Advertisement
MIRROR FOCUS

ಕನ್ನಡ ರಾಜ್ಯೋತ್ಸವದ ಶುಭಾಶಯಗಳು

Share

ಭಾಷೆ ಇರುವುದು ವಿಷಯವನ್ನು ಹಂಚಿಕೊಳ್ಳಲು. ಭಾವನೆಗಳನ್ನು ಅಭಿವ್ಯಕ್ತಿಸುವ ಸಲುವಾಗಿ. ಕನಸುಗಳನ್ನು ಕಟ್ಟಲು, ಕಂಡ ಕನಸನ್ನು ಈಡೇರಿಸಿಕೊಳ್ಳಲು.

ಎಲ್ಲರಿಗೂ ಅವರವರ ಭಾಷೆಯ ಬಗ್ಗೆ ವಿಶೇಷ ಮಮತೆ ಇರುವುದು ಸಹಜವೇ. ಮಾತೃಭಾಷೆಯ ಬಗ್ಗೆ ಸ್ವಲ್ಪ ಜಾಸ್ತಿಯೇ ವ್ಯಾಮೋಹ. ಅವರವರ ಭಾಷೆ ಮಾತನಾಡುವುದು ಇಷ್ಟದ ವಿಷಯವೇ. ನಮ್ಮ ಕರ್ನಾಟಕದಲ್ಲಂತೂ ನವೆಂಬರ್ ಬಂದರೆ ಒಮ್ಮೆ ಮೈಕೊಡವಿ ನಿಂತಂತಾಗುತ್ತದೆ. ಪೇಪರ್ ನಲ್ಲೂ, ದೂರದರ್ಶನದಲ್ಲೂ, ಆಕಾಶವಾಣಿಯಲ್ಲೂ, ಕನ್ನಡವೇ ರಿಂಗಿಣಿಸುತ್ತದೆ. ನಮ್ಮ ಈ ನಡೆ ಮನಸಿಗೆ ಕಸಿವಿಸಿ ಉಂಟು ಮಾಡುತ್ತದೆ.

ಭಾಷೆಯಾಗಿ ಕನ್ನಡ ಶ್ರೀಮಂತವಾಗಿದೆ. ಅಭಿವ್ಯಕ್ತಿಸಲು ಪ್ರತಿಯೊಂದು ಭಾವನೆಗಳಿಗೂ, ಸಂಬಂದಗಳಿಗೂ ಅದರದ್ದೇ ಆದ ಶಬ್ಧಗಳಿವೆ. ಸಮೃದ್ಧವಾಗಿರುವ ಕನ್ನಡವನ್ನು ಉಳಿಸಿಕೊಳ್ಳುವುದು ಇಂದಿನ ಅನಿವಾರ್ಯತೆ. ಕನ್ನಡವನ್ನು ಶುದ್ಧವಾಗಿ ಮಾತನಾಡುವವರು ಸಿಕ್ಕಿದಾಗ ಮಾತುಗಳನ್ನು ಕೇಳಲು ಖುಷಿಯಾಗುತ್ತದೆ. ಇಂದು ನಮ್ಮ ಕನ್ನಡವೂ ಇತರ ಭಾಷೆಗಳ ಮಿಶ್ರಣದ ಕಿಚಡಿಯಾಗಿ ಬಿಟ್ಟಿದೆ. ನಾವು ಎಷ್ಟು ಅದಕ್ಕೆ ಹೊಂದಿಕೊಂಡಿದ್ದೇವೆಂದರೆ ಅದು ಕನ್ನಡವಲ್ಲವೆಂದು ಒಪ್ಪಿಕೊಳ್ಳಲೂ ಅಸಾಧ್ಯವೆಂಬಷ್ಟು. ಒಂದು ಹತ್ತು ವಾಕ್ಯ ಆಂಗ್ಲ ಶಬ್ದವನ್ನು ಬಳಸದೆ ಮಾತನಾಡುವುದು ಎಷ್ಟು ಕಷ್ಟವೆಂದು ಒಮ್ಮೆ ಪ್ರಯತ್ನಿಸಿದರೆ ಗೊತ್ತಾಗುತ್ತದೆ. ಸೋತು ಬಿಡುತ್ತೀರಿ! ಅಷ್ಟು ನಾವು ಹೊಂದಿಕೊಂಡಿದ್ದೇವೆ. ಬೇರೆ ಭಾಷೆಗಳನ್ನೂ ನಾವು ಕಲಿಯುವುದು ಒಳ್ಳೆಯದೇ. ಆದರೆ ಬಳಸುವಾಗ , ಮಾತನಾಡುವಾಗ ಆಯಾ ಭಾಷೆಯನ್ನೇ ಸರಿಯಾಗಿ, ಸ್ಷಷ್ಟವಾಗಿ ನುಡಿಯುವುದು ಚಂದವಲ್ಲವೇ.? ನುಡಿ ಕನ್ನಡ ನಡೆ ಕನ್ನಡ, ಬದುಕು ಕನ್ನಡ. ಜೈ ಕನ್ನಡಮ್ಮ, ಜೈ ಕರ್ನಾಟಕ.

 

ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಮುಂಗಾರು ಬೇಗನೆ ವಿದಾಯ ಹೇಳುತ್ತಿದೆಯೇ..? ಸೆಪ್ಟೆಂಬರ್‌ನಲ್ಲಿ ಮಳೆ ಕಡಿಮೆಯಾಗುವ ಮುನ್ಸೂಚನೆ..?

ಸೆಪ್ಟೆಂಬರ್ 5–10ರ ನಂತರ ದೇಶದ ಹಲವು ಭಾಗಗಳಲ್ಲಿ ಮುಂಗಾರು ಮಳೆ ಗಣನೀಯವಾಗಿ ಕಡಿಮೆಯಾಗುವ…

9 hours ago

ಹವಾಮಾನ ವರದಿ | 22-08-2026 | ಕರಾವಳಿಯಲ್ಲಿ ಮಳೆ ಇಳಿಕೆ, 26ರಿಂದ ಮತ್ತಷ್ಟು ದುರ್ಬಲವಾಗುವ ಸಾಧ್ಯತೆ

ಕರ್ನಾಟಕದಲ್ಲಿ ಆಗಸ್ಟ್ 23ರಿಂದ 25ರವರೆಗೆ ಹಲವೆಡೆ ಅಲ್ಲಲ್ಲಿ ಸಾಮಾನ್ಯ ಮಳೆಯಷ್ಟೇ ನಿರೀಕ್ಷಿಸಲಾಗಿದ್ದು, ಕರಾವಳಿ…

17 hours ago

ಸೆಪ್ಟೆಂಬರ್‌ನಲ್ಲಿ ಪಿಎಂ ಕಿಸಾನ್ ಹಣ ಬರಬೇಕೇ? ರೈತರು ಈಗಲೇ e-KYC ಪೂರ್ಣಗೊಳಿಸಿ

PM-Kisan ಯೋಜನೆಯ 24ನೇ ಕಂತಿನ ಹಣ ಪಡೆಯಲು ಅರ್ಹ ರೈತರು ಬಯೋಮೆಟ್ರಿಕ್ ಅಥವಾ…

1 day ago

ಬೆಳೆ ವಿಮೆಗೆ ರೈತರಿಗೆ ಮತ್ತೊಂದು ಅವಕಾಶ : ಆಗಸ್ಟ್ 31ರವರೆಗೆ ನೋಂದಣಿ ಅವಧಿ ವಿಸ್ತರಣೆ

ಮುಂಗಾರು ಹಂಗಾಮಿನ ಭತ್ತ ಸೇರಿದಂತೆ ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ…

1 day ago

ಹವಾಮಾನ ವರದಿ | 21-08-2026 | ಕರಾವಳಿಯಲ್ಲಿ ಆ.23–25 ರಂದು ಮಳೆ ಹೆಚ್ಚಳ ಸಾಧ್ಯತೆ – ಆ.26ರವರೆಗೆ ಮೋಡ–ಮಳೆ

ಕರಾವಳಿ ಕರ್ನಾಟಕದಲ್ಲಿ ಆ.23ರಿಂದ 25ರವರೆಗೆ ಮಳೆಯ ಪ್ರಮಾಣ ಸ್ವಲ್ಪ ಹೆಚ್ಚಾಗುವ ಸಾಧ್ಯತೆಯಿದ್ದು, ಆ.26ರವರೆಗೂ…

2 days ago

ನಿಮ್ಮ ಹೆಸರಲ್ಲಿ 9 ಸಿಮ್‌ಗಳಿವೆಯೇ? ಆಗಸ್ಟ್ 24ರಿಂದ ಹೊಸ ನಿಯಮ – ಹೆಚ್ಚುವರಿ ನಂಬರ್‌ಗೆ ಬ್ರೇಕ್

ಆಗಸ್ಟ್ 24ರಿಂದ ಒಬ್ಬ ವ್ಯಕ್ತಿಯ ಹೆಸರಿನಲ್ಲಿ 9 ಮೊಬೈಲ್ ಸಂಪರ್ಕಗಳ ಮಿತಿಯನ್ನು ಮೀರಿ…

2 days ago