Advertisement
ಆರೋಗ್ಯ

ಟವರುಗಳನ್ನು ತೆಗೆದುಹಾಕುವಂತೆ ಕೋರ್ಟ್ ಗೆ ಅರ್ಜಿ | ವೈಜ್ಞಾನಿಕ ಬೆಂಬಲ ಇಲ್ಲದೆ ಯಾವ ಕ್ರಮವೂ ಅಸಾಧ್ಯ |

Share

ಮೊಬೈಲ್ಫೋನ್ ಈಗಂತೂ ಎಲ್ಲರ ಜೀವನದ ಅವಿಭಾಜ್ಯ ಅಂಗವಾಗಿದೆ. ಮೊಬೈಲ್ಇಲ್ಲದೆಯೇ ಜಗತ್ತೇ ನಿಂತು ಹೋಗಿ ಬಿಡುತ್ತದೆ ಅನ್ನೋ ಅಷ್ಟರ ಮಟ್ಟಿಗೆ ಹೆಚ್ಚಿನ ತರಂಗಾಂತರವಿರುವ ಸಿಗ್ನಲ್ಗಳನ್ನು ಸ್ವೀಕರಿಸಿಲು ಮತ್ತು ಹೊರಸೂಸಲು ಸಾಧ್ಯವಿರುವಂತಹ ಮೊಬೈಲ್ ಫೋನ್ಗಳ ಮೇಲೆ ಜನ ಅವಲಂಬಿತವಾಗಿದ್ದಾರೆ. ವಿಕಿರಣಗಳು ಮನುಷ್ಯನಿಗೂ ಅಷ್ಟೇ ಮಾರಕವಾಗಿವೆ. ಸೆಲ್ಫೋನ್ಗಳು ಹೊರಸೂಸುವ ವಿಕಿರಣಗಳಿಂದ ದೇಹದ ವಿವಿಧ ಕೋಶಗಳು ಹಾನಿಗೊಳಗಾಗುತ್ತವೆ ಎಂಬ ಅಂಶವನ್ನುಈಗಾಗಲೇ ಹಲವಾರು ಅಧ್ಯಯನಗಳು ಸಾಬೀತು ಮಾಡಿವೆ. ಒಟ್ಟಾರೆ ಇವು ಮಾರಕವಾಗಿದೆ ಅಂತಾ ಗೊತ್ತಿದ್ದರೂ ಇವುಗಳ ಬಳಕೆ ಮಾತ್ರ ಹೆಚ್ಚುತ್ತಿದೆ.

ಸೆಲ್ಫೋನ್ ಟವರ್ಗಳನ್ನು ತೆಗೆದುಹಾಕುವಂತೆ ಕೋರ್ಟ್ಗೆ ಅರ್ಜಿ : ಮೊಬೈಲ್‌ ಟವರ್‌ಗಳು ವ್ಯಾಪಾಕ ಪರಿಣಾಮ ಬೀರುತ್ತವೆ, ಅವುಗಳನ್ನು ತೆಗೆದು ಹಾಕಿ ಅಂತಾ ಈಗಾಗಲೇ ಜನ ಕೋರ್ಟ್‌ ಮೇಟ್ಟಿಲೇರುತ್ತಿದ್ದಾರೆ. ಇತ್ತೀಚಿನ ಒಂದು ಘಟನೆಯಲ್ಲಿ ಅರ್ಜಿದಾರರೊಬ್ಬರು ಸೆಲ್‌ಫೋನ್ ಟವರ್‌ಗಳನ್ನು ತೆಗೆದುಹಾಕುವಂತೆ ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ವಿಕಿರಣವು ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆಅರ್ಜಿದಾರ

ಮದ್ರಾಸ್ ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆಯಲ್ಲಿ, ಅರ್ಜಿದಾರರು ಈ ಬಗ್ಗೆ ವಿವರಿಸಿದ್ದು, ಈ ಟವರ್‌ಗಳಿಂದ ಹೊರಸೂಸುವ ವಿಕಿರಣವು ಒಬ್ಬರ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಸೆಲ್‌ಫೋನ್ ಟವರ್‌ಗಳನ್ನು ತೆಗೆದುಹಾಕುವಂತೆ ಮನವಿ ಮಾಡಿದ್ದಾರೆ.

ಎಲ್ಲಾ ದೇಶಗಳಲ್ಲೂ ಮೊಬೈಲ್ಟವರ್ಗಳಿವೆಕೋರ್ಟ್ 

ಹಂಗಾಮಿ ಮುಖ್ಯ ನ್ಯಾಯಮೂರ್ತಿ (ಎಸಿಜೆ) ಟಿ. ರಾಜಾ ಅವರ ನೇತೃತ್ವದಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಎಲ್ಲಾ ವಾದ-ಪ್ರತಿವಾದಗಳನ್ನು ಗಮನಿಸಿ ಅರ್ಜಿದಾರರ ಪರವಾದ ವಾದ ಮಂಡಿಸುತ್ತಿದ್ದ ವಕೀಲರಿಗೆ ವೈಜ್ಞಾನಿಕ ಬೆಂಬಲವಿಲ್ಲದೇ ಇದು ಅಸಾಧ್ಯ ಎಂದು ತಿಳಿಸಿದ್ದಾರೆ. ಸೆಲ್‌ಫೋನ್‌ಗಳು ಮತ್ತು ಟವರ್‌ಗಳು ನಮ್ಮ ದೇಶದಲ್ಲಿ ಮಾತ್ರವಲ್ಲದೇ ಆಫ್ರಿಕಾ, ಉತ್ತರ ಅಮೆರಿಕ, ದಕ್ಷಿಣ ಅಮೇರಿಕಾ ಮತ್ತು ಏಷ್ಯಾ ಸೇರಿದಂತೆ ಪ್ರತಿಯೊಂದು ದೇಶ ಮತ್ತು ಖಂಡಗಳಲ್ಲಿ ಅಸ್ತಿತ್ವದಲ್ಲಿವೆ ಎಂದು ಹೇಳಿದರು.

2019 ಒಂದು ಪ್ರಕರಣದಲ್ಲೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ ಕೋರ್ಟ್ : ಜೂನ್ 2019 ರ ಒಂದು ಪ್ರಕರಣದಲ್ಲಿ, ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್ ಅವರು ಸೆಲ್‌ಫೋನ್ ಟವರ್‌ಗಳಿಂದ ವಿಕಿರಣದ ಪರಿಣಾಮದ ಮೇಲಿನ ಆತಂಕಗಳು ಹೆಚ್ಚಾಗಿವೆ, ಆದರೆ ವೈಜ್ಞಾನಿಕ ಬೆಂಬಲವಿಲ್ಲ ಎಂದು ಪ್ರಕರಣದಲ್ಲಿ ಹೇಳಿದ್ದರು.

“ಸೆಲ್ ಫೋನ್ ಟವರ್‌ನಿಂದ ವಿಕಿರಣದ ಪರಿಣಾಮದ ಬಗ್ಗೆ ಕೇವಲ ಆತಂಕದ ಮೇಲೆ ಸೆಲ್ ಫೋನ್ ಟವರ್‌ಗಳನ್ನು ನಿರ್ಮಿಸುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಅಭಿಪ್ರಾಯ ಪಟ್ಟಿದೆ. ಆತಂಕಕ್ಕೆ ವೈಜ್ಞಾನಿಕ ಬೆಂಬಲವಿಲ್ಲ. ಸಕಾರಾತ್ಮಕ ಫಲಿತಾಂಶವನ್ನು ನೀಡುವವರೆಗೆ, ಸೆಲ್ ಫೋನ್ ಟವರ್‌ಗಳನ್ನು ಕೇವಲ ಆತಂಕದ ಮೇಲೆ ಸ್ಥಾಪಿಸುವುದನ್ನು ತಡೆಯಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದರು. ಈ ತೀರ್ಪಿನ ನಂತರ ರಿಲಯನ್ಸ್ ಜಿಯೋಗೆ ಸೆಲ್‌ಫೋನ್ ಟವರ್‌ಗಳನ್ನು ನಿರ್ಮಿಸಲಾಯಿತು. ಈ ವೇಳೆಯಲ್ಲಿ ಯಾವುದೇ ಅನಾಹುತ ನಡೆಯದಂತೆ ನ್ಯಾಯಾಲಯವು ಪೊಲೀಸ್ ರಕ್ಷಣೆಯನ್ನು ಸಹ ನೀಡಿತ್ತು.

ಶಾಲೆ ಬಳಿ ಟವರ್ನಿರ್ಮಾಣಕ್ಕೆ ನಿಷೇಧ : ಮೊಬೈಲ್‌ ಟವರ್‌ ನಿರ್ಮಾಣದ ಬಗ್ಗೆ ಹಲವು ವಿರೋಧಗಳು ವ್ಯಕ್ತವಾದರೂ, ಮೊಬೈಲ್‌ ಈಗ ಅನಿವಾರ್ಯವಾಗಿರುವುದರಿಂದ ಅದನ್ನು ತೆಗೆದು ಹಾಕಲು ಆಗುತ್ತಿಲ್ಲ. ಆದರೆ ಕರ್ನಾಟಕ ಸೇರಿ ಇತರೆ ರಾಜ್ಯಗಳಲ್ಲಿ ಮೊಬೈಲ್‌ ಟವರ್‌ ಅಳವಡಿಕೆಗೆ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಲಾಗಿದೆ. ರಾಜ್ಯ ಸರ್ಕಾರಗಳ ಆದೇಶದಡಿ ಶಾಲಾ-ಕಾಲೇಜು, ಧಾರ್ಮಿಕ ಕಟ್ಟಡ ಹಾಗೂ ಆಸ್ಪತ್ರೆಗಳಿಂದ 50 ಮೀಟರ್‌ ಅಂತರದಲ್ಲಿ ಯಾವುದೇ ಟವರ್‌ ಅಳವಡಿಕೆ ಮಾಡುವಂತಿಲ್ಲ ಎಂಬ ನಿಯಮವಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಭಾರೀ ಮಳೆ ಹಿನ್ನೆಲೆ – ದಕ್ಷಿಣ ಕನ್ನಡದಲ್ಲಿ ಇಂದು ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಡಳಿತ ಆದೇಶ

ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ ಜುಲೈ 23ರಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ…

17 hours ago

ಹವಾಮಾನ ವರದಿ | 22.07.2026 | ಉತ್ತರ ಕನ್ನಡ, ಉಡುಪಿಯಲ್ಲಿ ಉತ್ತಮ ಮಳೆಯ ಸಾಧ್ಯತೆ; ರಾಜ್ಯದಲ್ಲಿ ಮಳೆ ಚಟುವಟಿಕೆ ಮುಂದುವರಿಕೆ

23.07.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ ಕರಾವಳಿ: ಕಾಸರಗೋಡು, ದಕ್ಷಿಣ…

1 day ago

ಆಮದು ಕಳಪೆ ಅಡಿಕೆ ಮಿಶ್ರಣದ ಎಚ್ಚರಿಕೆ- ಬೆಳೆಗಾರರಿಗೆ ಕ್ಯಾಂಪ್ಕೊ ಮನವಿ

ಆಮದುಗೊಂಡ ಕಳಪೆ ಅಡಿಕೆಯನ್ನು ದೇಶೀಯ ಅಡಿಕೆಯೊಂದಿಗೆ ಮಿಶ್ರಣ ಮಾಡಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ…

2 days ago

ಹವಾಮಾನ ವರದಿ | 21-07-2026 | ಕರಾವಳಿ-ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಕೆ, ಭಾರೀ ಮಳೆ ಸಾಧ್ಯತೆ ಕಡಿಮೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಬಿಟ್ಟು ಬಿಟ್ಟು ಸಾಧಾರಣ ಮಳೆ…

2 days ago

ಅಡಿಕೆ ರೋಗ ಸಂಕಷ್ಟಕ್ಕೆ ಸಂಸತ್ತಿನಲ್ಲಿ ಧ್ವನಿ : ನಿಯಮ 377ರಡಿ ಕ್ಯಾ. ಬ್ರಿಜೇಶ್ ಚೌಟ ಒತ್ತಾಯ

ಅಡಿಕೆ ತೋಟಗಳಲ್ಲಿ ಹೆಚ್ಚುತ್ತಿರುವ ಎಲೆ ಚುಕ್ಕೆ, ಹಳದಿ ಎಲೆ ಮತ್ತು ಕೊಳೆ ರೋಗಗಳಿಗೆ…

3 days ago

ದೇಶಾದ್ಯಂತ ಮುಂಗಾರು ಅಬ್ಬರ : ಹಲವು ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ, ಹಿಮಾಲಯ ತಪ್ಪಲಿನಲ್ಲಿ ರೆಡ್ ಅಲರ್ಟ್

ದೇಶಾದ್ಯಂತ ಮುಂಗಾರು ಮತ್ತಷ್ಟು ತೀವ್ರಗೊಂಡಿದ್ದು, ಉತ್ತರ ಭಾರತದ ಹಲವು ಭಾಗಗಳಿಗೆ ರೆಡ್ ಅಲರ್ಟ್…

4 days ago