ಭೂಮಿ ಯಾಕೆ ಹೀಗಾಯ್ತು? | ಕೆಂಪು ಬಣ್ಣಕ್ಕೆ ತಿರುಗಿದ್ಯಂತೆ ಭೂಮಿ ಇಸ್ರೋ ಬಿಚ್ಚಿಟ್ಟ ಸತ್ಯಗಳಿವು…!

April 3, 2023
11:07 AM

ಇಸ್ರೋ ಸಾಟಲೈಟ್ ಮೂಲಕ ಕಳುಹಿಸುವ ಭೂಮಿಯ ಹಲವಾರು ಚಿತ್ರಗಳನ್ನು, ವಿಡಿಯೋಗಳನ್ನು ಕಂಡಿದ್ದೇವೆ. ಹಸಿರು ಮತ್ತು ನೀಲಿಯಿಂದ ಸಂಪೂರ್ಣಗೊಂಡಿದ್ದ ಭೂಮಿ ಇದೀಗ ಕೆಂಪು ಬಣ್ಣಕ್ಕೆ ತಿರುಗಿದ್ಯಂತೆ.

Advertisement
Advertisement
Advertisement

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇತ್ತೀಚೆಗೆ ಭೂಮಿಗೆ ಸಂಬಂಧಿಸಿದ 5 ಚಿತ್ರಗಳನ್ನು ಬಿಡುಗಡೆ ಮಾಡಿದೆ. ಆ ಫೋಟೋಗಳಲ್ಲಿ ಭೂಮಿ ಕೆಂಪಾಗಿ ಕಾಣುತ್ತದೆ. ನೈಸರ್ಗಿಕ ನೀಲಿ ಬಣ್ಣಕ್ಕೆ ಬದಲಾಗಿ ಕೆಂಪು ಬಣ್ಣ ಯಾವುದು ಎಂದು ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ. ಬಾಹ್ಯಾಕಾಶದಲ್ಲಿರುವ ಉಪಗ್ರಹಗಳಿಂದ ಭೂಮಿಯನ್ನು ನೋಡಿದಾಗ ಈ ರೀತಿ ಕಾಣುತ್ತದೆ ಎಂದು ಇಸ್ರೋ ಹೇಳಿದೆ.

Advertisement

ಇಸ್ರೋ ಶೇರ್​ ಮಾಡಿದ ಫೋಟೋ ಈಗ ಭಾರೀ ಸದ್ದು ಮಾಡ್ತಾ ಇದೆ. ಯಾಕಂದರೆ ಭೂಮಿ ಹಸಿರು, ನೀಲಿಯಿಂದ ಕೂಡಿತ್ತು. ಆದರೆ, ಈ ಫೋಟೋದಲ್ಲಿ ಕೆಂಪಾಗಿ ಕಾಣಬಹುದು. ನೆಟಿಜನ್​ಗಳು ನಿಜಕ್ಕೂ ಶಾಕ್​ ಆಗಿದ್ದಾರೆ.

ವಾಸ್ತವವಾಗಿ ಇವು ನಿಜವಾದ ಭೂಮಿಯ ಬಣ್ಣಗಳಲ್ಲ. ಆದರೆ, EOS-06 ಉಪಗ್ರಹದಿಂದ ಭೂಮಿಯನ್ನು ಈ ಬಣ್ಣಗಳಲ್ಲಿ ನೋಡಲಾಗಿದೆ. ಈ ಉಪಗ್ರಹವು ಸಾಗರ ಬಣ್ಣದ ಮಾನಿಟರ್ ಹೊಂದಿದೆ. ಅದರ ಮೂಲಕ ಭೂಮಿಯು ಹೇಗಿತ್ತು ಎಂಬುದನ್ನು ಆ ಉಪಗ್ರಹ ಒದಗಿಸಿದ ದತ್ತಾಂಶವನ್ನು ತೆಗೆದುಕೊಂಡು ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ (NRSC) ಜೊತೆಗೂಡಿ ISRO 2939 ಫೋಟೋಗಳನ್ನು ಒಟ್ಟುಗೂಡಿಸಿ ಈ 5 ಫೋಟೋಗಳನ್ನು ರಚಿಸಿದೆ.

Advertisement

2939 ಫೋಟೋಗಳಲ್ಲಿ ಪ್ರತಿಯೊಂದೂ 1 ಕಿಲೋಮೀಟರ್ ರೆಸಲ್ಯೂಶನ್ ಹೊಂದಿದೆ. ಒಟ್ಟು 300 GB ಡೇಟಾವನ್ನು ಪ್ರಕ್ರಿಯೆಗೊಳಿಸಲಾಗಿದೆ. ಭೂಮಿಯು ಹೊಚ್ಚಹೊಸದಾಗಿ ಕಾಣುತ್ತಿತ್ತು. ಈ ಫೋಟೋಗಳನ್ನು ಫೆಬ್ರವರಿ 1 ಮತ್ತು 15, 2023 ರ ನಡುವೆ ತೆಗೆದುಕೊಳ್ಳಲಾಗಿದೆ ಎಂದು ಇಸ್ರೋ ಹೇಳಿದೆ.

Advertisement

ಇಸ್ರೋದ ಓಷನ್ ಕಲರ್ ಮಾನಿಟರ್ (OCM) ನಮ್ಮ ಭೂಮಿಯನ್ನು 13 ವಿಭಿನ್ನ ತರಂಗಾಂತರಗಳಲ್ಲಿ ಗಮನಿಸುತ್ತದೆ. ಹೀಗಾಗಿ ಇದು ಭೂಮಿ, ನೀರು ಮತ್ತು ಸಾಗರಗಳ ಅತ್ಯಂತ ವಿವರವಾದ ಡೇಟಾವನ್ನು ಒದಗಿಸುತ್ತದೆ. OCM ಎಷ್ಟು ಚೆನ್ನಾಗಿ ಕೆಲಸ ಮಾಡುತ್ತದೆ ಎಂದರೆ ಅದು ಸಾಗರಗಳ ಒಳಗೆ ಎಲ್ಲೋ ಕಾಡುಗಳನ್ನು ಪತ್ತೆ ಮಾಡುತ್ತದೆ.

ಇಸ್ರೋ ಈ ಫೋಟೋಗಳನ್ನು ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದೆ. ಇವು ನೆಟಿಜನ್‌ಗಳಿಗೆ ಇಷ್ಟವಾಗಿವೆ. ಅದೇ ಸಮಯದಲ್ಲಿ ಆಶ್ಚರ್ಯ. ಒಬ್ಬ ಬಳಕೆದಾರರು, “ಈ ಫೋಟೋಗಳು ಮನಸ್ಸಿಗೆ ಮುದನೀಡುತ್ತವೆ” ಎಂದು ಕಾಮೆಂಟ್ ಮಾಡಿದ್ದಾರೆ.

Advertisement

ಭೂಮಿಯ ಸಾಮಾನ್ಯ ಬಣ್ಣಗಳ ಹೊರತಾಗಿ, ಅಂತಹ ಬಣ್ಣಗಳನ್ನು ಏಕೆ ಹೊಂದಿದೆ? ಅದಕ್ಕೂ ಮೇಲಾಗಿ ಸಮುದ್ರದೊಳಗಿನ ಕಾಡುಗಳನ್ನು ಗುರುತಿಸಲು ಈ ಬಣ್ಣಗಳಿವೆ ಎಂದು ತಿಳಿಸಿದ್ದಾರೆ ವಿಜ್ಞಾನಿಗಳು. ಆದ್ದರಿಂದ ಇವು ಭೂಮಿಗೆ ಸೂಕ್ತವಾದ ಬಣ್ಣಗಳು ಎಂದು ಅವರು ಹೇಳುತ್ತಾರೆ. ಇದರ ಮೂಲಕ ಆಳವಾದ ನೀಲಿ ಸಮುದ್ರಗಳು ಮತ್ತು ದಟ್ಟವಾದ ಕಾಡುಗಳು ಎಲ್ಲವೂ ಸ್ಪಷ್ಟವಾಗಿ ಗೋಚರಿಸುತ್ತವೆ ಎಂದು ಹೇಳಲಾಗುತ್ತದೆ.

Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಭಾರತದಲ್ಲಿ ಸಮುದ್ರ ಜಲಕೃಷಿ ಚಟುವಟಿಕೆ ಉತ್ತೇಜನ | ಸಮುದ್ರ ಮೀನಿನ ಕೃಷಿಯಲ್ಲಿ ಹೊಸ ಸಾಧನೆ ಮಾಡಿದ ಸಿಎಂಎಫ್​ಆರ್​ಐ
April 24, 2024
9:33 PM
by: The Rural Mirror ಸುದ್ದಿಜಾಲ
ಪ್ಯಾರೀಸ್‌ನಲ್ಲಿ ಕ್ರೀಡೆಗಳ ಮಹಾಸಂಗಮ ಒಲಿಂಪಿಕ್ಸ್‌ಗೆ ಕೆಲವೇ ದಿನ ಬಾಕಿ | ಕೈಬೀಸಿ ಕರೆಯುತ್ತಿದೆ ಪ್ಯಾರಿಸ್‌ | ಒಲಿಂಪಿಕ್ಸ್‌ನಲ್ಲಿರಲಿದೆ ನೂರಾರು ವಿಶೇಷ
April 24, 2024
9:02 PM
by: The Rural Mirror ಸುದ್ದಿಜಾಲ
ಹೊಸ ಬೆಳೆ | ರೈತರು ಚಿಂತನೆ ಮಾಡಬೇಕಾದ್ದೇನು…? ಕರಾವಳಿ, ಮಲೆನಾಡಿನಲ್ಲಿ ಉತ್ಪತ್ತಿ ನೀಡುವ “ಪರ್ಯಾಯ ಬೆಳೆಯ ಅಗತ್ಯವಿದೆ” |
April 24, 2024
2:57 PM
by: ಪ್ರಬಂಧ ಅಂಬುತೀರ್ಥ
ಪ್ಯಾಕೆಟ್ ಹಿಟ್ಟು ಆರೋಗ್ಯಕ್ಕೆ ಒಳ್ಳೆಯದೆ ಅಥವಾ ಹಾನಿಕರವೇ? ಪ್ಯಾಕೆಟ್ ಹಿಟ್ಟು ಉಪಯೋಗಿಸಿದರೆ ಏನಾಗುತ್ತದೆ ತಿಳಿದುಕೊಳ್ಳಿ..
April 24, 2024
2:32 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror