ಸಹಕಾರಿ ಸಂಘದಿಂದ ಜಾಬ್‌ ವರ್ಕ್‌ | ಕಲ್ಮಡ್ಕ ಸಹಕಾರಿ ಸಂಘದಿಂದ ಹೊಸ ಹೆಜ್ಜೆ | ಕೃಷಿಕರಿಗೆ ನೆರವಾಗುವ ವಿನೂತನ ಯೋಜನೆಗೆ ಸೆ.1 ಕ್ಕೆ ಚಾಲನೆ |

August 30, 2022
7:00 AM

ಎಲ್ಲೆಡೆಯೂ ಕೃಷಿ ಸಂಕಷ್ಟದಲ್ಲಿದೆ ಎನ್ನುವ ಮಾತುಗಳೇ ಹೆಚ್ಚು ಕೇಳುತ್ತಿದೆ. ಇದಕ್ಕೆ ಪರಿಹಾರ ಮಾರ್ಗಗಳೂ ಅಲ್ಲಲ್ಲಿ ತಯಾರಾಗುತ್ತಿದೆ. ಸುಳ್ಯ ತಾಲೂಕಿನ ಕಲ್ಮಡ್ಕದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ವಿನೂತನ ಹೆಜ್ಜೆ ಇರಿಸಿದೆ. ಸಹಕಾರಿ ಸಂಘದ ಮೂಲಕ ತೆಂಗಿನಕಾಯಿ ಕೊಯ್ಲು, ಅಡಿಕೆಗೆ ಔಷಧಿ ಸಿಂಪಡಣೆ, ಕಳೆ ತೆಗೆಯಲು ತಂಡವನ್ನು ಸಿದ್ಧ ಮಾಡುತ್ತಿದೆ. ಸದ್ಯ 7 ಜನರ ತಂಡ ಇದೆ. ಕೃಷಿಕರಿಗೆ ನೆರವಾಗುವ ಈ ಯೋಜನೆ ಸೆ.1 ರಿಂದ ಚಾಲನೆಗೆ ಬರಲಿದೆ. 

Advertisement

ದಕ್ಷಿಣ ಕನ್ನಡ ಜಿಲ್ಲೆಯು ಸಹಕಾರಿ ಸಂಘದ ತವರೂರು. ಸಹಕಾರಿ ಸಂಘಗಳು ಪರಸ್ಪರ ಸಹಕಾರ ಎಂಬ ಮನೋಭಾವದಿಂದಲೇ ಹುಟ್ಟಿಕೊಂಡವು. ಮೊಳಹಳ್ಳಿ ಶಿವರಾಯರು ಸಹಕಾರಿ ಸಂಘಗಳ ಉದ್ದೇಶವನ್ನೇ ಸ್ಪಷ್ಟವಾಗಿ ಹೇಳಿದ್ದರು. ಕೃಷಿಕರು , ಗ್ರಾಮೀಣ ಜನರು ಹಾಗೂ ಸಂಘದ ಪರಸ್ಪರ ಸಹಕಾರದ ತತ್ತ್ವದ ಮೂಲಕ ದ ಕ ಜಿಲ್ಲೆಯಲ್ಲಿ ಸಹಕಾರಿ ಸಂಘ ಬೆಳೆಯಿತು. ರೈತರಿಗೆ ಸಾಲ ನೀಡುವುದು, ವಸೂಲಾತಿ, ಬಡ್ಡಿ , ಉದ್ಯಮ ಇಷ್ಟೇ ಅಲ್ಲ. ರೈತರು, ಗ್ರಾಮೀಣ ಜನರು ಸಂಕಷ್ಟದಲ್ಲಿರುವಾಗ ನೆರವಾಗುವುದು ಅದಕ್ಕಾಗಿಯೇ ಲಾಭದ ಉದ್ದೇಶ ಇಲ್ಲದೆಯೇ ನೆರವಾಗುವುದು  ಕೂಡಾ ಸಹಕಾರಿಯ ಉದ್ದೇಶವೂ ಆಗಿದೆ.

ಇದೀಗ ಕಲ್ಮಡ್ಕ ವ್ಯವಸಾಯ ಸಹಕಾರಿ ಸಂಘವು ಕೃಷಿಕರಿಗೆ ನೆರವಾಗುವ ತಂಡವನ್ನು ಸಿದ್ಧ ಮಾಡುತ್ತಿದೆ. ಸಂಘದ ಅಧ್ಯಕ್ಷ ಬೆಟ್ಟ ಉದಯಕುಮಾರ್‌ ಅವರ ಆಡಳಿತದ ನಿರ್ದೇಶಕರ ತಂಡ ಹಾಗೂ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್‌ ಜೋಗಿಬೆಟ್ಟು ಅವರ ಯೋಜನೆಯೊಂದಿಗೆ ಈ ತಂಡ ಸಿದ್ಧವಾಗುತ್ತಿದೆ. ಸಂಘದ ವ್ಯಾಪ್ತಿಯ ಕೃಷಿಕರಿಗೆ ತೆಂಗಿನ ಕಾಯಿ ಕೊಯ್ಲು, ಕಳೆ ತೆಗೆಯಲು ಸೇರಿದಂತೆ ಮುಂದಿನ ವರ್ಷದಿಂದ ಅಡಿಕೆಗೆ ಔಷಧಿ ಸಿಂಪಡಣೆಗೂ ತಂಡ ತಯಾರು ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಸದ್ಯ 7 ಜನರ ತಂಡವನ್ನು ಸಿದ್ಧ ಮಾಡಿದ್ದಾರೆ. ಕೃಷಿಕರು ಸಹಕಾರಿ ಸಂಘಕ್ಕೆ ಬೇಡಿಕೆ ಸಲ್ಲಿಸಿದರೆ ಸಂಘವು ಇದಕ್ಕಾಗಿಯೇ ನೇಮಕ ಮಾಡಿರುವ ಸಿಬಂದಿಯ ಮೂಲಕ ಜಾಬ್‌ ವರ್ಕ್‌ ತಂಡವನ್ನು ನಿರ್ವಹಣೆ ಮಾಡುತ್ತದೆ. ಕೃಷಿಕರ ಬೇಡಿಕೆ ಗಮನಿಸಿಕೊಂಡು ಕೆಲಸವನ್ನು ವಿಭಾಗಿಸಿ ಸಂಘವು ತಂಡವನ್ನು ಕೃಷಿಕರಲ್ಲಿಗೆ ಕಳುಹಿಸಿಕೊಡುತ್ತದೆ. ಸಂಘದ ವತಿಯಿಂದಲೇ ಈ ತಂಡಕ್ಕೆ ಬೇಕಾದ ಎಲ್ಲಾ ಸಲಕರಣೆಗಳನ್ನೂ ಒದಗಿಸಲಾಗುತ್ತಿದೆ. ಈಗಾಗಲೇ ಎರಡು ಕಾರ್ಬನ್‌ ಪೈಬರ್‌ ದೋಟಿ, ಕಳೆ ಕಟಾವು ಯಂತ್ರವನ್ನೂ ಖರೀದಿ ಮಾಡಿದೆ.

ಕೃಷಿಕರು ಜಾಬ್‌ ವರ್ಕ್‌ ತಂಡಕ್ಕೆ ನೀಡಬೇಕಾದ ಎಲ್ಲಾ ವೇತನವನ್ನೂ ಸಹಕಾರಿ ಸಂಘಕ್ಕೆ ಪಾವತಿ ಮಾಡಬೇಕು.ಸಂಘವು ಈ ತಂಡಕ್ಕೆ ವೇತನ ನೀಡುತ್ತದೆ. ಇದರ ಜೊತೆಗೆ ಉದ್ಯೋಗ ಭದ್ರತೆ, ವಿಮೆ ಸೇರಿದಂತೆ ಪಿ ಎಫ್‌ ಮಾದರಿಯ ಹೂಡಿಕೆಯನ್ನೂ ಮಾಡಲು ಯೋಜನೆ ಹಾಕಿಕೊಂಡಿದೆ. ಈ ಮೂಲಕ ಜಾಬ್‌ ವರ್ಕ್‌ ಮಾಡುವ ಉದ್ಯೋಗಿಗೂ ಉದ್ಯೋಗ ಭದ್ರತೆಯೂ ಲಭ್ಯವಾಗುತ್ತಿದೆ. ಕೃಷಿಕರಿಗೂ ಕ್ಲಪ್ತ ಸಮಯದಲ್ಲಿ ಸೇವೆ ನೀಡಲು ಯೋಜನೆ ಹಾಕಿಕೊಂಡಿದೆ ಸಹಕಾರಿ ಸಂಘ.

ಸೆ.1 ರಿಂದ ಈ ತಂಡ ಸಿದ್ಧವಾಗುತ್ತಿದೆ. ಸಂಘದ ವತಿಯಿಂದಲೇ ಸಮವಸ್ತ್ರ ನೀಡಲಾಗುತ್ತಿದ್ದು, ಸಮಯವನ್ನು ನಿಗದಿ ಮಾಡಿ ಆ ಸಮಯದಲ್ಲಿ ಕೃಷಿಕರ ತೋಟದಲ್ಲಿ ಕೆಲಸಕ್ಕೆ ಸಿದ್ಧವಾಗುತ್ತಿದೆ ಈ ತಂಡ. ತನ್ನ ಸಹಕಾರಿ ಸಂಘದ ವ್ಯಾಪ್ತಿಯಲ್ಲಿ ಸದ್ಯ ಈ ತಂಡ ಕೆಲಸ ಮಾಡುತ್ತದೆ.

Advertisement
ಕೃಷಿಕರಿಗೆ ನೆರವಾಗುವ ಈ ಯೋಜನೆಯಲ್ಲಿ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಯೋಜನೆಯ ಮೂಲಕ ಆರಂಭಗೊಳ್ಳುತ್ತಿದೆ. ಈ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡಲು ಹಾಗೂ ಕೃಷಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೇಕಾದ ವ್ಯವಸ್ಥೆ ಮಾಡಲಾಗುತ್ತಿದೆ. ಸೆ.1 ರಿಂದ ಸಹಕಾರಿ ಸಂಘ ವ್ಯಾಪ್ತಿಯಲ್ಲಿ ಜಾರಿಯಾಗುತ್ತದೆ.
ಪ್ರಶಾಂತ್‌ ಜೋಗಿಬೆಟ್ಟು , ಸಿಇಒ, ಕಲ್ಮಡ್ಕ ಸಹಕಾರಿ ಸಂಘ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ರಾಜ್ಯದ 6 ಕಡೆ ಕೌಶಲ್ಯ ಪ್ರಯೋಗಾಲಯ ನಿರ್ಮಿಸಲು ಸರ್ಕಾರ ನಿರ್ಧಾರ
June 17, 2025
10:15 PM
by: The Rural Mirror ಸುದ್ದಿಜಾಲ
ಕೋಲಾರದಲ್ಲಿ ಬಾಕಿ ಇರುವ 3610 ಜಮೀನಿನ ಸರ್ವೆ ಮುಂದಿನ ಎರಡು ತಿಂಗಳೊಳಗಾಗಿ ಪೂರ್ಣ
June 17, 2025
10:12 PM
by: The Rural Mirror ಸುದ್ದಿಜಾಲ
ಭಾರಿ ಮಳೆಗೆ ಮೂರು ಜನರು ಬಲಿ | ಕರಾವಳಿ ಜಿಲ್ಲೆಗಳಲ್ಲಿ ಜೂ.21 ರವರೆಗೆ ವ್ಯಾಪಕ ಮಳೆ |  ಹವಾಮಾನ ಇಲಾಖೆ ಮುನ್ಸೂಚನೆ
June 17, 2025
10:02 PM
by: The Rural Mirror ಸುದ್ದಿಜಾಲ
ಎತ್ತಿನಹೊಳೆ ಯೋಜನೆಗಾಗಿ ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಐಐಎನ್ ಪ್ಲಾಟಿನಂ 2025 ರಾಷ್ಟ್ರೀಯ ಪ್ರಶಸ್ತಿ
June 17, 2025
9:55 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group