ಕನಸಿನ ದಾರಿಯಲಿ ಸಾಗೋಣ ಬಾ ಸಖ
ಒಂಟಿ ಹೆಜ್ಜೆ ಸಾಕಿನ್ನು ,ಜಂಟಿಯಾಗೋಣ ಬಾ ಸಖ
ಒಲವಿನ ರಾಗವು ,ಮನ ಪಟಲದಿ ಮೊಳಗುತಿದೆ
ಕಂಡ ಕನಸಗಳನು ,ನನಸಾಗಿಸಲು ಜೊತೆ ಸೇರು ಬಾ ಸಖ
ಹರೆಯದ ಬಯಕೆಗಳದು, ಪ್ರಜ್ವಲಿಸುವ ತಾರೆಗಳಂತೆ
ತೋಳೋಳಗೆ ಬೆರೆತು, ತಂಗಾಳಿಯ ಸವಿಯೋಣ ಬಾ ಸಖ
ನಂಜಿನ ಕಂಗಳು ದಿಟ್ಟಿಸಿವೆ ,ಉರಿವ ಪಂಜಂತೆ
ಸಗ್ಗವೇ ನಾಚುವಂತೆ ,ನಲುಮೆಯಲಿ ನಡೆಯೋಣ ಬಾ ಸಖ
ಗಾಲಿಗಳೆರಡು ಜೊತೆಯಲಿ ಸಾಗಲು,ಪಯಣವು ಸುಖವಂತೆ
ಹೆಜ್ಜೆಗೆಜ್ಜೆಗಳ ಕೂಡಿಸಿ ,ನಾವು ಬೆರೆತು ಬಾಳೋಣ ಬಾ ಸಖ
#ಅಪೂರ್ವ ಚೇತನ್ ಪೆರಂದೋಡಿ
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…