ಸಾಹಿತ್ಯ

ಅಂತರಾಷ್ಟ್ರೀಯ ಮಟ್ಟ  ಪ್ರಥಮ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸ್ಫರ್ಧೆಯಲ್ಲಿ ಬಹುಮಾನ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಅಂತರಾಷ್ಟ್ರೀಯ ಮಟ್ಟ ಪ್ರಥಮ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು ಇವರು ಆಯೋಜಿಸಿರುವ ಅಕ್ಷರದವ್ವ ಸಾವಿತ್ರಿ ಬಾಪುಲೆ ಬಗ್ಗೆ ನಡೆಯುವ ಸ್ಪರ್ಧೆಯಲ್ಲಿ ಕಾಸರಗೋಡು ಜಿಲ್ಲೆಯ ಡಾ | ವಾಣಿಶ್ರೀ ಕಾಸರಗೋಡು ಬರೆದಿರುವ  ಕವನಕ್ಕೆ ಪ್ರಥಮ ಬಹುಮಾನ ಬಂದಿರುತ್ತದೆ. ಈ ಕವನ ಇಲ್ಲಿದೆ….

Advertisement

ಸಾವಿರಾರು ದೀಪಗಳನ್ನು ಹಚ್ಚಿದ
ಆಧುನಿಕ ಶಿಕ್ಷಣದ ತಾಯಿ
ಅಕ್ಷರಸ್ತ ಪ್ರತೀ ಮಹಿಳೆಯ ಮನದಲ್ಲಿ
ನೆಲೆಸಿರುವ ಸಾವಿತ್ರಿ ಭಾಯಿ

ಧಮನಿತ ಸಮುದಾಯದ ಶಿಕ್ಷಣಕ್ಕಾಗಿ
ಶಾಲೆಯನ್ನು ಸ್ಥಾಪಿಸಿದ ಕ್ರಾಂತಿಕಾರಿ
ಸ್ತ್ರೀ ವಿಮೋಚನೆ ಕನಸಾಗಿದ್ದ ಕಾಲದಲ್ಲಿ
ಅದ ನನಸಾಗಿಸಲು ಶ್ರಮಿಸಿದ ರೂವಾರಿ

ಬ್ರಿಟಿಷ್ ಸರಕಾರದಿಂದ ಭಾರತದ ಪ್ರಥಮ
ಒಳ್ಳೆಯ ಅದ್ಯಾಪಕಿ ಬಿರುದು ಪಡೆದ ಕೀರ್ತಿ
ವಿಧವೆಯರ ತಲೆ ಬೋಳಿಸುವ ಪದ್ದತಿಯ
ಪ್ರಭಲವಾಗಿ ವಿರೋಧಿಸಿದ ಹೋರಾಟಗಾರ್ತಿ

ಅನಾಥ ಮಕ್ಕಳ ಪಾಲನೆಗೈಯುವ ಪುನರ್ವಸತಿ
ಕೇಂದ್ರವ ಸ್ಥಾಪಿಸಿ ಬದುಕಿಗೆ ನೆಲೆಕೊಟ್ಟ ಸಾಧಕಿ
ಮೊಟ್ಟ ಮೊದಲು ಕಾನೂನು ಸಲಹೆ ಪಡೆದು
ಮದುವೆ ಮಾಡಿ ಇತಿಹಾಸ ಬರೆದ ಶಿಕ್ಷಕಿ

Advertisement

ಹೆಣ್ಣೊಬ್ಬಳು ಶಿಕ್ಷಕಿಯಾಗೋದು ಧರ್ಮಕ್ಕೂ
ಸಮಾಜಕ್ಕೂ ದ್ರೋಹ ಬಗೆದಂತೆ ಅನ್ನುವರಿಲ್ಲಿ
ತಳ ಸಮುದಾಯದ ಹೆಣ್ಣು ಮಕ್ಕಳ
ಶಾಲೆ ತೆರೆದರು ಪೂಣೆಯಲ್ಲಿ

ಬಾರತದ ದಿಟ್ಟ ಹೋರಾಟಗಾರ್ತಿ ಪ್ರಥಮ ಶಿಕ್ಷಕಿ
ಖಾದಿ ಸೀರೆಯಲಿ ದಣಿವರಿಯದ ಸತ್ಯಶೋಧಕಿ
ಸ್ತ್ರೀ ಶಿಕ್ಷಣಕ್ಕೆ ಅನುವು ಮಾಡಿಕೊಟ್ಟ ಸಾಧಕಿ
ಪ್ಲೇಗ್ ರೋಗಿಗಳ ಸೇವೆಯಲ್ಲಿ ಪ್ಲೇಗಿಗೆ ಬಲಿಯಾದ ನಾಯಕಿ

# ಡಾ | ವಾಣಿಶ್ರೀ ಕಾಸರಗೋಡು

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಭೂಮಿಗೆ ಗಗನಯಾತ್ರಿ ಶುಭಾಂಶು ಶುಕ್ಲಾ ಮರುಯಾನ | ಕ್ಯಾಲಿಫೋರ್ನಿಯಾದ ಕಡಲತೀರದಲ್ಲಿ ಇಳಿಯಲಿರುವ ನೌಕೆ

ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಸಿಬ್ಬಂದಿಯನ್ನು…

8 hours ago

ಬದುಕು ಪುರಾಣ | ಮನವನ್ನು ಚುಚ್ಚುವ ಅಳಿಲು

ಸಾಮಾಜಿಕ ವ್ಯವಸ್ಥೆಯಲ್ಲಿ ‘ಸೇವೆ’ಗೆ ಮೌಲ್ಯ ನಿರ್ಧರಿಸಲು ಕಷ್ಟಸಾಧ್ಯ. ಆತ್ಮಾರ್ಥ ಸೇವೆಗಳು ಸದ್ದಾಗುವುದಿಲ್ಲ. ಫಕ್ಕನೆ…

8 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಧಾತ್ರಿ ಕೆ ರಾವ್

ಧಾತ್ರಿ ಕೆ ರಾವ್ , 7ನೇ ತರಗತಿ ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾಮಂದಿರ, ನಿಲುವಾಗಿಲು,…

23 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಭವಿಷ್ಯ ಕೆ ಪಿ

ಭವಿಷ್ಯ ಕೆ ಪಿ, 8 ನೇ ತರಗತಿ, ಸೈಂಟ್‌ ಆನ್ಸ್‌ ಇಂಗ್ಲಿಷ್‌ ಮೀಡಿಯಂ…

23 hours ago

ಜು.16 ರಿಂದ ಕರಾವಳಿ-ಮಲೆನಾಡು ಭಾಗದಲ್ಲಿ ಭಾರೀ ಮಳೆ ಎನ್ನುತ್ತಿದೆ ಹವಾಮಾನ ವರದಿ

ರಾಜ್ಯದ ವಿವಿದೆಡೆ ಸದ್ಯ ಸಾಧಾರಣ ಮಳೆಯಾಗುತ್ತಿದೆ. ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಕೂಡಾ…

24 hours ago