ಕನಸಿನ ದಾರಿಯಲಿ ಸಾಗೋಣ ಬಾ ಸಖ
ಒಂಟಿ ಹೆಜ್ಜೆ ಸಾಕಿನ್ನು ,ಜಂಟಿಯಾಗೋಣ ಬಾ ಸಖ
ಒಲವಿನ ರಾಗವು ,ಮನ ಪಟಲದಿ ಮೊಳಗುತಿದೆ
ಕಂಡ ಕನಸಗಳನು ,ನನಸಾಗಿಸಲು ಜೊತೆ ಸೇರು ಬಾ ಸಖ
ಹರೆಯದ ಬಯಕೆಗಳದು, ಪ್ರಜ್ವಲಿಸುವ ತಾರೆಗಳಂತೆ
ತೋಳೋಳಗೆ ಬೆರೆತು, ತಂಗಾಳಿಯ ಸವಿಯೋಣ ಬಾ ಸಖ
ನಂಜಿನ ಕಂಗಳು ದಿಟ್ಟಿಸಿವೆ ,ಉರಿವ ಪಂಜಂತೆ
ಸಗ್ಗವೇ ನಾಚುವಂತೆ ,ನಲುಮೆಯಲಿ ನಡೆಯೋಣ ಬಾ ಸಖ
ಗಾಲಿಗಳೆರಡು ಜೊತೆಯಲಿ ಸಾಗಲು,ಪಯಣವು ಸುಖವಂತೆ
ಹೆಜ್ಜೆಗೆಜ್ಜೆಗಳ ಕೂಡಿಸಿ ,ನಾವು ಬೆರೆತು ಬಾಳೋಣ ಬಾ ಸಖ
#ಅಪೂರ್ವ ಚೇತನ್ ಪೆರಂದೋಡಿ
ಕರಾವಳಿ ಜಿಲ್ಲೆಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯ ಅನುದಾನವನ್ನು ಮುಂದಿನ ಬಜೆಟ್ನಲ್ಲಿ ನೀಡಬೇಕೆಂದು…
ಅಡಿಕೆ ಜಗಿಯುವುದು ಕೇವಲ ಸಾಂಪ್ರದಾಯಿಕ ಅಭ್ಯಾಸ ಮಾತ್ರವಲ್ಲ, ಅದು ಗಂಭೀರ ಆರೋಗ್ಯ ಅಪಾಯಗಳಿಗೆ…
ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ ಹಾಗೂ ಆನೆ ದಾಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು…
ದಾವಣಗೆರೆ ಜಿಲ್ಲೆಯಲ್ಲಿ 5 ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರು 87,258 ಕ್ವಿಂಟಲ್…
ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್…
ಕರಾವಳಿ ಕರ್ನಾಟಕದ ಅಡಿಕೆ ತೋಟಗಳು ಕಾಡುಪ್ರಾಣಿಗಳ ಹಾವಳಿಯಿಂದ ಭಾರೀ ನಷ್ಟ ಅನುಭವಿಸುತ್ತಿವೆ. ಮಾನವ–ವನ್ಯಜೀವಿ…