ಕೋಟಿ ಹೃದಯ ಗೆದ್ದ ಕುವರ, ಆಗಿಹೋದ ಇಂದು ಅಮರ…
ಹೇಳು ವಿಧಿಯೇ ನೀ ಯಾಕಿಷ್ಟು ಕ್ರೂರಿ…
ಕೋಟಿ ಜನರ ಜನಮಾನಸದಲ್ಲಿ ಅಚ್ಚಳಿಯದ ನೆನಪು “ಅಪ್ಪು”…
ಇನ್ನೆಂದಿಗೂ ಬಾರದ ಲೋಕ ಸೇರಿಬಿಟ್ಟೆಯಾ, ನೀ ಸೇರಿಬಿಟ್ಟೆಯಾ…?
ಕೋಟಿ ಜನರ ಪ್ರಾರ್ಥನೆಯೂ ಫಲಿಸದೇ ಹೋಯಿತು ಇಂದು…
ನಿಮ್ಮ ನಿಷ್ಕಲ್ಮಶ ಮನಸ್ಸು ದೇವರಿಗೂ ಇಷ್ಟವಾಗಿ ಕರೆಸಿ ಬಿಟ್ಟನೇ ನಿಮ್ಮ ತನ್ನ ಬಳಿ, ಆ ಪರಮಾತ್ಮನ ಬಳಿ…
ಸಾವಿರಾರು ಜನರ ಬದುಕಿಗೆ ಬೆಳಕಾದ ನಿಮ್ಮ ಬದುಕು ಅಂತ್ಯವಾಯಿತೇ, ಇಲ್ಲಿಗೆ ಕೊನೆಯಾಯಿತೇ…?
ನಿಮ್ಮ ಬದುಕ ಯಾತ್ರೆಯು ಇಂದು ಕೊನೆಯಾಯಿತೇ, ಇಲ್ಲಿಗೆ ಮುಗಿದು ಹೋಯಿತೇ…?
ಹಾಡುತಿದ್ದ ನಿಮ್ಮ ಸ್ವರವು ಮೌನವಾಗಿದೆ, ಇಂದು ಮೌನವಾಗಿದೆ…
ಕುಣಿಯುತ್ತಿದ್ದ ನಿಮ್ಮ ಕೈ-ಕಾಲುಗಳು ನಿಂತುಹೋಗಿವೆ, ಇಂದು ನಿಂತು ಹೋಗಿವೆ…
ನಿಮ್ಮ ಬದುಕ ಯಾತ್ರೆಯು ಇಂದು ಮುಗಿದು ಹೋಯಿತೇ, ಇಲ್ಲಿಗೆ ಕೊನೆಯಾಯಿತೇ…?
ನೀವು ಇಂದು ಇಲ್ಲದೇ ಹೋದರೂ, ನಿಮ್ಮ ನೆನಪುಗಳೆಲ್ಲಾ ಉಳಿದು ಹೋಗಿವೆ, ನಮ್ಮ ಮನದಲ್ಲಿ ಅಚ್ಚಳಿಯದೇ ಉಳಿದುಹೋಗಿವೆ…
ನಿಮ್ಮ ಬದುಕ ಸಾಧನೆಯೆಲ್ಲಾ ನಮಗೆ ದಾರಿದೀಪವಾಗಿ, ನಿಮ್ಮ ಪ್ರತಿಯೊಂದು ಹೆಜ್ಜೆ ನಮ್ಮ ಬದುಕಿಗೆ ಸ್ಪೂರ್ತಿಯಾಗಿ ಕಾಣುವುದು, ನಮ್ಮ ಮುನ್ನಡೆಸುವುದು…
ಇಂದು ನೀವು ಇಲ್ಲದೇ ಹೋದರೂ, ನಿಮ್ಮ ನೆನಪುಗಳೆಲ್ಲಾ ನಮ್ಮ ಮನದಲ್ಲಿ ಉಳಿದುಹೋಗಿವೆ, ಅಚ್ಚಾಗಿ ಉಳಿದು ಹೋಗಿವೆ…
ಮುಂದಿನ ಜನ್ಮದಲ್ಲಿ ನೀವು ಇದೇ ಕರುನಾಡಿನಲ್ಲಿ ವೀರ ಕನ್ನಡಿಗನಾಗಿ ಹುಟ್ಟಿ ಬನ್ನಿ, ಮತ್ತೊಮ್ಮೆ ಹುಟ್ಟಿ ಬನ್ನಿ…
ಆ ಪರಮಾತ್ಮನು ನಿಮ್ಮ ಆತ್ಮಕ್ಕೆ ಶಾಂತಿಯನ್ನು ನೀಡಲೆಂದು ನಿಮಗೆ ನಾವು ದುಃಖದ ವಿದಾಯ ಹೇಳುತಿರುವೆವು, ನಾವು ಹೇಳುತಿರುವೆವು…
ಕೋಟಿ ಹೃದಯ ಗೆದ್ದ ಕುವರ, ಆಗಿಹೋದ ಇಂದು ಅಮರ…
ಹೇಳು ವಿದಿಯೇ ನೀನು ಯಾಕಿಷ್ಟು ಕ್ರೂರಿ…
ಕೋಟಿ ಜನರ ಪ್ರಾರ್ಥನೆಯು ಫಲಿಸದೇ ಹೋಯಿತು ಇಂದು…
ನಿಮ್ಮ ಬದುಕ ಯಾತ್ರೆಯು ಇಲ್ಲಿಗೆ ಮುಗಿದು ಹೋಯಿತು, ಇಂದು ಕೊನೆಯಾಯಿತು…
ನೀವು ಮತ್ತೆ ಹುಟ್ಟಿ ಬನ್ನಿ ನಮ್ಮ ಕರುನಾಡಿನ ಮನೆ ಮಗನಾಗಿ ಎಂದು ನಾವು ಬೇಡುತ್ತಾ ನಿಮ್ಮ ಆತ್ಮಕ್ಕೆ ಶಾಂತಿ ಕೋರುತ್ತಿರುವೆವು, ನಾವು ಕೋರುತ್ತಿರುವೆವು…
# ಉಲ್ಲಾಸ್ ಕಜ್ಜೋಡಿ
ವಿಧಾನ ಪರಿಷತ್ ಇಂದು ಬೆಳಗ್ಗೆ ಸಮಾವೇಶಗೊಳ್ಳುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ ಪ್ರಶ್ನೋತ್ತರ ಕಲಾಪಕ್ಕೆ…
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಮನಗರ ಜಿಲ್ಲೆಯ ರೈತರಿಂದ ರಾಗಿ ಖರೀದಿಸಲು ಜಿಲ್ಲೆಯ…
ಬೇಸಿಗೆ ಸಮಯದಲ್ಲಿ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಪೂರೈಸುತ್ತಿದ್ದು, ರಾಜ್ಯದಲ್ಲಿ ವಿದ್ಯುತ್ ಮಾರ್ಗವನ್ನು ಮತ್ತಷ್ಟು…
ಹಕ್ಕಿ ಜ್ವರದ ಪ್ರಕರಣಗಳು ರಾಜ್ಯದ ಅಲ್ಲಲ್ಲಿ ವರದಿಯಾಗುತ್ತಿದ್ದು, ಜನರು ಭಯಪಡುವ ಅಗತ್ಯವಿಲ್ಲ ಎಂದು…
ರಾಜ್ಯದಲ್ಲಿದ್ದ 56 ಲಕ್ಷ ಕಟ್ಟಡ ಕಾರ್ಮಿಕರ ಕಾರ್ಡ್ಗಳನ್ನು ತಪಾಸಣೆ ನಡೆಸಿ 26 ಲಕ್ಷ…
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ,…