Advertisement
ಸುದ್ದಿಗಳು

ಜೈಸಲ್ಮೇರ್‌ ಘಟನೆ ಬಳಿಕ ಎಚ್ಚೆತ್ತ ಆಡಳಿತ | ಕೊಳೆತ ಸ್ಥಿತಿಯಲ್ಲಿದ್ದ ನೂರಾರು ಹಸುಗಳನ್ನು ಹೂಳುವ ಕಾರ್ಯ ಆರಂಭ

Share

ರಾಜಸ್ಥಾನದ ಜೈಸಲ್ಮೇರ್‌ನ ಬಯಲಿನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ನೂರಾರು ಹಸುಗಳ ಶವಗಳ ಘಟನೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾದ ಬಳಿಕ ಸ್ಥಳೀಯ ಆಡಳಿತ ತುರ್ತು ಕ್ರಮ ಕೈಗೊಂಡಿದೆ. ಸಾರ್ವಜನಿಕ ವಿರೋಧ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋಗಳ ನಂತರ, ನಗರಸಭೆ ಯಂತ್ರಗಳ ಮೂಲಕ ಶವಗಳನ್ನು ಹೂಳುವ ಕಾರ್ಯ ಆರಂಭಿಸಿದೆ.

ಜೈಸಲ್ಮೇರ್‌ ನಗರದ ರಾಮಗಢ್‌ ರಸ್ತೆಯ ಸಮೀಪದ ಡಂಪಿಂಗ್ ಪ್ರದೇಶದಲ್ಲಿ 300 ರಿಂದ 500 ಕ್ಕೂ ಹೆಚ್ಚು ಹಸುಗಳ ಶವಗಳು ಬಯಲಿನಲ್ಲಿ ಬಿದ್ದಿರುವುದು ಬೆಳಕಿಗೆ ಬಂದಿತ್ತು. ದುರ್ವಾಸನೆ, ಪರಿಸರ ಮಾಲಿನ್ಯ ಹಾಗೂ ಜಾನುವಾರುಗಳ ಸ್ಥಿತಿಗೆ ಸಂಬಂಧಿಸಿದ ದೃಶ್ಯಗಳು ಸಾರ್ವಜನಿಕ ಆಕ್ರೋಶ ಹೆಚ್ಚಿಸಿವೆ.

ಪ್ರಾಥಮಿಕ ತನಿಖೆಯ ಪ್ರಕಾರ, ಮೃತ ಜಾನುವಾರುಗಳ ವಿಲೇವಾರಿ ಹೊಣೆ ಹೊತ್ತಿದ್ದ ಗುತ್ತಿಗೆದಾರನು ನಿಗದಿತ ಗುಂಡಿ ಅಥವಾ ಸ್ಥಳ ಬಳಸದೇ ಶವಗಳನ್ನು ಬಯಲಿನಲ್ಲಿ ಎಸೆದಿರುವ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿ ನಗರಸಭೆ ಗುತ್ತಿಗೆದಾರನಿಗೆ ಶೋಕಾಸ್‌ ನೋಟಿಸ್‌ ಜಾರಿಮಾಡಿದ್ದು, ಮುಂದಿನ ಕಾನೂನು ಕ್ರಮಗಳ ಎಚ್ಚರಿಕೆ ನೀಡಿದೆ.ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಈ ಘಟನೆ ದೇಶದಲ್ಲಿ “ಗೋ ರಕ್ಷಣೆ” ಕುರಿತು ನಡೆಯುವ ರಾಜಕೀಯ ಮತ್ತು ವಾಸ್ತವ ಸ್ಥಿತಿಯ ಬಗ್ಗೆ ಮತ್ತೆ ಪ್ರಶ್ನೆಗಳನ್ನು ಎಬ್ಬಿಸಿದೆ. “ಗೋಮಾತೆ” ಎಂದು ಪೂಜಿಸುವ ದೇಶದಲ್ಲಿ, ಸತ್ತ ಜಾನುವಾರುಗಳಿಗೂ ಗೌರವಯುತ ವಿಲೇವಾರಿ ವ್ಯವಸ್ಥೆ ಯಾಕಿಲ್ಲ?” ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ.

ಗ್ರಾಮೀಣ ಭಾಗಗಳಲ್ಲಿ ವಯಸ್ಸಾದ, ಹಾಲು ಕೊಡದ ಹಾಗೂ ನಿರುಪಯುಕ್ತ ಜಾನುವಾರುಗಳ ನಿರ್ವಹಣೆ ರೈತರಿಗೆ ದೊಡ್ಡ ಹೊರೆ ಆಗುತ್ತಿದೆ ಎಂಬ ಚರ್ಚೆಯೂ ಈ ಘಟನೆಯೊಂದಿಗೆ ಮತ್ತೆ ಮುನ್ನೆಲೆಗೆ ಬಂದಿದೆ. ಗೋ ರಕ್ಷಣೆಯ ಮಾತಿನ ಜೊತೆಗೆ ಪಶು ಆಶ್ರಯ, ಆಹಾರ, ವೈದ್ಯಕೀಯ ಹಾಗೂ ವೈಜ್ಞಾನಿಕ ವಿಲೇವಾರಿ ವ್ಯವಸ್ಥೆಗಳತ್ತ ಸರ್ಕಾರಗಳು ಹೆಚ್ಚು ಗಮನ ಕೊಡಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ರೋಗಗಳ ಭಯವಿಲ್ಲ, ಎಲ್ಲಾ ಸಾವುಗಳು ಸಹಜ: ವೈದ್ಯರ ಸ್ಪಷ್ಟನೆ

ಇಷ್ಟೊಂದು ದೊಡ್ಡ ಸಂಖ್ಯೆಯ ಹಸುಗಳ ಮೃತದೇಹಗಳು ಪತ್ತೆಯಾಗಿರುವುದು ಈ ಪ್ರದೇಶದಲ್ಲಿ ರೋಗ ಹರಡುವ ಭೀತಿಯನ್ನು ಹೆಚ್ಚಿಸಿದೆ. ಆದಾಗ್ಯೂ, ಪಶುಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕ ಡಾ. ಉಮೇಶ್ ವರ್ಗಂತಿವಾರ್ ಅವರು ಭಯಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. “ಈ ಪ್ರಾಣಿಗಳು ಒಂದು ದಿನದಿಂದ ಬಂದದ್ದಲ್ಲ. ಕಳೆದ ಒಂದು ತಿಂಗಳಿನಿಂದ, ಪ್ರತಿದಿನ 4-5 ಸತ್ತ ಪ್ರಾಣಿಗಳನ್ನು ಇಲ್ಲಿಗೆ ತರಲಾಗುತ್ತಿದೆ. ಇದರಲ್ಲಿ ಜೈಸಲ್ಮೇರ್ ನಗರ ಮತ್ತು ಸುತ್ತಮುತ್ತಲಿನ ಹಳ್ಳಿಗಳ ಜಾನುವಾರುಗಳು ಸೇರಿವೆ. ಸಾವುಗಳು ಯಾವುದೇ ಕಾಯಿಲೆಯಿಂದಲ್ಲ; ಅವೆಲ್ಲವೂ ನೈಸರ್ಗಿಕ ಸಾವುಗಳು” ಎಂದು ಅವರು ಹೇಳಿದರು.

After public outrage over hundreds of cow carcasses found rotting in the open in Rajasthan’s Jaisalmer, the municipal administration has begun burying the bodies using JCB machines. The incident has reignited debate over cow protection politics, stray cattle management, and the ground realities faced by farmers.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್

the rural mirror news

Published by
ಮಿರರ್‌ ಡೆಸ್ಕ್

Recent Posts

ಸರಿಯಾದ ಆಹಾರ ಪದ್ಧತಿಯೇ ರೋಗಮುಕ್ತ ಜೀವನದ ಮೂಲ – ರಾಘವೇಶ್ವರ ಶ್ರೀ

ಗೋಕರ್ಣದಲ್ಲಿ ನಡೆದ ಅನ್ನಬ್ರಹ್ಮ ಚಾತುರ್ಮಾಸ್ಯ ಧರ್ಮಸಭೆಯಲ್ಲಿ ಜಗದ್ಗುರು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು…

8 hours ago

ಹವಾಮಾನ ವರದಿ | 30-07-2026 | ಕರ್ನಾಟಕದಲ್ಲಿ ಇನ್ನೆರಡು ದಿನ ಉತ್ತಮ ಮಳೆ

ಮಧ್ಯಪ್ರದೇಶದಲ್ಲಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಹಲವು…

13 hours ago

ಸಮಾಜಕ್ಕೆ ಸರಿದಾರಿಯನ್ನು ತೋರುವುದು ಗುರುವಿನ ಕಾರ್ಯ : ರಾಘವೇಶ್ವರ ಶ್ರೀ

ಗೋಕರ್ಣದ ಅಶೋಕೆಯ ಮೂಲಮಠದಲ್ಲಿ 'ಅನ್ನಬ್ರಹ್ಮ ಚಾತುರ್ಮಾಸ್ಯ' ಆರಂಭಗೊಂಡಿದ್ದು, ಸಮಾಜಕ್ಕೆ ಸರಿಯಾದ ದಾರಿ ತೋರಿಸುವುದು…

21 hours ago

ಅಪೊಲೊ ಫಾರ್ಮಸಿಯಲ್ಲಿ ಉದ್ಯೋಗಾವಕಾಶ : ಆಗಸ್ಟ್‌ 1ರಂದು ಪುತ್ತೂರಿನಲ್ಲಿ ನೇರ ಸಂದರ್ಶನ

ಅಪೊಲೊ ಫಾರ್ಮಸಿ ವತಿಯಿಂದ ವಿವಿಧ ಹುದ್ದೆಗಳ ಭರ್ತಿಗಾಗಿ ಆಗಸ್ಟ್‌ 1ರಂದು ಪುತ್ತೂರಿನಲ್ಲಿ ನೇರ…

22 hours ago

ಹವಾಮಾನ ವರದಿ | 29-07-2026 | ಆ.2 ರಿಂದ ಮಳೆಯ ಸ್ಥಿತಿ ಏನಾಗಬಹುದು..?

ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನಲ್ಲಿ ಇನ್ನೂ ಬಿಟ್ಟುಬಿಟ್ಟು ಮಳೆ ಮುಂದುವರಿಯಲಿದೆ. ಆದರೆ…

2 days ago

ಆಸ್ಪತ್ರೆಗಳಲ್ಲಿ ಬಳಕೆಯಾಗದ ಔಷಧ ಮರುಬಳಕೆ – ಹಣವೂ ಉಳಿಯುತ್ತದೆ, ಪರಿಸರವೂ ಕಾಪಾಡುತ್ತದೆ..!

ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಉಳಿಯುವ ಔಷಧಗಳನ್ನು ಸುರಕ್ಷಿತವಾಗಿ ಮರುಬಳಕೆ ಮಾಡಿದರೆ ಆರೋಗ್ಯ ಕ್ಷೇತ್ರದ ವೆಚ್ಚ…

2 days ago