ಜೆಡಿಎಸ್​​ 2ನೇ ಪಟ್ಟಿ| ಹಾಸನದಲ್ಲಿ ಭವಾನಿ ಬದಲು ಸ್ವರೂಪ್​, ಕಡೂರಲ್ಲಿ ದತ್ತಗೆ ಟಿಕೆಟ್​ |

April 14, 2023
7:37 PM

ರಾಜ್ಯ ವಿಧಾನಸಭೆ ಚುನಾವಣೆಗೆ ಜೆಡಿಎಸ್​​ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಆಗಿದೆ. ಜೆಡಿಎಸ್‌ (JDS) ಇಂದು 49 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಾಸನದಲ್ಲಿ ಸ್ವರೂಪ್‌ಗೆ ಟಿಕೆಟ್‌ ಸಿಕ್ಕಿದೆ.

ಕಡೂರಿನಿಂದ ವೈಎಸ್‌ವಿ ದತ್ತಾ (YSV Datta), ಅಥಣಿಯಿಂದ ಶ್ರೀ ಶಶಿಕಾಂತ್ ಪಡಸಲಿಗಿ ಗುರುಗಳು ಸ್ಪರ್ಧಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ, ಸಿಎಂ ಇಬ್ರಾಹಿಂ, ಎಚ್‌ಡಿ ರೇವಣ್ಣ ಸುದ್ದಿಗೋಷ್ಠಿ ನಡೆಸಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.  ಹಾಸನದ ಅರಸೀಕೆರೆ (Arsikere) ಕ್ಷೇತ್ರವೊಂದನ್ನು ಬಿಟ್ಟು  ಉಳಿದ ಎಲ್ಲಾ ಕ್ಷೇತ್ರಗಳಿಗೆ ಜೆಡಿಎಸ್‌ ಟಿಕೆಟ್‌ ಫೈನಲ್‌ ಮಾಡಿದೆ.

ಜೆಡಿಎಸ್‌ ನಾಯಕ, ಹಾಲಿ ಶಾಸಕ ಶಿವಲಿಂಗೇಗೌಡ  ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಕ್ಷೇತ್ರಕ್ಕೆ ಇನ್ನೂ ಸರಿಯಾದ ಅಭ್ಯರ್ಥಿಯನ್ನು ಜೆಡಿಎಸ್‌ ಹುಡುಕಾಡುತ್ತಿದೆ.

ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿಗಳು?
1 ಕುಡಚಿ- ಆನಂದ್ ಮಾಳಗಿ
2 ರಾಯಭಾಗ- ಪ್ರದೀಪ್ ಮಾಳಗಿ
3 ವದತ್ತಿ- ಸೌರಬ್ ಚೊಪ್ರಾ
4 ಅಥಣಿ- ಶ್ರೀ ಶಶಿಕಾಂತ್ ಪಡಸಲಿಗಿ ಗುರುಗಳು
5 ಹುಬ್ಬಳ್ಳಿ – ಧಾರವಾಡ ಪೂರ್ವ- ವೀರಭದ್ರಪ್ಪ ಹಾಲರವಿ
6 ಕುಮಟಾ- ಸೂರಜ್ ಸೋನಿ ನಾಯಕ್
7 ಹಳಿಯಾಳ- ಎಸ್‌. ಎಲ್‌. ಘೊಟ್ನೋಕರ್
8 ಭಟ್ಕಳ- ನಾಗೇಂದ್ರ ನಾಯಕ್
9 ಶಿರಸಿ- ಸಿದ್ದಾಪುರ- ಉಪೇಂದ್ರ ಪೈ
10 ಯಲ್ಲಾಪುರ- ಡಾ. ನಾಗೇಶ್ ನಾಯಕ್

11 ಚಿತ್ತಾಪುರ- ಸುಭಾಷ್ ಚಂದ್ರ ರಾಥೋಡ್
12 ಕಲಬುರ್ಗಿ ಉತ್ತರ- ನಾಸೀರ್ ಹುಸೇನ್ ಉಸ್ತಾದ್
13 ಬಳ್ಳಾರಿ ನಗರ- ಅಲ್ಲಾಭಕ್ಷ್ ಅಲಿಯಾಸ್ ಮುನ್ನ
14 ಹಗರಿಬೊಮ್ಮನಹಳ್ಳಿ – ಪರಮೇಶ್ವರಪ್ಪ
15 ಹರಪ್ಪನಹಳ್ಳಿ- ಎನ್‌. ಎಂ. ನೂರ್ ಅಹಮದ್
16 ಸಿರಗುಪ್ಪ- ಪರಮೇಶ್ವರ್ ನಾಯಕ್
17 ಕಂಪ್ಲಿ- ರಾಜು ನಾಯಕ್
18 ಕೊಳ್ಳೇಗಾಲ- ಪುಟ್ಟಸ್ವಾಮಿ
19 ಗುಂಡ್ಲುಪೇಟೆ- ಕಡಬೂರು ಮಂಜುನಾಥ್
20 ಕಾಪು- ಸಬೀನಾ ಸಮದ್

21 ಕಾರ್ಕಳ- ಶ್ರೀಕಾಂತ್ ಕೊಚ್ಚೂರ್
22 ಉಡುಪಿ- ದಕ್ಷತ್ ಆರ್. ಶೆಟ್ಟಿ
23 ಬೈಂದೂರು- ಮನ್ಸೂರ್ ಇಬ್ರಾಹಿಂ
24 ಕುಂದಾಪುರ-ರಮೇಶ್ ಕುಂದಾಪುರ
25 ಮಂಗಳೂರು ದಕ್ಷಿಣ- ಸುಮತಿ ಹೆಗಡೆ
26 ಕನಕಪುರ- ನಾಗರಾಜು
27 ಯಲಹಂಕ- ಮುನೇಗೌಡ
28 ಸರ್ವಜ್ಞ ನಗರ- ಮೊಹಮ್ಮದ್ ಮುಸ್ತಾಫ್
29 ಯಶವಂತಪುರ- ಜವರಾಯೀಗೌಡ
30 ತಿಪಟೂರು- ಶಾಂತಕುಮಾರ್

31 ಶಿರಾ- ಆರ್.ಉಗ್ರೇಶ್
32 ಹಾನಗಲ್- ಮನೋಹರ ತಹಸೀಲ್ದಾರ್
33 ಸಿಂದಗಿ- ವಿಶಾಲಕ್ಷಿ ಶಿವಾನಂದ
34 ಗಂಗಾವತಿ- ಹೆಚ್‌. ಆರ್‌ ಚನ್ನಕೇಶವ
35 ಹೆಚ್‌.ಡಿ ಕೋಟೆ- ಜಯಪ್ರಕಾಶ್
36 ಜೇವರ್ಗಿ- ದೊಡಪ್ಪಗೌಡ ಶಿವಲಿಂಗಪ್ಪಗೌಡ
37 ಶಹಾಪುರ- ಗುರುಲಿಂಗಪ್ಪಗೌಡ
38 ಕಾರವಾರ- ಚೈತ್ರ ಕೋಟಾಕರ್
39 ಪುತ್ತೂರು- ದಿವ್ಯಪ್ರಭ
40 ಕಡೂರು- ವೈ.ಎಸ್.ವಿ ದತ್ತಾ

41 ಹೊಳೆನರಸೀಪುರ – ಹೆಚ್‌.ಡಿ ರೇವಣ್ಣ
42 ಬೇಲೂರು – ಕೆ.ಎಸ್‌ ಲಿಂಗೇಶ್
43 ಸಕಲೇಶಪುರ – ಹೆಚ್‌.ಕೆ ಕುಮಾರಸ್ವಾಮಿ
44 ಅರಕಲಗೂಡು- ಎ. ಮಂಜು
45 ಹಾಸನ- ಸ್ವರೂಪ್ ಪ್ರಕಾಶ್‌
46 ಶ್ರವಣಬೆಳಗೊಳ- ಸಿ.ಎನ್‌ ಬಾಲಕೃಷ್ಣ
47 ಮಹಾಲಕ್ಷ್ಮಿ ಲೇಔಟ್- ರಾಜಣ್ಣ
48 ಹಿರಿಯೂರು- ರವೀಂದ್ರಪ್ಪ
49 ಮಾಯಕೊಂಡ- ಆನಂದಪ್ಪ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಜಗತ್ತು ನಮ್ಮ ಜೊತೆಗಿದೆ ಎಂಬ ಭ್ರಮೆ
August 26, 2026
5:00 PM
by: ಮಹೇಶ್ ಪುಚ್ಚಪ್ಪಾಡಿ
ತೆಂಗಿನ ಎಣ್ಣೆಯಿಂದ ವಿಮಾನದ ಇಂಧನ ? ಜೆಟ್‌ ಎಂಜಿನ್‌ ಪರೀಕ್ಷೆಯಲ್ಲಿ ಕುತೂಹಲ ಮೂಡಿಸಿದ ಫಲಿತಾಂಶ
August 26, 2026
10:44 AM
by: ದ ರೂರಲ್ ಮಿರರ್.ಕಾಂ
ಕೃಷಿ ಇನ್ನು ಕೇವಲ ಬೆಳೆ ಬೆಳೆಯುವುದಲ್ಲ – ಯುವಕರಿಗೆ ಸ್ಟಾರ್ಟ್‌ಅಪ್ ಕ್ಷೇತ್ರ
August 26, 2026
6:52 AM
by: ದ ರೂರಲ್ ಮಿರರ್.ಕಾಂ
ಬರಪೀಡಿತ ಪ್ರದೇಶಗಳ ರೈತರಿಗೆ ಗುಡ್‌ನ್ಯೂಸ್ ; ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ
August 25, 2026
10:36 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror