಧಾರಣವಾಗಿ ಮೇ ಕೊನೆಯ ವಾರಗಳಲ್ಲಿ ಇದರ ಹಣ್ಣು ಬೀಜ ಸಿಕ್ಕುತ್ತದೆ. ಬೀಜವನ್ನು ಸಂಗ್ರಹಿಸಿ ಉಪ್ಪಾಗೆ, ಮುರುಗನ ಬೀಜ ದಿಂದ ಎಣ್ಣೆ ತೆಗೆದಂತೆ (ತುಪ್ಪ) ತೆಗೆಯಬೇಕು ಇದು ಎರಡು ವರ್ಷಕ್ಕೂ ಹಾಳಾಗುವುದಿಲ್ಲ.
1) ಇಪ್ಪೆ ತುಪ್ಪವನ್ನು ಬಿಸಿ ಮಾಡಿ ಹಚ್ಚುವುದರಿಂದ ಸಂಧಿವಾತ ಗುಣವಾಗುತ್ತದೆ.
2) ತಲೆಗೆ ಹಾಕುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ ಮತ್ತು ತಲೆನೋವು ಗುಣವಾಗುತ್ತದೆ.
3) ಇಪ್ಪೇಚಕ್ಕೆ ಕಷಾಯ ಸಂಧಿವಾತಕ್ಕೆ ಒಳ್ಳೆಯ ಔಷಧಿ.
4) ತೊಗಟೆಯ ಪುಡಿಯಲ್ಲಿ ಹಲ್ಲು ಉಜ್ಜುವುದರಿಂದ ಹಲ್ಲಿನ ಸಮಸ್ಯೆಗಳು ದೂರವಾಗುತ್ತವೆ.
5) ತೊಗಟೆಯ ಪುಡಿಯನ್ನು ತೋನ್ನು ರೋಗದಲ್ಲಿ ಉಪಯೋಗಿಸುತ್ತೇನೆ.
6) ತೊಗಟೆಯ ಪುಡಿಯನ್ನು ಕ್ಯಾನ್ಸರ್ ರೋಗದಲ್ಲಿ ಬಳಸುತ್ತೇನೆ.
7) ತಿಪ್ಪೆಯ ಹೂವಿನಲ್ಲಿ ಮಾಡಿದ ಲೇಹ್ಯ ನಿದ್ದೆಗೆ ಮತ್ತು ಪುಷ್ಟಿಗೆ ತುಂಬಾ ಒಳ್ಳೆಯದು.
8) ಹೂವನ್ನು ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿ ಬೇಕಾದಾಗ ಶರಭತ್ ಮಾಡಿ ಕುಡಿಯಬಹುದು.
9) ಹೂವನ್ನು ನೀರು ಅಥವಾ ಹಾಲು ಹಾಕಿ ಕುದಿಸಿ ಕುಡಿಯುವುದರಿಂದ ಕರುಳಿನ ಹುಣ್ಣು ಗುಣವಾಗುತ್ತದೆ.
10) ಹಸಿ ಹೂವನ್ನು ತಿನ್ನುವುದರಿಂದ ಕೆಮ್ಮು ಗುಣವಾಗುತ್ತದೆ.
11) ಅರೆಬರೆ ವಣಗಿದ ಹಣ್ಣು ಯಾವ ಡ್ರೈಫ್ರೂಟಿಗೂ ಕಡಿಮೆ ಇಲ್ಲ. ಶಾಲಾ ದಿನಗಳಲ್ಲಿ ಮರದ ಕೆಳಗೆ ಹೆಕ್ಕಿ ತಿನ್ನುವುದೇ ಒಂದು ಸಂಭ್ರಮ. ಹೆಚ್ಚಾಗಿ ಮತ್ತು ಬರುವ ಸಾಧ್ಯತೆಯೂ ಇದೆ.
12) ಇದರ ಎಳೆಯ ಎಲೆಗಳನ್ನು ಎಣ್ಣೆಯಲ್ಲಿ ಕುದಿಸಿ ಕಿವಿಗೆ ಹಾಕುವುದರಿಂದ ಕಿವಿ ನೋವು ಗುಣವಾಗುತ್ತದೆ.
13) ಬೆಳೆದ ಮರದಿಂದ ಮಣೆ (ಕುಳಿತು ಕೊಳ್ಳಲು) ಮಾಡಿ ಕುಳಿತು ಜಪ ಮಾಡುವುದರಿಂದ ಬೇಗನೆ ಸಿದ್ದಿ ಆಗುವುದು ಎನ್ನುವ ನಂಬಿಕೆ.
14) ಮರದ ಕಡಗೋಲು ತಯಾರಿಸಿ ಮಜ್ಜಿಗೆ ಕಡೆಯುವುದರಿಂದ ವಾತರೋಗ ನಿವಾರಣೆ ಆಗುತ್ತದೆ. ದೇಹಕ್ಕೂ ತಂಪು.
ಖ್ಯಾತ ನಾಟಿ ವೈದ್ಯೆ ಸುಮನಾ ಮಳಗದ್ದೆಯವರು ಇಪ್ಪೆ ಮರದ ಉಪಯೋಗಗಳ ಬಗ್ಗೆ ಬಹಳ ಸೊಗಸಾಗಿ ಹೇಳಿದ್ದಾರೆ. ಅವರನ್ನು ಸಂಪರ್ಕಿಸೋದಾದ್ರೆ : ಸುಮನಾ ಮಳಲಗದ್ದೆ 9980182883.
ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ₹28.52 ಕೋಟಿ ವೆಚ್ಚದ 60 ದಿನಗಳ…
ಬಿಹಾರದ ಯುರೆನ್ನಲ್ಲಿ ಪತ್ತೆಯಾದ 5 ಲಕ್ಷಕ್ಕೂ ಹೆಚ್ಚು ಸುಟ್ಟ ಬೀಜಗಳ ಅಧ್ಯಯನವು ಭಾರತದ…
ಶ್ರೀಕೃಷ್ಣನನ್ನು ಕೇವಲ ದೇವರ ಅವತಾರವಾಗಿ ನೋಡುವುದಕ್ಕಿಂತ, ಮನುಷ್ಯರ ನಡುವೆ ನಿಂತು ಉಪದೇಶಿಸಿದ ಮಾನವಶಿಕ್ಷಕನಾಗಿಯೂ…
ಮುಂಗಾರು ದುರ್ಬಲಗೊಂಡಿದ್ದರೂ ಸ್ಥಳೀಯ ಮೋಡಗಳ ಬೆಳವಣಿಗೆಯಿಂದ ಮಲೆನಾಡು ಹಾಗೂ ಒಳನಾಡಿನಲ್ಲಿ ಗುಡುಗು ಸಹಿತ…
2024ರಲ್ಲಿ ಭಾರತದಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರು ಸೇರಿ 10,546 ಮಂದಿ ಆತ್ಮಹತ್ಯೆಯಿಂದ…
ಕರ್ನಾಟಕದಲ್ಲಿ ಈಗಾಗಲೇ 13,500 ಶಿಕ್ಷಕರ ನೇಮಕಾತಿ ನಡೆದಿದ್ದು, ಶಿಕ್ಷಣ ಇಲಾಖೆಯಲ್ಲಿ ಇನ್ನೂ 16…