ಇಸ್ರೋದ ‘Naughty Boy’ | ನಿಖರವಾದ ಹವಾಮಾನ ಮಾಹಿತಿಯನ್ನು ಒದಗಿಸುವ ಉಪಗ್ರಹ | ಕಕ್ಷೆ ಸೇರಿದ ‘ಇನ್‌ಸ್ಯಾಟ್‌-3ಡಿಎಎಸ್‌’ ಉಪಗ್ರಹ

February 17, 2024
4:22 PM

ಇಸ್ರೋ(ISRO) ಒಂದಾದ ಮೇಲೊಂದರಂತೆ ಸಾಧನೆಗಳನ್ನು ಮಾಡುತ್ತಲೇ ಇದೆ. ಈಗಾಗಲೇ ಹವಾಮಾನ(Weather) ಕುರಿತ ಮಾಹಿತಿಗಾಗಿ  ಅನೇಕ ಉಪಗ್ರಹಗಳನ್ನು ಉಡಾವಣೆ(Launch) ಮಾಡಿದ್ದರೂ ಇನ್ನಷ್ಟು ನಿಖರವಾದ ಹವಾಮಾನ ಮಾಹಿತಿ ನೀಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇಂದು ಉಪಗ್ರಹವನ್ನು ಉಡಾವಣೆ ಮಾಡಲಿದೆ. ನಿಖರವಾದ ಹವಾಮಾನ ಮಾಹಿತಿಯನ್ನು ಒದಗಿಸುವ ಉಪಗ್ರಹ INSAT-3DS  ಉಡಾವಣೆಯಾಗಿದ್ದು ಅದಕ್ಕೆ ‘ನಾಟಿ ಬಾಯ್’(‘Naughty Boy’) ಎಂದು ನಾಮಕರಣ ಮಾಡಲಾಗಿದೆ. ಇದೀಗ ಯಶಸ್ವಿಯಾಗಿ ಕಕ್ಷೆ ಸೇರಿದೆ.ಇಸ್ರೋ ಯೋಜಿಸಿದಂತೆ ಉಪಗ್ರಹ ಕಕ್ಷೆ ಸೇರುತ್ತಿದ್ದಂತೆ ವಿಜ್ಞಾನಿಗಳು ಸಂಭ್ರಮಾಚರಣೆ ಮಾಡಿದರು

ಶನಿವಾರ ಸಂಜೆ 5.35ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜಿಎಸ್‌ಎಲ್‌ವಿ-ಎಫ್14 ಉಡ್ಡಯನವಾಗಿದೆ. ಇದು ಜಿಯೋಸಿಂಕ್ರೋನಸ್ ಟ್ರಾನ್ಸ್ಫರ್ ಆರ್ಬಿಟ್ (GTO) ನಲ್ಲಿ ಲಿಫ್ಟ್-ಆಫ್ ಆದ ಸುಮಾರು 20 ನಿಮಿಷಗಳ ನಂತರ ನಿಯೋಜಿಸಲ್ಪಡುತ್ತದೆ. ಇದು ಒಟ್ಟಾರೆಯಾಗಿ ರಾಕೆಟ್‌ನ 16 ನೇ ಮಿಷನ್ ಆಗಿರುತ್ತದೆ ಮತ್ತು ದೇಶೀಯವಾಗಿ ಅಭಿವೃದ್ಧಿಪಡಿಸಿದ ಕ್ರಯೋಜೆನಿಕ್ ಎಂಜಿನ್ ಅನ್ನು ಬಳಸಿಕೊಂಡು ಅದರ 10 ನೇ ಹಾರಾಟವಾಗಿದೆ.

‘ನಾಟಿ ಬಾಯ್’ ಏನು ಮಾಡುತ್ತೆ?:  ‘ನಾಟಿ ಬಾಯ್’ ತೂಕ 2274 ಕೆ.ಜಿ. ಒಮ್ಮೆ ಕಾರ್ಯಾರಂಭಿಸಿದ ನಂತರ, ಉಪಗ್ರಹವು ಭೂ ವಿಜ್ಞಾನ, ಹವಾಮಾನ ಇಲಾಖೆ (IMD), ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆ (NIOT), ಹವಾಮಾನ ಮುನ್ಸೂಚನೆ ಕೇಂದ್ರ ಮತ್ತು ಭಾರತೀಯ ರಾಷ್ಟ್ರೀಯ ಕೇಂದ್ರದ ಅಡಿಯಲ್ಲಿ ವಿವಿಧ ವಿಭಾಗಗಳಿಗೆ ಕೆಲಸ ಮಾಡುತ್ತದೆ. ಈ 51.7 ಮೀಟರ್ ಉದ್ದದ ರಾಕೆಟ್ ಇಮೇಜರ್ ಪೇಲೋಡ್, ಸೌಂಡರ್ ಪೇಲೋಡ್, ಡೇಟಾ ರಿಲೇ ಟ್ರಾನ್ಸ್‌ಪಾಂಡರ್ ಮತ್ತು ಉಪಗ್ರಹ ನೆರವಿನ ಹುಡುಕಾಟ ಮತ್ತು ಪಾರುಗಾಣಿಕಾ ಟ್ರಾನ್ಸ್‌ಪಾಂಡರ್ ಅನ್ನು ಹೊತ್ತೊಯ್ಯುತ್ತದೆ. ಬಾಹ್ಯಾಕಾಶದಲ್ಲಿ 10 ವರ್ಷ ಕಾರ್ಯ ನಿರ್ವಹಣೆ ಮಾಡುವಂತೆ ‘ಇನ್‌ಸ್ಯಾಟ್‌-3ಡಿಎಸ್‌’ ಉಪಗ್ರಹ ರೂಪಿಸಲಾಗಿದೆ.

ಹವಾಮಾನ ಕುರಿತ ನಿಖರ ಮಾಹಿತಿ: ಮಳೆ, ಚಂಡಮಾರುತಗಳ ಬಗ್ಗೆ ಸ್ಪಷ್ಟ ಮುನ್ಸೂಚನೆ ನೀಡುವ ಜತೆಗೆ ಭೂಮಿ ಹಾಗೂ ಸಮುದ್ರಗಳ ಮೇಲ್ಮೈ ಅಧ್ಯಯನ, ವಿಪತ್ತು ನಿರ್ವಹಣೆ ಹಾಗೂ ಪರಿಹಾರ ಕಾರ್ಯಾಚರಣೆಗಳ ವೀಕ್ಷಣೆಗೆ ಈ ಉಪಗ್ರಹದಿಂದ ಪಡೆಯುವ ಮಾಹಿತಿ ನೆರವಾಗಲಿದೆ. ಮೋಡಗಳು, ಮಂಜು, ಮಳೆ, ಹಿಮ ಮತ್ತು ಅದರ ಆಳ, ಬೆಂಕಿ, ಹೊಗೆ, ಭೂಮಿ ಮತ್ತು ಸಾಗರಗಳನ್ನು ಸಂಶೋಧಿಸಲು ಇದನ್ನು ಬಳಸಲಾಗುತ್ತದೆ.

– ಅಂತರ್ಜಾಲ ಮಾಹಿತಿ

The Indian Space Research Organisation (ISRO) will launch its meteorological satellite INSAT-3DS aboard spacecraft GSLV F14 on Saturday evening, with the aim of more accurate and informative weather forecasts and natural disaster warnings.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕರ್ನಾಟಕದ ಕೊಪ್ಪಳ ಹಸು, ಮದಗ್ಯಾಳ ಕುರಿಗೆ ರಾಷ್ಟ್ರೀಯ ಮಾನ್ಯತೆ – ದೇಶದ ಸ್ಥಳೀಯ ಜಾನುವಾರು ತಳಿಗಳ ಸಂಖ್ಯೆ 262ಕ್ಕೆ ಏರಿಕೆ
August 24, 2026
12:44 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 24-08-2026 | ಕರಾವಳಿಯಲ್ಲಿ ಮಳೆ ಮುಂದುವರಿಕೆ – ಕರ್ನಾಟಕದಲ್ಲಿ ಮಳೆ ಪರಿಸ್ಥಿತಿ ಹೇಗೆ..?
August 24, 2026
12:18 PM
by: ದ ರೂರಲ್ ಮಿರರ್.ಕಾಂ
ಉದ್ಯೋಗಗಳಿಲ್ಲವೇ? ಅಥವಾ ಉದ್ಯೋಗಕ್ಕೆ ಬೇಕಾದ ಕೌಶಲ್ಯವಿರುವವರು ಇಲ್ಲವೇ?
August 24, 2026
6:50 AM
by: ದ ರೂರಲ್ ಮಿರರ್.ಕಾಂ
ಅಡಿಕೆ ರೋಗ ನಿಯಂತ್ರಣಕ್ಕೆ ಕೇಂದ್ರದ ಬೆಂಬಲ – ಕ್ಯಾ. ಚೌಟಗೆ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್ ಭರವಸೆ
August 23, 2026
7:58 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror