Advertisement
MIRROR FOCUS

ಕನ್ನಡ ರಾಜ್ಯೋತ್ಸವದ ಶುಭಾಶಯಗಳು

Share

ಭಾಷೆ ಇರುವುದು ವಿಷಯವನ್ನು ಹಂಚಿಕೊಳ್ಳಲು. ಭಾವನೆಗಳನ್ನು ಅಭಿವ್ಯಕ್ತಿಸುವ ಸಲುವಾಗಿ. ಕನಸುಗಳನ್ನು ಕಟ್ಟಲು, ಕಂಡ ಕನಸನ್ನು ಈಡೇರಿಸಿಕೊಳ್ಳಲು.

ಎಲ್ಲರಿಗೂ ಅವರವರ ಭಾಷೆಯ ಬಗ್ಗೆ ವಿಶೇಷ ಮಮತೆ ಇರುವುದು ಸಹಜವೇ. ಮಾತೃಭಾಷೆಯ ಬಗ್ಗೆ ಸ್ವಲ್ಪ ಜಾಸ್ತಿಯೇ ವ್ಯಾಮೋಹ. ಅವರವರ ಭಾಷೆ ಮಾತನಾಡುವುದು ಇಷ್ಟದ ವಿಷಯವೇ. ನಮ್ಮ ಕರ್ನಾಟಕದಲ್ಲಂತೂ ನವೆಂಬರ್ ಬಂದರೆ ಒಮ್ಮೆ ಮೈಕೊಡವಿ ನಿಂತಂತಾಗುತ್ತದೆ. ಪೇಪರ್ ನಲ್ಲೂ, ದೂರದರ್ಶನದಲ್ಲೂ, ಆಕಾಶವಾಣಿಯಲ್ಲೂ, ಕನ್ನಡವೇ ರಿಂಗಿಣಿಸುತ್ತದೆ. ನಮ್ಮ ಈ ನಡೆ ಮನಸಿಗೆ ಕಸಿವಿಸಿ ಉಂಟು ಮಾಡುತ್ತದೆ.

ಭಾಷೆಯಾಗಿ ಕನ್ನಡ ಶ್ರೀಮಂತವಾಗಿದೆ. ಅಭಿವ್ಯಕ್ತಿಸಲು ಪ್ರತಿಯೊಂದು ಭಾವನೆಗಳಿಗೂ, ಸಂಬಂದಗಳಿಗೂ ಅದರದ್ದೇ ಆದ ಶಬ್ಧಗಳಿವೆ. ಸಮೃದ್ಧವಾಗಿರುವ ಕನ್ನಡವನ್ನು ಉಳಿಸಿಕೊಳ್ಳುವುದು ಇಂದಿನ ಅನಿವಾರ್ಯತೆ. ಕನ್ನಡವನ್ನು ಶುದ್ಧವಾಗಿ ಮಾತನಾಡುವವರು ಸಿಕ್ಕಿದಾಗ ಮಾತುಗಳನ್ನು ಕೇಳಲು ಖುಷಿಯಾಗುತ್ತದೆ. ಇಂದು ನಮ್ಮ ಕನ್ನಡವೂ ಇತರ ಭಾಷೆಗಳ ಮಿಶ್ರಣದ ಕಿಚಡಿಯಾಗಿ ಬಿಟ್ಟಿದೆ. ನಾವು ಎಷ್ಟು ಅದಕ್ಕೆ ಹೊಂದಿಕೊಂಡಿದ್ದೇವೆಂದರೆ ಅದು ಕನ್ನಡವಲ್ಲವೆಂದು ಒಪ್ಪಿಕೊಳ್ಳಲೂ ಅಸಾಧ್ಯವೆಂಬಷ್ಟು. ಒಂದು ಹತ್ತು ವಾಕ್ಯ ಆಂಗ್ಲ ಶಬ್ದವನ್ನು ಬಳಸದೆ ಮಾತನಾಡುವುದು ಎಷ್ಟು ಕಷ್ಟವೆಂದು ಒಮ್ಮೆ ಪ್ರಯತ್ನಿಸಿದರೆ ಗೊತ್ತಾಗುತ್ತದೆ. ಸೋತು ಬಿಡುತ್ತೀರಿ! ಅಷ್ಟು ನಾವು ಹೊಂದಿಕೊಂಡಿದ್ದೇವೆ. ಬೇರೆ ಭಾಷೆಗಳನ್ನೂ ನಾವು ಕಲಿಯುವುದು ಒಳ್ಳೆಯದೇ. ಆದರೆ ಬಳಸುವಾಗ , ಮಾತನಾಡುವಾಗ ಆಯಾ ಭಾಷೆಯನ್ನೇ ಸರಿಯಾಗಿ, ಸ್ಷಷ್ಟವಾಗಿ ನುಡಿಯುವುದು ಚಂದವಲ್ಲವೇ.? ನುಡಿ ಕನ್ನಡ ನಡೆ ಕನ್ನಡ, ಬದುಕು ಕನ್ನಡ. ಜೈ ಕನ್ನಡಮ್ಮ, ಜೈ ಕರ್ನಾಟಕ.

 

ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಆಹಾರ-ನಿದ್ರೆ ಪರಸ್ಪರ ಪೂರಕ; ಉತ್ತಮ ನಿದ್ರೆಗೆ ಹಸಿವು ಅಗತ್ಯ: ರಾಘವೇಶ್ವರ ಶ್ರೀ

ಉತ್ತಮ ಆರೋಗ್ಯಕ್ಕೆ ಸರಿಯಾದ ಆಹಾರ ಮತ್ತು ನಿದ್ರೆ ಎರಡೂ ಅವಿಭಾಜ್ಯ ಎಂದು ಶ್ರೀ…

2 hours ago

ಕೃಷಿಕರ ಮಿತ್ರ ಸಾಯಿಶೇಖರ್‌ ಕರಿಕಳ ಅವರಿಗೆ ರೈತ ರತ್ನ ಪ್ರಶಸ್ತಿ

ಮಳೆ ಮಾಹಿತಿ ಮೂಲಕ ಕೃಷಿಕರಿಗೆ ನೆರವಾಗುತ್ತಿರುವ ಸಾಯಿಶೇಖರ್‌ ಕರಿಕಳ ಅವರಿಗೆ ರೈತ ರತ್ನ…

2 hours ago

ಮಂಗಳೂರಿನಲ್ಲಿ ರಾಷ್ಟ್ರೀಯ ಚೆಸ್ ಚಾಂಪಿಯನ್ ಶಿಪ್‌ಗೆ ಚಾಲನೆ – 28 ರಾಜ್ಯ–ಕೇಂದ್ರಾಡಳಿತ ಪ್ರದೇಶಗಳಿಂದ 644 ಬಾಲಕಿ-ಬಾಲಕಿಯರು

ಮಂಗಳೂರಿನಲ್ಲಿ ರಾಷ್ಟ್ರೀಯ ಅಂಡರ್‌-11 ಚೆಸ್ ಚಾಂಪಿಯನ್ಶಿಪ್‌ಗೆ ಭವ್ಯ ಚಾಲನೆ ದೊರೆತಿದ್ದು, ದೇಶದ 28…

3 hours ago

ಹವಾಮಾನ ವರದಿ | 02-08-2026 | ಕರಾವಳಿಯಲ್ಲಿ ಮಳೆ ಇಳಿಮುಖ ..? ರಾಜ್ಯದಲ್ಲಿ ಮುಂಗಾರು ಸ್ಥಿತಿ ಏನು..?

ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆಯ ತೀವ್ರತೆ ಇಳಿಮುಖವಾಗಲಿದ್ದು, ಆಗಸ್ಟ್‌ 3ರಿಂದ ತೋಟದ…

5 hours ago

ಭಾರೀ ಮಳೆಯ ಎಚ್ಚರಿಕೆ : 24 ಗಂಟೆ ಸನ್ನದ್ಧವಾಗಿರಲು ಡಿಸಿ ಸೂಚನೆ, ಭೂಕುಸಿತ ಪ್ರದೇಶಗಳ ಮೇಲೆ ಕಟ್ಟೆಚ್ಚರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳನ್ನು 24…

17 hours ago

ಹುಬ್ಬಳ್ಳಿಯಲ್ಲಿ ಹಲಸು ಮೇಳಕ್ಕೆ ಚಾಲನೆ – 50ಕ್ಕೂ ಹೆಚ್ಚು ಮಳಿಗೆಗಳು, ಹಲಸಿನ ಬಿರಿಯಾನಿಯಿಂದ ಕಬಾಬ್‌ವರೆಗೆ ಸವಿಯುವ ಅವಕಾಶ

ಹುಬ್ಬಳ್ಳಿಯಲ್ಲಿ ಆರಂಭವಾದ ಮೂರು ದಿನಗಳ ಹಲಸು ಮೇಳಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.…

17 hours ago