ಚಿಲಿಪಿಲಿ | ಇದು ಹರಟೆಮಲ್ಲ.‌ …

January 6, 2021
7:47 AM
ತೋಟದಲ್ಲಿ, ಮನೆಯ ಪಕ್ಕದ ಮರದಡಿಯಲ್ಲಿ ತರಗೆಲೆಗಳ  ಶಬ್ಧ ಜೋರಾಗಿ ಕೇಳುತ್ತಿದೆಯೆಂದರೆ  ಅಲ್ಲಿ ಹರಟೆಮಲ್ಲ ಹಕ್ಕಿಗಳಿವೆಯೆಂದೇ ಅರ್ಥ.  ಅವುಗಳು ತರಗೆಲೆಗಳೆಡೆಯಲ್ಲಿರುವ ಹುಳು ಹುಪ್ಪಟೆಗಳನ್ನು ಹುಡುಕಿ ತಿನ್ನುತ್ತವೆ. ಬಣ್ಣವೂ ಸಾಮಾನ್ಯವಾಗಿ ತರಗೆಲೆ ಅಂದರೆ  ಒಣ ಎಲೆಗಳಂತೆಯೇ  ನಸು ಕಂದು ಇರುವುದರಿಂದ ತರಗೆಲೆ ಹಕ್ಕಿ ಎಂಬ ಹೆಸರೂ ಇದೆ.  ತರಗೆಲೆಗೆ ತುಳುವಿನಲ್ಲಿ ಬಜಕ್ಕುರೆ ಎನ್ನುವುದರಿಂದ ಬಜಕ್ಕುರೆ ಹಕ್ಕಿ ಎಂದು ಕರೆಯುತ್ತಾರೆ.
ಕರ್ಕಶ ಸ್ವರ ಹಾಗೂ ತೀಕ್ಷ್ಣ ಕಣ್ಣುಗಳು ಹೆದರಿಕೆ  ಹುಟ್ಟಿಸುವಂತಿವೆ.  ಬಾಗಿದ ಕೊಕ್ಕು ಇದ್ದು  ದುಂಡಗೆ ಶರೀರವಿದ್ದು ,20 ರಿಂದ 25 ಸೆ.ಮೀ ನಷ್ಟು ದೊಡ್ಡದಾಗಿರುತ್ತದೆ.  ಸಾಮಾನ್ಯವಾಗಿ ಏಳು ಹಕ್ಕಿಗಳು ಒಟ್ಟಿಗೆ ಇರುವುದರಿಂದ ಸೆವೆನ್ಪ ಸಿಸ್ಟರ್ಸ್ ಎಂದು ಆಂಗ್ಲ ಭಾಷೆಯಲ್ಲೂ, ಸಾತ್ ಬಾಯಿ ಎಂದು ಹಿಂದಿಯಲ್ಲೂ  ಕರೆಯುತ್ತಾರೆ.  ವರ್ಷಕ್ಕೊಮ್ಮೆ ಸಂತಾನಾಭಿವೃದ್ಧಿ ಮಾಡುತ್ತವೆ. ಇವುಗಳು ಸಂಘಜೀವಿಗಳಾಗಿವೆ‌. ಹುಳು ಹುಪ್ಪಟೆಗಳನ್ನು ತಿನ್ನುತ್ತ ಬೆಳೆಗಳ ರಕ್ಷಣೆ ಮಾಡುತ್ತವೆ.  ರೈತನ ಮಿತ್ರನೆಂದೇ ಗುರುತಿಸಲ್ಪಡುವ ಹಕ್ಕಿಯಾಗಿದೆ ಈ ತರಗೆಲೆ ಹಕ್ಕಿ.
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ಛಾಯಾಚಿತ್ರ :  ರಾಧಾಕೃಷ್ಣ ರಾವ್ ಯು ಬಾಳಿಲ
Advertisement
Advertisement

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ತಾಪಮಾನ – ಬರಗಾಲ – ಪೆನ್ ಡ್ರೈವ್ ಮತ್ತು ಸೆಕ್ಸ್… ಯಾವುದು ನಮ್ಮ ಆದ್ಯತೆಯಾಗಬೇಕು……. |
May 2, 2024
6:51 AM
by: ವಿವೇಕಾನಂದ ಎಚ್‌ ಕೆ
ತಾಪಮಾನದಿಂದ ಅಡಿಕೆ ಕೃಷಿ ರಕ್ಷಣೆ | ಗೋವು ಹಾಗೂ ಗೋಉತ್ಪನ್ನ ಪರಿಣಾಮಕಾರಿ ಹೇಗೆ..? | ಗೋ ಆಧಾರಿತ ಕೃಷಿಯ ಬಗ್ಗೆ ಜಾಗೃತಿ ಏಕೆ ಬೇಕು ?
May 2, 2024
6:38 AM
by: ಮುರಳಿಕೃಷ್ಣ ಕೆ ಜಿ
ಜೀವಕ್ಕೇ ಅಮೃತ – ಜೀವಾಮೃತ | ಜೀವಾಮೃತವು ಗಿಡ-ಮರಗಳನ್ನು ಬಿಸಿ ಮತ್ತು ಬರ, ನೀರಿನ ಕೊರತೆಯ ಸಹಿಷ್ಣುತೆ ಹೆಚ್ಚಿಸುತ್ತದೆ | |
May 1, 2024
5:44 PM
by: The Rural Mirror ಸುದ್ದಿಜಾಲ
ನಮ್ಮ ಮಕ್ಕಳಿಗಾಗಿ ಒಂದು ನೀತಿ ಕಥೆ | ಸಾಧ್ಯವಾದರೆ ಇದನ್ನು ಮಕ್ಕಳಿಗೆ ಓದಿ ಹೇಳಿ ಅಥವಾ ಓದಲು ಹೇಳಿ |
May 1, 2024
4:34 PM
by: ವಿವೇಕಾನಂದ ಎಚ್‌ ಕೆ

You cannot copy content of this page - Copyright -The Rural Mirror