ರೇಬಿಸ್ ರೋಗ ನಿರ್ಮೂಲನೆ ಹಾಗೂ ನಿಯಂತ್ರಣದತ್ತ ಕರ್ನಾಟಕವು ಹೊಸ ಸಂಶೋಧನಾ ಹೆಜ್ಜೆ ಇಟ್ಟಿದ್ದು, ಬೀದಿ ನಾಯಿಗಳಿಗೆ ನೀಡಬಹುದಾದ “ಓರಲ್ ರೇಬಿಸ್ ಲಸಿಕೆ” (Oral Vaccine) ಅಭಿವೃದ್ಧಿಪಡಿಸಲು ಅಧ್ಯಯನ ಆರಂಭಿಸಲಾಗಿದೆ.
ಬೀದರ್ನ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಬೆಂಗಳೂರಿನ ಹೆಬ್ಬಾಳದಲ್ಲಿರುವ ಪಶು ವೈದ್ಯಕೀಯ ಮಹಾವಿದ್ಯಾಲಯದ ಜೊತೆಗೂಡಿ ಈ ಮಹತ್ವದ ಸಂಶೋಧನೆ ನಡೆಸುತ್ತಿದೆ. ಈ ಲಸಿಕೆಯನ್ನು ಬೀದಿ ನಾಯಿಗಳಿಗೆ ಮಾಂಸ ಅಥವಾ ಮೊಟ್ಟೆ ಮೂಲಕ ಆಹಾರ ರೂಪದಲ್ಲಿ ನೀಡುವ ಯೋಜನೆ ರೂಪಿಸಲಾಗಿದ್ದು, ಇದರಿಂದ ನಾಯಿಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ರೇಬಿಸ್ ನಿಯಂತ್ರಣಕ್ಕೆ ಮಹತ್ತರ ನೆರವಾಗಲಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಸಿ.ವೀರಣ್ಣ ತಿಳಿಸಿದ್ದಾರೆ.
ಈ ಸಂಶೋಧನಾ ಯೋಜನೆಗೆ ಹೈದ್ರಾಬಾದ್ನ ರಾಷ್ಟ್ರೀಯ ಪ್ರಾಣಿ ಜೈವಿಕ ತಂತ್ರಜ್ಞಾನ ಸಂಸ್ಥೆ, ರಾಷ್ಟ್ರೀಯ ಪಶು ವೈದ್ಯಕೀಯ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಮಾಹಿತಿ ಸಂಸ್ಥೆ, ರಾಷ್ಟ್ರೀಯ ಪ್ರಾಣಿ ಸಂಪನ್ಮೂಲ ಸೌಲಭ್ಯ – ICMR, ರಾಷ್ಟ್ರೀಯ ಮಾಂಸ ಸಂಶೋಧನಾ ಸಂಸ್ಥೆ ಸಹಕಾರ ನೀಡುತ್ತಿದೆ. ಈ ಓರಲ್ ಲಸಿಕೆ ಅಭಿವೃದ್ಧಿಗಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರಾಷ್ಟ್ರೀಯ “ಒನ್ ಹೆಲ್ತ್ ಮಿಷನ್” ಅಡಿಯಲ್ಲಿ ₹2.89 ಕೋಟಿ ರೂಪಾಯಿ ಅನುದಾನ ನೀಡಿದೆ. ಬೀದಿ ನಾಯಿಗಳಲ್ಲಿನ ರೇಬಿಸ್ ನಿಯಂತ್ರಣದ ಮೂಲಕ ಮಾನವರಿಗೂ ಸೋಂಕು ಹರಡುವ ಸಾಧ್ಯತೆಯನ್ನು ಕಡಿಮೆ ಮಾಡಬಹುದು. ಹೀಗಾಗಿ ಈ ಓರಲ್ ವ್ಯಾಕ್ಸಿನ್ ಸಂಶೋಧನೆ ರೇಬಿಸ್ ನಿರ್ಮೂಲನೆಗೆ ದೊಡ್ಡ ಕೊಡುಗೆಯಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ತೆಂಗು–ಅಡಿಕೆ ತೋಟಗಳ ನಡುವೆ ಅರಿಶಿಣ, ಏಲಕ್ಕಿ, ಮೆಣಸು ಬೆಳೆದು ತುಮಕೂರು ಜಿಲ್ಲೆಯ ರೈತರು…
ಮುಂಗಾರು ಮಳೆಯ ಕೊರತೆ ಎದುರಿಸುತ್ತಿರುವ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಹೆಚ್ಚಿಸಲು ಸರ್ಕಾರ…
ಕಸ್ತೂರಿ ರಂಗನ್ ವರದಿ ಜಾರಿಗೆ ಕರ್ನಾಟಕ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಶಿಕ್ಷಣ…
ಭಾರತದ 126 ಪ್ರಮುಖ ನಗರಗಳ ಹವಾಮಾನ ಸಿದ್ಧತೆಯನ್ನು ಅಳೆಯಲಾಗಿದ್ದರೂ, 2021ರ ಮೌಲ್ಯಮಾಪನದಲ್ಲಿ ರಾಷ್ಟ್ರೀಯ…
ಭಾರತದ ಕಾಫಿ ರಫ್ತು ಗಳಿಕೆ 2021-22ರ ಸುಮಾರು 1 ಶತಕೋಟಿ ಡಾಲರ್ನಿಂದ 2025-26ರಲ್ಲಿ…
ಮೀನಿನ ಮುಳ್ಳು ಮತ್ತು ಹುರುಪೆಯನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಹಲ್ಲುಗಳ ಪುನರ್ ನಿರ್ಮಾಣ ಹಾಗೂ…